ಹಿಂದೂ ಅಸ್ಮಿತೆಗಾಗಿ ಹುಡುಕಾಟ
ಮುನ್ನುಡಿ
66ನೇ ಇಂಡಿಯನ್ ಹಿಸ್ಟ್ರಿ ಕಾಂಗ್ರೆಸ್ನ ಕಾರ್ಯಕಾರಿ ಸಮಿತಿಯು ನನ್ನನ್ನು 66ನೇ ಅಧಿವೇಶನದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದುದಕ್ಕೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇಂತಹ ಗೌರವವನ್ನು ನಾನು ಸರಳ ಸಜ್ಜನಿಕೆಯಿಂದ ಸ್ವೀಕರಿಸುತ್ತಿದ್ದೇನೆ. ನನ್ನ ಮಿತಿಗಳ ಹೊರತಾಗಿಯೂ, ಬಹುಶ: ಇಂತಹ ಪ್ರತಿಷ್ಠಿತ ಅಧಿವೇಶನದ ಅಧ್ಯಕ್ಷನಾಗುವುದು ಒಂದು ಗಂಭೀರ ಜವಾಬ್ದಾರಿಯುತ ಕಾರ್ಯವೇ ಆಗಿದೆ. ಇಂದು ಭಾರತದಲ್ಲಿ ತೀವ್ರ ತೆರನಾದ ಕೋಮುವಾದೀ ನಿರೂಪಣೆ ಮತ್ತು ಕಥನಗಳು ತಾಂಡವವಾಡುತ್ತಿವೆ. ಭಾರತದ ವರ್ತಮಾನ, ಭವಿಷ್ಯ, ನಮ್ಮ ಸಾಮರಸ್ಯದ ಸಂಸ್ಕøತಿಗೆ ನಮ್ಮ ನಾಗರೀಕತೆ ಹಾಗೂ ಜನರ ಜೀವನಗಳಿಗೆ ಇವು ಮಾರಕವಾಗಿ ಪರಿಣಮಿಸಿವೆ. ಈ ನೆಲೆಯಲ್ಲಿ ಇಂತಹ ವಿದ್ಯಮಾನಗಳಿಗೆ ಸ್ಪಂದಿಸುವುದೂ ಕೂಡಾ ನನ್ನ ಗುರುತರವಾದ ಜವಾಬ್ದಾರಿಯಾಗಿದೆ.
ನಮ್ಮ ದೇಶದ ಸದ್ಯದ ಪರಿಸ್ಥಿತಿಯು ಚರಿತ್ರಕಾರರಿಂದ ಅಕಡೆಮಿಕ್ ನೆಲೆಯ ಪ್ರತಿಕ್ರಿಯೆಗಳನ್ನೂ ನಿರೀಕ್ಷಿಸುತ್ತಿದೆ. ಆದರೆ ನಾವು ಚರಿತ್ರೆಯೆಂಬ ಶಿಸ್ತಿಗೆ, ಭಾರತ ಹಾಗೂ ಇಲ್ಲಿನ ಜನರಿಗೆ ಇಂತಹ ಜವಾಬ್ದಾರಿಯುತ ಪ್ರತಿಕ್ರಿಯೆಯನ್ನು ನೀಡುವುದರಿಂದ ವಿಮುಖವಾಗುತ್ತಿದ್ದೇವೆ. ಆದರೆ ನಾವು ಈ ಕೋಮುವಾದೀಯ ವಿನಾಶಕಾರಿ ಪ್ರಚಾರಗಳನ್ನು ವಿರೋಧಿಸದಿದ್ದರೆ ಹಾಗೂ ಮಾಹಿತಿಯ ಆಧಾರದ ಮೇಲಿನ ವಸ್ತುನಿಷ್ಠ ಚರಿತ್ರೆಯನ್ನು ನಿರಾಕರಿಸದಿದ್ದರೆ, ನಾವೂ ಕೂಡಾ ಇಂತಹ ವಿಮುಖತೆಯಲ್ಲಿ ಭಾಗಾಳುಗಳಾದಂತಾಗುತ್ತದೆ. ಇಂದು ಭಾರತದಲ್ಲಿ ಹಾಗೂ ಭಾರತೀಯ ಚರಿತ್ರೆಯು ಪ್ರಗತಿಪರ ಮತ್ತು ಬಲಪಂಥೀಯ ಪ್ರತಿಗಾಮಿಗಳ ನಡುವಿನ ರಣರಂಗವಾಗಿ ಪರಿಣಮಿಸಿದೆ. ಬಲಪಂಥೀಯ ಗುಂಪುಗಳಿಗೆ ಅದರದೇ ಆದ ಅಸಂಗತ ತರ್ಕಗಳು ಹಾಗೂ ಕೋಮುವಾದೀಯ ಸೈದ್ಧಾಂತಿಕತೆಯೇ ಪ್ರಮುಖ ಅಸ್ತ್ರಗಳಾಗಿವೆ.
ಈ ಕಾರಣದಿಂದ ಸದ್ಯದ ಪರಿಸ್ಥಿತಿಯು ಒಂದು ಸತ್ಯದ ಮತ್ತು ವಿಶ್ವಾಸಾರ್ಹವಾದ ಚರಿತ್ರೆಯ ಪ್ರಸ್ತುತಿಯನ್ನು ಬಯಸುತ್ತಿದೆ. ಈ ಮೂಲಕ ಅದು ವಿರೂಪಗೊಳಿಸಿದ ಮತ್ತು ದಾರಿ ತಪ್ಪಿಸಿದ ಚರಿತ್ರೆಯ ವ್ಯಾಖ್ಯಾನಗಳನ್ನು ಮುಖಾಮುಖಿಯಾಗಬೇಕಾಗಿದೆ. ಹೀಗೆ ಚರಿತ್ರೆಯು ಬರೀ ಗತವಷ್ಟೇ ಅಲ್ಲ, ಬದಲು ವರ್ತಮಾನವೂ ಆಗಿದೆ. ಅದು ನಮ್ಮ ನಿಜವಾದ ಮೂಲ, ಸಂಪ್ರದಾಯ ಮತ್ತು ಚಾರಿತ್ರಿಕ ಕ್ರಿಯೆಗಳನ್ನು ಹಾಗೂ ಸತ್ಯವನ್ನು ಶೋಧಿಸಿದ ವಿಚಾರಗಳ ಒಂದು ಮಹತ್ವದ ಸಂಘರ್ಷ ಹಾಗೂ ಸಹಕಾರದ ಸಂಪ್ರದಾಯಗಳ ಮೂಲಕ ಗಮನಿಸುವುದಾಗಿದೆ. ಬಲಪಂಥೀಯ ಕೋಮುವಾದೀ ಶಕ್ತಿಗಳು ಅಂಧಶ್ರದ್ಧೆ ಮತ್ತು ಗೊಡ್ಡುತನವನ್ನು ತಮ್ಮ ವೈಧಾನಿಕತೆಯನ್ನಾಗಿ ಬಳಸುತ್ತಾ, ಅನೇಕ ವೈವಿಧ್ಯದ ವಿಚಾರಗಳು ಸಹಬಾಳ್ವೆ ಸಾಧಿಸಿದುದನ್ನು, ಹಾಗೂ ಭಾರತದ ಚಾರಿತ್ರಿಕ ಪ್ರಜ್ಞೆಯನ್ನು ಬಹುದೂರ ಸಾಗಿಸಿದ ಶಕ್ತಿಯಾಗಿದ್ದುದನ್ನು ಮರೆಮಾಚುತ್ತಿವೆ.
ಕೋಮುವಾದೀಯ ಅಂಧ-ಶ್ರದ್ಧೆ ಮತ್ತು ಗೊಡ್ಡುತನವು, ಭಾರತೀಯ ಚರಿತ್ರೆಯಲ್ಲಿ, ಇಂತಹ ಒಂದು ಸಂಸ್ಕøತಿ ಮತ್ತು ನಾಗರೀಕತೆಯನ್ನು ರೂಪಿಸಿದ ಉತ್ಪಾದಕ ಶಕ್ತಿಗಳನ್ನು ಹಾಗೂ ಅವುಗಳು ಎದುರಿಸಿದ ಮೂರ್ತರೂಪದ ವಾಸ್ತವಗಳ ವೈರುಧ್ಯಗಳನ್ನು ಅಳಿಸುವತ್ತ ಸಾಗಿವೆ. ಇಂತಹ ಕೋಮುವಾದೀಯ ಗೊಡ್ಡುತನವು ಮತ್ತು ಶಕ್ತಿಗಳು ಚಾರ್ವಾಕ, ಭಕ್ತಿ ಮತ್ತು ಸೂಫೀ ಚಿಂತನೆಗಳನ್ನು ಅಳಿಸಿ ಹಾಕುವತ್ತ ಮುಂದುವರಿದಿವೆ. ಭಾರತೀಯ ಚರಿತ್ರೆಯಲ್ಲಿ ಇಂತಹ ವೈವಿಧ್ಯದ ಪರಂಪರೆಗಳು ಅಸ್ತಿತ್ವದಲ್ಲೇ ಇರಲಿಲ್ಲವೆಂದೂ ಸಾಧಿಸಹೊರಟಿವೆ. ಆದ್ಯಾಗ್ಯೂ ಅವರು ದೇಶಭಕ್ತರು ಮತ್ತು ರಾಷ್ಟ್ರೀಯವಾದಿಗಳಾಗಿದ್ದಾರೆ!
ಭಾರತೀಯ ಚರಿತ್ರೆಯನ್ನು ಅತ್ಯಂತ ಕೀಳುಮಟ್ಟದ ರಾಜಕೀಕೃತ ರಾಜಕೀಯ ಗುರಿಸಾಧನೆಗಾಗಿ ತಿರುಚಲಾಗುತ್ತಿದೆ. ಆದರೆ ಇಂತಹ ಪ್ರಯತ್ನವನ್ನು ನಾವು ಎದುರಿಸಬೇಕಾಗಿದೆ. ಭಾರತದ ಚರಿತ್ರೆಯ ಕೋಮುವಾದೀಯ ತಿರುಚುವಿಕೆಯು ಅಜ್ಞಾನದ ಕೂಪವಾಗಿದೆ. ಇದರ ಜತೆ ಗುರುತಿಸಿಕೊಳ್ಳುವ ಜನರು ವೇದ, ಉಪನಿಷತ್, ಶಾಸ್ತ್ರ, ರಾಮಾಯಣ-ಮಹಾಭಾರತದಂತಹ ಮಹಾಕಾವ್ಯಗಳು ಹಾಗೂ ಪ್ರಾಚೀನ ಮತ್ತು ಮಧ್ಯಕಾಲೀನ ಕೃತಿ-ಸಾಹಿತ್ಯವನ್ನು ಗಂಭೀರವಾಗಿ ಓದಿಕೊಂಡವರಲ್ಲ. ಪ್ರಾಚೀನ ಭಾರತದ ಮಹತ್ವದ ಕೃತಿಗಳ ನಿಜವಾದ ಅರ್ಥ ಮತ್ತು ಸ್ವರೂಪವನ್ನು ತಿಳಿಯುವುದೇ ಚರಿತ್ರೆಯ ನಿಜವಾದ ಜವಾಬ್ದಾರಿಯಾಗಿದೆ. ಬಹುಶ: ನನ್ನ ಪ್ರಕಾರ ಚರಿತ್ರೆಯ ಒಳಹೊರಗನ್ನು ಮತ್ತು ಕೃತಿಗಳ ಮಥಿತಾರ್ಥವನ್ನು ಚಾರಿತ್ರಿಕ ಭೌತವಾದಿಗಳು ಹಾಗೂ ಮಾಕ್ರ್ಸ್ವಾದಿಗಳು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ.
ನಾನು ನನ್ನ ಭಾಷಣದಲ್ಲಿ ಎರಡು ಮಹತ್ವದ ಸಂಗತಿಗಳ ಬಗ್ಗೆ ಗಮನ ಸೆಳೆಯುತ್ತೇನೆ. ಒಂದು; ಭಾರತದ ರಾಷ್ಟ್ರೀಯ ಅಸ್ಮಿತೆಯನ್ನು ಚರಿತ್ರೆಯ ಯಾವುದೋ ಒಂದು ನಿಗೂಢ ಮೂಲಕ್ಕೆ ಒಯ್ಯುವ ವಿರೂಪದ ಕಡೆಗೆ, ಎರಡು; ವಸ್ತುನಿಷ್ಠವಲ್ಲದ ಮತ್ತು ಚರಿತ್ರೆಯ ಆಧಾರವಿಲ್ಲದ ಕಲ್ಪಕಥೆಗಳನ್ನು ಕಟ್ಟುತ್ತಾ ಯಾವುದೇ ಆಧಾರವಿಲ್ಲದ್ದಾಗ್ಯೂ ಹಿಂದೂ ಸಾಂಸ್ಕøತಿಕ ರಾಷ್ಟ್ರೀಯವಾದದ ಮೂಲಗಳವು ಎಂದು ವಾದಿಸುತ್ತಿರುವುದರ ಬಗ್ಗೆ. ಈ ರೀತಿಯ ನಿರಂತರವಾದ ದಕ್ಷವಾದ ಮಿಥ್ಯಗಳ ಸೃಷ್ಠಿಯು ಜನರ ಮನಸ್ಸನ್ನು ವಿಷಮಯವಾಗಿಸಲು, ವಿಶೇಷವಾಗಿ ಯುವಜನರ ಮನಸ್ಸನ್ನು ಕೆಡಿಸಲು ಬಳಸುವಂತದ್ದಾಗಿದೆ.
ಇತ್ತೀಚಿನ ದಿನಗಳಲ್ಲಿ ಭಾರತೀಯ ರಾಷ್ಟ್ರೀಯ ಅಸ್ಮಿತೆ(ಐಡೆಂಟಿಟಿ)ಯನ್ನು ಹಿಂದೂ ಧಾರ್ಮಿಕ ರಾಷ್ಟ್ರೀಯವಾದದ ಮೂಲಕ ಗುರುತಿಸುವ ಕಾತರ ಮತ್ತು ಅಪರಿಮಿತ ಕುತೂಹಲವು ಹಿಂದೂ ಬಲಪಂಥೀಯ ಕೋಮುವಾದೀ ಗುಂಪುಗಳಿಂದ ವಿಪುಲವಾಗಿ ಎಗ್ಗಿಲ್ಲದೆ ನಡೆಯುತ್ತಿದೆ. ತನ್ಮೂಲಕ ಅವು ತೀವ್ರವಾದ ಹಿಂಸೆ ಮತ್ತು ಅಸಹನೆಯ ಹಿಂದೂ ಮೂಲಭೂತವಾದ ಅಥವಾ ಇದಮಿಥ್ಥಮ್ವಾದದ ಮೂಲಕ ಅದನ್ನೇ ‘ಹಿಂದೂಧರ್ಮ’ವೆಂದೂ ಪ್ರಚಾರ ನಡೆಸುತ್ತಿವೆ. ಅವುಗಳು ಪ್ರಾಚೀನ ಭಾರತೀಯ ಧಾರ್ಮಿಕ ಪಠ್ಯಗಳಿಂದ ಪ್ರೇರಣೆಯನ್ನು ಪಡೆದಿವೆಯೆಂದೂ ತಮ್ಮನ್ನು ನ್ಯಾಯಬದ್ಧಗೊಳಿಸಲು ಪ್ರಯತ್ನಪಡುತ್ತಿವೆ. ಆದರೆ ಈ ಪ್ರಕ್ರಿಯೆಯಲ್ಲಿ ಅವರು ಈ ಪಠ್ಯಗಳನ್ನು ತಿರುಚಿದ ಮತ್ತು ತಪ್ಪಾಗಿ ಅರ್ಥೈಸಿದ ಬಗ್ಗೆ ಸ್ವಲ್ಪವೂ ತಲೆಕೆಡಿಸಿಕೊಳ್ಳುವುದಿಲ್ಲ. ಅವುಗಳನ್ನು ತೀರಾ ಕೃತಕವಾಗಿ ಪುನರ್ ಸೃಷ್ಠಿಸಲಾಗುತ್ತಿದೆ. ಹೀಗೆ ಇಂತಹ ಪ್ರಕ್ರಿಯೆಯಲ್ಲಿ ಇನ್ನೂ ಹಲವು ಮಿಥ್ಯಗಳನ್ನು ಸೃಷ್ಠಿಸಲಾಗುತ್ತಿದೆ.
ಭಾರತದಲ್ಲಿ ಕೋಮುವಾದೀ ಶಕ್ತಿಗಳಿಗೆ ಭಾರತೀಯ ಚರಿತ್ರೆ ಮತ್ತು ಸಾಮಾಜಿಕ ಅಭಿವೃದ್ಧಿಯ ಹಂತಗಳನ್ನು ಮಿಶ್ರಗೊಳಿಸುವ ಕಲೆ ಸುಲಭವಾಗಿ ಸಿದ್ಧಿಸಿದೆ. ಇದು ಎಲ್ಲಾ ರೀತಿಯ ಚರಿತ್ರೆಯನ್ನು ಅವರದ್ದೇ ಎನ್ನುವ ರೀತಿಯಲ್ಲಿ ಅವರು ಹೀರಲು ಸಹಾಯ ಮಾಡುತ್ತದೆ. ಇದು ಗತವನ್ನು ಅವರು ನಿಜವಾಗಿ ಅಧ್ಯಯನ ಮಾಡಬೇಕಾದ ಮೂರ್ತರೂಪದ ಜವಾಬ್ದಾರಿಯಿಂದಲೂ ಅವರನ್ನು ಮುಕ್ತಗೊಳಿಸುತ್ತದೆ. ಈ ಕಾರಣದಿಂದ ಅವರ ಚರಿತ್ರೆಗೆ ಹಳೆಯ ಮತ್ತು ಹೊಸ ಮಿಥ್ಯೆಗಳು ಸುಲಭವಾಗಿ ಪ್ರವೇಶವನ್ನು ಪಡೆಯುತ್ತವೆ.
ಈ ರೀತಿಯ ಕೋಮುವಾದೀ ತಿರುಚುವಿಕೆಗಳು ಆರ್ಯನ್ ಮತ್ತು ಹರಪ್ಪಾದ ನಾಗರೀಕತೆಗಳ ಅನುಭವ ಮತ್ತು ಕಲ್ಪನೆಗಳ ನಡುವೆ ಉದ್ದೇಶ ಪೂರ್ವಕವಾಗಿ ಮಿಶ್ರಣವನ್ನು ಸಾಧಿಸಿ ಗೊಂದಲವನ್ನು ಸೃಷ್ಟಿಸಿವೆ. ಇಂತಹ ವಾದಗಳು ಇನ್ನೂ ಮುಂದುವರಿದು ಹರಪ್ಪಾ ಸಮಾಜದ ನಿರ್ಮಾತೃರು ಆರ್ಯನ್ನರೆಂದೂ ವಾದಿಸಲಾಗಿತ್ತಿದೆ. ಬಹುಶ: ಚರಿತ್ರೆಯಲ್ಲಿ ಇದಕ್ಕಿಂತ ದೊಡ್ಡದಾದ ತಿರುಚುವಿಕೆ ಇನ್ನೊಂದಿಲ್ಲ. ನಾಝೀ ತಿರುಚುವಿಕೆಯ ಮಾದರಿಯು ಇಂತಹದ್ದೇ ಉದಾಹರಣೆಯಾಗಿದೆ. ಇಲ್ಲಿ ಜರ್ಮನ್ ಜನರನ್ನು ನಿಜವಾದ ಆರ್ಯರೆಂದು ಘೋಷಿಸಲಾಗಿತ್ತು.
ಭಾರತೀಯ ಚರಿತ್ರೆಯಲ್ಲಿ ಈ ರೀತಿ ಕಾಲಾನುಕ್ರಮಣಿಕೆಯನ್ನು ಹಿಂದಕ್ಕೆ ತಳ್ಳುವ ಹವ್ಯಾಸವು ಕರುಣಾರಹಿತವಾಗಿ ಹಾಗೂ ವಿವಕ್ಷೆಗಳನ್ನು ಮೀರಿ ನಡೆದಿದೆ ಮತ್ತದು ಭಾರತೀಯ ಚರಿತ್ರೆಯಲ್ಲಿ ಅನೇಕ ಬಿಕ್ಕಟ್ಟುಗಳನ್ನೇ ಸೃಷ್ಠಿಸಿದೆ. ಇಂತಹ ಪ್ರಕ್ರಿಯೆಯು ಭಾರತೀಯ ಮನಸ್ಸುಗಳನ್ನು ದಾರಿತಪ್ಪಿಸಿ, ಅವರ ತಲೆಯಲ್ಲಿ ತಪ್ಪು ಪ್ರಮೇಯಗಳನ್ನು ಆಳವಾಗಿ ಬೇರೂರಿಸಿದೆ. ಇದು ಯುವ ಮತ್ತು ಆಸಕ್ತ ಮನಸ್ಸುಗಳು ಭಾರತದಲ್ಲಿ ಯಾವುದೇ ಕಾರಣಕ್ಕೆ ನಿಜವಾದ ಚರಿತ್ರೆಯನ್ನು ಸ್ಪರ್ಶ ಮಾಡದಂತೆ ತಡೆಯುವ ಯತ್ನವೇ ಆಗಿದೆ.
‘ಭಾರತ’ ಮತ್ತು ‘ಆರ್ಯಾವರ್ತ’ ಎನ್ನುವ ಪದಗಳ ಉಗಮದಲ್ಲೂ ಸಾಕಷ್ಟು ಗೊಂದಲಗಳಿವೆ. ಇಂತಹ ಗೊಂದಲವನ್ನು ಇನ್ನೂ ಕೂಡಾ ಮೂರ್ತ ಮತ್ತು ಸಂಕೀರ್ಣಗೊಳಿಸಲಾಗುತ್ತಿದೆ. ಉದ್ದೇಶ ಪೂರ್ವಕವಾಗಿ ಇಂತಹ ಸಂಗತಿಯು ಹಿಂದುತ್ವದ ಪ್ರಣಾಳಿಕೆ ಮತ್ತು ಅಜೆಂಡಾವನ್ನು ಏಕಪ್ರಕಾರವಾಗಿ ಮುನ್ನಡೆಸಲು ಸಹಕಾರಿಯಾಗಿದೆ. ಈ ಕಾರಣದಿಂದ ನಾವು ಇದನ್ನೂ ಕೂಡಾ ಮರುಪರೀಕ್ಷಿಸಬೇಕಾಗಿದೆ.
‘ಹಿಂದೂ’ ಎನ್ನುವ ಶಬ್ದದ ಮೂಲ ಮತ್ತು ಅರ್ಥದ ಪ್ರಶ್ನೆಯೂ ಕೂಡಾ ಬಹಳ ಮಹತ್ವದ್ದಾದುದಾಗಿದೆ. ಇದರ ಪ್ರಾಚೀನತೆಯ ಬಗೆಗಿನ ಹೆಚ್ಚಿನ ವಾದ-ನಿರೂಪಣೆಗಳು ಈ ಹಿಂದುತ್ವ ಅಜೆಂಡಾದ ಭಾಗವಾಗಿ, ಹೆಚ್ಚು ಮಾಹಿತಿ ಮತ್ತು ಜ್ಞಾನವನ್ನು ಹೊಂದಿರದ ಸಮಾಜದ ಒಂದು ಭಾಗವನ್ನು ಗುರಿಯಾಗಿಸಿಕೊಂಡಿದೆ. ಇದು ಒಂದು ಸರಳ ಸಂಗತಿಯಾದ್ದಾಗ್ಯೂ ಕೂಡಾ ಒಂದು ಸಂಕೀರ್ಣ ವಿದ್ಯಮಾನದಂತೆಯೂ ಇದೆ. ನಾನು ಈ ಶಬ್ದದ ಉಗಮ ಮತ್ತು ಬೆಳವಣಿಗೆಯನ್ನು ಪತ್ತೆ ಮಾಡಲು ಯತ್ನ ನಡೆಸಿದ್ದೇನೆ ಕೂಡಾ. ಈ ಶಬ್ದವು ಧರ್ಮ ಮತ್ತು ನಂಬಿಕೆಯ ಜತೆ ಏನೂ ಸಂಬಂಧವನ್ನು ಹೊಂದಿಲ್ಲ, ಬದಲು ಇದು ತೀರಾ ಇತ್ತೀಚಿನದು. ಈ ವಿವಾದವನ್ನು ತೀರಾ ಇತ್ತೀಚಿಗೆ ಅತ್ಯಂತ ಕೃತಕವಾಗಿ ಸೃಷ್ಠಿಸಲಾಗಿದೆ. ಇದು ಟೊಳ್ಳುಗಟ್ಟಿತನದ್ದು ಹಾಗೂ ಬಲಪಂಥೀಯ ಅಂಧ-ಶ್ರದ್ಧೆಯನ್ನು ಹರಡುವ ಶಕ್ತಿಗಳು ಭಾರತೀಯ ಚರಿತ್ರೆಯನ್ನು ತಿರುಚುವ, ತನ್ಮೂಲಕ ಅತ್ಯಂತ ಸಂಕುಚಿತ ನೆಲೆಯ ರಾಜಕೀಯ ಉದ್ದೇಶಗಳಿಗಾಗಿ ಸೃಷ್ಠಿಸಲ್ಪಟ್ಟಿದ್ದು ಎನ್ನುವುದನ್ನೂ ಕೂಡಾ ಇಲ್ಲಿ ತಿಳಿಯಬಹುದಾಗಿದೆ.
ಇದು ಒಂದು ರೀತಿಯಲ್ಲಿ ನಮ್ಮ ಪ್ರಾಚೀನ ಮತ್ತು ಮಧ್ಯಯುಗೀನ ಸಾಹಿತ್ಯಕ್ಕೆ ವಿರುದ್ಧವಾದ ಮಾನ್ಯತೆಯನ್ನು ತರುವ ಯತ್ನವೂ ಕೂಡಾ ಆಗಿದೆ. ಈ ನೆಲೆಯಲ್ಲಿ ಅಂತಹ ಪಠ್ಯಗಳ ಒಂದು ಸಂಕೀರ್ಣ ಪ್ರಕ್ರಿಯೆಯ ಆಧಾರಗಳನ್ನು ಅವಮಾನಿಸುವ ಕ್ರಮವೂ ಆಗಿದೆ. ಈ ಮೂಲಕ ಅವರ, ‘ನಾವಷ್ಟೇ ಒಂದು ಒಳ್ಳೆಯ ಸಂಪ್ರದಾಯದ ವಾರಸುದಾರರು’ ಎನ್ನುವ ವಾದದ ಸುಳ್ಳಿನ ರೂಪಕವಾಗಿಯೂ ಇದು ಕಾಣಿಸುತ್ತದೆ.
ಧರ್ಮದ ಅಧ್ಯಯನವನ್ನು ‘ಧರ್ಮದ ವಿದ್ವಾಂಸ’ರುಗಳಿಂದ ಸ್ವತಂತ್ರಗೊಳಿಸಬೇಕಿದೆ. ಧರ್ಮದ ವಿದ್ವಾಂಸರು ಇಂತಹ ಮಿಥ್ಯಗಳನ್ನು ಹಾಗೂ ಕಲ್ಪಕಥೆಗಳನ್ನೂ ಇನ್ನೂ ಬಲಪಡಿಸುವ ಕಾರಣ ಅವುಗಳು ಧಾರ್ಮಿಕ ಮೂಲಭೂತವಾದಕ್ಕೆ ಸಾಮಗ್ರಿಯಾಗುತ್ತವೆ. ಧರ್ಮದ ಬಗೆಗಿನ ಅಧ್ಯಯನವನ್ನು ನೈಜ ವಸ್ತುನಿಷ್ಠ ಚರಿತ್ರೆಯ ಮೇಲೆ ಅಧ್ಯಯನ ಮಾಡಬೇಕಾಗಿದೆ.
ಬಹಳ ಪ್ರಮುಖವಾದ ಚಾರಿತ್ರಿಕ ವಿದ್ಯಮಾನಗಳ ಬಗೆಗಿನ ವಿವೇಚನೆ ಮತ್ತು ಪರಿಷ್ಕಾರ ಕುರಿತಂತೆ ಹಾಗೂ ಅಂತಹ ಸಂಕೀರ್ಣ ವಿದ್ಯಮಾನಗಳು ಕೋಮುವಾದೀಯ ರಾಜಕೀಕರಣವನ್ನು ಸಾಧಿಸುವ ನೆಲೆಯನ್ನು ವಿರೋಧಿಸುವ ಮುಖಾಮುಖಿಯಾಗುವ ನಿಟ್ಟಿನಲ್ಲಿ ನನ್ನ ಈ ಭಾಷಣ ಶ್ರಮಿಸುವುದೆಂದು ನಾನು ವಿಶ್ವಾಸವಿರಿಸಿದ್ದೇನೆ.
ಡಿ.ಎನ್.ಝಾ
ನವದೆಹಲಿ
1
ಹಿಂದೂ ಧಾರ್ಮಿಕ ರಾಷ್ಟ್ರೀಯತಾವಾದದ ಬೇರುಗಳ ಮೂಲಕ ಭಾರತದ ಅಸ್ತಿತ್ವದ ಹುಡುಕಾಟ ಹತ್ತೊಂಭತ್ತನೇ ಶತಮಾನದಲ್ಲಿಯೇ ಆರಂಭವಾಗಿ ಇಂದಿನವರೆಗೂ ಮುಂದುವರಿದುಕೊಂಡು ಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹಿಂದೂ ಸಾಂಸ್ಕ್ರತಿಕ ಮೂಲಭೂತವಾದದ(ಹಿಂದೂ ಕಲ್ಚರಲ್ ಚಾವಿನಿಸ್ಮ್) ಕ್ರೂರ ಮುಖವನ್ನು ಪ್ರಸ್ತುತ ರಾಜಕೀಯದ ಮುಖ್ಯ ರಂಗಕ್ಕೆ ತಂದು ಭಾರತದ ಇತಿಹಾಸದ ಕುರಿತು ತಪ್ಪಾದ ಗ್ರಹಿಕೆಯನ್ನು ಸೃಷ್ಠಿಸುತ್ತಿರುವ ಕೋಮುವಾದೀ ಶಕ್ತಿಗಳಿಂದ ಈ ಹುಡುಕಾಟ ಹಿಂದೆಂದೂ ಕಾಣದಂತಹ ತೀವ್ರತೆಯನ್ನು ಪಡೆದುಕೊಂಡಿದೆ. ಆರ್ಯನ್ನರ ಮೂಲನಿವಾಸದ ಕುರಿತು ಕಟ್ಟುಕಥೆಗಳನ್ನು ಬೆಂಬಲಿಸುವ, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ರಾಕ್ಷಸರಂತೆ ಬಿಂಬಿಸುವ, ಭಾರತ ಮತ್ತು ಹಿಂದೂ ಧರ್ಮ ಶಾಶ್ವತವಾದದ್ದೆಂಬ ಕಲ್ಪನೆಯನ್ನು ಓದುಗರ ತಲೆಗೆ ತುಂಬುವ ಇಲ್ಲಿನ ಪ್ರಚಾರ ಬರಹಗಳಿಂದ ಈ ತೀವ್ರತೆ ಸ್ಪಷ್ಠವಾಗುತ್ತದೆ. ವೇದಗಳನ್ನು ರಚಿಸಿದ ಜನ ತಮ್ಮನ್ನು ಆರ್ಯರೆಂದು ಕರೆದುಕೊಂಡರು ಮತ್ತು ಅವರೇ ಭಾರತದ ಮೂಲನಿವಾಸಿಗಳು ಎಂದು ಭಾರತೀಯ ಸಂಸ್ಕøತಿ ಮತ್ತು ನಾಗರೀಕತೆಯ ಮೂಲವನ್ನು ಸಾಬೀತುಪಡಿಸುವುದಕ್ಕಾಗಿ ಈ ರೀತಿ ವಾದಿಸಲಾಯಿತು1. ಕಮ್ಯುನಿಷ್ಟರು ಮತ್ತು ವೈಚಾರಿಕರು (ಕ್ಸನೊಫೋಬ್ಸ್) ವೇದಿಕ್ ಸರಸ್ವತಿಯೆಂದು ಕರೆಯಬೇಕೆಂದು ಒತ್ತಾಯಿಸುವ ಹರಪ್ಪನ್ ನಾಗರಿಕತೆಗೂ ಆರ್ಯನ್ನರೇ ಕರ್ತೃಗಳೆಂದೂ ಹೇಳಲಾಯಿತು. ಇಂಥ ಆಲೋಚನೆಗಳು ಕುತರ್ಕದಿಂದಲೇ ತುಂಬಿದ ಬರಹಗಳನ್ನು ಬರೆಯುವ ಪುರಾತತ್ವ ಶಾಸ್ತ್ರಜ್ಞರಿಂದ ಮತ್ತು ನಕಲೀತನದ ಸೃಷ್ಠಿಯಲ್ಲೇ ನಿರತರಾಗಿರುವ ಅವರ ಹಿಂಬಾಲಕರಿಂದ ಭಾರಿ ಬೆಂಬಲವನ್ನೂ ಪಡೆಯಿತು2. ಹರಪ್ಪನ್ ನಾಗರಿಕತೆಯ ಏಕಶೃಂಗಿ (ಯುನಿಕಾರ್ನ್) ಎತ್ತನ್ನು ವೇದಗಳಲ್ಲಿ ಬರುವ ಕುದುರೆಯನ್ನಾಗಿಸುವುದರ ಮೂಲಕ ವೇದಗಳ ಕರ್ತೃಗಳನ್ನು ಹರಪ್ಪನ್ ನಾಗರಿಕತೆಯ ಕಾಲದಷ್ಟು ಹಿಂದೆ ಕೊಡೊಯ್ಯವ ಕೆಲಸ ಇವರ ನಕಲಿತನಕ್ಕೆ ಒಂದು ಒಳ್ಳೆಯ ಉದಾಹರಣೆಯಾಗಿದೆ3. ಈ ಕಾರಣದಿಂದ ಭಾರತೀಯ ಸಂಸ್ಕøತಿಯ ಕಾಲಸೂಚಿಯನ್ನು ಹಿಂದಕ್ಕೆ ತಳ್ಳುವ ಮತ್ತು ಅದರಲ್ಲಿನ ಬದಲಾವಣೆಗಳನ್ನು ನಿರಾಕರಿಸುವ ಗುಣ ಇಂದು ಪ್ರಾಚೀನತೆಯನ್ನು ಬೇಟೆಯಾಡುವ ಉನ್ಮತ್ತ ರೂಪವನ್ನು ಪಡೆದುಕೊಂಡಿದೆ4. ಭಾರತೀಯ (ಕೋಮುವಾದಿಗಳ ಶಬ್ದಕೋಶದ ಪ್ರಕಾರ ‘ಹಿಂದೂ’!) ನಾಗರೀಕತೆ ಇತರ ಎಲ್ಲ ನಾಗರಿಕತೆಗಳಿಗಿಂತ ಪ್ರಾಚೀನವಾದದ್ದು ಮತ್ತು ಆ ಮೂಲಕ ಆರಂಭಿಕ ಹಂತದಲ್ಲೇ ಎಲ್ಲ ಕಲ್ಮಶಗಳಿಂದ ಮುಕ್ತವಾದದ್ದು ಎಂದು ಸಾಬೀತುಪಡಿಸಲು ಹೆಣಗಾಡುವ ಮೊಂಡುತನವನ್ನು ಕೂಡಾ ನಾವಿಲ್ಲಿ ಕಾಣುತ್ತೇವೆ.
ಈ ಇತಿಹಾಸಪೂರ್ವ ರೂಪದಲ್ಲಿ ಭಾರತ ಅನ್ನೋದು ಸಮಯಾತೀತವಾದದ್ದಾಗಿದೆ. ಮನುಷ್ಯನ ಜನನವಾದದ್ದೇ ಇಲ್ಲಿ. ಇಲ್ಲಿನ ಜನ ಮೊದಲ ಮನುಷ್ಯ ನಾಗಿರಿಕತೆಯೆಂದು ನಂಬಲಾದ (ಸಿಂಧೂ- ಸರಸ್ವತಿ) ವೇದಗಳ ಕರ್ತೃಗಳಾಗಿದ್ದಾರೆ. ಈ ಕರ್ತೃಗಳು ಕಲೆ ಮತ್ತು ವೈಜ್ಞಾನಿಕ ರಂಗಗಳೆರಡರಲ್ಲೂ ಸಾಧನೆಯ ತುತ್ತತುದಿಯನ್ನು ತಲುಪಿದ್ದರು ಮತ್ತು ಶಾಶ್ವತ ಅಸ್ತಿತ್ವ ಹೊಂದಿದ ಭಾರತ ಎಂಬ ರಾಷ್ಟ್ರಕ್ಕೆ ಸೇರಿದವರಾಗಿದ್ದರು. ಭಾರತದ ಅಸ್ತಿತ್ವ, ನಾಗರಿಕತೆ ಮತ್ತು ರಾಷ್ಟ್ರೀಯತೆಯ ಕುರಿತಾದ ಈ ಗೀಳು ಇತ್ತೀಚಿನ ವರ್ಷಗಳಲ್ಲಿ ಭಾರತೀಯತೆಯ ಅಭಿವೃದ್ಧಿಯನ್ನು ಅಭ್ಯಸಿಸಲು ಮತ್ತು ವಿಶ್ಲೇಷಿಸಲು ಹಲವಾರು ವಿದ್ವಾಂಸರಿಗೆ ಉತ್ತೇಜನ ನೀಡಿದೆ5. ಅವರಲ್ಲಿ ಅನೇಕರು ಭಾರತ ಎಂಬ ದೇಶದ ವಿಕಸನ ಪ್ರಕ್ರಿಯೆ ಬಹು ದೀರ್ಘವಾದದ್ದು, ಅದರ ಅಸ್ತಿತ್ವವೆಂಬುದು ನಾನಾ ಸಂದರ್ಭಗಳಲ್ಲಿ ವಲಸಿಗರಾಗಿ ಇಲ್ಲಿಗೆ ಬಂದ ಜನರ ಗ್ರಹಿಕೆಯನ್ನು ಅವಲಂಬಿಸಿದೆ ಮತ್ತು ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆ ಪಾಶ್ಚಾತ್ಯ ಸಾಮ್ರಾಜ್ಯಶಾಹಿಗೆ ಪ್ರತಿಕ್ರಿಯೆಯಾಗಿ ರೂಪುಗೊಂಡಿದೆಯೆಂದು ಸರಿಯಾಗಿಯೇ ವಾದಿಸಿದ್ದಾರೆ. ಉದಾಹರಣೆಗೆ ಪ್ರಾಚೀನ ಭಾರತದ ಗೌರವಾನ್ವಿತ ಇತಿಹಾಸಕಾರರೊಬ್ಬರು, ‘ಪೌರಾಣಿಕ ಲೇಖಕರು ಈ ಉಪಖಂಡದ ನಿವಾಸಿಗಳನ್ನು ರಾಷ್ಟ್ರವನ್ನು ಕಟ್ಟುವವರಾಗಿ ಕಂಡಿದ್ದರು ಹಾಗೂ ಅಂತಹ ಭಾಗಾಳುಗಳನ್ನು ಹೊಂದಿದ ರಾಷ್ಟ್ರವನ್ನು ಕಲ್ಪಿಸಿದ್ದರು ಮತ್ತು ಅಂತಹ ಎಲ್ಲ ನಿವಾಸಿಗಳನ್ನು ‘ಭಾರತಿ’ ಎಂದು ಕರೆದರು6. ಇಂತಹ ಸಮರ್ಥನೆಗಳು ರಾಷ್ಟ್ರದ ಪರಿಕಲ್ಪನೆಯೂ ಸೇರಿದಂತೆ ಎಲ್ಲಾ ಆಧುನಿಕ ಸಂಸ್ಕøತಿ, ವೈಜ್ಞಾನಿಕ ಮತ್ತು ರಾಜಕೀಯ ಬೆಳವಣಿಗೆಗಳೂ ಪ್ರಾಚೀನ ಭಾರತದ ಗುಣಲಕ್ಷಣಗಳೇ ಆಗಿದ್ದವು ಎನ್ನುವ ಅನೇಕ ಸಂಗತಿಗಳು ಹಿಂದೂ ಮೂಲಭೂತವಾದಕ್ಕೆ (ಜಿಂಗೋಯಿಸಂ ಅಥವಾ ಅತಿ ರಾಷ್ಟ್ರಭಕ್ತಿ) ಹತ್ತಿರದಲ್ಲಿವೆ. ಅವರ ವಾದವನ್ನು ಸವಿವರವಾಗಿ ಖಂಡಿಸುತ್ತಾ ಹೋದರೆ ಈಗಾಗಲೇ ಭಾರತದ ಐತಿಹಾಸಿಕ ಬೆಳವಣಿಗೆಗಳ ಕುರಿತು ಬರೆಯಲ್ಪಟ್ಟಿರುವುದರ ಪುನರಾವರ್ತನೆಯಾದೀತು ಅಷ್ಟೇ. ಆದ್ದರಿಂದ ನಾನು ಭಾರತ ಮತ್ತು ಹಿಂದುತ್ವಕ್ಕೆ ಇದೆಯೆನ್ನಲಾಗುತ್ತಿರುವ ಅದ್ಭುತ ಪ್ರಾಚೀನತನದ ವಿರುದ್ಧ ವಾದಿಸಲು ಅಥವಾ ಮಾತಾಡಲು ಬಯಸುತ್ತೇನೆ ಮತ್ತು ನಕಲಿಯಾಗಿ ಸೃಷ್ಠಿಸಲಾಗುತ್ತಿರುವ ಇತಿಹಾಸದ ವಿರುದ್ಧ ಮಾತಾಡುವುದರ ಮೂಲಕ ಇತ್ತೀಚಿನ ವರ್ಷಗಳಲ್ಲಿ ಹಿಂದೂ ಸಾಂಸ್ಕøತಿಕ ರಾಷ್ಟ್ರೀಯತೆ ಎಂಬ ದೈತ್ಯನಿಗೆ ಆಹಾರವಾಗುತ್ತಿರುವ ವಿಚಾರಗಳ ಪೊಳ್ಳುತನವನ್ನು ಸಾಬೀತುಪಡಿಸಲು ಬಯಸುತ್ತೇನೆ.
2
ಆರಂಭಿಕ ಆರ್ಯರ ಭೌಗೋಳಿಕ ದಿಗಂತ, ತಮಗೆಲ್ಲ ತಿಳಿದಿರುವಂತೆ, ಭಾರತೀಯ ಉಪಖಂಡದ ವಾಯುವ್ಯ ಭಾಗಕ್ಕೆ ಮಾತ್ರ ಸೀಮಿತವಾಗಿದ್ದು ಅದನ್ನು ‘ಸಪ್ತಸಿಂಧವಹ’7ವೆಂದು ಕರೆಯುತ್ತಿದ್ದರು. ಭರತ ಬುಡಕಟ್ಟು ವೈದಿಕ ಸಾಹಿತ್ಯದ ಹಲವಾರು ಪ್ರಸಂಗಗಳಲ್ಲಿ ಉಲ್ಲೇಖಿಸಲ್ಪಟ್ಟಿದ್ದರೂ, ಭಾರತ ಎಂಬ ಪದವನ್ನು ರಾಷ್ಟ್ರದ ನೆಲೆಯಲ್ಲಿ ಉಲ್ಲೇಖಿಸಿರುವುದರ ಬಗ್ಗೆ ಇಡೀ ವೈದಿಕ ಸಾಹಿತ್ಯದಲ್ಲಿ ಎಲ್ಲೂ ಕೂಡಾ ದಾಖಲೆ ಕಂಡುಬರುವುದಿಲ್ಲ. ಪಾಣಿನಿಯ ‘ಅಷ್ಠಾಧ್ಯಾಯಿ’ಯಲ್ಲಿ ಉತ್ತರ(ಉದೀಚ್ಯ) ಮತ್ತು ಪೂರ್ವದ(ಪ್ರಾಚ್ಯ)8 ನಡುವೆ ನೆಲೆಸಿರುವ ಭೌಗೋಳಿಕ ಪ್ರದೇಶವನ್ನು ಪ್ರಾಚ್ಯಭಾರತವೆಂದು ಒಂದು ಭೌಗೋಳಿಕ ನೆಲೆಯ ಅರ್ಥ(ಜನಪದ)ದಲ್ಲಿ ಉಲ್ಲೇಖಿಸಲಾಗಿದೆ. ಪ್ರಾಯಶ: ಈ ಭೂ ಪ್ರದೇಶವು ಭರತವೆಂಬ ಸಮುದಾಯ ವಾಸಿಸಿರುವ ಸಣ್ಣ ಭೂಪ್ರದೇಶವಾಗಿದ್ದು ಅದನ್ನು ಹಿಂದುತ್ವವಾದಿಗಳು ಪ್ರತಿಪಾದಿಸುವ ಅಖಂಡಭಾರತ ಅಥವಾ ಭಾರತದೊಂದಿಗೆ ಸಮೀಕರಿಸಲಾಗದು. ಭರತವರ್ಷದ ಅತ್ಯಂತ ಮೊದಲ ಉಲ್ಲೇಖ ಕ್ರಿಸ್ತಪೂರ್ವ 1ನೇ ಶತಮಾನದ ಖಾರವೇಲನ9 ಶಾಸನದಲ್ಲಿ ಕಂಡುಬರುತ್ತದೆ. ಆತ ತಾನು ಆಕ್ರಮಣ ಮಾಡಿದ ಪ್ರದೇಶಗಳ ಪಟ್ಟಿಯಲ್ಲಿ ಭರತವರ್ಷವನ್ನು ಸೇರ್ಪಡಿಸಿದ್ದರೂ, ಮಗಧ ಪ್ರಾಂತ್ಯವನ್ನು ಪ್ರತ್ಯೇಕವಾಗಿ ಉಲ್ಲೇಖಿಸಿರುವುದು ಗಮನಾರ್ಹವಾಗಿದೆ. ಪ್ರಾಯಶ: ಭರತವರ್ಷ ಎಂಬ ಪದವನ್ನು ಉತ್ತರಭಾರತಕ್ಕೆ ಸಮನಾರ್ಥಕವಾಗಿ ಬಳಸಿದ್ದರೂ, ಅದರ ನಿಖರ ಭೌಗೋಳಿಕ ನಿರೂಪಣೆ ಅಸ್ಪಷ್ಠವಾಗಿದೆ. ಆದರೆ ಕ್ರಿ.ಪೂ. 200ರಿಂದ ಕ್ರಿ.ಶ. 300ರ ವರೆಗಿನ ಕಾಲಾವಧಿಯಲ್ಲಿ ರಚಿತವಾದ ಮಹಾಭಾರತ ಇದಕ್ಕಿಂತ ವಿಸ್ತøತವಾದ ಭೌಗೋಳಿಕ ಪ್ರದೇಶವನ್ನು ಕಲ್ಪಿಸಿಕೊಂಡಿದೆ. ಈ ಮಹಾಕಾವ್ಯವು ಉಪಖಂಡದ ಭೌಗೋಳಿಕ ವಿವರಣೆಗಳನ್ನೊಳಗೊಂಡಿದ್ದರೂ ದಖ್ಖಣದ ಬಹುಭಾಗ ಮತ್ತು ದಕ್ಷಿಣದ ಅಂಚಿನ ಯಾವುದೇ ಭಾಗವನ್ನು ಉಲ್ಲೇಖಿಸದಿರುವುದು ಗಮನಾರ್ಹ. ಭರತ ವರ್ಷದ ಐದು ವಿಭಾಗಗಳಲ್ಲಿ ಮಧ್ಯ ದೇಶವೆಂಬ ಬಗ್ಗೆ ಪ್ರಾಚೀನ ಭಾರತದ ಕೃತಿಗಳಲ್ಲಿ ಯಾವಾಗಲೂ ಕೂಡ ಉಲ್ಲೇಖ ಕಾಣಸಿಗುತ್ತದೆ. ಸುಮಾರು ನಾಲ್ಕು ಮತ್ತು ಐದನೇ ಶತಮಾನದ ‘ಅಮರಕೋಶ’ ಅಥವಾ ‘ನಾಮ ಲಿಂಗಾನುಶಾಸನ’ ಎಂಬ ಕೃತಿ ಭಾರತ ಮತ್ತು ಆರ್ಯಾವರ್ತ10 ಎಂಬ ಎರಡು ಬಳಕೆಗಳನ್ನು ಸಮಾನಾರ್ಥಕವಾಗಿ ಬಳಸುತ್ತದೆ. ಆರ್ಯಾವರ್ತ ಎಂಬ ಬಳಕೆ ಸುಮಾರು ಹನ್ನೊಂದನೆಯ ಶತಮಾನದ ಹೊತ್ತಿಗೆ ನಾಮ ಲಿಂಗಾನುಶಾಸನದ ಟೀಕಾಕಾರರಾದ ‘ಕ್ಷೀರ ಸ್ವಾಮಿ’ಯು ಹೇಳುವ ಹಾಗೆ, ಮನುವಿನ ಪವಿತ್ರ ಭೂಮಿ ಹಿಮಾಲಯ ಮತ್ತು ವಿಂಧ್ಯ ಪರ್ವತದ ನಡುವೆ ಆರ್ಯಾವರ್ತವಾಗಿ ಪ್ರತಿಷ್ಠಾಪಿಸಲ್ಪಟ್ಟಿದೆ ಎನ್ನುತ್ತಾನೆ11. ಆದರೆ ಸರಿಸುಮಾರು ಏಳನೆ ಶತಮಾನದ ಬಾಣಭಟ್ಟನ ಕೃತಿ ‘ಕಾದಂಬರಿ’ ಹೇಳುತ್ತದೆ, ‘ಭರತ ವರ್ಷ ಎನ್ನುವಂತಹ ಭೂಮಿ ‘ತಾರಾಪೀಡ’ ಎನ್ನುವಂತಹ ವ್ಯಕ್ತಿಯಿಂದ ಸರಿಸುಮಾರು ನಾಲ್ಕು ಸಮುದ್ರಗಳ ನಡುವೆ ಸ್ಥಾಪಿಸಲ್ಪಟ್ಟಿದೆ ಅಥವಾ ‘ದತ್ತಚತುಶ್ಸಮುದ್ರಮುದ್ರಾಹ’12 ಎಂದು ಮತ್ತು ಇನ್ನೊಂದು ಕಡೆ ಉಜ್ಜೈನಿಯು ಭರತ ವರ್ಷದಿಂದ13 ಹೊರಗಡೆ ಸ್ಥಾಪಿಸಲ್ಪಟ್ಟಿದೆ ಎನ್ನುವ ಉಲ್ಲೇಖವನ್ನು ಕೂಡ ಕೊಡುತ್ತದೆ. ಇದೇ ರೀತಿಯಲ್ಲಿ ಹತ್ತನೇ ಶತಮಾನದ ಸೋಮದೇವ ಸೂರಿಯ ‘ನೀತಿವಾಕ್ಯಾಮೃತ’ ಎನ್ನುವ ಕೃತಿಯಲ್ಲಿ ‘ಭಾರತೀಯಾಹ’ ಅನ್ನುವಂತಹ ಸಂಗತಿಯನ್ನು ಉಲ್ಲೇಖಿಸಲಾಗಿದೆಯಾದರೂ ಕೂಡ ಅದನ್ನು ಭಾರತ ಎನ್ನುವ ಪ್ರದೇಶದ ನಿವಾಸಿಗಳು ಎಂದು ಕಲ್ಪಿಸಲಾಗದು, ಯಾಕೆಂದರೆ ಅಂತಹ ಕಲ್ಪನೆಯೇ ವ್ಯಾಖ್ಯಾನಕ್ಕೆ ಸಿಗುವುದಿಲ್ಲವಾದ ಕಾರಣ14.
ಪುರಾಣಗಳಲ್ಲಿ ಭರತವರ್ಷ ಎನ್ನುವ ಶಬ್ದ ಅತ್ಯಂತ ಪ್ರಮುಖವಾಗಿ ದಾಖಲಾಗುತ್ತದೆಯಾದರೂ ಕೂಡಾ ಅದು ನಿಶ್ಚಿತವಾದ ಭೌಗೋಳಿಕ ವ್ಯಾಪ್ತಿಯನ್ನು ಪ್ರಕಟಿಸುವುದಿಲ್ಲ. ಕೆಲವು ಕಂಡಿಕೆಯಲ್ಲಿ ಅಥವಾ ಪ್ಯಾರಾಗಳಲ್ಲಿ ಅದು ಅರ್ಧ ಚಂದ್ರನನ್ನು ಸಮೀಕರಿಸಿದರೆ ಅಥವಾ ಸೂಚಿಸಿದರೆ ಕೆಲವು ಕಡೆ ಅಥವಾ ಅರ್ಥದಲ್ಲಿ ಅದು ತ್ರಿಕೋನವನ್ನು ಸೂಚಿಸುತ್ತದೆ. ಇನ್ನು ಕೆಲವು ಬಳಕೆಗಳಲ್ಲಿ ಅದು ಅರ್ಧ ಅಥವಾ ಪೂರ್ಣಚಂದ್ರಾಕೃತಿಯನ್ನು ಅಥವಾ ಧನುಸ್ಸಿನ ಆಕೃತಿಯನ್ನು ಸೂಚಿಸುತ್ತದೆ15. ಮಾರ್ಕಾಂಡೇಯ ಪುರಾಣದಲ್ಲಿ ಪುರಾಣವು ರಾಷ್ಟ್ರದ ಆಕೃತಿಯನ್ನು ಆಮೆಯು ಪೂರ್ವ ದಿಕ್ಕಿಗೆ ಸಾಗುತ್ತಾ ನೀರಿನ ಮೇಲೆ ತೇಲುತ್ತಿರುವ ಹಾಗೆ ಸೂಚಿಸಲಾಗಿದೆ16. ಹೆಚ್ಚಿನ ಪುರಾಣಗಳು ಭರತ ವರ್ಷವು ಸರಿ ಸುಮಾರು ಒಂಬತ್ತು ದ್ವೀಪಗಳು ಅಥವಾ ಕಾಡುಗಳಾಗಿ ವಿಭಜಿತಗೊಂಡಿರುವುದನ್ನು ಹೇಳುತ್ತವೆ ಮತ್ತು ಇಂತಹ ದ್ವೀಪಗಳು ಸಮುದ್ರದಿಂದ ಪ್ರತ್ಯೇಕವಾಗಿ ಒಂದನ್ನು ಇನ್ನೊಂದು ಸಂಪರ್ಕಿಸಿರುವ ರೀತಿಯ ಸ್ವರೂಪವನ್ನು ಅವುಗಳು ಸೂಚಿಸಿವೆ. ಪುರಾಣಗಳು ಸೂಚಿಸುವ ಭರತವರ್ಷ ಅನ್ನುವ ಪರಿಕಲ್ಪನೆ ಏನಿದೆ, ಅದು ಪ್ರಾಚೀನ ಭಾರತದ ಖಗೋಳಶಾಸ್ತ್ರಜ್ಞರುಗಳಾದ ವರಾಹಮಿಹಿರ, ಭಾಸ್ಕರಾಚಾರ್ಯ ತಿಳಿಸುವ ವ್ಯಕ್ತಪಡಿಸುವ ಯೋಚನೆಗಳಿಗೆ ಹತ್ತಿರವಾಗಿದೆ. ಆದಾಗ್ಯೂ ಅವರುಗಳು ಗುರುತಿಸಿರುವ ನದಿಗಳು, ಪರ್ವತಗಳು, ಭೂ-ಪ್ರದೇಶಗಳು ಮತ್ತು ಸ್ಥಳಗಳನ್ನು ಪುರಾಣಗಳು ವ್ಯಕ್ತಪಡಿಸಿರುವ ಮಾಹಿತಿಗಳ ಆಧಾರದಿಂದ ತಿಳಿಯಬಹುದಾಗಿದೆ. ಈ ಭರತ ವರ್ಷ ಎನ್ನುವ ಭೌಗೋಳಿಕ ಪರಿಕಲ್ಪನೆ ದಕ್ಷಿಣ ಭಾರತವನ್ನು ಒಳಗೊಂಡಿಲ್ಲ ಮತ್ತು ಇದು ವಿಂಧ್ಯ ಪರ್ವತದ ದಕ್ಷಿಣ ತುದಿಯಿಂದ ಮುಂದೆ ದಕ್ಷಿಣ ಭಾರತದವರೆಗೆ ಹೋಗಿಲ್ಲ ಎನ್ನುವುದು ಸ್ಪಷ್ಠವಾಗುತ್ತದೆ. ಆದಾಗ್ಯೂ ಹತ್ತು ಮತ್ತು ಹನ್ನೊಂದನೆಯ ಶತಮಾನದ ಕೆಲವು ಶಾಸನಗಳಲ್ಲಿ ಕುಂತಲ ಅಥವಾ ಕರ್ನಾಟಕವೆಂದು ಕರೆಯಬಹುದಾದ ಬಹುಭಾಗವು ಭಾರತ17 ಅಥವಾ ಭಾರತದ ಒಳಗಡೆ ಸ್ಥಿತಗೊಂಡಿದ್ದರ ಬಗ್ಗೆ ಮಾಹಿತಿ ಲಭಿಸುತ್ತದೆ. ವಿಶೇಷವಾಗಿ ಈ ಭಾರತವು, ಸುಮಾರು ಹದಿನಾಲ್ಕನೆಯ ಶತಮಾನದ ಒಂದು ದಾಖಲೆ ತಿಳಿಸುವ ಪ್ರಕಾರ ಹಿಮಾಲಯದಿಂದ ದಕ್ಷಿಣದ ಸಮುದ್ರದವರೆಗೆ18 ವಿಸ್ತರಿಸಿದೆ ಮತ್ತು ವಿಶೇಷವಾಗಿ ಆ ಕಾಲದ ಪಠ್ಯ ಮತ್ತು ಶಾಸನಗಳ ದಾಖಲೆಗಳಿಂದ ಈಗ ನಾವು ಏನು ಭಾರತವನ್ನು ನೋಡುತ್ತಿದ್ದೇವೆ ? ಅಂತಹ ಭಾರತ ಅದಾಗಿತ್ತು ಎನ್ನುವುದನ್ನು ತಿಳಿಯಬಹುದಾಗಿದೆ.
ಒಂದು ಮಹತ್ವಾಕಾಂಕ್ಷಿ ಪರಿಕಲ್ಪನೆಯ ಭಾರತ ಎನ್ನುವ ಆಲೋಚನೆ ಜೈನ ವಿದ್ವಾಂಸ ‘ಹೇಮಚಂದ’್ರನ ‘ಅಭಿದಾನ ಚಿಂತಾಮಣಿ’ ಕೃತಿಯಲ್ಲಿ ಕೂಡಾ ಕಂಡು ಬರುತ್ತದೆ. ಹೇಮಚಂದ್ರ ಇದನ್ನು ‘ಕರ್ಮಭೂಮಿ’ ಎಂದು ಕರೆಯುತ್ತಾನೆ ಮತ್ತು ಇಂತಹ ಕರ್ಮಭೂಮಿಯೂ ಫಲ ಅಥವಾ ‘ಫಲಭೂಮಿ’ಗೆ19 ವಿರುದ್ಧವಾದುದು ಎಂದೂ ಕೂಡಾ ಹೇಳುತ್ತಾನೆ. ಆದರೆ ಹೇಮಚಂದ್ರ ಈ ಕರ್ಮಭೂಮಿ ಮತ್ತು ಫಲಭೂಮಿ ಎನ್ನುವ ಪರಿಕಲ್ಪನೆಗಳ ಬಗ್ಗೆ ವಿವರವಾಗಿ ವಿವರಣೆಯನ್ನು ಕೊಡುವುದಿಲ್ಲ. ಹೇಮಚಂದ್ರ ಸರಿಸುಮಾರು ಭರತ ವರ್ಷಕ್ಕೆ ಸಂವಾದಿಯಾಗಿ ಬಳಸುವ ಶಬ್ದವಾದ ‘ಆರ್ಯಾವರ್ತ’ ಎನ್ನುವ ಬಳಕೆಯನ್ನು ಮನುವಿನ ಗ್ರಂಥಗಳಲ್ಲೂ ಕೂಡಾ ಕಾಣಬಹುದು20. ಒಂದು ರೀತಿಯಲ್ಲಿ ಪ್ರಾಚೀನ ಭಾರತದ ಅನೇಕ ಕೃತಿಗಳು ಕಟ್ಟಿಕೊಡುವ ಭಾರತದ ಆರಂಭದ ಭೂ-ಚಾರಿತ್ರಿಕ ಚರಿತ್ರೆ ಮತ್ತು ಸಂವಾದದಲ್ಲಿ, ನಾವು ‘ಆರ್ಯಾವರ್ತ’ ಎನ್ನುವ ಶಬ್ದವೇ ಹೆಚ್ಚು ಬಳಕೆಯಾಗಿರುವುದನ್ನು ಕಾಣಬಹುದಾಗಿದೆ. ಸುಮಾರು 1860ರ ನಂತರವಷ್ಟೇ ಈ ಭರತವರ್ಷ ಎನ್ನುವ ಶಬ್ದ ಮತ್ತು ಬಳಕೆ ಅದು ಇಡೀ ಉಪಖಂಡವನ್ನು ಸಂವಾದಿಸಿ ಅಥವಾ ಸೂಚಿಸಿ ಬಳಸುವ ಪರಿಭಾಷೆ ಅತ್ಯಂತ ಜನಪ್ರಿಯವಾಯಿತು. ಇಂತಹ ಭೌಗೋಳಿಕ ಅಭಿವ್ಯಕ್ತಿಯ ದೃಶ್ಯ ನೆಲೆ ಅಥವಾ ಅಭಿವ್ಯಕ್ತಿ ಕಾಣ ಸಿಕ್ಕಿದ್ದು ಸರಿ ಸುಮಾರು 1906ರ ನಂತರವಷ್ಟೇ. ಅದು ಅವನೀಂದ್ರ ಠಾಗೋರ್ ಅವರ ಅತ್ಯಂತ ಪ್ರಸಿದ್ಧವಾದ ‘ಭಂಗಮಾತಾ’ ಎನ್ನುವ ಚಿತ್ರ ಅಥವಾ ಪೈಂಟಿಂಗ್ನಿಂದ ಮತ್ತು ನಂತರ ಅದೇ ಚಿತ್ರ ಭಾರತ ಮಾತಾ ಎನ್ನುವ ಹೆಸರಿನಲ್ಲಿ ಸಮಕಾಲೀನ ರಾಷ್ಟ್ರೀಯತೆಯ ಬೇಡಿಕೆಯನ್ನು ತೀರಿಸುವ ಮೂಲಕ ಉದಾರವಾಯಿತು21. ಹೀಗೆ ಹತ್ತೊಂಬತ್ತನೇ ಶತಕದ ಅರವತ್ತರ ದಶಕ ಮತ್ತು ಎಪ್ಪತ್ತರ ದಶಕದ ನಂತರ ಈ ಭಾರತ ಎನ್ನುವ ಪರಿಕಲ್ಪನೆ ಒಂದು ಸ್ವ-ಪ್ರಜ್ಞೆಯ ಒಳಗೊಳ್ಳುವಿಕೆ ಮತ್ತು ಸ್ವೀಕೃತಿಯಿಂದ ಮತ್ತು ಸಾಮ್ರಾಜ್ಯಶಾಹೀ ಚಾರಿತ್ರಿಕ, ಭೌಗೋಳಿಕ, ತಳಿಶಾಸ್ತ್ರೀಯ ಮತ್ತು ಪುರಾಣದ ಕಾಲಾನುಕ್ರಮಣಿಕೆಯ ಕ್ರಮ ಮತ್ತು ನಿಲುವುಗಳಿಂದ ಅಥವಾ ಪರಿವರ್ತನೆಗಳ ಸಂವಾದದ ಮೂಲಕ ನಿರ್ಮಿತವಾಯಿತು22.
ಅನೇಕ ಪಠ್ಯದಲ್ಲಿ ಭಾರತ ಎನ್ನುವ ಭೌಗೋಳಿಕ ಪ್ರದೇಶವು ‘ಜಂಬೂದ್ವೀಪ’ದ ಭಾಗವಾಗಿ ಪ್ರಕಟಗೊಂಡಿದ್ದರೂ ಕೂಡ ನಿಶ್ಚಿತವಾದ ಭೌಗೋಳಿಕ ವ್ಯಾಪ್ತಿಯನ್ನು ಅದು ಹೊಂದಿರುವುದಿಲ್ಲವಾಗಿದೆ. ವೈದಿಕ ಪಠ್ಯಗಳು ಇದನ್ನು ಉಲ್ಲೇಖಿಸುವುದಿಲ್ಲ, ಪಾಣಿನಿಯೂ ಕೂಡಾ ಭಾರತ ಎನ್ನುವ ಶಬ್ದವನ್ನು ಉಲ್ಲೇಖಿಸುವುದಿಲ್ಲ, ಆದರೆ ‘ಜಂಬೂ’23(ಜಂಬೂ ಮಣ್ಣಿನ ಮರಕ್ಕೆ ಸಂಬಂಧಿಸಿದ) ಎನ್ನುವ ಪದವನ್ನು ಬಳಸುತ್ತಾನೆ. ಅತ್ಯಂತ ಪ್ರಾಚೀನ ಬೌದ್ಧ ಕೃತಿಗಳು ತುಂಬಾ ಬೇಗನೆ ಜಂಬೂದ್ವೀಪ24 ಎನ್ನುವ ಖಂಡದ ಬಗ್ಗೆ ಶಬ್ದ ಮತ್ತು ಪರಿಕಲ್ಪನೆಯ ಉಲ್ಲೇಖಗಳನ್ನು ನೀಡುತ್ತದೆ. ಬಹುಶ: ಸರಿಸುಮಾರು ನೂರು ಯೋಜನಗಳಷ್ಟು ಎತ್ತರ ಬೆಳೆಯುತ್ತಿದ್ದ, ಸುಮಾರು ಹದಿನೈದು ಯೋಜನಗಳಷ್ಟು ವಿಸ್ತೀರ್ಣದ ಕಾಂಡವನ್ನು ಹೊಂದಿದ್ದ, ಸುಮಾರು ಐವತ್ತು ಯೋಜನಗಳಷ್ಟು ವಿಸ್ತಾರವಾಗಿ ಅದರ ಗೆಲ್ಲುಗಳು ವಿಸ್ತರಿಸಿಕೊಂಡ ಹಾಗೂ ಸುಮಾರು ನೂರು ಯೋಜನಗಳಷ್ಟು ನೆರಳನ್ನು ನೀಡುತ್ತಿದ್ದ ಜಂಬೂ ಎನ್ನುವ ಮರದ ಕಾರಣದಿಂದ ಈ ಶಬ್ದ ಉಗಮವಾಗಿದ್ದಿರಬಹುದು25 ಮತ್ತು ಇಂತಹ ಪ್ರದೇಶ ನಾಲ್ಕು ಮಹಾದೀಪ ಅಥವಾ ಮಹಾದ್ವೀಪಗಳಿಂದ ಒಳಗೊಂಡು ಚಕ್ರವರ್ತಿಯಿಂದ ಅಥವಾ ಚಕ್ರವರ್ತಿಗಳಿಂದ ಆಳಲ್ಪಡುತ್ತಿತ್ತು. ಬೌದ್ಧ ಗ್ರಂಥಗಳ ಪ್ರಕಾರ ಬುದ್ಧರು ಮತ್ತು ಚಕ್ರವರ್ತಿಗಳು ಜಂಬೂ ದ್ವೀಪದಲ್ಲಿ ಮಾತ್ರ ಹುಟ್ಟುತ್ತಿದ್ದರು. ಈ ಕಾರಣದಿಂದ ಅವರು ಉತ್ತರ ಕುರು26 ಜನರಿಗಿಂತ ಹೆಚ್ಚು ಧೈರ್ಯಶಾಲಿಗಳು, ಶಾಂತಚಿತ್ತರು ಮತ್ತು ಧಾರ್ಮಿಕರು ಕೂಡಾ ಆಗುತ್ತಿದ್ದರು ಎಂದು ನಂಬಲಾಗಿತ್ತು. ಬೌದ್ಧ ಗ್ರಂಥಗಳು ಹೇಳುವ ಆಗಿನ ಜಂಬೂದ್ವೀಪ ಮತ್ತು ಉತ್ತರ ಕುರು ಎನ್ನುವಂತಹ ವಿವರಣೆಗಳನ್ನು ಹಿಡಿದು ಸಾಗಿದರೆ ಅವೆರಡೂ ಕೂಡ ಮಿಥ್ಯಗಳನ್ನು ನೆನಪಿಸುವ ಪ್ರದೇಶಗಳಾಗಿದ್ದುವು ಎಂಬುದನ್ನು ಗಮನಿಸಬಹುದು. ಆದಾಗ್ಯೂ ಕೂಡ ಸಿಂಹಳ ದೀಪ ಅಥವಾ ಸಿಂಹಳ ದ್ವೀಪ ಎನ್ನುವುದಕ್ಕೆ ಶ್ರೀಲಂಕಾವನ್ನು ನಾವು ಸಂವಾದಿಸುವುದಾದರೆ ಜಂಬೂ ದ್ವೀಪವು ಭಾರತ ಎನ್ನುವುದನ್ನು ಸಾಧಿಸುತ್ತದೆ27. ಈ ನೆಲೆಯಿಂದಲೇ ಅಶೋಕ ತನ್ನ ವಿಸ್ತಾರವಾದ ಸಾಮ್ರಾಜ್ಯವನ್ನು ಮತ್ತು ವಿಶೇಷವಾಗಿ ದಕ್ಷಿಣ ಭಾರತವನ್ನು ಹೊರತುಪಡಿಸಿದ ಸಾಮ್ರಾಜ್ಯವನ್ನು ಸೂಚಿಸುವ ಸಲುವಾಗಿ ಜಂಬೂದ್ವೀಪ ಎನ್ನುವ ಶಬ್ದವನ್ನು ಬಳಸುತ್ತಾನೆ28.
ಜಂಬೂದ್ವೀಪಕ್ಕೆ ಸಂಬಂಧಿಸಿದ ಭೌಗೋಳಿಕ ಅಸ್ಪಷ್ಠತೆ ಮುಂದಿನ ಶತಮಾನಗಳ ಶಾಸನೀಯ ಹಾಗೂ ಗ್ರಾಂಥಿಕ ಮೂಲಾಧಾರಗಳಲ್ಲೂ ಮುಂದುವರಿಯಿತು. ಉದಾಹರಣೆಗೆ ಆರನೇ ಶತಮಾನದ ರಾಜ ‘ತೋರಮಾನ’ನ ಶಾಸನದಲ್ಲಿ ಜಂಬೂದ್ವೀಪವು ಯಾವುದೇ ನಿರ್ದಿಷ್ಠ ಭೌಗೋಳಿಕ ನಿರೂಪಣೆರಹಿತವಾಗಿ ಉಲ್ಲೇಖಿಸಲ್ಪಟ್ಟಿದೆ29. ಪೌರಾಣಿಕ ಲೌಕಿಕ ನಕ್ಷೆಯಲ್ಲಿ ಅದೊಂದು ಭೌಗೋಳಿಕ ಅಸ್ತಿತ್ವವಾಗಿರುವುದಕ್ಕಿಂತ ಪೌರಾಣಿಕ ಕ್ಷೇತ್ರವಾಗಿ ಕಂಡುಬರುತ್ತದೆ. ಪುರಾಣಗಳ ಪ್ರಕಾರ ಪ್ರಪಂಚ ಏಳು ವೃತ್ತಾಕಾರದ ದ್ವೀಪಗಳನ್ನೊಳಗೊಂಡಿದ್ದು ಪ್ರತಿಯೊಂದು ದ್ವೀಪವೂ ಕೂಡಾ ಸಮುದ್ರದಿಂದ ಆವೃತವಾಗಿದೆ. ಕೇಂದ್ರ ದ್ವೀಪವನ್ನು ಜಂಬೂದ್ವೀಪವೆಂದು ಕರೆಯಲಾಗಿದೆ30. ಈ ವಿವರಣೆ ಜೈನಮತದ ಲೌಕಿಕ ಕಲ್ಪನೆ ಮತ್ತು ಜೈನ-ಜ್ಯೋತಿರ್ಶಾಸ್ತ್ರೀಯ ಅಥವಾ ಕಾಸ್ಮಾಲಾಜಿಕಲ್ ಪರಿಕಲ್ಪನೆಗೆ ಹತ್ತಿರವಾಗಿದೆ. ಆದರೆ ಜೈನರು ಜಂಬೂದ್ವೀಪವನ್ನು ಮೂರುಸುತ್ತಿನ ರಚನೆಯ ಬ್ರಹ್ಮಾಂಡದ ಮಧ್ಯಭಾಗದ ಮಧ್ಯದಲ್ಲಿರುವ ‘ಮಧ್ಯಲೋಕ’ ಎಂದು ನಂಬುತ್ತಾರೆ31. ಇನ್ನೊಂದು ಕಡೆಯಲ್ಲಿ, ಬೌಧ್ಧೀಯರ ಜ್ಯೋತಿರ್ಶಾಸ್ತ್ರೀಯ ಅಥವಾ ಲೋಕ ಪರಿಕಲ್ಪನೆಯನ್ನು ಹೋಲುವ ಪುರಾಣದ ಪರಿಕಲ್ಪನೆ ಪ್ರಕಾರ, ಭೂಮಿ ನಾಲ್ಕು ಮಹಾ ದ್ವೀಪಗಳಾಗಿ ವಿಭಜಿಸಲ್ಪಟ್ಟಿದೆ. ಜಂಬೂದ್ವೀಪ ಇವುಗಳ ಪೈಕಿ ಅತ್ಯಂತ ದೊಡ್ಡದಾಗಿದೆ32. ಈ ಎರಡೂ ಪರಿಕಲ್ಪನೆಗಳಲ್ಲಿ, ಭರತವರ್ಷವು ಕೆಲವು ಸಂದರ್ಭಗಳಲ್ಲಿ ಜಂಬೂದ್ವೀಪದ ಭಾಗವೆಂತಲೂ, ಇನ್ನೂ ಕೆಲವು ಕಡೆಗಳಲ್ಲಿ ಎರಡು ಒಂದೇ ಎಂಬಂತೆ ತಿಳಿಸಲಾಗಿದೆ33.
ಭಾರತ ಮತ್ತು ಜಂಬೂದ್ವೀಪಕ್ಕೆ ಸಂಬಂಧಿಸಿದ ಈ ಎರಡು ವಿಭಿನ್ನವಾದ ಭೌಗೋಳಿಕ ಪರಿಕಲ್ಪನೆಗಳು ಕೃತಕವಾಗಿ ನಿರ್ಮಿತವಾದ ಪ್ರಶ್ನಾರ್ಹ ಮೂಲ್ಯನಿರೂಪಣೆಯಾಗಿರುವುದರಿಂದ, ಅದರ ನಿವಾಸಿಗಳು ಪ್ರಾಚೀನಕಾಲದ ರಾಷ್ಟ್ರೀಯರು ಎಂದು ವಾದಿಸುವುದು ಒಂದು ರೀತಿಯಲ್ಲಿ ಮಿಥ್ಯಾತರ್ಕವೇ ಸರಿ. ಇಂತಹ ವಾದವು ಹಿಂದುತ್ವವಾದಿಗಳ ಗ್ರಹೀತ ಭಾರತೀಯ ರಾಷ್ಟ್ರೀಯ ಗುರುತಿಗೆ ಪ್ರಾಚೀನತೆಯನ್ನು ತಂದು ಕೊಡುವ ಜೊತೆಗೆ ಹಿಂದೂಧರ್ಮದ ಕಲ್ಪಿತ ಸನಾತತೆಗೆ ತರ್ಕ ಸಮ್ಮತಿಯನ್ನು ದೊರಕಿಸಿ ಹಿಂದೂ ಸಾಂಸ್ಕøತಿಕ ರಾಷ್ಟ್ರೀಯತೆಗೆ ಬುನಾದಿ ಒದಗಿಸುವ ಕ್ರಮವೇ ಆಗಿದೆ34. ಈ ಎಲ್ಲಾ ತರ್ಕಹೀನ ವಿಚಾರಧಾರೆಗಳಿಗೆ ಬಿ.ಬಿ. ಲಾಲ್ರಂತಹ ವಿದ್ವಾಂಸರ ಮೂಲಕ ಪುರಾತತ್ವಶಾಸ್ತ್ರದ ಯೋಜನಾಬದ್ಧ ದುರುಪಯೋಗದ ಪೋಷಣೆ ಕೂಡಾ ದೊರೆತಿದೆ. ಬಿ.ಬಿ. ಲಾಲ್ ಅವರು, ಪಂಚತಂತ್ರದ ಕಥೆಗಳು ಲೋಥಾಲ್ನ35 ಉತ್ಖನನದ ಸಂದರ್ಭದಲ್ಲಿ ದೊರೆತಿದೆಯೆಂದು ಹೇಳಲಾದ ಮಡಿಕೆಯ ಮೇಲೆ ಚಿತ್ರಿತಗೊಂಡಿವೆ ಎನ್ನುವ ಮತ್ತು ಕಾಲಿಬಂಗನ್ ಜನರು ಜೇಡಿಮಣ್ಣಿನ ತಂದೂರ್ನಲ್ಲಿ ಪದಾರ್ಥಗಳನ್ನು ಬೇಯಿಸುತ್ತಿದ್ದರೆಂಬುದರ ಮೂಲಕ ಆಧುನಿಕ ಕಾಲದ ತಂದೂರ್ನ ಪೂರ್ವ ನಿರೀಕ್ಷೆ ಅಲ್ಲಿನ ಜನರಿಗಿತ್ತು ಎಂದು ಹೇಳುತ್ತಾರೆ36. ಹರಪ್ಪಾದ ಜನರು ‘ನಮಸ್ಕಾರ ಮುದ್ರೆ’ಯ ಮೂಲಕ ಅಂದರೆ ಆಧುನಿಕ ಹಿಂದೂಗಳ ಕ್ರಮದಂತೆ ಸತ್ಕರಿಸುತ್ತಿದ್ದರಂತೆ, ಹಿಂದೂ ವಿವಾಹಿತ ಮಹಿಳೆಯರು ತಮ್ಮ ಬಾಚುತಲೆಯ ಮಧ್ಯದಲ್ಲಿ ಸಿಂಧೂರವನ್ನು ಹಚ್ಚುತ್ತಿದ್ದರು ಹಾಗೂ ಮುಂಗೈವರೆಗೂ ಬಳೆಗಳನ್ನು ತೊಡುತ್ತಿದ್ದರೆಂದು ಹೇಳುತ್ತಾ ತಮ್ಮ ಅಲ್ಪಜ್ಞಾನವನ್ನು ಪ್ರದರ್ಶಿಸುತ್ತಾರೆ. ಇನ್ನೂ ಧರ್ಮಾಚರಣೆಯ ವಿಷಯದಲ್ಲಿ ಹರಪ್ಪಾದ ಜನರು ಅಗ್ನಿಯನ್ನು ಆರಾಧಿಸುತ್ತಿದ್ದರೆಂದೂ, ಈ ಕುರಿತು ಯಾವುದೇ ಪುರಾತತ್ವ ದಾಖಲೆ ಸಿಗದಿದ್ದರೂ ಲಿಂಗ ಯೋನಿಯನ್ನು ಪೂಜಿಸುತ್ತಿದ್ದರೆನ್ನುವ ಮೂಲ ಶೈವಪಂಥದ ಪ್ರಾಚೀನತೆಯನ್ನು ಹರಪ್ಪಾ ನಾಗರೀಕತೆಯ ಕಾಲಕ್ಕೆ ಹಿಂದೆ ಸರಿಸುತ್ತಾರೆ. ವೈದಿಕ ಸಾಹಿತ್ಯ ಮಾತ್ರ ದಾಖಲಿಸುವ ಅಗ್ನಿ ಪೂಜೆಯು ಹರಪ್ಪಾದಲ್ಲಿಲ್ಲದಿದ್ದರೂ ಕೂಡಾ ಅದು ಹರಪ್ಪಾದಲ್ಲಿತ್ತೆಂದೂ ವಾದ ಮಾಡುವ ಪ್ರಯತ್ನ ನಡೆದಿದೆ. ತಮ್ಮ ಇತ್ತೀಚಿನ ದಿನಗಳಲ್ಲಿ ಕೆಲವು ವಿದ್ವಾಂಸರ67 ಬೆಂಬಲದೊಂದಿಗೆ ಹರಪ್ಪಾ ಜನರ ಧರ್ಮವು ‘ವೈದಿಕ-ಹಿಂದು’ ಎಂಬ ಪ್ರಾಚೀನ ನಿರಾಧಾರ ಅಭಿಪ್ರಾಯವನ್ನು ಪ್ರತಿಷ್ಠಾಪಿಸುವ ಪ್ರಯತ್ನಗಳು ನಡೆಯುತ್ತಿದ್ದು, ಹಿಂದೂ ಸಾಂಸ್ಕøತಿಕ ರಾಷ್ಟ್ರೀಯ ವಾದಿಗಳ ಪ್ರಕಾರ ಹರಪ್ಪಾ ಜನರ ಧರ್ಮವು ಆಧುನಿಕ ಹಿಂದೂ ಧರ್ಮದ ‘ರೇಖೀಯ ಪೂರ್ವಜ’ವೆಂದು ಬಿಂಬಿಸುವ ಪ್ರಯತ್ನಗಳೂ ಕೂಡಾ ನಡೆದಿವೆ38.
3
ಇಂತಹವರ ಪೈಕಿ ಕೆಲವು ಕಪೋಲ ಕಲ್ಪಿತ ವಿದ್ವಾಂಸರುಗಳು ಹಿಂದೂಧರ್ಮದ, ಭಾರತದೇಶದ ಪ್ರಾಚೀನತೆಯ ಕುರಿತು ಹಲವಾರು ಸ್ಥಿರ ನಮೂನೆಗಳನ್ನು ಸೃಷ್ಠಿಸಿದ್ದು ಅವುಗಳು ಇತ್ತೀಚಿನ ದಿನಗಳಲ್ಲಿ ಪಠ್ಯಪುಸ್ತಕಗಳಿಗೆ ಸರಾಗವಾಗಿ ಸೋಸಿಕೊಂಡು ಬಂದಿದೆ. ಅವುಗಳಲ್ಲಿನ ಕೆಲವಲ್ಲಿ, ಯಾಧೃಚ್ಛಿಕವಾಗಿ ಆಯ್ಕೆ ಮಾಡಿಕೊಂಡ ಎರಡು ಪಠ್ಯ ಪುಸ್ತಕಗಳಲ್ಲಿ ಉಲ್ಲೇಖಿತವಾದ ಕೆಲವು ಮಾದರಿ ಹೇಳಿಕೆಗಳು ಇಂತಿವೆ, ‘ಹಿಂದೂಧರ್ಮವು ಅತ್ಯಂತ ಪ್ರಾಚೀನ ಧರ್ಮ ಹಾಗೂ ಸನಾತನ ಧರ್ಮವಾಗಿ ಭಾರತದ ಚಿರವಾದ ಆಧ್ಯಾತ್ಮಿಕ ಪರಂಪರೆಯಾಗಿವೆ. ವೇದಗಳು ವಿಶ್ವದ ಅತ್ಯಂತ ಪ್ರಾಚೀನ ಸಾಹಿತ್ಯವೆಂದು ಮಾನ್ಯತೆ ಹೊಂದಿವೆ’39, ಕೆಲವೊಮ್ಮೆ ‘ಸನಾತನ ಎಂಬ ಪದವನ್ನು ಈ ಗುಣಗಳನ್ನು ಸ್ಪಷ್ಠೀಕರಿಸಲು ಬಳಸಲಾಗಿದೆ’40, ‘ಹಿಂದೂ ಧರ್ಮೀಯರ ಯೋಚನಾ ಸ್ವಾತಂತ್ರ್ಯ, ಪೂಜಾವಿಧಾನ ಅನನ್ಯವಾಗಿದೆ’41, ‘ಹಿಂದೂ ಇತಿಹಾಸದಲ್ಲಿ ಬಲವಂತವಾಗಲೀ ಅಥವಾ ಯಾವುದೇ ರೀತಿಯ ಮತಾಂತರವಾಗಲೀ ಕಂಡುಬರದು’42, ‘ಹಿಂದೂಧರ್ಮದಲ್ಲಿ ಧರ್ಮ ಮತ್ತು ವಿಜ್ಞಾನಕ್ಕೆ ಯಾವುದೇ ರೀತಿಯ ಘರ್ಷಣೆ ಇಲ್ಲ’43 ಇತ್ಯಾದಿ ಇತ್ಯಾದಿ.
ಈ ಮೇಲಿನ ಹೇಳಿಕೆಗಳು ಹಲವಾರು ಮರೆಮಾಚುವ ಅರ್ಥಗಳನ್ನೊಳಗೊಂಡಿದ್ದು ಉಗ್ರ-ಹಿಂದೂ ಸಾಂಸ್ಕøತಿಕ ರಾಷ್ಟ್ರೀಯತೆಗೆ ಬೆಂಬಲ ನೀಡುತ್ತದೆ. ಇವುಗಳ ಪೈಕಿ ಕಲ್ಪಿತ ಹಿಂದೂಧರ್ಮದ ಪ್ರಾಚೀನತೆಯ ಕುರಿತಾದ ಬಲಪಂಥಿಯರ ಗಿಳಿಪಾಠವನ್ನು ಇತಿಹಾಸದ ಪುರಾವೆಗಳ ಹಿನ್ನಲೆಯಲ್ಲಿ ಪರಿಶೀಲಿಸುವ ಅಗತ್ಯವಿದೆ. ಹಿಂದೂ ಪದದ ಮೂಲದ ಕುರಿತು ವ್ಯುತ್ಪತ್ತಿಶಾಸ್ತ್ರದತ್ತ ನಾವು ಯಾತ್ರೆ ನಡೆಸುವ ಅಗತ್ಯವಿಲ್ಲ. ‘ಹಿಂದೂ’ ಎಂಬ ಪದವನ್ನು ‘ಸಿಂಧೂ’ ಎಂಬ ಮೂಲ ನಾಮಪದದಿಂಧ ಪಡೆಯಲಾಗಿತ್ತು ಅದರ ಬಗ್ಗೆ ಈಗಾಗಲೆ ಸಾಕಷ್ಟು ಬರೆಯಲಾಗಿದೆ. ಸದ್ಯಕ್ಕೆ ಈ ಪದದ ಅತ್ಯಂತ ಪ್ರಾಚೀನ ಉಲ್ಲೇಖವನ್ನು ‘ಝೆಂಡ್ ಅವೆಸ್ತಾ’ದಲ್ಲಿ ಕಾಣಬಹುದಾಗಿದೆ. ಅಲ್ಲಿ ‘ಹಪ್ತಹಿಂದೂ’ (ಋಗ್ವೇದದ ಸಪ್ತಸಿಂಧವ)ವನ್ನು ಅಹುರಮಜ್ದ ಸೃಷ್ಟಿಸಿದ ಹದಿನಾರು ಪ್ರದೇಶಗಳಲ್ಲೊಂದು ಎಂದು ಹೇಳಲಾಗಿದೆ. ಈ ಪದ ಬಹಳ ಕಾಲದವರೆಗೆ ಕೇವಲ ಭೌಗೋಳಿಕ ಅರ್ಥ ವ್ಯಾಪ್ತಿಯಲ್ಲಿ ಬಳಸಲ್ಪಟ್ಟಿದ್ದು ಯಾವುದೇ ಧಾರ್ಮಿಕ ಆಯಾಮವನ್ನು ಪಡೆಯಲಿಲ್ಲ. ಒಬ್ಬ ವಿದ್ವಾಂಸರ ಪ್ರಕಾರ44 ‘ಹಿಂದೂ’ ಎಂಬ ಪದವನ್ನು ಧಾರ್ಮಿಕ ನೆಲೆಯಲ್ಲಿ ಬಳಸಿದ ಮೊದಲ ಉಲ್ಲೇಖ ನಮಗೆ ಕಂಡು ಬರುವುದು ‘ಹೂಯೆನ್-ತ್ಸಾಂಗ್’ನ ಬರವಣಿಗೆಗಳಿಂದ. ಆತ ಹಿಂದೂ ಧರ್ಮೀಯರ ಕುರಿತಾಗಿ ಹೀಗೆ ಹೇಳುತ್ತಾ ‘ಪವಿತ್ರ ಜನರು ಮತ್ತು ಋಷಿಗಳು, ಚಂದ್ರನ ಪ್ರಭೆಯಂತೆ ಪ್ರಪಂಚನ್ನು ಮಾರ್ಗದರ್ಶಿಸುತ್ತಾ ಈ ದೇಶವನ್ನು ಪ್ರಖ್ಯಾತಗೊಳಿಸಿದ್ದಾರೆ, ಆದ್ದರಿಂದ ಈ ಭೂಮಿಯನ್ನು ‘ಇನ್-ತು’45 (ಚೀನಿಯರು ಭಾರತವನ್ನು ಇಂದು ಅಥವಾ ಚಂದ್ರ ಎಂದು ಕರೆಯುತ್ತಾರೆ) ಎಂದು ಕರೆಯುತ್ತಾರೆ’ ಎನ್ನುತ್ತಾನೆ. ಆದರೆ ಆ ಪವಿತ್ರ ಜನರ ಮತ್ತು ಋಷಿಗಳ ಧಾರ್ಮಿಕ ಸಂಬಂಧದ ಬಗ್ಗೆ ಆತ ಏನನ್ನೂ ಹೇಳದಿರುವುದರಿಂದ, ಹೂಯೆನ್-ತ್ಸಾಂಗ್ ಇನ್-ತು ಎಂಬ ಪದವನ್ನು ನಿರ್ದಿಷ್ಠವಾಗಿ ಯಾವುದೇ ಧಾರ್ಮಿಕ ನೆಲೆಯಲ್ಲಿ ಬಳಸಿಲ್ಲ ಎಂಬುದು ನಮಗೆ ಸ್ಪಷ್ಠವಾಗುತ್ತದೆ. ಹೂಯೆನ್-ತ್ಸಾಂಗ್ನ ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಅನಂತರ ಭಾರತ ಸಂದರ್ಶಿಸಿದ ಚೀನಿಯಾತ್ರಿ ‘ಇತ್ಸಿಂಗ್’ ಪ್ರಶ್ನಿಸಿದ್ದ46.
ಅಂತೆಯೇ ‘ಹಿಂದೂ’ ಎಂಬ ಪದವು, ಧಾರ್ಮಿಕ ಅರ್ಥದಲ್ಲಿ ‘ಮೊಹಮ್ಮದ್ ಬಿನ್-ಖಾಸಿಂ’ ಕ್ರಿಸ್ತ ಶಕ 712ರಲ್ಲಿ ಸಿಂಧ್ ಪ್ರಾಂತ್ಯವನ್ನು ಗೆದ್ದ ಬಳಿಕ ಬಳಕೆಗೆ ಬಂದಿತ್ತೆಂಬ ವಾದವು ಸ್ವೀಕಾರಾರ್ಹವಲ್ಲ. ‘ಹಿಂದೂ’ ಎಂಬ ಪದವನ್ನು ನಾವು ಈಗ ಧಾರ್ಮಿಕ ನೆಲೆಯಲ್ಲಿ ಗುರುತಿಸಿದ್ದೇವೆ, ಆದ ಕಾರಣ ಆಗ ಹಿಂದೂ ಧರ್ಮದಿಂದ ಮತಾಂತರ ಸಾಧ್ಯವಾಗಿತ್ತು ಎಂದು ನಾವೀಗ ಸಮರ್ಥಿಸಿಕೊಳ್ಳಬಹುದಾಗಿದೆ47. ಆದರೆ 8ನೇ ಶತಮಾನದ ಸಿಂಧ ಪ್ರಾಂತ್ಯದ ಕುರಿತಾದ ಚರಿತ್ರೆಯ ಮೂಲಾಧಾರಗಳಲ್ಲಿ ಹಲವಾರು ಇಸ್ಲಾಮೇತರ ಧರ್ಮಗಳನ್ನು ಮತ್ತು ಬ್ರಾಹ್ಮಣೀಯ-ಭೌದ್ಧಿಯ ಪಂಥಗಳನ್ನು ಶಾಸ್ತ್ರೀಯ ಮುಸಲ್ಮಾನ ಬರಹಗಾರರು ‘ಬರ್ಹಿಮಾಹ್-ಸುಮಾನಿಯಾಹ್’ ಎಂಬ ಅರಬ್ ಸಂಯುಕ್ತ ಪದದಿಂದ ಸೂಚಿಸಿರುವುದನ್ನು ಕಾಣಬಹುದಾಗಿದೆ. ಆದರೆ ಅವರ ಬರವಣಿಗೆಗಳಲ್ಲಿ ‘ಹಿಂದೂ’ ಎಂಬ ಪದಕ್ಕೆ ಭೌಗೋಳಿಕ, ಭಾಷೀಕ ಮತ್ತು ಜನಾಂಗೀಯ ಅರ್ಥಸೂಚಿ ಅಥವಾ ಅರ್ಥಗೃಹಿಕೆಯಿರುವುದು ಕಂಡುಬರುತ್ತದೆ. ‘ಚಾಚ್ನಾಮಾ’ ಎಂಬ ಕೃತಿಯು ಉದಾಹರಣೆಗೆ ಸಮಸ್ತ ಭಾರತೀಯರು ಎನ್ನುವ ನೆಲೆಯಲ್ಲಿ ‘ಹಿಂದೂವಾನ್’ ಎಂಬ ಶಬ್ದವನ್ನೂ ಮತ್ತು ‘ಹಿಂದವೀ’ ಎನ್ನುವ ಶಬ್ದವನ್ನು ಭಾರತೀಯ ಭಾಷೆಗಳನ್ನು ಸೂಚಿಸಲು ಬಳಸುತ್ತಾನೆ48. ಮೊದಲ ಬಾರಿಗೆ ‘ಹಿಂದೂ’ ಎಂಬ ಪದವನ್ನು ಧಾರ್ಮಿಕ ಅರ್ಥದಲ್ಲಿ ಬಳಸಿದವನು ‘ಅಲ್ಬೆರೊನಿ’. ಆತನ 1060ರ ಸುಮಾರಿನ ಕೃತಿ, ‘ಕಿತಾಬ್-ಉಲ್-ಹಿಂದ್’ನಲ್ಲಿ49 ಹಿಂದೂಗಳನ್ನು ಭೌದ್ಧ ಧರ್ಮೀಯರಿಂದ ಪ್ರತ್ಯೇಕಿಸಲು ಬಳಸಿದರೂ ಕೂಡಾ, ಇನ್ನೊಂದೆಡೆ ಶ್ರಮಣರ(ಬೌದ್ಧರು) ಮತ್ತು ಬ್ರಾಹ್ಮಣರ ನಡುವಿನ ವ್ಯತ್ಯಾಸ ತಿಳಿಸಲು ಬಳಸುತ್ತಾನೆ50. ಆತ ಹಿಂದೂಗಳ ಕುರಿತಾಗಿ, ‘ಅವರ ಧಾರ್ಮಿಕತೆ ನಮಗಿಂತ ಸಂಪೂರ್ಣ ಬಿನ್ನ’ ಎಂದು ಹೇಳುತ್ತಾನೆ51. ಅಲ್ಬೆರೂನಿಯ ಹಿಂದೂಧರ್ಮದ ಗ್ರಹಿಕೆ ಕೇವಲ ಬ್ರಾಹ್ಮಣೀಯ ಧಾರ್ಮಿಕ ನಂಬಿಕೆ ಹಾಗೂ ಆಚರಣೆಗಳಿಗೆ ಸೀಮಿತವಾಗಿದ್ದು ಅದು ಸ್ಪಷ್ಠ ಮತ್ತು ಸುಸಂಬಧ್ಧವಾಗಿಲ್ಲ ಎನ್ನುವುದನ್ನು ಈ ಮೂಲಕ ಗಮನಿಸಬಹುದಾಗಿದೆ. ಆದ್ದರಿಂದ ಹಿಂದೂಧರ್ಮದ ಕುರಿತಂತೆ ಆತನು ಸಾರಗ್ರಹಿತವಾದ ಮತ್ತು ನಿಖರವಾದ ಅಭಿಪ್ರಾಯ ನೀಡಿದವನೆಂಬ ಶ್ರೇಯಸ್ಸನ್ನು ಅಲ್ಬೆರೂನಿಗೆ ನೀಡಲು ಸಾಧ್ಯವಿಲ್ಲ53.ಹಿಂದೂ ಎಂಬ ಶಬ್ದದ ಸುತ್ತ ಸುತ್ತುವರಿದಿದ್ದ ಅಸ್ಥಿರತೆ ಅಥವಾ ಅಸ್ಪಷ್ಠತೆ ಹಾಗೆಯೇ ಹಲವು ಸಮಯದವರೆಗೆ ಮುಂದುವರಿಯಿತು. ಈ ಕಾರಣದಿಂದ ಸುಮಾರು ಮೂರು ಶತಮಾನದ ನಂತರ ಮೊತ್ತ ಮೊದಲು ಭಾರತದ ಚರಿತ್ರೆಯನ್ನು ಬರೆದ ಅಲ್ಬೆರೂನಿ ಮತ್ತು ವಿಶೇಷವಾಗಿ ‘ತಾರೀಖ್-ಇ-ಫಿರೋಝ್ಶಾಹಿ’ ಎನ್ನುವಂತಹ ಕೃತಿಯಲ್ಲಿ ಜಿಯಾವುದ್ದೀನ್ ಬರನಿ ಹಿಂದೂ ಎನ್ನುವ ಉಲ್ಲೇಖವನ್ನು ಮಾಡುತ್ತಾರೆ54. ಇವರಿಬ್ಬರು ಉಲ್ಲೇಖಿಸುವ ಹಿಂದೂ ಎನ್ನುವಂತಹ ಉಲ್ಲೇಖಗಳು ಒಮ್ಮೆ ಧಾರ್ಮಿಕ ವರ್ಗ ಮತ್ತು ವರ್ಗೀಕರಣವನ್ನು ಅಥವಾ ಇನ್ನೊಮ್ಮೆ ಒಂದು ರಾಜಕೀಯ ವರ್ಗೀಕರಣ ಅಥವಾ ವರ್ಗವನ್ನು ಸೂಚಿಸುತ್ತವೆ. ಇನ್ನು ಕೆಲವೊಮ್ಮೆ ಹಿಂದೂ ಎಂದರೆ ಧಾರ್ಮಿಕ ಮತ್ತು ರಾಜಕೀಯ ಎನ್ನುವ ಎರಡು ಕ್ರಮ ಮತ್ತು ವರ್ಗೀಕರಣವನ್ನು ಅವರು ದಾಖಲಿಸುತ್ತಾರೆ. ಸುಮಾರು ಹದಿನಾರನೆಯ ಶತಕದಲ್ಲಿ ಮುಘಲ್ ದೊರೆ ‘ಅಕ್ಬರ್’ ಮುಸ್ಲಿಮೇತರ ಧರ್ಮ ಮತ್ತು ಸಂಪ್ರದಾಯಗಳೊಂದಿಗೆ ಸಾಕಷ್ಟು ಸಂಪರ್ಕ ಮತ್ತು ಸಾಂಗತ್ಯವನ್ನು ಹೊಂದಿದ್ದಾಗ್ಯೂ ಕೂಡ ಆತನ ಮಂತ್ರಿ ಮತ್ತು ಮಿತ್ರ ‘ಅಬುಲ್ ಫಜಲ್’ ಹಿಂದೂ ಧರ್ಮವನ್ನು ಅತ್ಯಂತ ಶ್ರೇಷ್ಠವಾದ ಕೇವಲ ಬ್ರಾಹ್ಮಣೀಯ ಕ್ರಮ ಮತ್ತು ಸಂಪ್ರದಾಯಗಳು ಎನ್ನುವ ನೆಲೆಯಲ್ಲಿ ಅರ್ಥೈಸುತ್ತಾನೆ. ಆದರೆ ಇಂತಹ ಯಾವ ಪರಿಕಲ್ಪನೆಗಳು ಮತು ದೃಷ್ಠಿಗಳು ಕೂಡಾ ಹಿಂದೂ ಎನ್ನುವಂತಹ ಧರ್ಮದ ಅರ್ಥ ಮತ್ತು ವ್ಯಾಪ್ತಿಗೆ ಸರಿಯಾಗಿ ಹೊಂದುವುದಿಲ್ಲವಾಗಿದೆ55. ಈತನ ಮರಣದ ಸರಿ ಸುಮಾರು ಐವತ್ತು ವರ್ಷಗಳ ನಂತಹ ಅನಾಮಧೇಯ ಕೃತಿಕಾರನೊಬ್ಬ56 ಬರೆದ ‘ದಬಿಸ್ತಾನ್-ಇ-ಮಜಹಿಬ್’ ಎನ್ನುವಂತಹ ಕೃತಿಯು ಆ ಕಾಲದ ಎಲ್ಲಾ ಧರ್ಮಗಳ ಸರ್ವೇಕ್ಷಣೆಯನ್ನು ಮಾಡುವಂತಹ ಕೃತಿ ಎಂದು ಘೋಷಿಸಿಕೊಂಡರೂ ಮತ್ತು ಅದು ಹಿಂದೂ ಧರ್ಮದ ಮೇಲೆ ಒಂದು ಅಧ್ಯಾಯ ಮತ್ತು ಉಳಿದ ಭಾರತೀಯ ಸಮಕಾಲೀನ ಸಂಪ್ರದಾಯಗಳ ಮೇಲೆ ಒಂದು ದೊಡ್ಡ ಅಧ್ಯಾಯವನ್ನು ಮೀಸಲಿಟ್ಟರೂ ಕೂಡಾ ಈ ಹಿಂದೂ ಎನ್ನುವಂತಹ ಶಬ್ದವನ್ನು ಅತ್ಯಂತ ಸ್ಪಷ್ಠವಾಗಿ ವ್ಯಾಖ್ಯಾನಿಸುವುದಿಲ್ಲ ಹಾಗೂ ಅದನ್ನು ಅರ್ಥೈಸುವಿಕೆಯಲ್ಲಿ ನಮಗೆ ಅರ್ಥೈಸುವುದರಲ್ಲಿ ವಿಫಲನಾಗುತ್ತಾನೆ. ಆತನ ಪ್ರಕಾರ ಹಿಂದೂ ಎಂದರೆ ಬ್ರಾಹ್ಮಣೀಯ ಸ್ಮಾರ್ತ ಪರಂಪರೆ ಮತ್ತು ಸಂಪ್ರದಾಯ ಹಾಗೂ ಆ ಕಾಲದಲ್ಲಿ ಇದ್ದಂತಹ ಎಲ್ಲಾ ಇಸ್ಲಾಮೇತರ ಚಿಂತನೆಗಳು, ಪಂಥಗಳು, ಜಾತಿಗಳು, ಸಂಪ್ರದಾಯಗಳು ಮತ್ತು ಪಂಥಗಳನ್ನು ಸೂಚಿಸುವ ಶಬ್ದವಾಗಿತ್ತಷ್ಟೇ. ಆತನ ಕೃತಿಯಲ್ಲಿ ಕೆಲವೊಂದು ಕಡೆ ಅಂಗೀಕೃತವಾದ ಹಿಂದೂ ಎನ್ನುವ ಶಬ್ದವು ಜೈನರನ್ನು ಮತ್ತು ಇತರರನ್ನು ಒಳಗೊಳ್ಳುತ್ತದೆ. ಆದರೆ ಕೆಲವೊಂದು ಕಡೆ ಜೈನರನ್ನು ಸೇರಿದಂತೆ ಯೋಗಿಗಳನ್ನು, ತಾಪಸಿಗಳನ್ನು, ಸನ್ಯಾಸಿಗಳನ್ನು ಮತ್ತು ಚಾರ್ವಾಕರನ್ನು ಒಳಗೊಂಡಂತೆ ಜೈನರನ್ನು ಪ್ರತ್ಯೇಕಿಸುತ್ತದೆ57. ಸುಮಾರು ಇದರ ನೂರು ವರ್ಷಗಳ ಅನಂತರ ಗುಜರಾತಿನ ಚರಿತ್ರೆಯಲ್ಲಿ 1761ರಲ್ಲಿ ಕಂಡು ಬರುವಂತಹ ‘ಅಲಿ ಮುಹಮ್ಮದ್ ಖಾನ್’ ವಿರಚಿತ ‘ಮಿರಾತ್ ಇ ಅಹ್ಮದಿ’ ಎನ್ನುವಂತಹ ಕೃತಿ ಕೂಡಾ ಅತ್ಯಂತ ಅಸ್ಪಷ್ಠವಾಗಿ ಹಿಂದೂ ಎನ್ನುವ ಶಬ್ದವನ್ನು ದಾಖಲಿಸಿ ಅರ್ಥೈಸುತ್ತದೆ. ಈ ಕೃತಿಯ ಲೇಖಕನು ಮುಸಲ್ಮಾನರನ್ನು ಹೊರತುಪಡಿಸಿದ ಎಲ್ಲಾ ಸಮಕಾಲೀನ ಧರ್ಮಗಳನ್ನು, ಜಾತಿಗಳನ್ನು, ಉಪಜಾತಿಗಳನ್ನು ಮತ್ತು ವೃತ್ತಿಗಳನ್ನು ಈ ಗುಂಪಿನಲ್ಲಿ ಸೇರಿಸುತ್ತಾನೆ. ಆತ ಈ ಗುಂಪಿನಲ್ಲಿ ಜೈನರನ್ನು ಕೂಡಾ ಸೇರಿಸುತ್ತಾನೆ. ಜೈನರು, ‘ಮೈಶ್ರಿಗಳು’58 ಎನ್ನುವ ವೈಷ್ಣವರು, ಶ್ರಾವಕ ಮತ್ತು ಜೈನ ಕ್ಲರ್ಜಿಗಳಾದಂತಹ ‘ಶೇವ್ರಾ’ಗಳು ಸಾಕಷ್ಟು ವೈವಿಧ್ಯತೆಯನ್ನು ಹಾಗೂ ವ್ಯತ್ಯಾಸವನ್ನು ಹೊಂದಿದ್ದರೂ ಕೂಡಾ ಇವರೆಲ್ಲರನ್ನೂ ಒಂದೇ ಗುಂಪಿನಲ್ಲಿ ಆತ ಸೇರಿಸುತ್ತಾನೆ. ಈ ನೆಲೆಯಲ್ಲಿ ಹಿಂದೂ ಎನ್ನುವ ಶಬ್ದ ಮತ್ತು ಹಿಂದೂ ಧರ್ಮದ ಬಗೆಗಿನ ವ್ಯಾಖ್ಯಾನದ ಅಸ್ಪಷ್ಠತೆಯೂ ಮತ್ತದರ ಪ್ರಶ್ನೆಯೂ ಅಪ್ರಶ್ನೀಯವಾದುದೇ ಆಗಿದೆ. ಇದು ಅರೇಬಿಕ್ ಮತ್ತು ಪರ್ಷಿಯನ್ ವಿದ್ವಾಂಸರು ಮತ್ತು ಉಲ್ಲೇಖಗಳು ವಿವರಿಸುವ ಹಾಗೆ, ಅತ್ಯಂತ ವಿಸ್ತಾರವಾದ ಆ ಕಾಲದ ಭಾರತದಲ್ಲಿ ನೆಲೆಸಿದ್ದ ಮುಸ್ಲಿಮೇತರ ಭಾರತೀಯರು ಮತ್ತು ಸಂಪ್ರದಾಯಗಳೇ ಆಗಿವೆ.
ಹಿಂದೂ ಅನ್ನುವ ಶಬ್ದದ ಅಸ್ಪಷ್ಠತೆ ಮತ್ತು ಅಸ್ಥಿರತೆಯ ಹೊರತಾಗಿಯೂ ಕೂಡ ಹದಿನಾಲ್ಕನೇ ಶತಮಾನಕ್ಕಿಂತ ಮುಂಚೆ ಯಾರೂ ಕೂಡ ಭಾರತದಲ್ಲಿ ತಾನು ಹಿಂದೂ ಎಂದು ಕರೆದುಕೊಂಡ ಉದಾಹರಣೆಯೂ ಇಲ್ಲ ಅಥವಾ ತನ್ನನ್ನು ಹಿಂದೂ ಎಂದು ವಿವರಿಸಿಕೊಂಡ ಗುರುತಿಸಿಕೊಂಡ ಕ್ರಮವೂ ಇಲ್ಲ. ಹಿಂದೂ ಎನ್ನುವ ಶಬ್ದದ ಅತ್ಯಂತ ಪ್ರಾಚೀನ ಸಂಸ್ಕøತ ಉಲ್ಲೇಖವು ವಿಜಯನಗರ ವಂಶದ ಎರಡನೆಯ ದೊರೆಯಾದ ‘ಬುಕ್ಕ’ನ ಒಂದು ಸಾವಿರದ ಮುನ್ನೂರ ಐವತ್ತೆರಡರ ಶಾಸನದಲ್ಲಿ ಕಾಣ ಸಿಗುತ್ತದೆ. ಬುಕ್ಕ ತನ್ನನ್ನು ‘ಹಿಂದೂ ರಾಯ ಸುರತ್ರಾಣ’ ಅಥವಾ ‘ಹಿಂದೂ ದೊರೆಗಳಲ್ಲಿ ಸುಲ್ತಾನ’ನೆಂದು ಕರೆದುಕೊಳ್ಳುತ್ತಾನೆ. ಆತನ ಉತ್ತರಾಧಿಕಾರಿಗಳು ಸರಿ ಸುಮಾರು ಇನ್ನೂರೈವತ್ತು ವರ್ಷಗಳ ತನಕವೂ ಅಂದರೆ ಹದಿನೇಳನೆಯ ಶತಮಾನದ ಆರಂಭದವರೆಗೂ ಕೂಡ ಈ ಬಿರುದನ್ನು ಬಳಸುತ್ತಾರೆ59. ಉತ್ತರ ಭಾರತದಲ್ಲಿ ‘ರಾಣಾ ಕುಂಭ’ ಸುಮಾರು 1439ರ60 ಇಸವಿಯ ಶಾಸನವೊಂದರಲ್ಲಿ ತನ್ನನ್ನು ತಾನೇ ‘ಹಿಂದೂಸುರತ್ರಾಣ’ ಎಂದು ಕರೆದುಕೊಂಡಿದ್ದಾನೆ. ರಾಜರುಗಳು ಈ ಬಿರುದನ್ನು ಉಪಯೋಗಿಸುತ್ತಿದ್ದರೂ ಹತ್ತೊಂಬತ್ತನೇ ಶತಮಾನದ ಪ್ರಾರಂಭದವರೆಗೆ ‘ಹಿಂದೂ’ ಶಬ್ದ ಪ್ರಯೋಗ ಸಂಸ್ಕøತ ಸಾಹಿತ್ಯದ ಮುಖ್ಯಧಾರೆಯಲ್ಲಿ ಕಂಡುಬರುವುದಿಲ್ಲ. ಇದಕ್ಕೆ ಕೆಲವು ಅಪರೂಪದ ಅಪವಾದಗಳೆಂದರೆ 1455-59ರಲ್ಲಿ ಪ್ರಕಟವಾದ ‘ಜೋನರಾಜ’ನ ‘ರಾಜತರಂಗಿಣಿ’ಯಲ್ಲಿ61 ಸಂಕೀರ್ಣ ‘ಹಿಂದೂಘೋಷಾ’ ಸಂಯೋಜನೆಯ ಭಾಗವಾಗಿ ಈ ಶಬ್ದ ಉಪಯೋಗಿಸಲ್ಪಟ್ಟಿದೆ. ‘ಶ್ರೀವರ’ನ ಜೈನ ರಾಜತರಂಗಿಣಿಯಲ್ಲಿ ಹಿಂದೂಗಳ ಸಾಮಾಜಿಕ ಪದ್ಧತಿಗಳನ್ನು(‘ಹಿಂದುಕಸಮಾಚಾರ’62) ಸೂಚಿಸುವಾಗ ಮತ್ತು ಅವರ ಭಾಷೆ (‘ಹಿಂದ್ಸ್ಥಾನವಾಚ’63)ಯನ್ನು ಪರ್ಶಿಯನ್ ಭಾಷೆ(‘ಪಾರಸೀ ಭಾಷಯ’)ಗಿಂತ ಭಿನ್ನವೆಂದು ಸೂಚಿಸುವುದಕ್ಕಾಗಿ ಈ ಹಿಂದೂ ಶಬ್ದ ಬಳಸಲ್ಪಟ್ಟಿದೆ. ಇದರ ಜತೆಗೆ ಸೋಪೊರ್ಗಿಂತ 15 ಮೈಲು ದೂರ ಇರುವ ಸ್ಥಳ ಆಧುನಿಕ ಸಂದರ್ಭದ ಹೆಸರು ಹಿಂದೂ ‘ಹಿಂದುಬಾತ’ವನ್ನು ಸೂಚಿಸಲು ‘ಹಿಂದೂವಾದ’64 ಎಂದು ಉಪಯೋಗಿಸಲ್ಪಟ್ಟಿದೆ. ಗೌಡೀಯ ವೈಷ್ಣವ ಪರಂಪರೆಗೆ ಸೇರಿದ 16 ರಿಂದ 18ರ ಶತಮಾನದ ಅವಧಿಯಲ್ಲಿ ರಚಿತವಾದ ಮೂರು ಸಂಸ್ಕøತ ಗ್ರಂಥಗಳು ‘ಹಿಂದೂ’ ಶಬ್ದವನ್ನು ಸೂಚಿಸುವುದಿಲ್ಲ65. ಸುಮಾರು 1750ರ ಹೊತ್ತಿಗೆ ಕೃಷ್ಣ ಚೈತನ್ಯರ ಸಂಪ್ರದಾಯವನ್ನು ಅಧಿಕೃತ ಅದ್ವೈತ ವೇದಾಂತದ66 ಜೊತೆ ಸಂಯೋಜಿಸಲು ಪ್ರಯತ್ನ ಪಟ್ಟಿರುವ ಗೌಡೀಯ ವೈಷ್ಣವ ‘ಆಚಾರ್ಯ ಬಲದೇವ ವಿದ್ಯಾಭೂಷಣ’ರ ‘ಬ್ರಹ್ಮಸೂತ್ರ ವ್ಯಾಖ್ಯಾನ’ದಲ್ಲಿ ಕೂಡಾ ಈ ಶಬ್ದ ಕಂಡು ಬರುವುದಿಲ್ಲ. ಅದು 19ನೇ ಶತಮಾನದ ಮೊದಲಭಾಗದ ಪೂರ್ವದಲ್ಲಿ ಈ ರೀತಿಯ ಉಲ್ಲೇಖಗಳು ಬರದೇ, 19ನೇ ಶತಮಾನದ ಪ್ರಾರಂಭದಲ್ಲಿ ‘ಹಿಂದೂ’ ಶಬ್ದ ಸಂಸ್ಕøತ ಗ್ರಂಥಗಳಲ್ಲಿ ಕಾಣತೊಡಗಿತು. ಅದಕ್ಕೆ ಬ್ರಾಹ್ಮಣ ಧರ್ಮದ ಮುಖಾಮುಖಿಯು ಕ್ರಿಶ್ಚಿಯನ್ ಧರ್ಮದ ಜತೆ ಆಗಲು ತೊಡಗಿದ್ದರ ಪರಿಣಾಮವಾಗಿ. ಬ್ರಾಹ್ಮಣಧರ್ಮ ಮತು ಕ್ರಿಶ್ಚಿಯನ್ ಧರ್ಮಗಳ ನಡುವಿನ ಶ್ರೇಷ್ಠತೆ ಬಗೆಗಿನ ಸ್ಪರ್ಧೆಯ ಸಂಬಂಧದಲ್ಲಿ ಧಾರ್ಮಿಕವಾದಗಳು ಮತ್ತು ಚರ್ಚೆಗಳ ನಡುವೆ ಒಂದು ಮಹತ್ವಪೂರ್ಣ ವಿವಾದವನ್ನು ‘ಜಾನ್ ಮುಯಿರ್’, ‘ಪಿಲಿಫ್ ವೆಗನಾರ್’ ಹುಟ್ಟು ಹಾಕಿದರು. ಇದು ಹಿಂದೂ ಮತ ಪಂಡಿತರನ್ನು ತಮ್ಮ ಧರ್ಮವನ್ನು ರಕ್ಷಿಸುವ ಕೈಂಕರ್ಯಕ್ಕೆ ಪ್ರಚೋದನೆ ನೀಡಿತು67. ಅವರಲ್ಲೊಬ್ಬರಾದ ‘ಹರಚಂದ್ರ ತರ್ಕ ಪಂಚಾನನ’ನು, ಜಾನ್ ಮುಯಿರ್ನಿಗೆ ಉತ್ತರ ನೀಡುತ್ತಾ ಆತನನ್ನು ‘ಹಿಂದೂಧರ್ಮಾತಿವೈರಿನ್’ ಅಥವಾ ಹಿಂದೂಧರ್ಮದ ವೈರಿಯೆಂದು68 ನಿಂದಿಸಿ, ಮುಂದಿನ ಜನ್ಮಾಂತರದಲ್ಲಿ ವೈದಿಕ ಧರ್ಮಾವಲಂಬನೆಗೆ ಆರ್ಹರೆನಿಸಲು(ಹಿಂದುತ್ವಮ್ ಪ್ರಾಪ್ಯ) ಅಗತ್ಯವಿರುವ ಶರತ್ತುಗಳನ್ನು ವಿಧಿಸುತ್ತಾರೆ69. ಆದಾಗ್ಯೂ ಕೂಡಾ ‘ಹಿಂದೂ’ಪದ ಸಂಸ್ಕøತ ಗ್ರಂಥಗಳಲ್ಲಿ ಹೆಚ್ಚು ಕಂಡು ಬರುವುದು ಅಪರೂಪ. 19ನೇ ಶತಮಾನದ ಇಬ್ಬರು ‘ಜ್ಞಾನಕೋಶ’ದ ಗ್ರಂಥಕರ್ತರಾದ ‘ರಾಧಾಕಾಂತ ದೇಬ್’70, ‘ತಾರಾನಾಥ ತರ್ಕವಾಚಸ್ಪತಿ’71 ‘ಹಿಂದೂ’ಪದದ ಶಬ್ದ ನಿಷ್ಪತ್ತಿಯ ಕುರಿತು ವಿವರಿಸುವಾಗ ಅಷ್ಟೇನು ಪ್ರಸಿದ್ಧವಲ್ಲದ ಅಸ್ಪಷ್ಠವಾದ 18ನೇ ಶತಮಾನದ ಗ್ರಂಥ ‘ಮೇರುತಂತ್ರ’72ವನ್ನು ಉದಾಹರಿಸಿರುವುದು ಉಲ್ಲೇಖನೀಯ. ಇವರು ಇದರ ಆಧಾರದ ಮೇಲೆ ಆ ಶಬ್ದದ ವ್ಯುತ್ಪತ್ತಿಯನ್ನು ನೀಡುತ್ತಾರೆ73.
‘ಹಿಂದೂ’ ಪದ ಮಧ್ಯಯುಗದ ಪ್ರಾದೇಶಿಕ ಭಾಷೆಯ ಭಕ್ತಿಸಾಹಿತ್ಯದಲ್ಲಿಯೂ ಅತ್ಯಂತ ವಿರಳವಾಗಿ ಕಂಡುಬರುತ್ತದೆ. 16ರಿಂದ 18ರ ಶತಮಾನದ ಅವಧಿಯು ಹತ್ತು ಗೌಡೀಯ ವೈಷ್ಣವ ಪಂಥದ ಬಂಗಾಳೀ ಗ್ರಂಥಗಳನ್ನು ಪರಿಶೀಲಿಸಿದಾಗ ಹಿಂದೂ ಪದ 49 ಬಾರಿ ಮತ್ತು ಹಿಂದೂಧರ್ಮ 7 ಬಾರಿ ಗೋಚರಿಸುತ್ತದೆ. ಇದು ಕೇವಲ 5 ಗ್ರಂಥಗಳ 80,000 ದ್ವಿ-ಪದಿಗಳಲ್ಲಿ ಕಂಡುಬಂದಿರುವುದು ಗಮನಾರ್ಹ. ಆದರೆ ಆ ಗ್ರಂಥಗಳು ‘ಹಿಂದೂ’ ಎಂಬ ಶಬ್ದವನ್ನು ಹಾಗೂ ಹಿಂದೂಧರ್ಮವೆಂಬ ಪದವನ್ನಾಗಲಿ ಅಥವಾ ಅವುಗಳ ಸ್ಪಷ್ಠ ಅರ್ಥವೇನೆಂಬುದನ್ನಾಗಲೀ ಎಲ್ಲೂ ವಿವರಿಸಲಿಲ್ಲವಾಗಿದೆ74. ‘ಹಿಂದೂ’ ಎಂಬ ಪದವನ್ನು ‘ವಿದ್ಯಾಪತಿ’, ‘ಕಬೀರ್’, ‘ಏಕನಾಥ್’, ‘ಅನಂತದಾಸ’ ಮುಂತಾದವರು ವಿಭಿನ್ನ ಸನ್ನಿವೇಶಗಳಲ್ಲಿ ಬಳಸಿದ್ದಾರೆ. ಈ ಆಧಾರದ ಮೇಲೆ ಒಬ್ಬ ವಿದ್ವಾಂಸ ಹಿಂದೂ ಧರ್ಮದ ಗುರುತನ್ನು ಮುಸ್ಲಿಂ ಮತ್ತು ಇಸ್ಲಾಂ ವಿರುದ್ಧವಾಗಿ ವ್ಯಾಖ್ಯಾನಿಸಿ ಅದನ್ನು ಮಧ್ಯಯುಗದುದ್ದಕ್ಕೂ ಬಳಸಲಾಯಿತು ಎನ್ನುತ್ತಾರೆ75. ಎಲ್ಲಾ ಮುಸಲ್ಮಾನೇತರರು ಹಿಂದೂಗಳೆಂಬ ಊಹಿತ ಹಿಂದೂ ಗುರುತು, ಮಧ್ಯ ಯುಗೀನ ಭಕ್ತಿ ಪಂಥದ ಸಂತರು ಧ್ವನಿಯೆತ್ತಿದ್ದ ಜಾತಿ ಕೇಂದ್ರಿತ ಬ್ರಾಹ್ಮಣೀಯ ಧರ್ಮ ಎಂಬ ಅರ್ಥವನ್ನು ನೀಡುತ್ತಿದ್ದರಿಂದ ಈ ವಾದವನ್ನು ಗಂಭೀರವಾಗಿ ಪರಿಗಣಿಸಲಾಗದು76. ‘ಹಿಂದೂ’ ಮತ್ತು ‘ಹಿಂದೂ’ ಧರ್ಮ ಎಂಬ ಪದಗಳು ವಸಾಹತು ಪೂರ್ವ ಕಾಲದ ಸಂಸ್ಕøತ ಗ್ರಂಥಗಳಲ್ಲಿ ಅನುಪಸ್ಥಿತಿ ಹಾಗೂ ಭಕ್ತಿ ಸಾಹಿತ್ಯಗಳಲ್ಲಿ ಅಲ್ಲಲ್ಲಿ ಕಂಡುಬರುವ ಪದಗಳಿಗೆ ನೀಡಿದ ಸೀಮಿತ ಅರ್ಥ ವಿವರಣೆಗಳು ಕೆಲವು ವಿದ್ವಾಂಸರು ವಾದಿಸುವಂತೆ ಭಾರತೀಯರು ಈ ‘ಹಿಂದೂ ಗುರುತ’ನ್ನು ತಾವೇ ಸೃಷ್ಠಿಸಿಲ್ಲ ಎಂಬುದನ್ನು ಸೂಚಿಸುತ್ತದೆ. ಈ ಪದ ವಸಾಹತು ಪೂರ್ವ ಕಾಲದಲ್ಲಿ ಬಳಕೆಯಲ್ಲಿತ್ತೆಂಬುದು ಸತ್ಯ. ಆದರೆ ಈ ಪದವನ್ನು 18 ಅಥವಾ 19ನೇ ಶತಮಾನದ ಆರಂಭದಲ್ಲಿ ಪಾಶ್ಚಿಮಾತ್ಯ ಹಾಗೂ ಬ್ರಿಟೀಷ್ ವಿದ್ವಾಂಸರುಗಳು77 ಸ್ವಾಯತ್ತೀಕರಿಸಿಕೊಂಡರು. ಅವರ ಬರವಣಿಗೆ ಅಧಿಕಾರರೂಢ ಸಾಮ್ರಾಜ್ಯಶಾಹೀ ಆಡಳಿತ ವ್ಯವಸ್ಥೆಗೆ ತಾವು ಇಂದು ಅರ್ಥೈಸಿಕೊಂಡಿರುವ ರೀತಿಯಲ್ಲಿ ‘ಹಿಂದೂಧರ್ಮ’ದ ಕಲ್ಪನೆಯನ್ನು ರೂಪಿಸಲು ಅನುಕೂಲವಾಯಿತು. ಬ್ರಿಟೀಷರು ‘ಹಿಂದೂ’ ವೆಂಬ ಪದವನ್ನು ಭಾರತೀಯರಿಂದಲೇ ಪಡೆದು ಅದಕ್ಕೆ ಹೊಸ ಅರ್ಥ, ವಿವರಣೆ ಪ್ರಾಮುಖ್ಯತೆಯನ್ನು ನೀಡಿ ಅದನ್ನು ಭಾರತಕ್ಕೆ ಪುನ: ಆಮದುಗೊಳಿಸಿ ‘ಹಿಂದೂ’ ಧರ್ಮವೆಂಬ ಹೆಸರಿನಿಂದ ಜನಗಣತಿಗಳಲ್ಲಿ, ಗಝೆಟಿಯರ್ಗಳಲ್ಲಿ ಒಂದು ಭಾರತೀಯ ಸಾಮಾಜಿಕ ವರ್ಗವಾಗಿ ಬಳಸಿ ವಿಶ್ವಮಟ್ಟಿದಲ್ಲಿ ಹಿಂದೂ ಎಂಬ ಪದಕ್ಕೆ ಧರ್ಮದ ಗುರುತನ್ನು ನೀಡಿದರು78. ಈ ಪ್ರಕ್ರಿಯೆಯನ್ನು ‘ಫಿಝ್ಝಾ ಪರಿಣಾಮ’ಕ್ಕೆ ಸಮೀಕರಿಸಬಹುದಾಗಿದೆ. ಇದು ಒಂದರ್ಥದಲ್ಲಿ ಇಟೆಲಿಯ ನೆಪೋಲಿಟಾನ್ನ ಬೇಯಿಸಿದ ಬ್ರೆಡನ್ನು ಅಮೇರಿಕಕ್ಕೆ ರಫ್ತುಮಾಡಿ, ಅಲ್ಲಿ ಅದನ್ನೇ ಅಲಂಕೃತಗೊಳಿಸಿ ಪುನ: ಇಟೆಲಿಗೆ ಕಳುಹಿಸಿ ಅದನ್ನು ರಾಷ್ಟ್ರೀಯ ವ್ಯಂಜನವನ್ನಾಗಿ ಮಾಡಿದಂತೆ79. ಈ ಹಿನ್ನೆಲೆಯಲ್ಲಿ ಹಿಂದೂ ಧರ್ಮದ ಪರಿಕಲ್ಪನೆ ವಸಾಹತುಶಾಹೀ ಕಾಲದಲ್ಲೇ ಸೃಷ್ಠಿಸಲ್ಪಟ್ಟಿದ್ದು ಅದಕ್ಕಿಂತ ಹಿಂದಕ್ಕೆ ಅದರ ಪ್ರಾಚೀನತೆಯನ್ನು ತಳ್ಳಲು ಸಾಧ್ಯವಿಲ್ಲ80. ಕೆಲವರು ಬಿ.ಬಿ ಲಾಲ್ ಮತ್ತು ಅವರ ಸಂಗಡಿಗರು ಘೋಷಿಸಿಕೊಂಡಿರುವ ಹಿಂದೂಧರ್ಮದ ಪ್ರಾಚೀನತೆಯನ್ನು ಸಿಂಧೂ ನಾಗರೀಕತೆಯ ತಥಾಕಥಿತ ಆರ್ಯರ ಸಂಸ್ಕøತಿಯ81 ಮೂಲದಿಂದ ಗುರುತಿಸಿತ್ತಾರಾದರೂ ಕೂಡಾ, ಹಿಂದೂ ಧರ್ಮ 19ನೇ ಶತಮಾನದಲ್ಲಿ ಬ್ರಿಟೀಷರಿಂದ ಬಳಸಲ್ಪಟ್ಟ ಹೊಸ ಶಬ್ದವಾಗಿದ್ದು ಅದು ವಿಶ್ವದ ಧರ್ಮಗಳ ಪೈಕಿ ಅತ್ಯಂತ ಕಿರಿಯದ್ದಾಗಿದೆ82. ಇಷ್ಟೆಲ್ಲ ದ್ವಂದ್ವತೆಗಳಿದ್ದರೂ ಈ ಪದ ಇಂದೂ ಪ್ರಚಲಿತದಲ್ಲಿರುವುದು ಇನ್ನೊಂದು ವಿಚಾರ83.
4
ಕ್ರೈಸ್ತ ಮಿಶನರಿ ಬರಹಗಳು ಹಾಗೂ ಬ್ರಿಟೀಷ್ ಆಡಳಿತ ದಾಖಲೆಗಳಲ್ಲಿ84 ಹಿಂದೂ ಧರ್ಮ ಒಂದು ಧರ್ಮದ ನೆಲೆಯಲ್ಲಿ ಬಿಂಬಿತವಾದರೂ, 19ನೇ ಶತಮಾನದ ಮೊದಲು ಇದನ್ನು ‘ಸನಾತನಧರ್ಮ’ವೆಂದು ನಿರ್ವಚಿಸಿದ್ದು ಕಂಡುಬರುವುದಿಲ್ಲ. ಈ ಪದವನ್ನು ನಾವು ವಿಭಿನ್ನವಾಗಿ ಭಾಷಾಂತರಿಸಬಹುದಾಗಿದೆ. ಇದರ ಇಂಗ್ಲೀಷ್ ಸಮನಾರ್ಥಕ ಶಬ್ದವಾಗಿ, ‘ಶಾಶ್ವತ ಧರ್ಮ’ ಅಥವಾ ‘ಶಾಶ್ವತ ನಿಯಮ’85 ಅಥವಾ ಕಾನೂನು ಅಥವಾ ‘ಸ್ಮøತಿ’ ಅಥವಾ ‘ಸಂಹಿತೆ’ ಅಥವಾ ‘ಅಚಲ’ ಮತ್ತು ‘ಮಾನಿತ ಕ್ರಮ’86 ಅಥವಾ ‘ಪ್ರಾಚೀನ ಮತ್ತು ನಿರಂತರ ಶಾಶ್ವತ ಕ್ರಮ ವ್ಯವಸ್ಥೆ’87 ಹಾಗೂ ‘ಮಾರ್ಗದರ್ಶಿ ಜೀವನ ವಿಧಾನ’88 ಮುಂತಾದವುಗಳನ್ನು ಗಮನಿಸಬಹುದಾಗಿದೆ. ಆಧುನಿಕ ಹಿಂದೂಧರ್ಮದ ಪ್ರತಿನಿಧಿಗಳಾದ ಸ್ವಾಮಿ ವಿವೇಕಾನಂದ, ಡಾ|| ರಾಧಾಕೃಷ್ಣನ್ ಮತ್ತು ಇತರ ಸಮಾಜ ಸುಧಾರಕರು ಮತ್ತು ಅದರ ವಿರೋಧಿಗಳು ಈ ಪದವನ್ನು ವ್ಯಾಪಕವಾಗಿ ಬಳಸಿದ್ದಾರೆ. ಈ ಸನಾತನಧರ್ಮದ89 ಪರಿಕಲ್ಪನೆಯನ್ನು ಕೆಲವು ವಿದ್ವಾಂಸರು ಕ್ರಿಯಾಶೀಲ ಪ್ರಗತಿಪರ ಗುಣಗಳೊಂದಿಗೆ ಕಲ್ಪಿಸಿಕೊಂಡಿದ್ದರು. ಸನಾತನ ಧರ್ಮ ಮೂಲತ: ಸುಧಾರಣ ಚಳುವಳಿಗೆ90 ಪ್ರಾಚೀನ ಗ್ರಂಥಗಳನ್ನು ಉಲ್ಲೇಖಿಸಿ ಪ್ರತಿರೋಧಿಸುವ ಸಂಪ್ರದಾಯ ಶರಣತೆಯೇ ಆಗಿದೆ. ಸನಾತನ ಧರ್ಮ ಎಂಬ ಶಬ್ದ ಮೊತ್ತ ಮೊದಲು ಉಲ್ಲೇಖಗೊಂಡ ದಾಖಲೆ ನಮಗೆ ಕಾಣಸಿಗುವುದು ಬೌದ್ಧ ಗ್ರಂಥವಾದ ‘ದಮ್ಮ ಪಾದ’ದಲ್ಲಿ. ಇದರ ಪ್ರಕಾರ ಆತ್ಯಂತಿಕವಾದ ನಿಯಮ ಮತ್ತು ತತ್ವವೆಂದರೆ ಅಥವಾ ಅದನ್ನು ‘ಏಸ ದಮ್ಮ ಸನಾತನೊ’91 ಎಂದು ಕರೆಯಬಹುದಾದ ದ್ವೇಷ ಮತ್ತು ವಿಷಮತೆಯನ್ನು ಪ್ರೀತಿಯ ಮೂಲಕ ಪರಿಹರಿಸಬಹುದಾದ ತತ್ವವಾಗಿದೆ. ಇದು ನಂತರದ ಬ್ರಾಹ್ಮಣೀಯ ಕೃತಿಗಳಲ್ಲಿ ಕೂಡ ನಮಗೆ ಪದೇ ಪದೇ ಕಾಣಸಿಗುತ್ತದೆ. ಮಹಾಭಾರತವಂತೂ ಪದೇ ಪದೇ ‘ಏಷ: ಧರ್ಮ ಸನಾತನ’ ಎನ್ನುವ ಉಕ್ತಿಯನ್ನು ಹಾಗೂ ಉಲ್ಲೇಖವನ್ನು ಸಾಮಾಜಿಕ ಮತ್ತು ಧಾರ್ಮಿಕ ನಿಯಮಗಳನ್ನು ಆಚರಿಸುವ ಹೊಣೆಗಾರಿಕೆಯ ಸ್ವರೂಪದ ಸೂತ್ರ ಅಥವಾ ಮಾದರಿಯ ಸ್ವರೂಪದಲ್ಲಿ ನಮಗೆ ಕಾಣಿಸಿ ಒದಗಿಸುತ್ತದೆ92. ಆದರೆ ಇದು ಉಪನಿಷತ್ನ ‘ಶ್ವೇತಕೇತು’ವಿನ ತಾಯಿಯನ್ನು ಒಬ್ಬ ಬ್ರಾಹ್ಮಣ ಅಪಹರಿಸುವ ಕ್ರಿಯೆಯನ್ನು ಮಾನ್ಯ ಮಾಡುವ ಕ್ರಮವನ್ನು ಆಧುನಿಕ ಸನಾತನವಾದಿಗಳು ಹಿತಕರವಾಗಿ ಸ್ವೀಕರಿಸುವುದಿಲ್ಲ ಅಥವಾ ಅವರುಗಳಿಗೆ ಇದು ಹಿತಕರವಾಗಿರುವುದಿಲ್ಲ93. ಭಗವದ್ಗೀತೆಯಂತೂ ಇದನ್ನು ಬಹುವಚನದಲ್ಲಿ ಬಳಸುತ್ತಾ ಕುಟುಂಬವೊಂದು ಅತ್ಯಂತ ವ್ಯವಸ್ಥಿತವಾಗಿ ಜೀವನವನ್ನು ಗೌರವಾರ್ಹ ನೆಲೆಯಲ್ಲಿ ಸಾಗಿಸಲು ಹೊಂದಿರಬೇಕಾದ ನಿಯಮಗಳು ಅಥವಾ ‘ಕುಲ ಧರ್ಮಸನಾತನ’94 ಎಂದು ಬಳಸುತ್ತದೆ. ಶ್ರೀ ಕೃಷ್ಣನನ್ನು ಇಂತಹ ನಿಯಮಗಳ ಕುಲ ಧರ್ಮಗಳ ಸಂರಕ್ಷಕನೆಂದು ಕೂಡಾ ಕರೆದು ‘ಶಾಶ್ವತಧರ್ಮಗೋಪ್ತ ಸನಾತನ’95 ಎನ್ನುತ್ತದೆ. ಇದೇ ರೀತಿಯಲ್ಲಿ ಮನು ಧರ್ಮಶಾಸ್ತ್ರದಲ್ಲಿಯೂ ಕೂಡಾ ಸನಾತನ ಧರ್ಮವೆಂದರೆ ಸಂಪ್ರದಾಯಗಳು ಮತ್ತು ಸಮಾಜದ ಯಾವುದೋ ಒಂದು ಪ್ರದೇಶದ ಜಾತಿಯ ಹಾಗೂ ಕುಟುಂಬಗಳ96 ನಿಯಮಗಳು ಅಥವಾ ಸಂಹಿತೆಗಳೆಂದು ಬಗೆಯುತ್ತದೆ. ಆದರೆ ಪುರಾಣಗಳು ಅತ್ಯಂತ ವಿಭಿನ್ನವಾಗಿ ಈ ಶಬ್ದವನ್ನು ವಿವರಿಸಿ ವ್ಯಾಖ್ಯಾನಿಸುತ್ತವೆ. ‘ಮತ್ಸ್ಯ ಪುರಾಣ’ದಲ್ಲಿ ಈ ಶಬ್ದವು ಆಸೆ ಮತ್ತು ಮೋಹಗಳಿಂದ ವಿಮುಖವಾದ ನೆಲೆಗೆ ತೀರಾ ಹತ್ತಿರವಾಗಿರುವ ಹಾಗೂ ಸನ್ಯಾಸ, ಕ್ಷಮೆ, ಸಹನೆ ಮುಂತಾದ ಗುಣಗಳೊಂದಿಗೆ ಸಂವಾದಿಯಾಗಿ ಬಳಕೆಯಾಗಿದೆ97. ‘ವರಾಹ ಪುರಾಣ’ದಲ್ಲಂತೂ ಈ ರೀತಿಯ ಶಾಶ್ವತ ಧರ್ಮವನ್ನು ವರಾಹ98 ಸೃಷ್ಟಿಸಿದ್ದೆಂದು ಕೂಡಾ ಅಭಿಪ್ರಾಯಿಸಲಾಗಿದೆ. ಆದರೆ ಇನ್ನೊಂದು ಉಲ್ಲೇಖದಲ್ಲಿ ಒಬ್ಬನು ಇನ್ನೊಬ್ಬನ ಸ್ಥಿತಿಯನ್ನು, ಸಂಪತ್ತನ್ನು, ವೈಭವವನ್ನು ನೆನೆದು ದು:ಖ ಪಡದಿರುವ ಸ್ಥಿತಿಯೇ ‘ಏಷ: ಧರ್ಮ ಸನಾತನ’ವೆಂದು99 ಕೂಡಾ ಕರೆಯಲಾಗಿದೆ. ಇನ್ನೊಂದು ಪುರಾಣದಲ್ಲಿ ಶಿವನು ‘ಧರ್ಮ ಸನಾತನ’100 ಎಂಬ ಕಲ್ಪನೆಯನ್ನು ಜ್ಞಾನ, ಕ್ರಿಯಾ, ಕಾರ್ಯ ಮತ್ತು ಯೋಗಗಳಿಂದ ಕೂಡಿದ ಸಂಯೋಗವೆಂದು ಕೂಡಾ ಹೇಳುತ್ತಾನೆ. ಇನ್ನು ಅನೇಕ ಮಹಾಕಾವ್ಯ ಮತ್ತು ಪುರಾಣಗಳಲ್ಲಿ ಈ ಸನಾತನ ಎನ್ನುವ ಶಬ್ದವನ್ನು ಕೃಷ್ಣನಂತಹ ದೇವರುಗಳಿಗೆ ಬಿರುದಿನ ರೂಪದಲ್ಲಿ ಅಥವಾ ದೇವತೆಯಂತೆ ಸ್ವರೂಪವನ್ನು ಪಡೆದ ಧರ್ಮಕ್ಕೆ ಸಂವಾದಿಯಾಗಿ ಗುಣವಿಶೇಷಣದ ರೂಪದಲ್ಲಿ ಬಳಸಲಾಗಿದೆ. ಸುಮಾರು ಎಂಟನೆಯ ಶತಮಾನದಲ್ಲಿ ರಚಿತವಾದ ‘ಭವಭೂತಿ’ಯ ‘ಉತ್ತರರಾಮ ಚರಿತ’ ಎನ್ನುವ ಲೌಕಿಕ ಕೃತಿ ಮೊತ್ತಮೊದಲ ಬಾರಿಗೆ ಸನಾತನ ಎನ್ನುವ ಶಬ್ದವನ್ನು ಸ್ಥಿರವಾದ ರೂಢಿ ಸಂಪ್ರದಾಯ ಮತ್ತು ನಿಯಮಗಳು ಎನ್ನುವ ಅರ್ಥದಲ್ಲಿ ಬಳಸಿದೆ. ಸುಮಾರು ಆರನೆಯ ಶತಮಾನದ್ದೆಂದು ಗುರುತಿಸಬಹುದಾದ ‘ಖಾನಾಪುರ’ ಶಾಸನದಲ್ಲಿ ಶ್ರುತಿ ಮತ್ತು ಸ್ಮøತಿಗಳು ಒದಗಿಸಿರುವ ಕ್ರಿಯಾವಿಧಿಗಳು ಮತ್ತು ಯಜ್ಞಗಳು ಎನ್ನುವುದನ್ನು ಶ್ರುತಿಸ್ಮøತಿವಿಹಿತ ಅಥವಾ ಸೇರಿದ ‘ಸನಾತನ ಧರ್ಮ ಕರ್ಮ ನಿರತ’ ಎಂಬರ್ಥದಲ್ಲಿ ಈ ಶಬ್ದವನ್ನು ಬಳಸಲಾಗಿದೆ. ಹೀಗೆ ಈ ರೀತಿಯ ಅನೇಕ ಪಠ್ಯಗಳಲ್ಲಿನ ಸನಾತನ ಎಂಬರ್ಥದ ಶಬ್ದದ ಉಲ್ಲೇಖವೇ ಅತ್ಯಂತ ವಿಭಿನ್ನ ಮತ್ತು ವೈವಿಧ್ಯದ ಅರ್ಥ ಸಾಧ್ಯತೆಗಳನ್ನು ಕೊಡುತ್ತವೆ. ಸಾಮಾನ್ಯವಾಗಿ ಸನಾತನ ಎಂಬ ಶಬ್ದವನ್ನು ಒಂದು ಸಮಾಜ, ಜಾತಿ, ಪ್ರದೇಶ ಮತ್ತು ರಾಜ್ಯದ ಸಾಮಾನ್ಯ ನಿಯಮ ಮತ್ತು ಸಂಪ್ರದಾಯಗಳೆಂದು ಅರ್ಥೈಸಬಹುದಾಗಿದೆ. ಸುಮಾರು ಹದಿನೆಂಟನೆಯ ಶತಮಾನದಲ್ಲಿ ರಚಿತವಾದ ‘ಮಹಾನಿರ್ವಾಣ ತಂತ’ ಎಂಬ ಕೃತಿಯು ಮತ್ತು ಸುಮಾರು 1844ರಲ್ಲಿ ರಚಿತವಾದ ‘ನೀಲಕಾಂಥ ಗೋರೆಹ’ ಅಥವಾ ‘ನೆಹೆಮಿಯಾ’ ಎನ್ನುವ ಕೃತಿಕಾರನ ‘ಶಾಸ್ತ್ರತತ್ವನಿರ್ಣಯ’ ಎನ್ನುವ ಕೃತಿ ಕೂಡಾ ಇದೇ ಅರ್ಥವನ್ನು ಸರಿ ಸುಮಾರು ನೀಡುತ್ತದೆ. ಆದರೆ ಹತ್ತೊಂಬತ್ತನೆಯ ಶತಮಾನದಲ್ಲಿ ಕ್ರಿಶ್ಚಿಯಾನಿಟಿಯ ವಿರುದ್ಧದ ಸ್ವ-ಸ್ವೀಕೃತ ಮತ್ತು ಸಮರ್ಥಿತ ಸುಧಾರಣಾ ಚಳವಳಿಗಳು ಮುಖ್ಯವಾಗಿ ಬ್ರಹ್ಮ ಸಮಾಜ ಮತ್ತು ಆರ್ಯ ಸಮಾಜ ಯಾವಾಗ ರೂಪುಗೊಂಡಿತೋ ಆಗ ಅವುಗಳ ಅತ್ಯಂತ ಪ್ರಮುಖವಾದ ಪರಿಕಲ್ಪನೆಯಾಗಿ ಮತ್ತು ಅದಾದ ನಂತರದಲ್ಲಿ ಒಂದು ಏಕರೂಪದ ಪಡಿಯಚ್ಚಿನ ರೀತಿಯ ಶಾಶ್ವತವಾದ ಹಾಗೂ ಮಾನ್ಯತೆಗೊಂಡ ಎಲ್ಲವನ್ನೂ ಒಳಗೊಂಡ ಒಂದು ಆದಿ ಇಲ್ಲದ ಅಂತ್ಯವಿಲ್ಲದ ಚಾರಿತ್ರಿಕವಾದ ಸ್ಥಾಪನೆಯನ್ನು ಹೊಂದಿರದ ಯಾವುದೇ ರೀತಿಯ ಸುಧಾರಣೆ ಮತ್ತು ಶೋಧಗಳನ್ನು ಹೊಂದಬೇಕಾಗಿರದ ಧರ್ಮದ ರೀತಿಯಲ್ಲಿ ಇದು ರೂಪುಗೊಂಡಿತು. ಇದು ಕಾಲಾತೀತವಾದ ಧರ್ಮ ಎನ್ನುವ ಸಂಗತಿಗೆ ಒಂದು ಪಾರದರ್ಶಕವಾದ ಪರಿಕಲ್ಪನೆಯನ್ನು ಹಾಗೂ ಅಸ್ಪಷ್ಠತೆಯನ್ನು ನೀಡಿತು101. ಇದು ಸುಮಾರು 1898ರಲ್ಲಿ ‘ಅನ್ನಿ ಬೆಸೆಂಟ್’ ಅವರಿಂದ ಸ್ಥಾಪಿತವಾದ ಬನಾರಸ್ನ ‘ಸೆಂಟ್ರಲ್ ಹಿಂದು ಕಾಲೇಜು’ ಮತ್ತು ಅಲ್ಲಿಗೆ ಬೇಕಾದಂತಹ ಪಠ್ಯವನ್ನು102 ವಿದ್ವಾಂಸ ‘ಭಗವಾನ್ ದಾಸ್’ರೊಂದಿಗೆ ಆನಿ ಬೆಸೆಂಟ್ ಅವರು ಸಂಗ್ರಹಿಸುವವರೆಗೆ ಸಾಗಿತು.
5
ಹಿಂದೂ ಧರ್ಮವನ್ನು ಪದೇ ಪದೇ ಒಂದು ಶಾಶ್ವತ ಅಥವಾ ಸನಾತನ ಧರ್ಮವೆಂದು ಕಥಿಸಲಾಗುತ್ತಿದೆ. ಇದರ ಜೊತೆಯಲ್ಲಿ ಹಿಂದೂ ಧರ್ಮವೆಂದರೆ ಒಂದು ಏಕರೂಪೀ ಹಾಗೂ ಏಕಶಿಲೀಯ ಧರ್ಮವೆಂದು ಮತ್ತು ಕೆಲವು ಸ್ಥಿರ ವಿಶ್ವಾತ್ಮಕವಾದ ತತ್ವಗಳ ಬಗ್ಗೆ ಸಹಮತವನ್ನು ಸಾಧಿಸಿರುವ ಧರ್ಮವೆಂದು ಕೂಡ ಕಲ್ಪಿಸಲಾಗುತ್ತಿದೆ103. ಇಂತಹ ಮಿಥ್ಯ ಮತ್ತು ಕಪೋಲಕಲ್ಪಿತ ನಿಲುವನ್ನು ಕೇವಲ ಹಿಂದೂ ಬಲಪಂಥೀಯ ಗುಂಪುಗಳಷ್ಟೇ ಸಾಧಿಸುತ್ತಿಲ್ಲ, ಬದಲಿಗೆ ಧರ್ಮದ ಮೇಲೆ ಅತ್ಯಂತ ವಿಮರ್ಶಾತ್ಮಕವಾಗಿ ಕೆಲಸ ಮಾಡಿರುವ ಕೆಲವು ಭಾರತೀಯ ವಿದ್ವಾಂಸರು ವೇದವನ್ನೇ ಅಧಿಕೃತವೆಂದು ಸಾಧಿಸುತ್ತಾ ಮತ್ತು ಅದರ ಮಾನ್ಯತೆಯೊಂದಿಗೆ ಹಲವು ಸಂಪ್ರದಾಯಗಳನ್ನು ಸಾಧಿಸುವ ಸೃಷ್ಠಿಮಾಡುವ ಮತ್ತು ಸ್ಥಿತ್ಯಂತರಗೊಳಿಸುವ ಧರ್ಮವೆಂದು ಅಭಿಪ್ರಾಯಿಸುತ್ತಾರೆ104. ಈ ರೀತಿಯಲ್ಲಿ ಮೊತ್ತ ಮೊದಲು ವೈದಿಕ ಧರ್ಮ ಅಥವಾ ವೇದಗಳಿಗೆ, ವೇದಗಳ ಪ್ರಾಮಾಣ್ಯಕ್ಕೆ ಹಾಗೂ ಅವುಗಳಿಗೆ ಅಧಿಕೃತತೆಯನ್ನು ಸಂಬಂಧಗೊಳಿಸುವ ಅಥವಾ ಸಮಬಲಗೊಳಿಸುವ ಪ್ರಕ್ರಿಯೆ ಸರಿ ಸುಮಾರು ಕ್ರಿಸ್ತ ಪೂರ್ವ ಆರನೇ ಶತಮಾನದಲ್ಲಿ ‘ಯಾಸ್ಕ’ರ ಮೂಲಕ ಆರಂಭವಾಯಿತು. ಆತ ವೈದಿಕ ಋಷಿಗಳನ್ನು ನೇರವಾಗಿ ವೇದದ ಧರ್ಮ ಮತ್ತು ಜ್ಞಾನದೊಟ್ಟಿಗೆ ಸಂಬಂಧ ಹೊಂದಿದ್ದ ವ್ಯಕ್ತಿಗಳೆಂದು ಸಂಬೋಧಿಸುತ್ತಾನೆ ಅಥವಾ ‘ಸಾಕ್ಷಾತ್ಕೃತಧರ್ಮ’ವೆಂದು ಕರೆಯುತ್ತಾನೆ105. ನಂತರ ಮನು ಕಾಲಾಂತರದಲ್ಲಿ ಧರ್ಮದ ಮೂಲವು ವೇದವೆಂದು ಕರೆಯುತ್ತಾನೆ ಅಥವಾ ‘ವೇದೋಖಿಲೋ ಧರ್ಮಮೂಲಮ್’106 ಎನ್ನುತ್ತಾನೆ. ತನ್ಮೂಲಕ ಶ್ರುತಿ ಮತ್ತು ಸ್ಮ್ರತಿಗಳ ಪ್ರಾಮಾಣ್ಯವನ್ನು ಯಾರೂ ಕೂಡಾ ಪ್ರಶ್ನಿಸಬಾರದೆಂದೂ ಅಥವಾ ಅದನ್ನು ‘ಅಮಿಮಾಂಸ್ಯ’107 ಅಂದರೆ ಪ್ರಶ್ನಿಸದ, ಸಂದೇಹಿಸದ ಮತ್ತು ಕಾರಣಿಸಿದ ಸ್ವರೂಪದ್ದೆಂದು ಅವುಗಳನ್ನು ಕರೆಯುತ್ತಾನೆ. ಮನುವಿನ ಯೋಚನೆ ಮತ್ತು ಪರಿಕಲ್ಪನೆಯನ್ನು ನಂತರದ ಕಾಲಾನುಗತಿಯಲ್ಲಿ, ಅವುಗಳ ಕ್ರಮ ಮತ್ತು ಸ್ವರೂಪದಲ್ಲಿ ವ್ಯತ್ಯಾಸ ಮತ್ತು ವೈವಿಧ್ಯತೆಗಳು ಇದ್ದರೂ ಕೂಡಾ ಅನೇಕ ತಾತ್ವಿಕ ವ್ಯವಸ್ಥೆಗಳು ಹಾಗೂ ಶಾಖೆಗಳು ಮನ್ನಿಸಿದವು. ‘ನ್ಯಾಯ’ ಮತ್ತು ‘ವೈಶೇಷಿಕ’ ಮೂಲಭೂತವಾಗಿ ವೇದಗಳಿಗೆ ಸಂಬಂಧ ಪಡದೆ ಇದ್ದರೂ ಕೂಡ ಅದನ್ನು ಮನ್ನಿಸಿ ಪುರಸ್ಕರಿಸಿದರು ಮತ್ತು ವೇದಗಳನ್ನು ಜ್ಞಾನದ ಮೂಲವೆಂದು ಬಗೆದುವು. ನ್ಯಾಯ ಮತ್ತು ವೈಶೇಷಿಕ ಪಂಥದ ಅತ್ಯಂತ ಪ್ರಸಿದ್ಧ ವಿದ್ವಾಂಸರಾದ ‘ಉದ್ಯೋತಕರ’, ‘ವಾಚಸ್ಪತಿ ಮಿಶ್ರ’ ಹಾಗೂ ‘ಉದಯನ’ ಹೊಸ ರೀತಿಯ ತರ್ಕಗಳನ್ನು ನಿರೂಪಿಸಿ ಇಂತಹ ವೇದ ಪ್ರಾಮಾಣ್ಯವನ್ನು ಒಪ್ಪಿದರು108. ವೈದಿಕ ಪಠ್ಯಗಳಿಗೆ ಅತ್ಯಂತ ಘನವಾದ ಮತ್ತು ಗಂಭೀರವಾದ ಅನುಮೋದನೆ ದೊರಕಿದ್ದು ಮೀಮಾಂಸೆಗಳಿಂದ. ವಿಶೇಷವಾಗಿ ಮೀಮಾಂಸೆಗಳು ವೈದಿಕ ಕೃತಿಗಳಿಗೆ ಹಾಗೂ ವಾಙ್ಮಯಗಳಿಗೆ ತೀವ್ರ ಹತ್ತಿರವಾಗಿರುವಂತಾದವುಗಳಾದ ಕಾರಣ109. ಸುಮಾರು ಎಂಟನೇ ಶತಮಾನದಲ್ಲಿ ಇದ್ದ ವೈದಿಕ ಪರಂಪರೆಯ ಅತ್ಯಂತ ಘನ ವಿದ್ವಾಂಸರಾದ ‘ಕುಮಾರಿಲ ಭಟ್ಟ’, ‘ಪ್ರಭಾಕರ’ ಮತ್ತು ‘ಮಂಡನಮಿಶ್ರ’ ಮುಂತಾದ ಎಲ್ಲರೂ ಕೂಡಾ ಧರ್ಮದ ಮೂಲವು ವೇದಗಳಿಂದಲೇ ಮಾನ್ಯತೆ ಪಡೆಯಬೇಕು ಅಥವಾ ಮಾನ್ಯತೀಕರಿಸಬೇಕು ಎಂಬ ‘ವೇದಮೂಲತ್ವ’ವನ್ನು110 ಪ್ರತಿಪಾದಿಸಿದರು. ಇದೇ ರೀತಿಯಲ್ಲಿ ಸುಮಾರು ಎಂಟನೇ ಶತಮಾನದಲ್ಲಿ ಬಂದ ಶಂಕರಾಚಾರ್ಯ ಕೂಡಾ ಎಲ್ಲವನ್ನೂ ವೇದದಲ್ಲಿಯೇ ನೋಡಬೇಕು, ವೇದವನ್ನು ಅತ್ಯಂತ ಪ್ರಮುಖವಾಗಿ ಪರಿಗಣಿಸಬೇಕು ಮತ್ತು ವೇದದ ಎಲ್ಲಾ ಹೇಳಿಕೆಗಳೂ ಕೂಡಾ ತೀರಾ ಅಧಿಕೃತವಾದವುಗಳು111 ಎಂದು ಹೇಳಿದ. ಯಾರಾದರೂ ಕೂಡ ವೇದವನ್ನು ವಿರೋಧಿಸಿದರೆ ಅದನ್ನು ವೇದ ವಿರೋಧವೆಂದು ಅಂದಿನಿಂದ ಕರೆಯಲಾಯಿತು112. ಆದಾಗ್ಯೂ ಕೂಡಾ ವೇದವನ್ನು ಅತ್ಯಂತ ಅಧಿಕೃತವೆಂದು ಸ್ವೀಕರಿಸುವ ಮತ್ತು ಸ್ವೀಕರಿಸುವಂತೆ ಘೋಷಿಸುವ ಕ್ರಮವು ಬ್ರಾಹ್ಮಣೀಯ ಸಂಪ್ರದಾಯವನ್ನು ಅಧಿಕೃತವೆಂಧು ಘೋಷಿಸುವ ಕ್ರಮದ ಲಕ್ಷಣವೇ ಆಗಿದೆ. ವೇದಗಳ ಸಂಖ್ಯೆ ನಾಲ್ಕು ಆದ ಕಾರಣ ಸರಿಸುಮಾರು ಉತ್ತರ ವೇದ ಕಾಲದ ಆರಂಭದ ಭಾಗದಲ್ಲಿ ಪಂಚಮ ವೇದ ಅಥವಾ ಐದನೇ ವೇದವೆಂಬ ಅಸಂಘಟಿತ ವೈದಿಕ ಜ್ಞಾನ ಮತ್ತು ಸಾಹಿತ್ಯವನ್ನು ಸೃಷ್ಠಿಸಲಾಯಿತು113. ವೈದಿಕ ಸಾಹಿತ್ಯ ಮುಕ್ತವಾದ, ಮುಗಿಯದ ಮತ್ತು ಆ ಕಾಲದಲ್ಲಿ ವೈದಿಕ ಸಾಹಿತ್ಯವನ್ನು ಬ್ರಾಹ್ಮಣರು ಬರೆಯಲು ಇಷ್ಟಪಡದ ಕಾರಣ ಅದನ್ನು ಮೌಖಿಕವಾಗಿ ಇಡಬೇಕೆನ್ನುವ ಕಾರಣದಿಂದ ಈ ರೀತಿ ಪ್ರಕ್ರಿಯೆಯನ್ನು ಸಾಧಿಸಲಾಯಿತು114. ಈ ನೆಲೆಯಲ್ಲಿ ಮಹಾಭಾರತ115, ಪುರಾಣಗಳು116 ಮತ್ತು ತಂತ್ರಗಳನ್ನು117 ಪಂಚಮ ವೇದ ಅಥವಾ ಐದನೇ ವೇದವೆಂದು ಕರೆಯಲಾಯಿತು. ಸುಮಾರು ಐದು ಮತ್ತು ಒಂಬತ್ತನೆಯ ಶತಮಾನದವರೆಗೆ ತಮಿಳಿನಲ್ಲಿ ಮೂಡಿಬಂದಂತಹ ಶೈವ ಮತ್ತು ವೈಷ್ಣವ ಸಂಪ್ರದಾಯಗಳಂತಹ ಭಕ್ತಿ ಪಂಥಗಳನ್ನು ಕೂಡಾ ವೈದಿಕ ಸ್ಥಾನಮಾನಕ್ಕೆ ಸೇರಿಸಲಾಯಿತು118. ಮಧ್ಯಕಾಲೀನ ಚರಿತ್ರೆಯ ಸಂದರ್ಭದಲ್ಲಿ ತುಂಬಾ ವೈವಿಧ್ಯದ ವಸ್ತು, ವೈವಿಧ್ಯವಾದ ಅಭಿಪ್ರಾಯಗಳನ್ನು ಮತ್ತು ಚಿಂತನೆಗಳನ್ನು ಹೊಂದಿದ್ದ ಧಾರ್ಮಿಕ ವಿದ್ವಾಂಸ ವಿದ್ವಾಂಸರು ಮತ್ತು ಗುರುಗಳು ಕೂಡಾ ವೇದದ ಮೂಲಕ ತಮ್ಮ ಪ್ರವಚನ, ಉಪನ್ಯಾಸ ಮತ್ತು ಬೋಧನೆಗಳ ಮಾನ್ಯತೆಯನ್ನು ಪಡೆದುಕೊಂಡರು. ಭಾರತದ ‘ಮಾರ್ಟಿನ್ ಲೂಥರ್’119 ಎಂದೇ ಖ್ಯಾತಿಯನ್ನು ಪಡೆದ ಆರ್ಯ ಸಮಾಜವನ್ನು ಸ್ಥಾಪಿಸಿದ ‘ದಯಾನಂದ ಸರಸ್ವತಿ’ಯಂತಹ ಹಿಂದು ಪುನರುತ್ಥಾನವಾದೀ ಚಳವಳಿಗಳು ಕೂಡಾ ಇದೇ ರೀತಿಯಲ್ಲಿ ವೇದಗಳ ಮೂಲಕವೇ ವೇದಗಳಿಂದ ಮಾನ್ಯತೆಯನ್ನು ಪಡೆದಿದ್ದು ಕೂಡಾ ಆ ಕಾಲದ ಒಂದು ವಿಶೇಷ ಲಕ್ಷಣವಾಯಿತು. ಆದರೆ ಇವೆಲ್ಲ ಉದಾಹರಣೆಗಳು ಮತ್ತು ನಿದರ್ಶನಗಳಿಂದ ಹಿಂದೂ ಧರ್ಮ ಅಥವಾ ಹಿಂದೂಯಿಸಂ ಒಂದು ಏಕಶಿಲೀಯ ಅಥವಾ ಏಕಾಕೃತಿಯ ಲಕ್ಷಣಗಳನ್ನು ಪಡೆದು ರಚಿತವಾಯಿತು ಎಂದು ಹೇಳಲಾಗದು. ಆದರೆ ಇದು ನಿಶ್ಚಿತವಾಗಿ ಒಂದು ರೀತಿಯ ಮಿಥ್ಯೆ ಅಥವಾ ಮಿಥಕದ ಒಂದು ಕಲ್ಪನೆಯನ್ನು ಹುಟ್ಟು ಹಾಕಿತು ಮತ್ತು ಒಂದು ರೀತಿಯಲ್ಲಿ ದಾರಿಹೋಕನೊಬ್ಬ ಒಂದು ವಿಗ್ರಹದ ಎದುರುಗಡೆ ನಿಂತು ಆತನ ಶಿರಸ್ತ್ರಾಣವನ್ನು ಅಥವಾ ಟೊಪ್ಪಿಗೆಯನ್ನು ವಿನಾಕಾರಣ ಎತ್ತಿದ ರೀತಿಯಲ್ಲಿ ಸಂಭವಿಸಿತು120.
ಬ್ರಾಹ್ಮಣೀಯ ಹಿಂದೂ ಧರ್ಮದಲ್ಲಿ ವೇದಗಳು ಯಾವಾಗಲೂ ಕೂಡ ಒಂದು ಔನ್ನತ್ಯದ ಹಾಗೂ ಉನ್ನತಿಯ ಸ್ಥಾನವನ್ನು ಹೊಂದಿದ್ದವು ಎನ್ನುವುದನ್ನು ಕಾಣಲಾರೆವು121. ವೇದವನ್ನು ವಿರೋಧಿಸಿದ ಆಲೋಚನೆಗಳು ಮತ್ತು ಯೋಚನೆಗಳು ಋಗ್ವೇದದಲ್ಲಿಯೇ ಆರಂಭವಾಗುತ್ತವೆ. ವೇದವನ್ನು ಓದುವವರು ಮತ್ತು ವೇದವನ್ನು ಆಚರಿಸುವ ವ್ಯಕ್ತಿಗಳ ಬಗೆಗೆ ಋಗ್ವೇದದಲ್ಲಿ ಬರುವಂತಹ ಒಂದು ಖಂಡಿಕೆ ಅಥವಾ ಪ್ಯಾರಾ ಅದರಲ್ಲಿ ವಿಶೇಷವಾಗಿ, ‘ಬ್ರಾಹ್ಮಣರು ವಟಗುಟ್ಟುವ ಕಪ್ಪೆಗಳು’ ಅನ್ನುವಂತಹ ಒಂದು ಪದದ ಬಳಕೆ ಇಂತಹ ಆರಂಭದ ಪ್ರಯತ್ನವಾಗಿ ಕಂಡುಬರುತ್ತದೆ122. ಬ್ರಾಹ್ಮಣರನ್ನು ಅತ್ಯಂತ ವ್ಯಂಗ್ಯ ಮತ್ತು ವಿಡಂಬನೆಯಿಂದ ನೋಡುತ್ತಾ ವೈದಿಕ ಜ್ಞಾನವನ್ನು ಪ್ರಶ್ನಿಸುವಂತಹ ಅನೇಕ ಸಂದರ್ಭಗಳು ಆ ಕಾಲದಲ್ಲಿ ರೂಪು ಪಡೆದಿದ್ದುವು. ಮುಖ್ಯವಾಗಿ, ‘ಈ ಸೃಷ್ಟಿಯ ವಿಕಾಸ ಮತ್ತು ಉತ್ಪತ್ತಿಯಾದುದರ ಬಗೆಗಿನ ಜ್ಞಾನವನ್ನು ಯಾರೂ ತಿಳಿಯದಿದ್ದರೂ ಕೂಡಾ ವೈದಿಕನೊಬ್ಬ ಆತ ಸ್ವರ್ಗದಲ್ಲಿ ಮೇಲೆ ಕುಳಿತು ಇದನ್ನು ತಿಳಿದುಕೊಂಡಿರಬಹುದು ಇಲ್ಲದಿದ್ದರೆ ಆತನಿಗೆ ಇದ್ಯಾವುದರ ಬಗ್ಗೆಯೂ ಕೂಡ ಅರಿವು ಉಂಟಾಗುತ್ತಿರಲಿಲ್ಲ’ ಎನ್ನುವ ರೀತಿಯ ಅನೇಕ ವ್ಯಂಗ್ಯಗಳು ಇಂತಹ ವಿರೋಧ ಮತ್ತು ಮುಖಾಮುಖಿಯನ್ನು ಸೂಚಿಸುತ್ತವೆ123. ಋಗ್ವೇದದ ಅನೇಕ ಸಂದರ್ಭಗಳುದ್ದಕ್ಕೂ ಇಂದ್ರನನ್ನು ಅನೇಕ ಬಾರಿ ಬೈಗುಳಗಳಿಂದ ಉಪಚರಿಸಲಾಗಿ ಆತನ ಅಸ್ತಿತ್ವವನ್ನೇ ಪ್ರಶ್ನಿಸಲಾಗಿದೆ124. ಇಂದ್ರನಿಗೆ ಸಂಬಂಧಪಟ್ಟ ಋಗ್ವೇದದ ಎಂಟನೇ ಮಂಡಲದ ನೂರನೇ ಸೂಕ್ತದ ಮೂರನೇ ಮಂತ್ರದಲ್ಲಂತೂ ‘ಇದು ಇಂದ್ರನಿಗೆ ಆದರೆ ಆತ ಅಸ್ತಿತ್ವದಲ್ಲಿದ್ದರಷ್ಟೇ..’ ಎನ್ನುವಂತಹ ಬಳಕೆಯನ್ನು ಬಳಸಲಾಗಿದೆ. ಇನ್ನೊಂದು ಮಂತ್ರದಲ್ಲಿ, ‘ಯಾರಿಗೆ ಕೇಳಬೇಕು ? ಎಲ್ಲಿದ್ದಾನೆ ಆತ ? ಎನ್ನುತ್ತಾ ಆತನ ಬಗೆಗೆ ಅಂದರೆ ಇಂದ್ರನ ಬಗೆಗೆ, ‘ಆತನು ಇಲ’್ಲ ಎನ್ನುವ ಅಭಿಪ್ರಾಯವನ್ನು ಕೂಡಾ ತಾಳಲಾಗಿದೆ. ಋಗ್ವೇದದ ‘ಮಹಾವ್ರತಸೋಮ’ ಹಬ್ಬ ಅಥವಾ ಉತ್ಸವದ ಸಂದರ್ಭದಲ್ಲಿ ಋಗ್ವೇದದ ಕ್ರಿಯಾವಿಧಿ ಮತ್ತು ಯಜ್ಞಗಳ ಬಗೆಗೂ ಕೂಡ ಸಂದೇಹವನ್ನು ತಾಳಲಾಗಿದೆ ಮತ್ತು ಅಂತಹ ಸಂದೇಹಗಳು ಋಗ್ವೇದದ ಅನೇಕ ಕಂಡಿಕೆಯಲ್ಲಿ ನಮಗೆ ಕಾಣಸಿಗುತ್ತವೆ125. ಋಗ್ವೇದವು ರಚನೆಯಾದ ಸ್ವಲ್ಪವೇ ಸಂದರ್ಭದಲ್ಲಿ ಅವುಗಳ ಪವಿತ್ರತೆಯ ಬಗ್ಗೆ ಅನೇಕ ಪ್ರಶ್ನೆಯ ಅನುಮಾನಗಳನ್ನು ಹೇಳಲಾಗಿದೆ ಮತ್ತು ತಾಳಲಾಗಿದೆ. ವೇದವನ್ನು ನಿರಾಕರಿಸುವ ಅನೇಕ ಪ್ರಜ್ಞೆ, ಯೋಚನೆ ಮತ್ತು ಪ್ರಕರಣಗಳು ಕೂಡಾ ಉಪನಿಷತ್ನಲ್ಲಿ ನಮಗೆ ಕಾಣಸಿಗುತ್ತವೆ. ಮುಂಡಕ ಉಪನಿಷತ್ ನಾಲ್ಕು ವೇದಗಳನ್ನು ಕೂಡಾ ಕೆಳಸ್ತರದ ಜ್ಞಾನ ಅಥವಾ ‘ಅಪರವಿದ್ಯಾ’126 ಎಂದು ಅವುಗಳನ್ನು ನಿರಾಕರಿಸುತ್ತದೆ. ಸುಮಾರು ಐದು ಮತ್ತು ಆರನೆಯ ಕ್ರಿಸ್ತಪೂರ್ವ ಸಂದರ್ಭದ ‘ಯಾಸ್ಕ’ನ ನಿರುಕ್ತದಲ್ಲಿ ‘ಕೌತ್ಸ’ ಎಂಬ ಋಷಿಯು ವೇದಗಳ ಕಂಡಿಕೆಗಳು ಹಾಗೂ ವೇದಗಳ ಜ್ಞಾನ ಅರ್ಥವಿಲ್ಲದ್ದು ಹಾಗೂ ಅವುಗಳ ಅರ್ಥ ಪರಸ್ಪರ ವಿರುದ್ಧವಾದುದು ಎನ್ನುತ್ತಾನೆ127. ಈ ವೈದಿಕ ಕ್ರಿಯಾ ವಿಧಿಗಳ ಬಗೆಗೆ ವಿಮರ್ಶೆ ಮತ್ತು ಟೀಕೆಗಳನ್ನು ಮತ್ತು ಅವುಗಳನ್ನು ಅತ್ಯಂತ ಕೀಳಾಗಿ ಕಡೆಗಣಿಸಿ ನೋಡುವ ಉದಾಹರಣೆಗಳನ್ನು ನಾವು ವೈದಿಕ ಚಿಂತನೆಯ ಯಾನಗಳಂತಿರುವ ಧರ್ಮಶಾಸ್ತ್ರದ ಕೃತಿಗಳಲ್ಲೂ ನೋಡಬಹುದಾಗಿದೆ. ಸ್ಥಳೀಯ ಮತ್ತು ಪ್ರಾದೇಶಿಕ ಪ್ರದೇಶಗಳಲ್ಲಿ ಸ್ಥಳೀಯ ಆಚರಣೆಗಳನ್ನು ಆಚರಿಸಬೇಕು ಎಂದು ‘ಬೋಧಾಯನ’ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದ ಮತ್ತು ಇಂತಹ ಅಭಿಪ್ರಾಯದಿಂದ ತಿಳಿಯಬಹುದಾಗಿರುವುದೇನೆಂದರೆ ತಿಳಿದ, ಓದಿದ ಅಥವಾ ಅಧಿಕೃತ ಎನ್ನುವ ಸಂಪ್ರದಾಯ ಮತ್ತು ಪರಂಪರೆಗೆ ವಿರುದ್ಧವಾದ ಆಚರಣೆಗಳನ್ನು ಹಾಗೂ ಕ್ರಿಯಾವಿಧಿಗಳನ್ನು ಆಕಾಲದಲ್ಲಿ ಆಚರಿಸುತ್ತಿದ್ದರು ಎನ್ನುವುದನ್ನು ಕೂಡಾ ತಿಳಿಯಬಹುದಾಗಿದೆ128.
ಅನೇಕ ಬ್ರಾಹ್ಮಣೀಯ ಕೃತಿಗಳಲ್ಲೇ ಈ ವೇದದ ಮಾನ್ಯತೆ ಮತ್ತು ಶ್ರೇಷ್ಠತೆಯನ್ನು ಒಪ್ಪದಿರುವ ಮತ್ತು ಅದನ್ನು ಸಾರಾಸಗಟಾಗಿ ನಿರಾಕರಿಸುವ ನೆಲೆಗಳನ್ನು ಮತ್ತು ಪ್ರತಿನಿಧೀಕರಣವನ್ನು ನಾವು ನೋಡಬಹುದಾಗಿದೆ. ಉದಾಹರಣೆಗೆ, ಅನೇಕ ಶತಮಾನಗಳಿಂದ ಅತ್ಯಂತ ಪ್ರಮುಖ ಹಿಂದೂ ಪಠ್ಯವೆಂದು ನಂಬಿಕೊಂಡು ಬರುತ್ತಿರುವ ಭಗವದ್ಗೀತೆಯಲ್ಲಿ ಕೃಷ್ಣನು ಅರ್ಜುನನಿಗೆ ಅತ್ಯಂತ ಸ್ಪಷ್ಠವಾಗಿ, ‘ವೇದಗಳನ್ನು ಯಾರು(ವೇದವಾದರತಾಹ) ಹೊಗಳಿ ಸಂಭ್ರಮಿಸುತ್ತಾರೋ ಅವರು ಅತ್ಯಂತ ಕಡು ಲೌಕಿಕರು ಅಥವಾ ಕಾಮಾತ್ಮನಹ129 ಅಥವಾ ಕಾಮಾತ್ಮರು’ ಎನ್ನುವುದನ್ನು ಕಾಣಬಹುದು. ಇನ್ನೂ ಮುಂದುವರಿದು, ‘ಇಂತಹ ಅತಿಆಸೆಯ ಮತ್ತು ತೀರದ ದಾಹವಿರುವ ವೈದಿಕ ಕ್ರಿಯಾವಿಧಿಯನ್ನೊಪ್ಪುವ ಜನರು(ಕಾಮಕಾಮಾಹ) ಜಗತ್ತಿನಲ್ಲಿ ಜಡವಾಗುವರು’ ಎನ್ನುತ್ತದೆ130. ಪುರಾಣಗಳಂತೂ ಪದೇ ಪದೇ ವೇದಗಳ ಪಾರಮ್ಯತೆಯನ್ನು ಪ್ರಶ್ನಿಸಿ ಧಿಕ್ಕರಿಸುತ್ತವೆ. ಒಂದು ಪುರಾಣದ ಪಠ್ಯವಂತೂ, ‘ವೇದಗಳು ದೇವರ ಕುರಿತು ಯೋಚಿಸುವ ಮುಂಚೆಯೇ ಪುರಾಣಗಳು ಆಲೋಚಿಸಿದ್ದುವು ಎನ್ನುತ್ತದೆ’, ಅದೇ ಹೊತ್ತಿಗೆ ಇನ್ನೊಂದು ಪುರಾಣವು, ‘ವೇದಗಳು ಪುರಾಣದ ಅಲೋಚನೆಯ ಮೇಲೆ ನಿಂತಿವೆ ಎನ್ನುತ್ತದೆ’131. ಅಗ್ನಿ ಪುರಾಣವಂತೂ ‘ತನಗಿಂತ ಶೇಷ್ಠವಾದ ಸತ್ಯವೊಂದಿಲ್ಲ, ಶಾಸ್ತ್ರವೊಂದಿಲ್ಲ, ಶ್ರುತಿ-ಸ್ಮ್ರತಿಯಿಲ್ಲ ಹಾಗೂ ಕೃತಿಯೊಂದಿಲ’್ಲ ಎನ್ನುತ್ತಾ ಅದೇ ಶೇಷ್ಠವಾದ ಪುರಾಣವೆನ್ನುತ್ತದೆ132. ಭಾಗವತ ಪುರಾಣವೂ ಕೂಡಾ ವೇದವನ್ನು ಮತ್ತದರ ಆತ್ಯಂತಿಕತೆಯನ್ನು ಅತಿಕ್ರಮಿಸುತ್ತಾ ಮೀರಿ ನಿಲ್ಲುತ್ತದೆ. ಸುಮಾರು ಆರನೆಯ ಶತಕದ ‘ಗೌಡೀಯ ವೈಷ್ಣವ ಸಂಪ್ರದಾಯ’ಕ್ಕೆ ಸೇರಿದ ‘ಜೀವ ಗೋಸ್ವಾಮಿ’ ಎಂಬ ವ್ಯಕ್ತಿಯಂತೂ ‘ಭಾಗವತ ಪುರಾಣ’ವು ಎಲ್ಲಾ ವೇದಗಳಿಗಿಂತ ಮಿಗಿಲು ಎನ್ನುತ್ತಾನೆ. ಅನೇಕ ತಾಂತ್ರಿಕ ಪಠ್ಯಗಳು ತಮ್ಮ ತಳಹದಿಯನ್ನು ವೈದಿಕ ಪಠ್ಯಗಳ ಮೇಲೆ ಸ್ಥಾಪಿಸ ಹೊರಟರೂ ಕೂಡಾ ವೇದಗಳ ಅಧಿಕೃತತೆಯನ್ನು ನಿರಾಕರಿಸುತ್ತವೆ133. ಉದಾಹರಣೆಗೆ, ಹದಿನೆಂಟನೆಯ ಶತಕದ ‘ಮಹಾ ನಿರ್ವಾಣ ತಂತ್ರ’ವೆಂಬ ಕೃತಿಯು, ‘ಕಲಿಯುಗದಲ್ಲಿ134 ವೇದ, ಪುರಾಣ ಮತ್ತು ಶಾಸ್ತ್ರಗಳು ನಿರುಪಯುಕ್ತವೆಂದು ಸಾರಿ ಹೇಳುತ್ತದೆ’. ಇನ್ನೂ ಕೂಡಾ ಮುಂದುವರಿದು ಈ ಕೃತಿಯು, ‘ಆನೆಯು ಸೃಷ್ಠಿಸಿದ ಹಾದಿಯಲ್ಲಿ ಉಳಿದ ಪ್ರಾಣಿಗಳ ಹೆಜ್ಜೆಗಳು ವಿಲೀನವಾಗುವಂತೆ’135 ಬೇರೆ ಎಲ್ಲಾ ಸಂಪ್ರದಾಯಗಳು ತಂತ್ರದ ಕುಲಧರ್ಮದ ಹಾದಿಯಲ್ಲಿ ಮತ್ತು ಅದರೊಳಗಡೆ ಸೇರಿ ಮಾಯವಾಗಿವೆ’ ಎನ್ನುತ್ತಾನೆ. ಹೀಗೆ ಈ ರೀತಿಯ ಎಲ್ಲಾ ಉಲ್ಲೇಖಗಳು ಮತ್ತು ಪ್ರಕರಣಗಳು ವೇದೋತ್ತರ ಧಾರ್ಮಿಕ ಸಂಪ್ರದಾಯಗಳು, ವೇದವನ್ನು ಮಾನ್ಯ ಮಾಡುವ ಬಗೆಗಿಂತ ಅದನ್ನು ಮತ್ತು ಅದರ ಜತೆಗೆ ತಮ್ಮನ್ನು ಮಾನ್ಯತೆಗೊಳಿಸುವುದರಿಂದ ವಿಮುಖವಾದ ಬಗೆಯನ್ನು ನಮಗೆ ತಿಳಿಸುತ್ತವೆ.
ಹಲವಾರು ಧಾರ್ಮಿಕ ಸುಧಾರಣೆಗಳು ಇಂದು ನಾವು ಹಿಂದೂ ಧರ್ಮ ಎಂದು ತಿಳಿದಿರುವುದರ ಪದರದೊಳಗೆ ಇತ್ತು. ವಾಸ್ತವವಾಗಿ ಬ್ರಾಹ್ಮಣಗಳು ಮತ್ತು ವೇದಗಳ ಪಾರುಪತ್ಯವನ್ನು ಅವು ತಿರಸ್ಕರಿಸಿದವು. ಉದಾಹರಣೆಗೆ, ವೀರಶೈವ, ಒಂದು ಶೈವ ಪಂಥ ಅದರ ಅನುಯಾಯಿಗಳನ್ನು ಲಿಂಗಾಯತರು ಎಂದು ಕರೆಯಲಾಗುವುದು ಮತ್ತು ಇದು 12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಪ್ರಾಮುಖ್ಯತೆಯನ್ನು ಪಡೆಯಿತು ಮತ್ತು ಇದು ಗಮನಸೆಳೆಯುವ ಒಂದು ನಿದರ್ಶನವಾಗಿದೆ. ಇದರ ಸಂತಚರಿತೆ ಅಥವಾ ಧಾರ್ಮಿಕ ಬರಹಗಳು ವೀರಶೈವರು ಕನಿಷ್ಠವೆಂದರೂ ಅದರ ಆರಂಭಿಕ ಹಂತದಲ್ಲಿ ವೇದಗಳು ಮತ್ತು ಅಸಮಾನತೆಯನ್ನು ಅಪಹಾಸ್ಯಕ್ಕೊಳಪಡಿಸಿ ತಿರಸ್ಕರಿಸಿದವು ಎಂಬುದಕ್ಕಿರುವ ಪುರಾವೆಗಳಿಗೆ ನಿದರ್ಶನಗಳಾಗಿರುವುವು. ಬಸವಪುರಾಣವು ವೇದಾಂತಿಗಳು ಬಸವಣ್ಣನನ್ನು ಬಿಜ್ಜಳನ ಆಸ್ಥಾನದಲ್ಲಿ ಅವಮಾನಗೊಳಿಸಲಾಯಿತು ಎಂದು ಹೇಳುವುದು. ಚೆನ್ನಬಸವ ಪುರಾಣವು, ವೈದಿಕ ಪಂಡಿತನೊಬ್ಬ, ವೇದಗಳನ್ನು ವಾಚಿಸುವವರನ್ನು ನಾಯಿ ಎಂದು ಲಿಂಗಾಯಿತರು ಅಪಹಾಸ್ಯ ಮಾಡುತ್ತಿದ್ದರು ಎನ್ನುವುದನ್ನು ನಿರೂಪಿಸುತ್ತದೆ136. ಅದೇ ರೀತಿಯಲ್ಲಿ, ದಕ್ಷಿಣ ಭಾರತದ ‘ತೆಂಕಲಾಯ್ ಶ್ರೀ ವೈಷ್ಣವ’ರ ಮೂಲ ಪಠ್ಯಗಳು ವೇದಗಳನ್ನು ತಿರಸ್ಕರಿಸಿದವು ಮತ್ತು ತಮ್ಮದೇ ಆದ ವೇದಗಳನ್ನು ರಚಿಸಿದವು. ಅವುಗಳನ್ನು ‘ನಾಳಯೀರಪ್ರಬಂಧಮ್’ ಎಂದು ಕರೆಯಲಾಗಿದೆ137. ಹಾಗೆ ಮಧ್ಯಕಾಲೀನ ಧಾರ್ಮಿಕ ಚಳುವಳಿಗಳಲ್ಲಿ ವೈದಿಕ ತತ್ವ ಮತ್ತು ಅನುಭವದ ಪಾರುಪತ್ಯವನ್ನು ತಿರಸ್ಕರಿಸುವುದೇ ಅದರ ಪ್ರಮುಖ ಲಕ್ಷಣವಾಗಿದ್ದಂತೆ ತೋರುವುದು. ಮಹಾರಾಷ್ಟ್ರದ ‘ಮಹಾನುಭಾವರು’ ಮತ್ತು ಬಂಗಾಳದ ‘ಸಹಜೀಯರು’ ವೇದಗಳನ್ನು ತ್ಯಜಿಸಿದ್ದರು. ಹಾಗಾಗಿ ಕಬೀರ್ (15 ಮತ್ತು 16ನೇ ಶತಮಾನ) ಮತ್ತು ತುಕಾರಾಮ್ (17ನೇ ಶತಮಾನ) ಈರ್ವ ಸಂತರು ಹೆಸರು ಸಹ ವ್ಯಕ್ತಿಗತವಾಗಿ ಇದೇ ಹಾದಿಯಲ್ಲಿದೆ138. ಇತ್ತೀಚಿನದು ಎಂದರೆ 19ನೇ ಶತಮಾನದಲ್ಲಿ, ಅದರಲ್ಲಿಯೂ ದಯಾನಂದ ಸರಸ್ವತಿಯು, ‘ವೇದಗಳು ಎಲ್ಲ ಜಾÐನಗಳ ಭಂಡಾರ’ ಎಂದು ಪ್ರಪಂಚಕ್ಕೆ ಸಾರುವುದರಲ್ಲಿ ಮಗ್ನರಾಗಿದ್ದರೆ, ಅವುಗಳನ್ನು ರಾಮಕೃಷ್ಣರು ತಿರಸ್ಕರಿಸಿದರು, ಪರಮಹಂಸರ ಪ್ರಕಾರ “ಸತ್ಯವು ವೇದದ ಒಳಗಿಲ್ಲ, ಆದ ಕಾರಣ ತಂತ್ರದ ಪ್ರಕಾರ ನಡೆಯಬೇಕೇ ವಿನಹ, ವೇದಗಳಂತೆ ಅಲ್ಲ, ವೇದಗಳು ಅವುಗಳು ಉಚ್ಛಾರವಾಗುವ ಕಾರಣದಿಂದ ಅಪರಿಶುಧ್ಧವಾದವುಗಳು ಎನ್ನುತ್ತಾರೆ139. ಹೀಗಾಗಿ, ವಿಭಿನ್ನ ಧಾರ್ಮಿಕ ಪಂಥಗಳು ವೈದಿಕ ಮೂಲ ವಿಚಾರಗಳ ಕುರಿತು ಏಕರೀತಿಯ ನಿಲುವನ್ನು ಹೊಂದಿಲ್ಲ ಮತ್ತು ಪ್ರತ್ಯೇಕ ಪಂಥಗಳ ಸಂಬಂಧಿತ ಬರಹಗಳು ವೈರುಧ್ಯದ ದೃಷ್ಠಿಕೋನ ಹೊಂದಿರುವುದನ್ನು ನಾವು ಕಾಣಬಹುದು. ಹಾಗೆಯೇ, ಒಂದೇ ಮಾದರಿಯ ಅಖಂಡ ಹಿಂದುತ್ವವು ವೇದಗಳನ್ನು ಆಧರಿಸಿದ್ದನ್ನು ಒಂದು ಬಗೆಯ ಮಿಥ್ಯೆಯನ್ನಾಗಿ ನೋಡಬೇಕಾಗಿದೆ. ಕೆಲವು ವಿದ್ವಾಂಸರು ಮತ್ತು ಹಿಂದೂ ಬಲಪಂಥೀಯ ಗುಂಪುಗಳು ಎರಡೂ ಬಗೆಯವರು ಉದ್ದೇಶಪೂರ್ವಕವಾಗಿ ಇದನ್ನು ಪ್ರಚಾರಗೊಳಿಸಿದ್ದಾರೆ. ಇವರೆಲ್ಲರೂ ಧಾರ್ಮಿಕ ನಂಬಿಕೆಗಳೊಳಗಿನ ಬಹುತ್ವವನ್ನು ಕಡೆಗಣಿಸಿದ್ದಲ್ಲದೆ, ಆಚರಣೆಗಳೆಲ್ಲವನ್ನು ‘ಹಿಂದುತ್ವ’ ಎನ್ನುವ ಪದದ ಛತ್ರಛಾಯೆಯಡಿಯಲ್ಲಿ ಮುಚ್ಚಲಾಗಿದೆ. ಇದನ್ನು ವಸಾಹತುಶಾಹೀ ಕಾಲದಲ್ಲಿ ಆವಿಷ್ಕರಿಸಲಾಯಿತಾದರೂ ಕೂಡಾ, ಜೊತೆಗೆ ಅದರ ಶತಮಾನಗಳ ವಿಕಸನದ ಸುದೀರ್ಘ ಪ್ರಕ್ರಿಯೆಯನ್ನು ಸಹಾ ನಿರಾಕರಿಸಲಾಯಿತು.
6
ಹಿಂದೂ ಧರ್ಮದ ಕುರಿತ ಮತ್ತೊಂದು ಮಿಥ್ಯೆ ಯಾವುದೆಂದರೆ, ಅದನ್ನು ಪುನರ್ ಉಚ್ಚರಿಸುತ್ತಲೇ ಹಿಂದೂ ಧರ್ಮವು ಸಹಿಷ್ಣುತ ಗುಣ ಹೊಂದಿರುವ ಧರ್ಮ ಎಂಬ ಗುಣವನ್ನು ಅದರೊಡನೆ ಸೇರಿಸಲಾಗಿರುವುದು. ಇದರ ಮೂಲವನ್ನು ನಿಶ್ಚಿತವಾಗಿ ಭಾರತವನ್ನು ಕುರಿತ ಐರೋಪ್ಯ ಬರಹಗಳಲ್ಲಿ ಕಾಣಬಹುದಾಗಿದೆ. ಹಾಗೆ ಫ್ರಾನ್ಸಿಸ್ ಬರ್ನಿಯರ್ ತುಂಬಾ ಮುಖ್ಯನಾಗುತ್ತಾನೆ ಈ ನೆಲೆಯಲ್ಲಿ. ಆತ 1660ರ ದಶಕದಲ್ಲಿ ಭಾರತದಾದ್ಯಂತ ಸುತ್ತಾಡಿದ ಫ್ರೆಂಚ್ ವೈದ್ಯ. ಈತ ಹಿಂದೂಗಳ ಕುರಿತು ‘ಅವರು ತಮ್ಮ ಕಾನೂನನ್ನು ಸಾರ್ವತ್ರಿಕ ಎಂದು ಅಧಿಕಾರ ಪ್ರತಿಪಾದಿಸುವುದಿಲ್ಲ’ ಎನ್ನುತ್ತಾನೆ140. ‘ಇಮ್ಯಾನುಯೆಲ್ ಕಾಂಟ್’ (1724-1804), ’ಭಾರತೀಯರು ಇತರ ಧರ್ಮಗಳನ್ನು ದ್ವೇಷಿಸುವುದಿಲ್ಲ’ ಎನ್ನತ್ತಾನೆ141. ಅಂತಹದೇ ದೃಷ್ಠಿಕೋನಗಳಲ್ಲಿ ಹೊಂದಿದವರಲ್ಲಿ ಪೌರಾತ್ಯವಾದಿಯಾದ ‘ವಿಲಿಯಂ ಜೋನ್ಸ್’ ಅವರನ್ನು ಸಹ ಕಾಣಬಹುದು. ಅಲ್ಲದೇ 19ನೇ ಶತಮಾನದ ಧಾರ್ಮಿಕ ಸುಧಾರಣಾವಾದಿಗಳಲ್ಲಿಯೂ ಈ ಲಕ್ಷಣವನ್ನು ಕಾಣಬಹುದು. ಉದಾಹರಣೆಗೆ, ವಿವೇಕಾನಂದ (1863-1904) ಋಗ್ವೇದದ ಅತ್ಯಂತ ಪ್ರಸಿದ್ಧ ಉಧೃತ ಭಾಗವಾದ, ‘ಏಕಮ್ ಸತ್ ವಿಪ್ರಾಹ ಬಹುಧಾ ವದಂತಿ’ಯ ಮೂಲಕ ತಮ್ಮ ದೃಷ್ಠಿಕೋನದ ಭಾರತವನ್ನು ಸಮರ್ಥಿಸಲು, ‘ಭಾರತವೊಂದೇ ... ಸಹಿಷ್ಣುತೆಯ ಭೂಮಿ’ ಎನ್ನುತ್ತಾರೆ. ಆದರೆ ಈ ದೃಷ್ಠಿಕೋನವು ವಾಸ್ತವವಾಗಿ ಅವರ ನೋಟಕ್ಕೆ ಸರಿ ಹೊಂದದೆ, ‘ಎಲ್ಲ ಧಾರ್ಮಿಕ ನಂಬಿಕೆಗಳು ಸಮಾನ ಆದರೆ ಹಿಂದೂ ಧರ್ಮವು ಹೆಚ್ಚು ಸಮಾನವಾದುದು’ ಎಂಬ ಅವರ ದೃಷ್ಠಿಯನ್ನು ಪುಷ್ಠೀಕರಿಸುವುದಿಲ್ಲ142. ಋಗ್ವೇದದ ಉಧೃತ ಭಾಗವನ್ನು ವಿದ್ವಾಂಸನೊಬ್ಬ ಗಮನಿಸುವ ಹಾಗೆ,143, ‘ಬಹಳ ಹಿ0ದಿನಿಂದಲೂ ಕೂಡಾ ಇದನ್ನು ಯಾರಿಗೆ ಹೇಗೆ ಬೇಕೋ ಹಾಗೆ ಪರಿಸ್ಥಿತಿ ಮತ್ತು ಸಂದರ್ಭವನ್ನು ನೋಡಿ ಹಿಂಡಲಾಗಿದೆ ಅಥವಾ ಬಳಸಲಾಗಿದೆ, ಆದರೆ ವಾಸ್ತವವಾಗಿ ಇಂತಹ ಕಾಲಜ್ನಾನ ಅಥವಾ ಭವಿಷ್ಯವಾಣಿ ಸತತವಾಗಿ ತಪ್ಪು ಮತ್ತು ದೋಷಪೂರಿತವೆಂದು ಸಾಬೀತಾಗಿದೆ. ಆದರೆ ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಅನೇಕ ವಿದ್ವಾಂಸರು, ಮುಖ್ಯವಾಗಿ ಅಮಥ್ರ್ಯ ಸೇನ್,144 ಅವರು ಹಿಂದೂ ಧರ್ಮದ ಸಹಿಷ್ಣುತೆಯ ಕುರಿತು ಹೊಗಳಿ ಹಾಡಿದ್ದಾರೆ ಹಾಗೂ ಪ್ರಾಚೀನ ಭಾರತದ ಒಳಗೊಳ್ಳುವಿಕೆಯನ್ನು(ಇನ್ಕ್ಲೂಸಿವ್ನೆಸ್) ಕುರಿತು ಸಾಕಷ್ಟು ಮಾತನಾಡಿದ್ದಾರೆ. ಭಾರತದಲ್ಲಿ ಧಾರ್ಮಿಕ ಪಂಥಗಳು ಕೆಲವು ಹಂತದವರೆಗೆ ಪರಸ್ಪರ ಹೊಂದಾಣಿಕೆಯನ್ನು ಹೊಂದಿದ್ದವು ಎನ್ನುವುದು ನಿಜವೇ ಆದರೂ ಮತ್ತು ಹಾಗಾಗಿ ಬುದ್ಧ ಮತ್ತು ಮೊದಲ ಜೈನ ತೀರ್ಥಂಕರನಾದ ಆದಿನಾಥ (ರಿಷಭ), ಇಬ್ಬರೂ ವಿಧರ್ಮಗಳೊಂದಿಗೆ ಅಥವಾ ಅಸಾಂಪ್ರದಾಯಿಕ ಧರ್ಮಗಳೊಂದಿಗೆ ಸಂಬಂಧ ಹೊಂದಿ ಪಾಖಂಡಿ ಎಂಬ ಬಿರುದನ್ನು ಪಡೆದರೂ ಕೂಡಾ ಅವರನ್ನು ವಿಷ್ಣುವಿನ ಅವತಾರಗಳೆಂದು ಪರಿಗಣಿಸಲಾಯಿತು145, ಮತ್ತು ಅವರ ಆರಾಧಕರಿಗೆ ಅಪೇಕ್ಷಿತ ರೂಪದಲ್ಲಿ ಕ್ರಿಯಾವಿಧಿಯ ಸ್ವರೂಪವನ್ನು ಒದಗಿಸಿ ರೂಪಕಾಮಗಳಿಂದ(‘ರೂಪಕಾಮೋ ಯಜೇದ್ ಬುದ್ಧಂ’) ಬುಧ್ಧನನ್ನು ಪೂಜಿಸಬೇಕೆನ್ನಲಾಯಿತು146. ಆದರೆ ಶಿವನು ಬುದ್ಧ ಅವತಾರದೊಡನೆ ಹೋರಾಡಲು ಭೂಮಿಯ ಮೇಲೆ ಶಂಕರನ ರೂಪದಲ್ಲಿ ಅವತರಿಸಿದ್ದ ಎಂಬುದನ್ನು ಮರೆಸಲಾಯಿತು147, ಮತ್ತು ಶಿವನ ಅನುಯಾಯಿಗಳು 1198-1278ರ ಸುಮಾರಿಗೆ, ‘ವೈಷ್ಣವ ತತ್ವಜ್ಞಾನಿಯಾದ ‘ಮಾಧು’ ಅಥವಾ ‘ಮಾಧವ’ನನ್ನು ವಿರೋಧಿಸಿದರು ಹಾಗೂ ಹಿಂಸಿಸಿದರು148. ಇದೇ ರೀತಿಯಲ್ಲಿ, ವೇದಾಂತ ತತ್ವಜ್ಞಾನಿಯಾದ ‘ಮಾಧವ ಆಚಾರ್ಯ’ನು (14ನೇ ಶತಮಾನ) ಅನೇಕ ಸಂದರ್ಭಗಳಲ್ಲಿ ತಮ್ಮದೇ ನಿಲುವಿಗೆ ವಿರೋಧ ಉಂಟುಮಾಡುವಂತಹ ವಿಚಾರಗಳನ್ನು ಸಹಿಸಿ ಆದರ್ಶಪ್ರಾಯವಾದ ತಾಳ್ಮೆಯನ್ನು ತೋರಿಸಿದ್ದನ್ನು ಹೇಳಲಾಗುತ್ತದೆ. ಇವನ ಕೃತಿ ‘ಸರ್ವದರ್ಶನಸಂಗ್ರಹ’ವು (ಎಲ್ಲ ದರ್ಶನ ವ್ಯವಸ್ಥೆಗಳ ಸಂಗ್ರಹ) ಚಾರ್ವಾಕ ಪಂಥದೊಡನೆ ಆರಂಭವಾಗಿ, ಮುಂದೆ ಇದನ್ನು ಕೃತಿಯು ಟೀಕಿಸುತ್ತಾ ಶಂಕರರ ಅದ್ವೈತದೊಡನೆ ಕೊನೆಗೊಳ್ಳುವುದು, ಉತ್ತುಂಗಕ್ಕೇರಿದ ಮತ್ತು ಅದೇ ರೀತಿಯಲ್ಲಿ ಕೊನೆಗೊಂಡ ಎಲ್ಲ ‘ತತ್ವಶಾಸ್ತ್ರ ವ್ಯವಸ್ಥೆಗಳ ಅಂತಿಮ ತೀರ್ಪಿನಂತೆ’149. ಭಾರತೀಯ ಸಾಂಪ್ರದಾಯಿಕ ಮಂಡನಾ ಪದ್ಧತಿಯಲ್ಲಿ, ವಾದಗಳು ಹೇಗೇ ಇದ್ದರೂ ಕೂಡಾ, ವಿರೋಧಿ ನಿಲುವುಗಳು ಖಂಡಿಸಲು ಪ್ರಯತ್ನಿಸುವ ಮೊದಲೇ ಅವುಗಳನ್ನು ಮಂಡಿಸುವ ಕ್ರಮವೇನಿತ್ತು ಅದು ಇಲ್ಲಿ ಕಳೆದುಹೋಗಿರುವುದನ್ನು ಕಾಣಬಹುದು. ಆದಾಗ್ಯೂ ನಾವು ಈ ನಿದರ್ಶನಗಳನ್ನು ಒಪ್ಪಿ ಅವುಗಳು ಸೂಚಿಸುತ್ತಿರುವ ಹಾಗೆ ಬ್ರಾಹ್ಮಣೀಯತೆಯು ಪಾಖಂಡೀ ಅಥವಾ ಅಸಂಪ್ರದಾಯಿಕ ಧ್ಮರ ಮತ್ತು ನಂಬಿಕೆಗಳಿಗೆ ಸ್ಥಳಾವಕಾಶ ನೀಡಿದೆಯೆಂದು ಅಂಗೀಕರಿಸಿದರೂ ಕೂಡಾ, ನಮಗೆ ಅಲ್ಲಲ್ಲಿ ಸಿಗುವ ಸಾಕಷ್ಟು ಐತಿಹಾಸಿಕ ಸಾಕ್ಶ್ಯಗಳು ಭಾರತವು ಧಾರ್ಮಿಕ ಸಹಿಷ್ಣುತೆಯ ನೆಲವಾಗಿತ್ತು ಎಂಬ ರೂಢರೂಕ್ಶ ಮಾದರಿ ಅಥವಾ ಸ್ಟೀರಿಯೋಟೈಪ್ ಅನ್ನು ಪ್ರಬಲವಾಗಿ ಪ್ರಶ್ನಿಸುತ್ತವೆ. ಜಾತಿ ವ್ಯವಸ್ಥೆಯನ್ನು ಹೊಂದಿರುವ ಮತ್ತು ಅಸ್ಪøಷ್ಯತೆಯನ್ನು ಗುಣಲಕ್ಷಣವಾಗಿ ಹೊಂದಿರುವ ಧರ್ಮವಾಗಿಯೂ ಇದು ಅಂತರ್ಗತವಾಗಿ ಸಹಿಷ್ಣುತೆಯನ್ನು ಪ್ರೋತ್ಸಾಹಿಸುವಲ್ಲಿ ಅಸಮರ್ಥವಾಗಿದೆ. ವೇದಮೂಲದ ಪ್ರಮಾಣ ಮತ್ತು ಮಾನ್ಯತೆಯನ್ನು ಹೊಂದಿದ್ದಾಗ್ಯೂ ಕೂಡಾ ವೈದಿಕತೆ, ಅನೇಕ ಬ್ರಾಹ್ಮಣ ಸಂಪ್ರದಾಯಗಳು ಮತ್ತು ಹಲವು ಪಂಥಗಳ ನಡುವೆ ಹಗೆತನ ಇರುವುದನ್ನು ಕೂಡಾ ಈ ಆಕರಗಳು ತೋರಿಸುತ್ತವೆ. ಇವುಗಳಿಗೆ ವೇದಗಳಲ್ಲಿ ಅಧಿಕೃತತೆ ದೊರೆತಿದ್ದರೂ ಅವೈದಿಕ ಪಂಥಗಳ ಬಹುತ್ವವನ್ನು ಇದು ತಿರಸ್ಕರಿಸುತ್ತದೆ. ಹೀಗೆ ಈ ಕಾರಣದಿಂದ, ದಕ್ಷನ ಐತಿಹ್ಯವು ಋಗ್ವೇದದ ಹಲವು ಬ್ರಾಹ್ಮಣಗಳ (ತೈತ್ತಿರೀಯ, ಶತಪಥ, ಐತ್ತರೇಯ, ಗೋಪಥ) ಮೂಲಕ ಮಹಾಭಾರತ ಹಾಗೂ ಪುರಾಣಗಳವರೆಗೆ (ಭಾಗವತ, ಕೂರ್ಮ, ದೇವೀ-ಭಾಗವತ) ವಿಕಾಸಗೊಂಡಿತು. ಹೀಗಾಗಿ ಇದನ್ನು ವಿದ್ವಾಂಸರು ವೈಷ್ಣವ ಮತ್ತು ಶೈವ ಪಂಥಗಳ ನಡುವಿನ ಸಂಘರ್ಷದ ನೀಳ್ಗತೆ ಎಂದು ಅರ್ಥೈಸಿದ್ದಾರೆ150. ಗಂಗಾ ತೀರದ ‘ಹರದ್ವಾರ’ದ ಬಳಿ ಇರುವ ‘ಕನಕಹಾಳ’ ಎಮದು ಕರೆಯಲ್ಪಡುವ ಪವಿತ್ರ ತಾಣದ ಮೇಲೆ ನಿಯಂತ್ರಣ ಸಾಧಿಸಲು ಎರಡು ಪಂಥಗಳ ಅನುಯಾಯಿಗಳ ನಡುವೆ ಸಂಘರ್ಷ ಎಂದೂ ಸಹ ವ್ಯಾಖ್ಯಾನಿಸಲಾಗಿದೆ151.
ವೈದಿಕ ಪಂಥಗಳ ನಡುವೆ ಇದ್ದ ಸ್ಪರ್ಧೆ ಸಂಬಂಧಿಸಿದಂತೆ ಪುರಾಣಗಳು ಸಾಕಷ್ಟು ಸಾಕ್ಷಿಯನ್ನು ಒದಗಿಸುವುವು. ವಿಷ್ಣುಪುರಾಣವು ಶಿವ ಮತ್ತು ಬ್ರಹ್ಮನ ಮೇಲೆ ವಿಷ್ಣುವಿನ ಅಧಿಪತ್ಯವನ್ನು ಹೇಳುತ್ತದೆ152. ಅದೇ ವೇಳೆಯಲ್ಲಿ ಸೌರಪುರಾಣವು ಶಿವನ ಹಿರಿಮೆಯನ್ನು ಸಾಬೀತು ಪಡಿಸಲು ‘ಸುದರ್ಶನಚಕ್ರ’ವನ್ನು ವಿಷ್ಣುವಿಗೆ ನೀಡಿದುದಾಗಿ ಹೇಳುತ್ತದೆ153. ಚರಿತ್ರೆಯ ಅನೇಕ ಅವಧಿಗಳಲ್ಲಿ ಶೈವ ಮತಾಂಧತೆಯು, ತಾತ್ವಿಕ ವ್ಯತ್ಯಾಸಗಳು ಮತ್ತು ಸಂಘರ್ಷಗಳನ್ನು ಮೀರಿ ನಡೆದಿರುವುದು ಕಂಡುಬರುತ್ತದೆ. ‘ರಾಮಾನುಜ’ರಿಗೆ (1017-1137) ಕಿರುಕುಳ ನೀಡಿ ಅವರು ‘ಶ್ರೀರಂಗಂ’ನಲ್ಲಿದ್ದ ತಮ್ಮ ಧಾರ್ಮಿಕತೆಯ ಕೇಂದ್ರ ಚಟುವಟಿಕೆಯನ್ನು 1098ರಲ್ಲಿ ನಿಲ್ಲಿಸಿ, ಸುಮಾರು 25 ವರ್ಷಗಳ ಕಾಲ ಕರ್ನಾಟಕದ ಮೈಸೂರಿನಲ್ಲಿರುವಂತೆ ಮಾಡಿದ್ದು ಇಂತಹ ಒಂದು ಉದಾಹರಣೆಗೆ154. 2ನೇ ಕುಲೋತ್ತುಂಗನ ಚೋಳನ ಕಾಲದಲ್ಲಿ ವಿಷ್ಣುವಿನ ಮೂರ್ತಿಯನ್ನು ‘ಚಿದಂಬರಮ್’ನ ದೇವಾಲಯದ ಆವರಣದಿಂದ ತೆಗೆದು ಹಾಕಿದ್ದು ಮತ್ತು ವೈಷ್ಣವರೊಂದಿಗೆ ಮುಕ್ತವಾಗಿದ್ದ ಶೈವರ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಷರತ್ತನ್ನು ಸಭೆ ನಿರ್ಣಯಿಸಿದ ಅನೇಕ ನಿದರ್ಶನಗಳು ಈ ಮೇಲಿನ ಹೇಳಿಕೆಗಳಿಗೆ ಪೂರಕವಾಗಿದೆ.155
ಶೈವ ಮತ್ತು ವೈಷ್ಣವರ ನಡುವಿನ ಪರಸ್ಪರ ವೈಷಮ್ಯದ ಕುರಿತು ಇನ್ನೂ ಹಲವಾರು ಉದಾಹರಣೆಗಳು ಇವೆ. ಆಕರಗಳು ವೈದಿಕ ಧರ್ಮ ಮತ್ತು ವೈವಿಧ್ಯದ ಧಾರ್ಮಿಕ ಪಂಥಗಳ ನಡುವಿನ ಸಂಘರ್ಷವನ್ನು ಎತ್ತಿಹಿಡಿಯುತ್ತವೆ. ವೈದಿಕ ಧರ್ಮ ಮತ್ತು ಜೈನ ಧರ್ಮದ ನಡುವಿನ ಹಗೆತನಕ್ಕೆ ಆರಂಭಿಕ ಸಾಕ್ಷಿಯು ಜೈನ ಮೂಲ ಗ್ರಂಥವಾದ ‘ಅಯರಂಗಸುತ್ತಮ್’ನಲ್ಲಿ ದೊರೆಯುವುದು. ಅದರ ಪ್ರಕಾರ ಶೈವ ಬೇಹುಗಾರರ ಅನುಮಾನಕ್ಕೆ ಆಸ್ಪದ ನೀಡದ ಹಾಗೆ ಜೈನ ಸನ್ಯಾಸಿಗಳು ದಿನದಲ್ಲಿ ತಾವೇ ಬಚ್ಚಿಟ್ಟುಕೊಳ್ಳುತ್ತಿದ್ದರು ಮತ್ತು ರಾತ್ರಿಯಲ್ಲಿ ಪ್ರಯಾಣಿಸುತ್ತಿದ್ದರು156. ಅದೇ ರೀತಿಯಲ್ಲಿ, ಕೌಟಿಲ್ಯನ ಅರ್ಥಶಾಸ್ತ್ರವು, ‘ಶಾಕ್ಯ’ರು ಮತ್ತು ‘ಆಜೀವಿಕ’ರಂತಹ ಅವೈದಿಕ ಪಂಥೀಯರನ್ನು ತಿರಸ್ಕಾರದಿಂದ ‘ವ್ರಸಲ’ ಅಥವಾ ‘ಪಾಷಂಡಿ’ಗಳು ಎಂದು ವಿವರಿಸುತ್ತದೆ. ತಮ್ಮ ನಿವಾಸಗಳನ್ನು ಸ್ಮಶಾನದ ಕೊನೆ ಅಥವಾ ಬಳಿ ಹೊಂದಿದ್ದವರು (ಪಾಷಂಡಚಂಡಾಲಾನಾಮ್ ಸ್ಮಶಾನಾಂತೇ ವಾಸಃ) ಮತ್ತು ಇಂತಹವರನ್ನು ದೈವ ಹಾಗೂ ಮಾನವರ ಗೌರವಾರ್ಥ ನಡೆಯುವ ಕಾರ್ಯಗಳಿಗೆ ಆಹ್ವಾನಿಸಿದರೆ ಬೃಹತ್ ಪ್ರಮಾಣದ ದಂಡವನ್ನು ವಿಧಿಸುತ್ತಿದ್ದರು157. ಆದರೂ ಅಶೋಕನ ಶಾಸನದಲ್ಲಿರುವ ಪಾಷಂಡ ಪದವು ನಿಕೃಷ್ಠವಾದ ನಿಷೇಧಾರ್ಥಕ ಅರ್ಥವನ್ನು ಹೊಂದಿ ಬಳಕೆಗೊಂಡಂತೆ ಕಾಣಿಸುವುದಿಲ್ಲ, ಏಕೆಂದರೆ ಆತ ‘ಧರ್ಮಾಮಹಾಮಾತ’್ರರನ್ನು ನೇಮಿಸಿದ್ದು ಕೇವಲ ಬೌದ್ಧ ಸಂಘ, ಬ್ರಾಹ್ಮಣ ಮತ್ತು ಆಜೀವಿಕರ ವ್ಯವಹಾರಗಳನ್ನು ನೋಡಿಕೊಳ್ಳಲಷ್ಟೇ ಅಲ್ಲ, ಬದಲು ಅದರ ಜೊತೆಗೆ ಪಾಷಂಡರನ್ನು ಒಳಗೊಂಡ ಇತರ ಧಾರ್ಮಿಕ ಪಂಥಗಳನ್ನೂ ಸಹ ನೋಡಿಕೊಳ್ಳಲೂ ಕೂಡಾ158.
ಅಶೋಕನ ನೀತಿಗಳಲ್ಲಿರುವ ಅನೇಕ ಲಕ್ಷಣಗಳು ಆರಂಭಿಕ ಹಂತದಲ್ಲಿ ಅಲ್ಲದಿದ್ದರೂ ನಂತರದ ಕಾಲದಲ್ಲಿ ನಂಬಿರುವಂತೆ ಭಿನ್ನಾಭಿಪ್ರಾಯಗಳೊಡನೆ ನಡೆದ ಸಹಿಷ್ಣುತೆಯಾಗಿದೆ. ಹೆಸರಾಂತ ವ್ಯಾಕರಣಕಾರ ‘ಪತಂಜಲಿ’ (ಕ್ರಿ.ಪೂ 2ನೇ ಶತಮಾನ) ಗಮನಿಸಿರುವಂತೆ ಹಾವು ಮತ್ತು ಮುಂಗುಸಿಯಂತೆ, ‘ಶ್ರಮಣರು ಮತ್ತು ಬ್ರಾಹ್ಮಣರು ‘ನಿರಂತರ ಶತ್ರುಗಳು’ (ವಿರೋಧಃ ಶಾಶ್ವತೀಕಃ)159. 3ನೇ ಶತಮಾನದ ಬೌದ್ಧ ಸಾಹಿತ್ಯ ‘ದಿವ್ಯಾವಧಾನ’ವು ಪುಷ್ಯಮಿತ್ರ ಶುಂಗನನ್ನು ಬೌದ್ಧ ಧರ್ಮಿಯರ ದೊಡ್ಡ ಪೀಡಕನೆನ್ನುತ್ತಾ, ಚತುರಂಗ ಸೇನೆಯೊಡನೆ ಸ್ತೂಪಗಳನ್ನು ನಾಶಮಾಡಲು, ವಿಹಾರಗಳನ್ನು ಸುಡಲು ಮತ್ತು ‘ಶಾಖಲ’ದಷ್ಟು (ಸಿಯಾಲ್ಕೋಟ್ನ ಹಳೆಯ ಹೆಸರು) ದೂರಕ್ಕೂ ಹೋಗಿ, ಅಲ್ಲಿ ಅವನು ಪ್ರತಿ ಶ್ರಮಣನ ತಲೆಗೂ 100 ದಿನಾರ್ಗಳ ಬಹುಮಾನವನ್ನು ಘೋಷಿಸಿದವನು ಎಂದು ವಿವರಿಸುತ್ತದೆ160. ಬೌದ್ಧರು ಮತ್ತು ಜೈನರೊಡನೆ ಈ ವೈದಿಕರ ದ್ವೇಷವು ಆರಂಭಿಕ ಮಧ್ಯಕಾಲೀನದವರೆಗೆ ಹೆಚ್ಚು ತೀವ್ರವಾಗಿದ್ದಂತೆ, ಪಠ್ಯಗಳ ಸಾಕ್ಷಿಗಳು ತತ್ವಶಾಸ್ತ್ರೀಯ ಹಗೆತನ ಮತ್ತು ಅದರ ಅನುಯಾಯಿಗಳಿಗೆ ಕೊಟ್ಟ ಕಿರುಕುಳದ ದ್ಯೋತಕದಂತೆ ತೋರುತ್ತವೆ. 7ನೇ ಶತಮಾನದ ‘ಉದ್ಯೋತಕರ’ ಹೇಳುವಂತೆ ಬೌದ್ಧ ತರ್ಕಶಾಸ್ತ್ರಜ್ಞರಾದ ‘ನಾಗಾರ್ಜುನ’ ಮತ್ತು ‘ದಿನ್ನಾಗ’ರ ವಾದಗಳನ್ನು ಖಂಡಿಸಲಾಯಿತು, ಅವನ ವಾದಗಳನ್ನು ‘ವಾಚಸ್ಪತಿ ಮಿಶ್ರ’ನು (9ನೇ ಶತಮಾನ) ಪುನರ್ಬಳಸಿದನು. ‘ಉದಯನ’, ಮತ್ತೊಬ್ಬ ಬೌದ್ಧ ವಿರೋಧಿ ತತ್ವಶಾಸ್ತ್ರಜ್ಞ ಮತ್ತು’ ನವ್ಯನ್ಯಾಯ ಪರಂಪರೆ’ಯ ಸ್ಥಾಪಕ. ಆತನು ‘ಬೌದ್ಧಧಿಕ್ಕಾರಗ್ರಂಥ’ ಎಂದು ಕರೆಯಲಾಗುವ ತನ್ನ ಕೃತಿಯಾದ ‘ಆತ್ಮತತ್ವವಿವೇಕ’ದ ಮೂಲಕ ಬೌದ್ಧ ಧರ್ಮದ ತತ್ವಗಳ ಮೇಲೆ ತೀವ್ರ ಆಕ್ರಮಣವನ್ನು ಆರಂಭಿಸಿದನು. ಇದರ ಮುಖ್ಯ ಉದ್ದೇಶ ಬೌದ್ಧರ ಆಲೋಚನೆಗಳನ್ನು ಧಿಕ್ಕರಿಸುವುದಾಗಿತ್ತು. ನ್ಯಾಯ ಪರಂಪರೆಯಲ್ಲದೇ ಹೊರಗಿನ ಅನೇಕ ವೈದಿಕ ತತ್ವಶಾಸ್ತ್ರಜ್ಞರು ಬೌದ್ಧಧರ್ಮ ಮತ್ತು ಜೈನ ಧರ್ಮದ ಮೇಲೆ ಆಕ್ರಮಣವೆಸಗಿದ್ದಾರೆ. ಉದಾಹರಣೆಗೆ, 8ನೇ ಶತಮಾನದ ದಕ್ಷಿಣ ಭಾರತೀಯ ದ್ವಂದ್ವವಾದೀ ತತ್ವ ಮೀಮಾಂಸಕ ‘ಕುಮಾರಿಲಭಟ’್ಟನು ವಿಶೇಷವಾಗಿ ಬೌದ್ಧ ಧರ್ಮ ಮತ್ತು ಜೈನ ಧರ್ಮದಂತಹ ಅವೈದಿಕ ಧಾರ್ಮಿಕ ತತ್ವ ಮತ್ತು ಚಳುವಳಿಗಳ ದೃಷ್ಠಿಕೋನವನ್ನು ಖಟುವಾಗಿ ತಿರಸ್ಕರಿಸುತ್ತಾನೆ. ಏಕೆಂದರೆ ಅವನ ಪ್ರಕಾರ ವೈದಿಕ ವಿಚಾರಧಾರೆಗೆ ವಿರುದ್ಧವಾಗಿರುವ ಯಾವುದೇ ವಿಚಾರವನ್ನಾದರೂ ಕೂಡಾ ತಿರಸ್ಕರಿಸಬೇಕು ಎನ್ನುವ ಕಾರಣದಿಂದ. ಅದನ್ನು ಆತ, ‘ವಿರೋಧೇ ತ್ವ ಅನಪೇಕ್ಷ್ಯಂ ಸ್ಯಾದ್’161 ಎನ್ನುತ್ತಾನೆ. ಆತ ಇನ್ನೂ ಮುಂದೆ ಹೋಗಿ ಹೇಳುವಂತೆ, ‘ಅವರೆಲ್ಲ ಕೃತಘ್ನ ಮತ್ತು ಪರಭಾರೆಯಾದ ಮಕ್ಕಳು, ಅವರು ತಮ್ಮ ಪೋಷಕರಿಗೆ ನೀಡಿದ್ದ ಮಾತನ್ನು ಒಪ್ಪಲು ನಿರಾಕರಿಸಿದವರು’, ಏಕೆಂದರೆ ಅವರು, ‘ಅಹಿಂಸಾ ತತ್ವವನ್ನು ವೈದಿಕ ಧರ್ಮದ ವಿರೋಧಕ್ಕೆ ತಂತ್ರವಾಗಿ ಬಳಸಿದವರು’162 ಎನ್ನುತ್ತಾನೆ. ಶಂಕರಾಚಾರ್ಯನು ಕುಮಾರಿಲ ಭಟ್ಟನ ಕಿರಿಯ ಸಮಕಾಲೀನ. ಆತ ಇನ್ನೂ ಹೆಚ್ಚು ಅನಮ್ಯ, ಗಡಸು ಹಾಗೂ ಹೊಂದಾಣಿಕೆಗೆ ಒಪ್ಪದವನು. ಶಂಕರಾಚಾರ್ಯನು ವೇದದಿಂದ ಹೊರಗಿರುವ ಎಲ್ಲ ಪಂಥಗಳನ್ನು ವರ್ಗೀಕರಿಸಿ ತಿರಸ್ಕರಿಸುತ್ತಾ, ಭಾಗವತಗಳು, ಪಂಚರಾತ್ರಿಗಳು163, ಮತ್ತು ಬುದ್ಧನನ್ನು ‘ಅಸಂಬದ್ಧಪ್ರಲಾಪಿತ್ವ’ ಅಥವಾ ಅಸಂಬಧ್ಧವಾಗಿ ಹರಟುವ ಮತ್ತು ತನ್ಮೂಲಕ ಉದ್ದೇಶಪೂರ್ವಕವಾಗಿ ಮತ್ತು ದ್ವೇಷದಿಂದ ಮಾನವರನ್ನು ಗೊಂದಲದ ಸ್ಥಿತಿಗೆ ಕರೆದೊಯ್ಯುವವರು’164 ಎಂದು ದೋಷಾರೋಪಿಸುತ್ತಾನೆ. ಅದೇ ರೀತಿಯಲ್ಲಿ 16ನೇ ಶತಮಾನದ ಬಂಗಾಳಿ ಭಗವದ್ಗೀತಾದ ವ್ಯಾಖ್ಯಾನಕಾರ ಮಧುಸೂದನ ಸರಸ್ವತಿಯು ಬೌದ್ಧಧರ್ಮದ ತತ್ವಗಳು, ಭೌತವಾದೀ ಚಾರ್ವಾಕ ಪರಂಪರೆಯವರು ಮತ್ತಿತರರು ಮ್ಲೇಚ್ಛರಿಗೆ ಸಮಾನ ಎನ್ನುತ್ತಾ, ಅವರನ್ನು ತನ್ನ ಪರಿಗಣನೆಯಿಂದ ಹೊರಹಾಕುವನು165.
ಸಾಂಪ್ರದಾಯಿಕ ತತ್ವಶಾಸ್ತ್ರಜ್ಞರ ವಿಚಾರಧಾರೆ ಮತ್ತು ಮನೋಭಾವವು ಪೌರಾಣಿಕ ಪಠ್ಯಗಳಲ್ಲೂ ಪ್ರತಿಧ್ವನಿತವಾಗಿದೆ. ಉದಾಹರಣೆಗೆ ‘ಸೌರಪುರಾಣ’ವು ಚಾರ್ವಾಕರು, ಬೌದ್ಧರು ಮತ್ತು ಜೈನರನ್ನು ರಾಜ್ಯದ ಒಳಗೆ ವಾಸ್ತವ್ಯ ಹೂಡಲು ಬಿಡಬಾರದು ಎನ್ನುತ್ತದೆ166. ಅದೇ ರೀತಿಂiÀiಲ್ಲಿ, ಆರಂಭಿಕ ಮಧ್ಯಕಾಲೀನ ಅಥವಾ ಅರ್ಲಿ ಮಿಡೀವಲ್ ಪಠ್ಯಗಳಲ್ಲಿ ಬೌದ್ಧ ಮತ್ತು ಜೈನ ಧರ್ಮವನ್ನು ಅತ್ಯಂತ ತುಛ್ಛವಾಗಿ ಚಿತ್ರಿಸಲಾಗಿದೆ. 7ನೇ ಶತಮಾನದ ಪಲ್ಲವ ದೊರೆ ಮಹೇಂದ್ರವರ್ಮನ್ ರಚಿಸಿದ ಪ್ರಹಸನ, ‘ಮತ್ತವಿಲಾಸ ಪ್ರಹಸನ’ವು, ‘ಬೌದ್ಧರನ್ನು ಆನೈತಿಕರು, ನಂಬಿಕೆಗೆ ಅನರ್ಹರು ಮತ್ತು ಭೂಮಿಯ ಮೇಲಿನ ಕಲ್ಮಷ’ ಎನ್ನುತ್ತದೆ. ಇಲ್ಲಿನ ದೃಶ್ಯವೊಂದರಲ್ಲಿ, ಬೌದ್ಧ ಸನ್ಯಾಸಿಯನ್ನು ಭ್ರಷ್ಠ ಎಂದು ಕರೆಯುತ್ತಾ, ‘ಏಕೆ ಬುದ್ಧನು ಮಹಿಳೆಯನ್ನು ಸ್ವಾಧೀನ ಪಡಿಸಲು ಮತ್ತು ಸುರೆಯನ್ನು ಕುಡಿಯಲು ಅನುಮೋದಿಸಲಿಲ’್ಲ (ಕಿನ್ನುಖಲು ಸ್ತ್ರಿಪರಿಗ್ರಹಹ ಸುರಾಪಾನವಿಧಾನಂಚ ನ ದೃಷ್ಟಮ್ ?) ಎನ್ನುತ್ತದೆ167. 11ನೇ ಶತಮಾನದಲ್ಲಿ ಕೃಷ್ಣ ಮಿಶ್ರನಿಂದ ರಚಿತವಾದ ನಾಟಕ ‘ಪ್ರಬೋಧಚಂದ್ರೋದಯ’ವು ಬೌದ್ಧರು ಮತ್ತು ಜೈನರೀರ್ವರನ್ನು ‘ತಾಮಸಿಕ’ ಅಥವಾ ಕತ್ತಲಿನಿಂದ ಹುಟ್ಟಿದವರು ಎಂದು ವಿವರಿಸುತ್ತದೆ. ಹಾಗೆ ಬೌದ್ಧ ಸನ್ಯಾಸಿಯು ಪ್ರಾಪಂಚಿಕ ಸುಖಗಳನ್ನು ಅನುಭೋಗಿಸುತ್ತಿದ್ದದ್ದನ್ನು168 ಮತ್ತು ಜೈನ ಸನ್ಯಾಸಿಯು ನಗ್ನನಾಗಿದ್ದು, ನಿವೀರ್ಯ ಅಥವಾ ಗಂಡಸುತನ ಶೂನ್ಯನಾಗಿದ್ದು, ಆತನ ತಲೆಯ ಕೂದಲು ಕೀಳಲಾಗಿತ್ತು ಮತ್ತು ನವಿಲಿನ ಗರಿಯನ್ನು ತನ್ನ ಕೈಯಲ್ಲಿ ಹಿಡಿದು ಸಾಗುತ್ತಿದ್ದ ಎಂದು ವರ್ಣಿಸುತ್ತದೆ169.
ಅಸಾಂಪ್ರದಾಯಿಕ ಮತ ಹಾಗೂ ಸಂಪ್ರದಾಯಗಳು ಪೂರ್ಣ ಪ್ರಮಾಣದಲ್ಲಿ ವಿನಿಮಯ ಅಥವಾ ಪರಸ್ಪರ ಕೊಡುಕೊಳುಗೆ ಮಾಡಿಕೊಳ್ಳುತ್ತಿದ್ದವು. 12ನೇ ಶತಮಾನದ ಜೈನ ವಿದ್ವಾಂಸ ‘ಹೇಮಚಂದ್ರ’ನು, ಸ್ಮ್ರತಿಕಾರ ಮನು ಹೇಳಿರುವ ಪ್ರಾಣಿಬಲಿಯನ್ನು ಬೆಂಬಲಿಸುವಂತಹ ಸೂಕ್ತಗಳನ್ನು ‘ಹಿಂಸಾಶಾಸ್ತ್ರ’ದ ಭಾಗ ಎಂದು ಹೆಸರಿಸುತ್ತಾನೆ170 ಮತ್ತು 7ನೇ ಶತಮಾನದ ‘ಜಿನದಾಸ’ನು ಶಿವ ಅಥವಾ ಮಹೇಶ್ವರನನ್ನು, ‘ಸನ್ಯಾಸಿನಿಯ ಮಗ, ಆಕೆ ಸೂಕ್ತ ವ್ಯಕ್ತಿಗಾಗಿ ಹುಡುಕುವಾಗ, ಮಾಟಗಾರನೋರ್ವನಿಂದ ಮಾಯಾಜಾಲದಿಂದ ಗರ್ಭ ಧರಿಸಿದಳು’171 ಎಂದು ವರ್ಣಿಸುವನು. ಅದೇ ಸಂದರ್ಭದಲ್ಲಿ ಮಧ್ಯಕಾಲೀನ ಜೈನ ವೃತ್ತಾಂತ ಸಾಹಿತ್ಯ ಮತ್ತು ಆತ್ಮ ಕಥನಗಳು ವೈದಿಕ ಮತದ ಕುರಿತು ಹಗೆಪೂರಿತ ಹೇಳಿಕೆಗಳನ್ನು ನೀಡುತ್ತವೆ, ಜತೆಗೆ ಆಗಾಗ ಮಹಾನ್ ಜೈನ ವಿದ್ವಾಂಸನೊಬ್ಬ ಬೌದ್ಧರನ್ನು ವಿವಾದದಲ್ಲಿ ಸೋಲಿಸುತ್ತಿದ್ದನ್ನು ಉಲ್ಲೇಖಿಸುತ್ತದೆ172. ಹಾಗೆ ಬೌದ್ಧರ ಗುಹೆಗಳನ್ನು ಜೈನರು ಸ್ವಾಧೀನ ಪಡಿಸಿಕೊಂಡಿದ್ದಕ್ಕೂ ಸಾಕ್ಶ್ಯಗಳಿವೆ173. ಬೌದ್ಧರೂ ಕೂಡಾ, ಅವರ ಕಡೆಯಿಂದ ವೈದಿಕ ದೇವತೆಗಳು ಮತ್ತು ನಂಬಿಕೆಗಳನ್ನು ಹಳಿಯುವುದರಲ್ಲಿ ಹಿಂದೆ ಉಳಿದಿರಲಿಲ್ಲ174. ಬಿಹಾರವನ್ನು 13ನೇ ಶತಮಾನದಲ್ಲಿ ಪ್ರವಾಸ ಮಾಡಿದ್ದ ಟಿಬೆಟಿಯನ್ ವಿದ್ವಾಂಸ ‘ಧರ್ಮಸ್ವಾಮಿನ್’, ‘ಬೌದ್ಧರಲ್ಲದವರ ಕ್ರೋಧದಿಂದ ತಪ್ಪಿಸಿಕೊಳ್ಳಲು ಬೌದ್ಧರು ಶಿವನ ಚಿತ್ರವನ್ನು ಬುದ್ಧನ ಚಿತ್ರದ ಮುಂದೆ ಹಾಕಿಕೊಂಡಿರುತ್ತಿದ್ದರು’ ಎನ್ನುತ್ತಾನೆ175. ಅವರು ಕೇವಲ ವೈದಿಕರು ತೀರ್ಥಗಳು ಮತ್ತು ಗಂಗೆಯಲ್ಲ್ಲಿ ಸ್ನಾನ ಮಾಡುವುದನ್ನು ಮಾತ್ರ ಟೀಕಿಸಲಿಲ್ಲ, ಬದಲು ಹಲವು ವೈದಿಕ ದೇವತೆಗಳು ಬೌದ್ಧ ದೇವ ಮತ್ತು ದೇವತೆಗಳಿಗೆ ದಾಸರು ಹಾಗೂ ಕೆಳಮಟ್ಟದವರು ಎಂದೂ ಸಹ ಟೀಕಿಸುತ್ತಿದ್ದರು176. ಅನೇಕ ಆರಂಭಿಕ ಮಧ್ಯಕಾಲೀನ ಶಿಲ್ಪಕಲೆಗಳಲ್ಲಿ ಬೌದ್ಧ ದೇವತೆಗಳು ಶೈವ ದೇವತೆಗಳನ್ನು ತುಳಿದುಹಾಕುತ್ತಿರುವ ಚಿತ್ರಣವನ್ನು ಸಹ ನೋಡಬಹುದಾಗಿದೆ177. ಆದಾಗ್ಯೂ ಬೌದ್ಧ ಮತ್ತು ಜೈನರು ಶೈವ ಪಂಥೀಯರೆಡೆಗೆ ತೋರಿಸಿದ ವಿರೋಧ ಮತ್ತು ಭತ್ರ್ಸನೆಯ ಚಿತ್ರಣವು ಅಗಾಧವಾಗಿ ಸಿಗುವುದಿಲ್ಲ ಮತ್ತು ಅಂತಹ ಆಯಾಮ ಇನ್ನೂ ಹೆಚ್ಚಿನ ಸಂಶೋಧನೆಯನ್ನು ಬಯಸುತ್ತದೆ. ಅವರು ಮಧ್ಯಕಾಲೀನ ಸಂದರ್ಭದ ಶೈವ ವಿರೋಧಿ ಸಾಹಿತ್ಯವನ್ನೆಲ್ಲ ಒಟ್ಟಾರೆಯಾಗಿ ನಾಶಪಡಿಸಿರಲು ಸಾಧ್ಯವಿಲ್ಲ178.
ಒಂದನೇ ಶತಮಾನದ ಮಧ್ಯಭಾಗದಿಂದ ಆರಂಭಿಕ ಮಧ್ಯಕಾಲದವರೆಗಿನ ಸಮರ್ಪಕವಾದ ಆಕರಗಳು ಬೌದ್ಧ ಮತ್ತು ಜೈನರ ವಿರುದ್ಧ ಶೈವ ಮತ್ತು ವೈಷ್ಣವರ ನಿಂದನೆಗಳು ಹಾಗೂ ಕಿರುಕುಳಗಳು ಅರ್ಥವಿಲ್ಲದವುಗಳಿಗಿಂತ ಹೆಚ್ಚಾಗಿದ್ದವು ಎನ್ನುದನ್ನು ತೋರಿಸಿತೊಡುತ್ತವೆ. ಹರ್ಷವರ್ಧನನ ಸಮಕಾಲೀನನಾಗಿದ್ದ ಗೌಢದ ದೊರೆ ‘ಶಶಾಂಕ’ನು, ‘ಗಯಾ’ದಲ್ಲಿದ್ದ ಬೋಧಿ ಮರವನ್ನು ಕತ್ತರಿಸಿದನು ಮತ್ತು ಸ್ಥಳೀಯ ದೇವಾಲಯದಿಂದ ಬುದ್ಧನ ವಿಗ್ರಹವನ್ನು ತೆಗೆದುಹಾಕಿದನು ಎಂದು ಹೂಯೆನ್-ತ್ಸಾಂಗ್ನ ಬರವಣಿಗೆಗಳು ತಿಳಿಸುತ್ತವೆ. ಆತ 1,600 ಬೌದ್ಧ ಸ್ತೂಪ ಮತ್ತು ವಿಹಾರಗಳನ್ನು ನಾಶಪಡಿಸಿದ ಶಿವನ ಭಕ್ತನಾಗಿದ್ದ ಹೂಣರ ದೊರೆ ಮಿಹಿರಕುಲನ ಬಗ್ಗೆಯೂ ಉಲ್ಲೇಖಿಸುತ್ತಾನೆ. ಸಾವಿರಾರು ಮಂದಿ ಬೌದ್ಧ ಸನ್ಯಾಸಿಗಳು ಮತ್ತು ಬೌದ್ಧ ಜನಸಾಮಾನ್ಯರನ್ನು ಮಿಹಿರಕುಲ ಕೊಂದಿದ್ದನ್ನು179, 11ನೇ ಶತಮಾನದ ಕೃತಿ ಕಲ್ಹಣನ ರಾಜತರಂಗಿಣಿಯು ಪುಷ್ಠೀಕರಿಸುತ್ತದೆ. ಕಾಶ್ಮೀರದ ದೊರೆ ಆರಂಭಿಕ ಕಾಲದಲ್ಲಿ ಬೌದ್ಧರಿಗೆ ಕಿರುಕುಳ ನೀಡಿದ್ದನ್ನು ಕಲ್ಹಣನು ತಿಳಿಸುತ್ತಾನೆ. ಆದಾಗ್ಯೂ ಕಲ್ಹಣನ ರಾಜತರಂಗಿಣಿಯಲ್ಲಿ ಸಾಮಾನ್ಯವಾಗಿ ರಾಜನ ಲೋಭಕ್ಕಾಗಿ ದೇವಾಲಯಗಳನ್ನು ಲೂಟಿ ಮಾಡಿದ ಮತ್ತು ಒಡೆದು ಹಾಕಿದ ಪ್ರಕರಣಗಳು ಕಂಡುಬಂದರೂ ಕೂಡಾ, ಅದರಲ್ಲಿನ ಬೌದ್ಧ ಧರ್ಮದ ವಿರುದ್ಧದ ಪ್ರಕರಣಗಳು ಹಗೆತನಕ್ಕಾಗಿ ನಡೆದಿದ್ದವು ಎನ್ನುವುದನ್ನು ತೋರಿಸುತ್ತದೆ. ಬೌದ್ಧ ವಿಹಾರವನ್ನು ಒಡೆದು ಹಾಕಿದ ಇನ್ನೊಂದು ಅನಘ್ರ್ಯ ಆರಂಭಿಕ ಉದಾಹರಣೆ ಎಂದರೆ ಶೈವನಾಗಿದ್ದ ಅಶೋಕನ ಮಗ ‘ಜಲೂಕ’ನದು180.
ಕಾಶ್ಮೀರದಲ್ಲಿ ‘ಕ್ಷೇಮಗುಪ್ತ’ನ (950-58) ಆಳ್ವಿಕೆಯ ಸಂದರ್ಭದಿಂದ ಬೌದ್ಧರ ಕಿರುಕುಳದ ಬಗೆಗೆ ಮಹತ್ವದ ಸಾಕ್ಷಿಯು ಲಭಿಸುತ್ತದೆ. ಆತ ಶ್ರೀನಗರದಲ್ಲಿನ ಬೌದ್ಧರ ‘ಜಯೇಂದ್ರವಿಹಾರ’ವನ್ನು ಒಡೆದು ಹಾಕಿದ ನಂತರ ಅದರ ಸಂಪನ್ಮೂಲಗಳನ್ನು ಬಳಸಿ ‘ಕ್ಷೇಮಗೌರೀಶ್ವರ’ ದೇವಾಲಯ ಕಟ್ಟಿಸಲು ಬಳಸಿಕೊಂಡ ಬಗ್ಗೆ ನಮಗೆ ವಿವರಗಳು ದೊರೆಯುತ್ತವೆ181. ಉತ್ತರ ಪ್ರದೇಶದಲ್ಲಿ, ಸುಲ್ತಾನಪುರ ಜಿಲ್ಲೆಯೊಳಗೆ 47 ನಿರ್ಜನವಾದ ಕೋಟೆಯಿಂದಾವೃತ ನಗರಗಳಲ್ಲಿ ಬೌದ್ಧ ನಗರಗಳನ್ನು ವೈದಿಕರು ಅಂತಿಮವಾಗಿ ಗೆದ್ದ ನಂತರ ಸುಟ್ಟು ಹಾಕಿದ್ದರು182. ಉತ್ತರ ಭಾರತದ ಕೆಲವು ಶಾಸನಗಳು ಹಾಗೂ ಅದರೊಂದಿಗೆ ಪುರಾಣಗಳ ಅನೇಕ ಉಧೃತ ಭಾಗಗಳು ಸಹ ಬೌದ್ಧರಿಗೆ ನೀಡಿದ ಕಿರುಕುಳದ ಬಗೆಗೆ ದಾಖಲೆಗಳನ್ನು ಒದಗಿಸುತ್ತವೆ. ಟಿಬೆಟಿಯನ್ ಸಂಪ್ರದಾಯವು ‘ಕಲಚೂರಿ’ ದೊರೆ ‘ಕರ್ಣ’ನು (11ನೇ ಶತಮಾನ) ಮಗಧದಲ್ಲಿದ್ದ ಅನೇಕ ಬೌದ್ದ ದೇವಾಲಯಗಳು ಮತ್ತು ವಿಹಾರಗಳನ್ನು ನಾಶ ಮಾಡಿದುದಾಗಿ ಹೇಳುತ್ತದೆ. ಟಿಬೆಟಿಯನ್ ಸಾಹಿತ್ಯವಾದ ‘ಪಾಗ್-ಸ್ಯಾಮ್-ಝೊನ್-ಜ್ಯಾಂಗ್’ ನಳಂದ ಗ್ರಂಥಾಲಯವನ್ನು ಕೆಲವು ‘ಹಿಂದೂ ಮತಾಂಧರು’ ಸುಟ್ಟು ಹಾಕಿದ್ದನ್ನು ಉಲ್ಲೇಖಿಸುತ್ತದೆ183. ಹಾಗೆ ಬೌದ್ಧರ ವಿರುದ್ಧ ಹಗೆತನದ ಕುರಿತ ದಕ್ಷಿಣ ಭಾರತದ ವಿಷಯವೊಂದು ಆಸಕ್ತಿದಾಯಕವಾಗಿದೆ, ಅದೇನೆಂದರೆ ಆಳ್ವಾರ್ ಭಕ್ತಿ ಸಾಹಿತ್ಯದ ಪ್ರಕಾರ ವೈಷ್ಣವ ಸಂತಕವಿ ‘ತಿರುಮಾಂಕೈ’, 13ನೇ ಶತಮಾನದ ನಾಗಪಟ್ಟನಂನ ಸ್ತೂಪದಿಂದ ಬುದ್ಧನ ದೊಡ್ಡ ಚಿನ್ನದ ವಿಗ್ರಹವನ್ನು ಕದ್ದು, ಕರಗಿಸಿ ಸ್ವತಃ ವಿಷ್ಣುವೇ ಈ ರೀತಿ ಮಾಡಲು ಪ್ರೇರಿಸಿದ ಎನ್ನುತ್ತಾ ವಿಷ್ಣು ದೇವಾಲಯವನ್ನು ಕಟ್ಟಲು ಮರುಬಳಸಿದ184.
ಈ ಎಲ್ಲಾ ಅಂಶಗಳು ಬೌದ್ಧರೆಡೆಗಿನ ಹಗೆತನದ್ದಾಗಿದೆ, ಅದಕ್ಕಿಂತ ಹೆಚ್ಚಿನ ಸಾಕ್ಷಿಗಳು ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಜೈನರ ವಿರುದ್ಧದ ಹಗೆತನ ಹಾಗೂ ಕಿರುಕುಳಕ್ಕೆ ಸಂಬಂಧಿಸಿದ್ದಾಗಿವೆ. ಅಲ್ಲಿ ಶೈವ (ನಾಯನಾರರು) ಮತ್ತು ವೈಷ್ಣವ (ಆಳ್ವಾರರು) ಭಕ್ತ ಅನುಯಾಯಿಗಳು ನಿರಂತರವಾಗಿ ‘ಇತರರು’ ಎಂದು ಅವರು ಪರಿಗಣಿಸಿದ ಶೈವ ಮತ್ತು ವೈಷ್ಣವರೊಡನೆ ತಾತ್ವಿಕ ಮ್ತು ನೈಜ ಹಗೆತನ ಹೊಂದಿದ್ದಂತೆ ಆರು ಮತ್ತು ಏಳನೇ ಶತಮಾನದಲ್ಲಿ ಬಿಂಬಿಸಿಕೊಂಡಿದ್ದಾರೆ. ಈ ಸಂಬಂಧ ದಾಖಲೆಯು 10ನೇ ಶತಮಾನದ ‘ತೇವರಂ’ನಲ್ಲಿ ದೊರೆಯುತ್ತದೆ. ಇದು ಆರಂಭಿಕ ಮೂರು ಪ್ರಮುಖ ನಾಯನಾರ್ ಸಂತ ಕವಿಗಳ ಮಂತ್ರಗಳ ಸಂಗ್ರಹವಾಗಿದೆ. ಅದರಲ್ಲಿ ಇಬ್ಬರಾದ ‘ಅಪ್ಪಾರ್’ (7ನೇ ಶತಮಾನ) ಮತ್ತು ‘ಸಂಬಂಧರ್’ (7ನೇ ಶತಮಾನ) ಅತ್ಯಂತ ಕೆಟ್ಟ ಭಾಷೆಯಲ್ಲಿ ಜೈನರನ್ನು ನಿಂದಿಸುತ್ತಾರೆ. ಅಪ್ಪಾರ್, ಜೈನರನ್ನು, ‘ನಾಚಿಕೆಯಿಲ್ಲದ ಜೈನ ಸನ್ಯಾಸಿಗಳು’, ‘ನಗ್ನ ಜೈನರು ರಾತ್ರಿ ಇಡೀ ಉಪವಾಸವಿರುವರು’, ‘ಅನಾಗರಿಕ ರೀತಿಯಲ್ಲಿ ತಿನ್ನುವ ಮಾಂತ್ರಿಕ ಸನ್ಯಾಸಿಗಳು’, ‘ದುರ್ಬಲ ಮತ್ತು ತೆಳುವಾದ ಜೈನರು ಹಳದಿ ಹಲ್ಲುಳ್ಳವರು’ ಎನ್ನುತ್ತಾನೆ. ‘ಸಂಬಂಧರ್’ ಅಂತೂ ಜೈನರನ್ನು ಸುಖಾಸೀನರಾಗಿದ್ದ ಬಗ್ಗೆ ಅದೇ ಪದೇ ಉಗ್ರವಾಗಿ ಖಂಡಿಸುತ್ತಾನೆ. ಆತ ಅವರನ್ನು, ‘ಚಾಪೆಯನ್ನು ಧರಿಸುವ ಹುಚ್ಚ ಜೈನ ಸನ್ಯಾಸಿಗಳು’, ಮತ್ತು ‘ತಮ್ಮ ಕೂದಲನ್ನು ತಾವೇ ಕಿತ್ತುಕೊಳ್ಳುವವರು ಹಾಗೂ ನಿಂತುಕೊಂಡೇ ತಿನ್ನುವವರು’ ಎಂದು ಉಲ್ಲೇಖಿಸುತ್ತಾನೆ185. ಈ ಇಬ್ಬರು ನಾಯನಾರರ ಎದ್ದು ಕಾಣುವ ಈ ವಿವರಣಗೆಳು 12ನೇ ಶತಮಾನದಲ್ಲಿ ಜೈನರ ವಿರುದ್ಧ ದೊರೆಯುವ ‘ಸೆಕ್ಕಿಲಾರ್’ನ ‘ಪೆರಿಯಪುರಾಣಂ’ ಅಲ್ಲಿರುವ ಸಂಘರ್ಷದ ಸಾಹಿತ್ಯದ ಸ್ವರೂಪದಲ್ಲಿವೆ. ಅವರ ನಿರೂಪಣೆಯ ಬಹುಮುಖ್ಯ ಭಾಗವು ಹೇಗೆ ಸಂಬಂಧರ್ ಎಲ್ಲ ಸ್ಪರ್ಧೆಗಳಲ್ಲಿ ಜೈನರ ವಿರುದ್ಧ ಗೆಲುವು ಸಾಧಿಸಿದನು ಮತ್ತು ಜೈನನಾಗಿದ್ದ ಮಧುರೆಯ ಪಾಂಡ್ಯ ದೊರೆಯನ್ನು ಶೈವನಾಗಿ ಬದಲಾಯಿಸಿದನು ಎಂಬುದಕ್ಕೆ ಸಂಬಂಧಿಸಿದೆ. ಇದು ಅಂತಿಮವಾಗಿ 8000 ಜೈನ ಸನ್ಯಾಸಿಗಳನ್ನು ಹೇಗೆ ಬಲಿತೆಗೆದುಕೊಳ್ಳಲಾಯಿತು ಎನ್ನುವುದನ್ನು ವಿವರಿಸುತ್ತದೆ. ಆದರೆ ಈ ಸಂಬಂಧ ಇಷ್ಟು ಬೃಹತ್ ಪ್ರಮಾಣದ ಕಗ್ಗೊಲೆಯ ಬಗ್ಗೆ ಎಲ್ಲೂ ಚಾರಿತ್ರಿಕ ದಾಖಲೆಗಳು ಸಿಗುವುದಿಲ್ಲ186. ಜೈನರ ವಿರುದ್ಧದ ಶೈವರ ಹಗೆತನವನ್ನು ಮಧುರೆಯ ಹಲವಾರು ಸ್ಥಳ ಪುರಾಣಗಳು ಧೃಡೀಕರಿಸಿವೆ187. ಅದೇ ರೀತಿ, 7ನೇ ಶತಮಾನದ ಆರಂಭಿಕ ಜೈನ ಗುಹಾಲಯವನ್ನು ಶೈವ ಗುಹಾಲಯವಾಗಿ ಪರಿವರ್ತಿಸಿರುವ ಬಗ್ಗೆ ದಾಖಲೆಯು ತಿರುನಲ್ವೇಲಿಯಲ್ಲಿ (ತಮಿಳುನಾಡು) ದೊರೆಯುವುದು188 ಮತ್ತು ಕಾಂಚೀಪುರಂನ ‘ಕೈಲಾಸನಾಥ’ ದೇವಾಲಯದ ಗೋಡೆಗಳ ಮೇಲಿರುವ ಶಿಲ್ಪಗಳಲ್ಲಿ ಕಂಡುಬರುವ ಹಿಂಸಾತ್ಮಕ ದೃಶ್ಯಗಳು189ಮತ್ತು ಮಧುರೆಯ ಮೀನಾಕ್ಷಿ ದೇವಾಲಯದ ಸುವರ್ಣ ತಾವರೆಯ ಕೊಳದ ಮಂಟಪದ ಮೇಲಿನ ದೃಶ್ಯಗಳು ತಮಿಳುನಾಡಿನಲ್ಲಿ ಜೈನರು ಅನುಭವಿಸಿದ ಕಿರುಕುಳಕ್ಕೆ ಉತ್ತಮ ಪುರಾವೆಯೊದಗಿಸುತ್ತದೆ.
ತಮಿಳುನಾಡಿನಿಂದ ಹೊರಗೂ ಜೈನರ ಕಿರುಕುಳಕ್ಕೆ ಸಂಬಂಧಿಸಿದಂತೆ ಅನೇಕ ದಾಖಲೆಗಳು ದೊರೆಯುತ್ತವೆ. ಉದಾಹರಣೆಗೆ, ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಆರಂಭವಾದ ಶೈವ ಲಿಂಗಾಯತ ಪಂಥೀಯರು ಶಾಶ್ವತವಾಗಿ ಹೊಂದಿದ್ದ ಅಸಹನೀಯ ಮತ್ತು ಅಸಹಿಷ್ಣುವಾದ ಮಿಲಿಟರಿ ಕಾರ್ಯ ನಡೆಸುತ್ತಿದ್ದ ಗುಂಪೊಂದು ಕಾರ್ಯನಿರತವಾಗಿತ್ತು. ಅದರ ನಾಯಕನಾದ ‘ಚೆನ್ನಬಸವಣ್ಣ’ನ ಜೀವನಚರಿತ್ರೆಗಳು ಅನೇಕ ಜೈನರ ವಧೆಯ ಬಗ್ಗೆ ದಾಖಲೆಯನ್ನು ಒದಗಿಸುತ್ತವೆ190. ಹಾಗೆ ಕರ್ನಾಟಕದ ಹಲವೆಡೆ ಜೈನ ದೇವಾಲಯಗಳನ್ನು ಶೈವ ದೇವಾಲಯಗಳನ್ನಾಗಿ ಪರಿವರ್ತಿಸಲಾಯಿತು ಮತ್ತು ಅವರು ಜೈನ ವಿಗ್ರಹಗಳ ಮೇಲೆ ನಡೆಸಿದ ವಿಧ್ವಂಸಕ ಕೃತ್ಯಗಳು ಉತ್ತಮವಾಗಿಯೇ ದಾಖಲಿತವಾಗಿವೆ191. ಪ್ರಮುಖವಾದ ಜೈನ ಧಾರ್ಮಿಕ ಸಂಸ್ಥೆಯೊಂದನ್ನು ಅಪವಿತ್ರಗೊಳಿಸಿದ್ದರ ಕುರಿತು ಶಾಸನವೊಂದು ವಿವರವನ್ನು ದಾಖಲಿಸಿರುಬವುದನ್ನು ‘ಚೆನ್ನಬಸವಪುರಾಣ’ ಕೃತಿಯು ದೃಢಪಡಿಸುವುದು. 1160ರಲ್ಲಿ ‘ಅಬ್ಲೂರಿ’ನಲ್ಲಿ ವೀರಶೈವ ‘ಏಕಾಂತದ ರಾಮಯ್ಯ’ ಜೈನರನ್ನು ವಿವಾದದಲ್ಲಿ ಸೋಲಿಸಿದನು ಮತ್ತು ಅವರ ದೇವಾಲಯವನ್ನು ನಾಶಪಡಿಸಿ ಇದರ ಗೌರವಾರ್ಥ ಆತ ವೀರಸೋಮೇಶ್ವರನ ದೇವಾಲಯವನ್ನು ನಿರ್ಮಿಸಿದನು. ಈ ದೇವಾಲಯದ ಗೋಡೆಗಳ ಮೇಲಿನ ಶಿಲ್ಪಗಳು ಜೈನರನ್ನು ಎದುರಿಸಿದ್ದನ್ನು ಚಿತ್ರಿಸುತ್ತವೆ192. ಅವರ ಮೇಲಿನ ಹಲ್ಲೆಗಳು ಎಷ್ಟು ಆ ಕಾಲದಲ್ಲಿ ಹೆಚ್ಚಿದವೆಂದರೆ 14ನೇ ಶತಮಾನದಲ್ಲಿ ಜೈನರು ವಿಜಯನಗರದ ರಾಜಮನೆತನದ ಮಧ್ಯಸ್ಥಿಕೆಯನ್ನು ಬಯಸುವಂತಾಯಿತು. ಆದರೂ ಕೂಡಾ ವೀರಶೈವರು ಜೈನರಿಗೆ ನೀಡುತ್ತಿದ್ದ ಕಿರುಕುಳವನ್ನು ಮುಂದುವರಿಸಿದುದನ್ನು ಆಂಧ್ರಪ್ರದೇಶದ ಶ್ರೀಶೈಲಂನ ಸುತ್ತಮುತ್ತಲಿನ 16ನೇ ಶತಮಾನಕ್ಕೆ ಸಂಬಂಧಿಸಿದ ಶಾಸನಗಳು ದೃಢಪಡಿಸುತ್ತವೆ. ಅವುಗಳಲ್ಲೊಂದು ಹೇಳುವಂತೆ, ‘ಲಿಂಗ’ ಎಂಬ ನಾಯಕನು ಶ್ವೇತಾಂಬರರ ತಲೆಯನ್ನು ಹಾರಿಸುವುದರಲ್ಲಿ ಪ್ರತಿಷ್ಠೆಯನ್ನು ಕಾಣುತ್ತಿದ್ದನು ಎನ್ನುತ್ತದೆ193. ಜೈನರು ಇನ್ನೂ ಬಹಳಷ್ಟು ಕಾಲ ದ್ವೇಷಕ್ಕೊಳಗಾಗಿದ್ದರು ಎನ್ನುವುದನ್ನು ಆಕಾಲದ ಪ್ರಮುಖ ಉಲ್ಲೇಖಗಳಾದ, ‘ಹಸ್ತಿನಾ ತಾಡ್ಯಮಾನೋಪಿ ನ ಗಚ್ಛೇದ್ ಜೈನಮಂದಿರಮ್’ ಅಂದರೆ ‘ಒಂದು ವೇಳೆ ಆನೆಯು ನಿಮ್ಮ ಎದುರುಗಡೆ ಬಂದು ನಿಮ್ಮನ್ನು ಭಯಪಡಿಸುವಂತಹ ಸಂದರ್ಭಗಳು ಬಂದಾಗಲೂ ಕೂಡಾ ನಾವು ಜೈನ ಮಂದಿರವನ್ನು ಪ್ರವೇಶಿಸುವುದು ಯೋಗ್ಯವಲ್ಲ ಅಥವಾ ತರವಲ್ಲ’ ಎನ್ನುವಂಯಹ ಹೇಳಿಕೆಗಳ ನೆನಪು ಇನ್ನೂ ಉಳಿದುಬಂದಿದೆ194.
ಆ ಕಾಲದ ಒಂದು ಸಮೀಕ್ಷೆಯ ದಾಖಲೆಯು, ಅದು ಸಮಗ್ರವಾದುದಾಗಿಲ್ಲವಾದರೂ ಕೂಡಾ, ತೋರಿಸುವುದೇನೆಂದರೆ ವೈದಿಕರು ಅವರು ಹೇಳುವಂತೆ ಅವೈದಿಕ ಪಂಥೀಯರೊಡನೆ ಸಹಿಷ್ಣುತೆಯೊಂದಿಗೆ ನಡೆದುಕೊಳ್ಳುತ್ತಿರಲಿಲ್ಲ ಎಂಬುದು. ಅದಕ್ಕೆ ವಿರೋಧಾಭಾಸವಾಗಿ, ಧಾರ್ಮಿಕ ಸಂಘರ್ಷಗಳನ್ನು ಉತ್ತೇಜಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದರು ಮತ್ತು ಆರಂಭಿಕ ಮಧ್ಯಕಾಲದಲ್ಲಿ ಅವೈದಿಕ ಪಂಥೀಯರ ವಿರುಧ್ಧದ ಹಿಂಸೆಗಳಲ್ಲಿ ಅಪಾರ ಪ್ರಮಾದ ಎಸಗುತ್ತಿದ್ದರು. ಅದು ಅವರ ನಿಧಾನಗತಿಯ ಮಿಲಿಟರೀಕರಣದ ಜೊತೆಗೆ ಸಾಗಿತು. ಶಾಸನಗಳ ವಿಶ್ಲೇಷಣಾ ಮಾಹಿತಿಯು ತೋರಿಸುವಂತೆ ಶಾಸನಗಳಲ್ಲಿ ಯಾವಾಗಲೂ ‘ಭಟ್ಟ’ ಪದದ ಜೊತೆಗೆ ಬರುವ ‘ಚಟಾ’್ಟ ಪದವು, ಬ್ರಾಹ್ಮಣರು ಯುದ್ಧ ತರಬೇತಿಗಳನ್ನು ಪಡೆದುಕೊಳ್ಳುತ್ತಿದ್ದರು ಎನ್ನುವುದನ್ನು ಸೂಚಿಸುತ್ತದೆ. ಪಾರ್ಥಿವಪುರಂನ (ಕ್ರಿ.ಶ.866) ದಾಖಲೆಯಲ್ಲಿ ದೊರೆಯುವ ಚಟ್ಟಾ ಪದವು, ಅದು ಬ್ರಾಹ್ಮಣ ವಿದ್ಯಾರ್ಥಿಗಳು ಕೇವಲ ವೇದಗಳನ್ನು ಕಲಿಯುವುದಷ್ಟೇ ಅಲ್ಲದೇ ಯುದ್ಧ ಕಲೆಗಳ ತರಬೇತಿಯನ್ನು ಸಹ ಪಡೆಯಬೇಕಿತ್ತು ಹಾಗೂ ಅದರ ಕೇಂದ್ರವನ್ನು ಸ್ಥಳೀಯ ವಿಷ್ಣು ದೇಗುಲದೊಂದಿಗೆ ಸಂಬಂಧ ಹೊಂದಿದ್ದ ‘ಸಾಲೈ’ ಎನ್ನಲಾಗುತ್ತಿತ್ತು195. ಆರಂಭಿಕ ಮಧ್ಯಕಾಲದಲ್ಲಿ ಇಂತಹ ಇನ್ನೂ ಅನೇಕ ದೇವಾಲಯಗಳು ಕೇರಳದಲ್ಲಿ ಇದಕ್ಕೆ ಸಹಕರಿಸಿ ಇಂತಹ ರಚನೆಯನ್ನು ಹೊಂದಿದ್ದವು. ಅದರಲ್ಲಿ ಪ್ರಮುಖವಾದುದು, ಚೋಳ-ಚೇರರ ಸಂಘರ್ಷದ ಕಾಲದಲ್ಲಿ ಪ್ರಮುಖವಾಗಿ ಮಿಲಿಟರಿ ಪಾತ್ರ ನಿರ್ವಹಿಸಿದ ‘ಕಾಂತಲೂರಸಾಲೈ’196. ಇದಕ್ಕೆ ಅನುರೂಪವಾಗಿ ಸಾಲೈಗಳನ್ನು ‘ಘಟಿಕಾ’ಗಳೆಂದು ಚಾಲುಕ್ಯ ಮತ್ತು ಪಲ್ಲವ ರಾಜ್ಯಗಳಲ್ಲಿ ಕರೆಯುತ್ತಿದ್ದರು. ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾಗಿದ್ದದ್ದು ಕಂಚಿಯಲ್ಲಿದ್ದ ಘಟಿಕಾ. ಬ್ರಾಹ್ಮಣರಿಗೆ ಈ ಸಾಲೈ ಮತ್ತು ಘಟಿಕಾಗಳು ಮಿಲಿಟರಿ ತರಬೇತಿಯನ್ನು ಒದಗಿಸುತ್ತಿದ್ದವು ಎಂಬುದಕ್ಕೆ ಸಾಹಿತ್ಯಕ ದಾಖಲೆಗಳು ಉತ್ತರ ಮತ್ತು ದಕ್ಷಿಣಗಳೆರಡರಲ್ಲಿಯೂ ದೊರೆಯುತ್ತವೆ197. ಈ ನೆಲೆಯಲ್ಲಿ ಶಂಕರಾಚಾರ್ಯನ ಪಂಥದೊಂದಿಗೆ ಅವರ ವಿಚಾರವನ್ನು ಸಾರಲು ಒಂದು ಮಿಲಿಟರಿ ಗುಂಪಿತ್ತು ಎನ್ನುವುದನ್ನು ಅಲ್ಲಗಳೆಯಲಾಗದು198. ವೈದಿಕ ಪಂಥೀಯರ ಮಿಲಿಟರೀಕರಣ ಮತ್ತು ದೇವಾಲಯಗಳ ಸೇನಾಪಡೆ ಅಥವಾ ಮಿಲಿಶಿಯಾವು ಶಸ್ತ್ರಾಸ್ತ್ರಸಹಿತ ಬ್ರಾಹ್ಮಣರು ಹಾಗೂ ಅವೈದಿಕ ಪಂಥಗಳ ಅನುಯಾಯಿಗಳ ನಡುವೆ ಹಿಂಸಾತ್ಮಕ ಸಂಘರ್ಷವನ್ನು ಸೃಷ್ಠಿಸಿತು.
ಎಲ್ಲಾ ಧರ್ಮಗಳಂತೆ ಬ್ರಾಹ್ಮಣೀಯತೆಯು ಆಂತರಿಕವಾಗಿಯೇ ಅಸಹಿಷ್ಣುತೆಯನ್ನು ಹೊಂದಿದೆಯೇ ? ಎಂಬುದರ ಬಗ್ಗೆ ಸ್ವಲ್ಪ ಅನುಮಾನವಿದೆ ಮತ್ತು ಅದರ ಅಸಹಿಷ್ಣುತೆಯು, ಸಾಮಾನ್ಯವಾಗಿ ಹಿಂಸೆಯ ಮೂಲಕ ವ್ಯಕ್ತವಾಗಿದೆ ಹಾಗೂ ಬಹುಶಃ ಅದರ ಉಳಿಯುವಿಕೆಯು ಯುದ್ಧಕಲೆಯನ್ನು ತಿಳಿದಿದ್ದ ಮತ್ತದನ್ನು ಆಚರಿಸುತ್ತಿದ್ದ ಬ್ರಾಹ್ಮಣರ ಮೂಲಕವೇ ಆಗಿರಬೇಕು. ಹಾಗಾಗಿ, ‘ಹಿಂದೂಯಿಸಂನ ಅತ್ಯಂತ ಪ್ರಮುಖ ಗುಣ ಸಹಿಷ್ಣುತೆ’ ಮತ್ತು ಅದು ‘ ಹೊರತಾಗಿಸುವುದಕ್ಕಿಂತ ಒಳಗೊಳ್ಳುವ ಮತ್ತು ಎಲ್ಲಾ ಸಂಸ್ಕ್ರತಿ ಮತು ವೈವಿಧ್ಯತೆಯನ್ನು ಜೀರ್ಣಿಸಿಕೊಳ್ಳುವ ಪ್ರವೃತ್ತಿಯನ್ನು ಆಂತರಂಗಿಕವಾಗಿ ಹೊಂದಿದೆ’ ಎಂಬುದನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟದ ವಿಚಾರ199. ಅಷ್ಟೇ ಮುಖ್ಯವಾಗಿ, ಇಸ್ಲಾಂ ಹಿಂಸೆಯನ್ನು ಅಲ್ಲಿಯ ತನಕ ನೋಡಿರದ ಈ ಭೂಮಿಗೆ ಪರಿಚಯಿಸಿತು ಎನ್ನುವುದನ್ನು ನಿರ್ಲಕ್ಷಿಸಲೂ ಕೂಡಾ ಸಾಕಷ್ಟು ದಾಖಲೆಗಳಿವೆ. ಹಲವಾರು ಸಂತ ಗುಂಪುಗಳ ಯೋಧರು ಮತ್ತು ಸನ್ಯಾಸೀ ಸೈನಿಕರು ಭಾರತದಲ್ಲಿ ಇಸ್ಲಾಂ ಪ್ರವೇಶಿಸುವ ಮೊದಲೇ ಬಂದಿದ್ದರು, ಮತ್ತು ಅವರು ತಮ್ಮ ತಮ್ಮ ನಡುವೆಯೇ ಹೊಡೆದಾಡುಕೊಳ್ಳುತ್ತಿದ್ದರು200.
7
ವಿದ್ವಾಂಸರು ಮತ್ತು ರಾಜಕಾರಣಿಗಳು, ಇತರರನ್ನು ಮತಾಂತರಕ್ಕೊಳಪಡಿಸದ ‘ಸಹಿಷ್ಣುತೆಯ ಹಿಂದೂ ಧರ್ಮ’, ಕ್ರೈಸ್ತ ಮತ್ತು ಇಸ್ಲಾಂ ಧರ್ಮದಿಂದ ಭಿನ್ನವಾಗಿ ಗುರುತಿಸಿಕೊಳ್ಳುವ ಗುಣಲಕ್ಷಣವನ್ನು ಒಳಗೊಂಡಿದೆ ಎಂದೂ ಹಾಗೂ ಇಲ್ಲಿ ಮತಾಂತರಕ್ಕೆ ಯಾವುದೇ ಸಾಧ್ಯತೆ ಇಲ್ಲ ಎಂದೂ ಶ್ಲಾಘಿಸುವ ಮತ್ತು ತಾರೀಫನ್ನು ನೀಡುವ ಪ್ರಯತ್ನವನ್ನೂ ಕೂಡಾ ಮಾಡುತ್ತಾರೆ. ಅದೇ ಸಂದರ್ಭದಲ್ಲಿ ಇಂದು ‘ಹಿಂದೂ’ ಎನ್ನುವ ಪದದಲ್ಲಿ ಕರೆಯಲ್ಪಡುವ ಬಾಹ್ಮಣೀಯ ಪಂಥಗಳು, ಕ್ರೈಸ್ತ ಅಥವಾ ಇಸ್ಲಾಂ ಮಾದರಿಯಲ್ಲಿನ ಧರ್ಮ ಪ್ರಸಾರದ ಕ್ರಮ ಹಾಗೂ ಮತಾಂತರ ಪದ್ಧತಿಯನ್ನು ಹೊಂದಿರಲಿಲ್ಲ. ಆದರೆ ಆರಂಭಿಕ ಭಾರತೀಯ ದಾಖಲೆಗಳು ಸೂಚಿಸುವಂತೆ ಮತಾಂತರವು ಇದಕ್ಕೆ ಅಪರಿಚಿತವಾದುದೇನೂ ಆಗಿರಲಿಲ್ಲ. ಉತ್ತರ ವೈದಿಕ ಸಾಹಿತ್ಯದಲ್ಲಿ ‘ಪಂಚವಿಂಶ ಬ್ರಾಹ್ಮಣ’ ಅಥವಾ ‘ತಾಂಡ್ಯ ಬ್ರಾಹ್ಮಣ’ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದ ಪಠ್ಯವು ಉಲ್ಲೇಖಿಸುವ ಹಾಗೆ, ‘ವ್ರತ್ಯಸ್ತೋಮ ಬಲಿ’ ಆಚರಿಸುವ ಮೂಲಕ ಕೆಳದರ್ಜೆಯ ‘ವ್ರತ್ಯ’ರೆನ್ನುವ ಜನ ಮತ್ತು ಸಮುದಾಯವು ಸಾಂಪ್ರದಾಯಿಕ ಆರ್ಯರೊಡನೆ ಸಾಮಾಜಿಕ ವ್ಯವಹಾರವನ್ನು ನಡೆಸಲು ಅಗತ್ಯವಾದ ಅರ್ಹತೆಯನ್ನು ಪಡೆಯುತ್ತಿದ್ದರು. ವ್ರತ್ಯಗಳನ್ನು ಸಾಮಾನ್ಯವಾಗಿ ವೈದಿಕ ಧರ್ಮದ ಎಲ್ಲೆಯಿಂದ ಹೊರಗೆ ಬದುಕುವವರು ಎಂದು ಅರ್ಥೈಸಲಾಗುತ್ತಿತ್ತು, ಮತ್ತು ವ್ರತ್ಯಸ್ತೋಮ ಆಚರಣೆಯು ತಮ್ಮನ್ನು ಅವರು ಇದಕ್ಕೆ ಮತಾಂತರಗೊಳಿಸುವ ಉದ್ದೇಶವನ್ನು ಹೊಂದಿತ್ತು201.
ಸಾಮಾನ್ಯವಾಗಿ ಉಪನಯನ ಅಥವಾ ಆರಂಭ ಸಂಸ್ಕಾರ ಎಂಬ ಅರ್ಥವನ್ನು ಕೊಡುವ ದೀಕ್ಷಾ ಆಚರಣೆಯ ಬಗೆಗೂ ಕೂಡಾ ನಾವು ಈ ಹಂತದಲ್ಲಿ ಪ್ರಸ್ತಾಪಿಸಬಹುದಾಗಿದೆ ಅದೇನೇಂದರೆ, ‘ಮರಣ ಹೊಂದಿದ ವ್ಯಕ್ತಿಯನ್ನು ಧರ್ಮಾರ್ಪಿತಗೊಳಿಸುವ, ಮಾನವನನ್ನು ಪವಿತ್ರವಾದ ಜ್ಞಾನ ಮತ್ತು ವಿವೇಕವನ್ನು ಪಡೆಯಲು ಅರ್ಹಗೊಳಿಸುವ, ಉನ್ನತ ಅಸ್ತಿತ್ವದ ಹಂತ ಮತ್ತು ಸ್ವರ್ಗದ ಜೀವನಕ್ಕೆ ಮಾರ್ಗ’ವೆಂದೂ ಕೂಡಾ ಈ ಕ್ರಿಯೆಯನ್ನು ಆಚರಿಸುತ್ತಿದ್ದರ ಕುರಿತು202. ಈ ಸಂಸ್ಕಾರದ ಸನ್ನಿವೇಶಗಳ ಅರ್ಥ ಮತ್ತು ಈ ಆಚರಣೆಯ ಮಹತ್ವವರಿಯದೆ, ಇದನ್ನು ಹಲವು ಭಾರತೀಯ ಧಾರ್ಮಿಕ ಕ್ರಿಯಾವಿಧಿಗಳ ಸಂದರ್ಭ ಹಾಗೂ ವಿಚಾರಗಳಲ್ಲಿ ಇದರ ಪ್ರಾಮುಖ್ಯತೆಯನ್ನು ಉತ್ಪ್ರೇಕ್ಷಿಸಿಲಾಗಿದೆ. ಉದಾಹರಣೆಗೆ, ವೈಷ್ಣವ ಧರ್ಮದಲ್ಲಿ ಅದರ ಮುಖ್ಯ ಉದ್ದೇಶ ಪವಿತ್ರಗೊಳಿಸುವುದು. ಇದರ ಮೂಲಕವಲ್ಲದೇ ಒಬ್ಬನು ವೈಷ್ಣವ ಧಾರ್ಮಿಕ ವ್ಯವಸ್ಥೆ ಅಥವಾ ಸಮುದಾಯವನ್ನು ಸೇರಲು ವೈಯಕ್ತಿಕವಾಗಿ ಸಾಧ್ಯವಿರಲಿಲ್ಲ203. ಅದೇ ರೀತಿ ಕಾಶ್ಮೀರದ ಶೈವ ಪಂಥದಲ್ಲಿ, ‘ಅಖಂಡ ಶಿವತ್ವ’ವನ್ನು ಪಡೆಯುವುದರ ಅತ್ಯಂತ ಮುಖ್ಯ ವಿಧಾನದ ದೀಕ್ಷೆಯಾಗಿತ್ತದು. ಇಡೀ ವೀರಶೈವತ್ವಕ್ಕೆ ಇದೇ ಬಾಗಿಲನ್ನು ತೆರೆಯುತ್ತಿತ್ತಾದ ಕಾರಣ ಇದು ವೀರಶೈವ ಸಮುದಾಯದವರಿಗೆ ಕಡ್ಡಾಯವಾಗಿತ್ತು. ಈ ರೀತಿಯಲ್ಲಿ ಬೇರೆ ಮತ್ತು ಹೊರಗಿನ ನಂಬಿಕೆಯ ವ್ಯಕ್ತಿಗಳು ಈ ಧರ್ಮ ನಂಬಿಕೆಯನ್ನು ಹೊಂದಲು ಈ ದೀಕ್ಷೆ ರಹದಾರಿಯಾಗಿರುತ್ತಿತ್ತು204. ಹೀಗೆ ದೀಕ್ಷೆಯು ನಂಬಿಕೆಗಳನ್ನು ಮತಾಂತರಗೊಳಿಸುವಿಕೆಗೆ ಉತ್ತಮವಾದ ಆಲೋಚನೆ ಮತ್ತು ಅಗತ್ಯವಾಗಿತ್ತು, ಮತ್ತು ಇದರ ಅತ್ಯಂತ ಆರಂಭದ ಅಸ್ತಿತ್ವವೇ ಹೇಳುತ್ತದೆ ಮತಾಂತರದ ವಿಪುಲ ಸಾಧ್ಯತೆಯನ್ನು.
ಈ ಸಂಸ್ಕಾರದ ಲಕ್ಷಣ ಮತ್ತು ಮಹತ್ವದ ಕುರಿತು ಹಲವಾರು ಭಿನ್ನಾಭಿಪ್ರಾಯ ಮತ್ತು ವಿಷಯಭೇದಗಳಿದ್ದರೂ, ಕೂಡಾ205 ಶೈವ ಪಂಥದಲ್ಲಿ ಧಾರ್ಮಿಕ ಮತಾಂತರದ ಪದ್ಧತಿ ಸಾಮಾನ್ಯವಾಗಿದ್ದಂತೆ ತೋರುತ್ತದೆ. 1156ರಲ್ಲಿ ಬಸವ ಕಲ್ಯಾಣದಲ್ಲಿ ಸ್ಥಾಪಿತವಾದ ಇದರ ಪ್ರಮುಖ ಕೇಂದ್ರ ಮಠ ಮತ್ತು ಅದರೊಂದಿಗೆ 12ನೇ ಶತಮಾನದಲ್ಲಿ ಭಾರತದಾದ್ಯಂತ ಸ್ಥಾಪಿತವಾದ 5 ಸಾಂಪ್ರದಾಯಿಕ ವೀರಶೈವ ಮಠಗಳನ್ನು ಲಿಂಗಾಯಿತರಲ್ಲದವರನ್ನು ವೀರಶೈವರನ್ನಾಗಿ ಮತಾಂತರಿಸಲು ಸ್ಥಾಪಿಸಲಾಯಿತು206. ಏಕಾಂತದ ರಾಮಯ್ಯನ ಪ್ರಯೋಗದಿಂದ ಹಿಡಿದು ಕರ್ನಾಟಕದಲ್ಲಿ ಜೈನರ ಮೇಲಿನ ವಿಜಯದ ನಂತರ ಜೈನರನ್ನು ದೊಡ್ಡ ಪ್ರಮಾಣದಲ್ಲಿ ಮತಾಂತರಗೊಳಿಸುವ ಸಂಪ್ರದಾಯವು ಆಗ ಆರಂಭವಾಯಿತು207. ಆ ಸಂದರ್ಭದಲ್ಲಿ ಮತಾಂತರವನ್ನು ಶಕ್ತಿಪ್ರಯೋಗವಲ್ಲದೇ ಮತ್ತೆಂತಹ ಮಾರ್ಗಗಳ ಮೂಲಕ ಸಾಧಿಸಲಾಗುತ್ತಿತ್ತು ?
ಪುರಾಣಶಾಸ್ತ್ರಗಳು, ಧಾರ್ಮಿಕ ಸಾಹಿತ್ಯ ಮತ್ತು ಜಾತ್ಯಾತೀತ ಸಾಹಿತ್ಯಗಳಲ್ಲೂ ಮತಾಂತರಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಒಂದು ಆರಂಭಿಕ ಮಿಥ್ಯದ ಪ್ರಕಾರ ದಕ್ಷ ಪ್ರಜಾಪ್ರತಿಯ ದಂತಕಥೆಯು ವೈದಿಕ ಧರ್ಮದೊಳಗಿನ ಮತಾಂತರದೆಡೆಗೆ ಗಮನಸೆಳೆಯುತ್ತದೆ. ಇದರ ಹಲವಾರು ಆವೃತ್ತಿಗಳಿದ್ದಾಗ್ಯೂ, ಇದರ ತಿರುಳು ಅಥವಾ ಮಥಿತಾರ್ಥವೆಂದರೆ, ‘ವೈದಿಕ ಕ್ರಿಯಾವಿಧೀಯ ಪಂಥ ಮತ್ತು ರುದ್ರ ಶಿವ ಧರ್ಮದ ನಡುವಿನ ಸಂಘರ್ಷವಾಗಿದೆ’. ಅದೇ ಮುಂದುವರಿದು ಕಾಲಾಂತರದಲ್ಲಿ ಮಹಾಕಾವ್ಯ ಮತ್ತು ಪುರಾಣದಲ್ಲಿ ಶೈವ ಮತ್ತು ವೈಷ್ಣವ ಪಂಥಗಳ ನಡುವಿನ ಸಂಘರ್ಷವಾಗಿ ಬೆಳೆಯುತ್ತಾ ಹೋಯಿತು208. ದಕ್ಷ ಪ್ರಜಾಪ್ರತಿಯ ಕಥೆಯ ಕೊನೆಯಲ್ಲಿ ದಕ್ಷನ ಯಜ್ನಯನ್ನು ಶಿವ ಹಾಳು ಮಾಡುತ್ತಾನೆ, ನಂತರ ದಕ್ಷನು ಶಿವನ ಮೇಲರಿಮೆಯನ್ನು ತಿಳಿದು ದಕ್ಷನು ಮತಾಂತರ ಹೊಂದುವನು209.
ಮತಾಂತರವನ್ನು ಮಾಡುವ ವಿಧಾನದ ಬಗ್ಗೆ ಅನೇಕ ಸಾಹಿತ್ಯಿಕ ದಾಖಲೆಗಳು ನಮಗೆ ದೊರೆಯುತ್ತವೆ. ಉದಾಹರಣೆಗೆ, ‘ನಾರದಪರಿವ್ರಾಜಕೋಪನಿಷದ್’, ಎನ್ನುವ ಕೃತಿಯು ಹೇಗೆ ಸನ್ಯಾಸಿಗಳನ್ನು ಮತಾಂತರಿಸಬೇಕು ಮತ್ತು ಶಂಕರಾಚಾರ್ಯರ ಆರಂಭಿಕ ವಿದ್ಯಾರ್ಥಿ ಸ್ಥಾಪಿಸಿದ್ದ ಎಂದು ಹೇಳಲಾಗುವ ‘ದಶನಾಮಿ’ ವ್ಯವಸ್ಥೆಗೆ ಅವರನ್ನು ಹೇಗೆ ಸೇರಿಸಬೇಕು ಎನ್ನುವುದರ ಕುರಿತು ವಿವರ ನೀಡುತ್ತದೆ210. 11ನೇ ಶತಮಾನದ ದ್ವಿತೀಯಾರ್ಧದಲ್ಲಿ ‘ಸೋಮಶಂಭು’ ರಚಿಸಿದ ‘ಸೋಮಶಂಭುಪದ್ಧತಿ’ಯು211 ಎಂಬ ಕೈಪಿಡಿಯಲ್ಲಿ ‘ಲಿಂಗೋಧ್ಧಾರ ಎಂಬ ಒಂದು ಮತಾಂತರದ ವಿಧಾನವನ್ನು ಹಳೆಯ ಮತ, ಪಂಥದಿಂದ ಶೈವ ಪಂಥಕ್ಕೆ ಮತಾಂತರ ಹೊಂದುವವರಿಗೆ ಮತಾಂತರ ಸಂಸ್ಕಾರವಾಗಿ ಸೂಚಿಸಲಾಗಿದೆ. ಶೈವನಾಗದೇ ಮುಕ್ತಿ ಹೊಂದಲು ಸಾಧ್ಯವಿಲ್ಲ ಎಂಬ ಅರಿವನ್ನು ಹೊಂದುವುದು ಸಹ ಮತಾಂತರದ ಉದ್ದೇಶವೆಂದು ಈ ಕೃತಿಯು ತಿಳಿಸುತ್ತದೆ212. ಅದೇ ರೀತಿ, ತಾಂತ್ರಿಕ ಸಾಹಿತ್ಯವಾದ ‘ಕುಬ್ಜಿಕಾನಿತ್ಯಾಹನಿಕತಿಲಕ’ (1197) 9 ಬೌದ್ಧರನ್ನು ‘ಕೌಲ’ ಧರ್ಮಕ್ಕೆ ಮತಾಂತರಿಸಿದ್ದಾಗಿ ವಿವರಿಸುತ್ತದೆ. ಇದರ ಪ್ರಕಾರ ದಾಖಲಾಗಿರುವ ಸಂಪ್ರದಾಯಗಳಂತೆ, ಶ್ರೀನಾಥ ಅಲಿಯಾಸ್ ತುಶ್ನೀಶ ಅಲಿಯಾಸ್ ಉನ್ಮನೀಶನಾಥನು ಕುಬ್ಜಿಕಾ ತಾಂತ್ರಿಕ ಪರಂಪರೆಯ ಮೊದಲ ಗುರು. ಆತ ಯಾವಾಗ ಗಂಧರ್ವರ (ಗಂಧರ್ವ ಲೋಕ) ಭೂಮಿಗೆ ಹೋದನೋ ಅಲ್ಲಿನ ಕೆಲವು ಬೌಧ್ಧರು ಅವನನ್ನು ಪ್ರಶ್ನಿಸಿದರು. ಆತ ಅವರಿಗೆ ತಾನು ಸಿದ್ಧ (ಪರಿಪೂರ್ಣ) ಮತ್ತು ಶ್ರೇಷ್ಠ ದೈವದ ಅರಿವನ್ನು (‘ದಿವ್ಯಜ್ಞಾನ ವರಲಬ್ಧಕ’) ಸ್ವಾಧೀನ ಪಡಿಸಿಕೊಂಡಿದ್ದೀನೆ ಎಂದುತ್ತರಿಸಿದನು. ಇದನ್ನು ಕೇಳಿ ಬೌದ್ಧರು ಅವನನ್ನು ನೋಡಿ ನಕ್ಕರು ಮತ್ತು ಅವನ ಮಾತುಗಳನ್ನು ಸಾಬೀತು ಪಡಿಸಲು ಹೇಳಿದರು. ಶ್ರೀನಾಥನ ಈ ಕಥೆ ಮುಂದುವರಿದಂತೆ, ಆತ ಬೌಧ್ಧ ಮಂತ್ರವಾದ ‘ಹುಮ್’ ಅಥವಾ ‘ಹೂಂಕಾರ’ವನ್ನು ಝೇಂಕರಿಸದನು, ತಕ್ಷಣ ಬೌದ್ಧ ವಿಹಾರಗಳು ಕುಸಿದು ಬಿದ್ದವು. ಸನ್ಯಾಸಿಗಳು ಆತನ ಜ್ಞಾನದ ಮೇಲಿನ ಹಿಡಿತವನ್ನು ಒಪ್ಪಿಕೊಂಡರು, ನಂತರದಲ್ಲಿ ಬೌಧ್ಧರನ್ನು ಆತ ಮತಾಂತರಿಸಿದನು213. ಲೌಕಿಕ ಸಾಹಿತ್ಯಗಳಲ್ಲಿ, ಕೃಷ್ಣಮಿಶ್ರನ ‘ಪ್ರಭೋಧಚಂದ್ರೋದಯ’ವು (11ನೇ ಶತಮಾನ) ಕಾಪಾಲಿಕನೊಬ್ಬನು ಬೌದ್ಧ ಮತ್ತು ಜೈನರೊಡನಡೆಸಿದ ಆಸಕ್ತಿದಾಯಕ ಮಾತುಕತೆ ಹಾಗೂ ಅವರಿಗೆ ಮಧ್ಯ ಮತ್ತು ಹೆಣ್ಣನ್ನು ನೀಡುವ ಮೂಲಕ ಅವರನ್ನು ಶೈವರನ್ನಾಗಿ ಮತಾಂತರಿಸಲು ಸಫಲರಾದದ್ದನ್ನು ದಾಖಲಿಸುತ್ತದೆ214.
ಅನೇಕ ಧಾರ್ಮಿಕ ಪಂಥಗಳ ಬೆಳವಣಿಗೆಯಲ್ಲಿ ಮತ್ತು ಧಾರ್ಮಿಕ ದೃಶ್ಯಗಳಲ್ಲಿ ಕಂಡುಬಂದ ಹಲವಾರು ಭಕ್ತಿ ಸಂತರು ಮತ್ತು ಗುರುಗಳು ಧಾರ್ಮಿಕ ಮತಾಂತರಗಳಲ್ಲಿ ಕೇಂದ್ರ ಪಾತ್ರ ನಿರ್ವಹಿಸಿದ್ದಾರೆ. ಅದರಲ್ಲಿಯೂ ಅವರು ಆರಂಭಿಕ ಮಧ್ಯಕಾಲೀನ ದಕ್ಷಿಣ ಭಾರತ, ಮತ್ತು ಜನರನ್ನು ಮತಾಂತರದ ಮೂಲಕ ಅತ್ಯಂತ ಶ್ರೇಷ್ಠ ದೈವದ ಧಾರ್ಮಿಕ ಶರಣಾಗತಿಯನ್ನು ಹೊಂದುವಂತೆ ಮಾಡಲು ಉತ್ಸಾಹಿತರಾಗಿದ್ದ ಧರ್ಮಪ್ರಚಾರಕರಾಗಿದ್ದರು. ಇದು ಆರಂಭಿಕ ಮಧ್ಯಕಾಲೀನ ಶೈವ ಸಂತ ಚರಿತೆಗಳು ಮತಾಂತರದ ಘಟನೆಗಳನ್ನು ದಾಖಲಿಸಿರುವುದನ್ನು ದೃಢೀಕರಿಸುತ್ತದೆ. 12ನೇ ಶತಮಾನದ ಕೃತಿಯಾದ ಸೆಕ್ಕಿಲಾರ್ನ ಪೆರಿಯಪುರಾಣಂ ಹೇಳುವಂತೆ ನಾಯನಾರ್ರ ಸಂತನಾದ ಅಪ್ಪಾರನು ವೆಲ್ಲಾಲ ಸಮುದಾಯದ ಸಾಂಪ್ರದಾಯಿಕ ಶೈವ ಕುಟುಂಬದಲ್ಲಿ ಜನಿಸಿದನು, ಮುಂದೆ ಆರಂಭಿಕ ಹಂತದಲ್ಲಿ ಜೈನ ಸನ್ಯಾಸಿಯಾದನು. ಆತನ ಹಿರಿಯ ಸಹೋದರಿ ಶಿವನ ಸಹಾಯ ಪಡೆಯಲು ಬಯಸಿದಾಗ ಉದ್ವಿಗ್ನನಾದನು. ಆಗ ಅಪ್ಪಾರನು ತೀವ್ರವಾದ ಹೊಟ್ಟೆ ಸಂಬಂಧಿತ ರೋಗದಿಂದ ತೊಳಲಾಡುತ್ತಿದ್ದನು. ಅದನ್ನು ಜೈನ ವೈದ್ಯರು ಮತ್ತು ಮಂತ್ರಗಳಿಂದ ಸರಿಪಡಿಸಲಾಗಲಿಲ್ಲ ಬದಲಿಗೆ ಶಿವನ ಅನುಗ್ರಹ ಮತ್ತು ಪವಾಡದಿಂದ ಸಾಧ್ಯವಾಯಿತಂತೆ. ಹಿಂದೆ ತಾನು ಜೈನನಾಗಿ ಮತಾಂತರಗೊಂಡಿದ್ದಕ್ಕೆ ಪಶ್ಚಾತ್ತಾಪ ಪಟ್ಟು, ಪುನಃ ತನ್ನ ಕುಟುಂಬದ ಶೈವ ನಂಬಿಕೆಗೆ ಹಿಂದಿರುಗಿದನು. ಇದರಿಂದ ಜೈನರು ಕೆರಳಿ ಪಲ್ಲವ ದೊರೆ ಮಹೇಂದ್ರವರ್ಮನ ಮುಂದೆ ಅವನ ವಿರುದ್ಧ ದೋಷಾರೋಪ ಮಾಡಿದರು. ದೊರೆಯು ಜೈನ ಧರ್ಮದ ಅನುಯಾಯಿಯಾಗಿದ್ದನು. ಅಪ್ಪಾರ್, ಹೇಗೋ ಶೈವ ಧರ್ಮದ ಸತ್ಯತೆಯನ್ನು ರಾಜನಿಗೆ ಅರಿವು ಮಾಡುವಲ್ಲಿ ಸಫಲನಾದನು, ಕೊನೆಗೆ ಅಲ್ಲಿ ಮಹೇಂದ್ರವರ್ಮನೇ ಸ್ವತಃ ಶೈವನಾಗಿ ಮತಾಂತರ ಹೊಂದಿದನು. ಆದಾಗ್ಯೂ ಈ ನಿರೂಪಣೆಯ ಬಗ್ಗೆ ಹಲವಾರು ಊಹೆ ಮತ್ತು ಕಲ್ಪನೆಗಳು ಅಡಗಿದೆ. ಇದಕ್ಕೆ ಸಂಬಂಧಿಸಿದಂತೆ 5 ಶತಮಾನಗಳ ನಂತರ ಈಗ ಪೆರಿಯಪುರಾಣಮ್ನ ಸಂದರ್ಭ ಇದನ್ನು ವಿಮರ್ಶೀಯವಾಗಿ ಸರಿಯಾಗಿ ಪ್ರಶ್ನಿಸಲಾಗಿದೆ215. ಹಾಗೆ ಅಪ್ಪಾರ್ ಮತ್ತು ಮಹೇಂದ್ರವರ್ಮನ್ ತಮ್ಮ ಧರ್ಮ ಬದಲಿಸಿಕೊಂಡಿದ್ದು ಸತ್ಯ.
ಸೆಕ್ಕಿಲಾರ್ನು ಮತ್ತೊಬ್ಬ ಶೈವ ಸಂತ ಸಂಬಂಧರ್ನು ಜೈನರೊಂದಿಗೆ ಹೊಂದಿದ್ದ ಸೆಣಸಾಟವನ್ನು ದಾಖಲಿಸುವನು. ಕಥೆ ಮುಂದುವರಿಯುವಂತೆ, ಸಂಬಂಧರ್ನನ್ನು ರಾಜನ ಮೇಲೆ ಜೈನ ಸನ್ಯಾಸಿಗಳು ಹೊಂದಿದ್ದ ಹಿಡಿತದಿಂದ ಮುಕ್ತಿಗೊಳಿಸಲು ಪಾಂಡ್ಯ ರಾಣಿ ಮತ್ತು ಮಂತ್ರಿಯು ಮಧುರೈಗೆ ಆಹ್ವಾನಿಸಿತ್ತಾರೆ. ಸಂತನು ಮಧುರೆಗೆ ಹೋದನು ಮತ್ತು ತನ್ನ ಚಮತ್ಕಾರಗಳ ಮೂಲಕ ಜೈನರಿಗಿಂತ ಹೆಚ್ಚಿನ ಶ್ರೇಷ್ಠತೆಯನ್ನು ಸಾಬೀತು ಪಡಿಸಿದನು ಮತ್ತು ರಾಜನನ್ನು ಶೈವನನ್ನಾಗಿ ಮತಾಂತರಿಸಿದನು ಎಂದು ತಿಳಿಸುತ್ತದೆ. ನಾವು ಆರಂಭದಲ್ಲಿಯೇ ಗಮನಿಸಿರುವಂತೆ ಆ ಕಾಲದಲ್ಲಿ 8000 ಜೈನರನ್ನು ಶೂಲಕ್ಕೆ ಏರಿಸಲಾಯಿತು. ಹೀಗೆ ಮಹೇಂದ್ರ ವರ್ಮನನ್ನು ಶೈವನನ್ನಾಗಿ ಮತಾಂತರಿಸಿದ ಕಥೆ ಮತ್ತು ಪಾಂಡ್ಯನ್ ದೊರೆಯನ್ನು ಮತಾಂತರಿಸಿದ್ದನ್ನು ಸುದೀರ್ಘ ಕಥೆಯನ್ನಾಗಿ ಶೆಕ್ಕಿಲಾರ್ ಹೇಳಿದ್ದಾನಾದರೂ ಕೂಡಾ ಈ ಎರಡು ಸಂದರ್ಭದಲ್ಲಿಯೂ ಮತಾಂತರದ ಸತ್ಯವನ್ನು ಪ್ರಶ್ನಿಸಿಲ್ಲ.
ಆರಂಭಿಕ ಮಧ್ಯಕಾಲೀನ ಸ್ಮøತಿಯೂ ಸೂಚಿಸುವಂತೆ ವೈದಿಕ ಧರ್ಮದಲ್ಲಿ ಮತಾಂತರದ ವಿಚಾರ ಸಂಪೂರ್ಣವಾಗಿ ಹೊಸದೇನೂ ಆಗಿರಲಿಲ್ಲ. ದೇವಲ ಸ್ಮøತಿ ಹೇಳುವಂತೆ ಮ್ಲೇಚ್ಛರನ್ನು ಬ್ರಾಹ್ಮಣರು ಮತ್ತು ಇತರ ಜಾತಿಯವರು ಕರೆದೊಯ್ದರೆ ಮತ್ತು ನಿಷೇಧಿಸಿದ ಚಟುವಟಿಕೆಯಲ್ಲಿ ಅವರು ತೊಡಗಿದ್ದರೆ ಅವರನ್ನು ಇಲ್ಲಿ ಹೇಳಿರುವಂತೆ ಪ್ರಾಯಶ್ಚಿತ್ತ ಕ್ರಿಯೆಯ ಮೂಲಕ ಶುಧ್ಧೀಕರಿಸಬಹುದಿತ್ತು216. ಹಾಗೆ ಇದು ಐದರಿಂದ ಇಪ್ಪತ್ತು ವರ್ಷಗಳವರೆಗೆ ಮ್ಲೇಚ್ಛರ ಜೊತೆಗೆ ವಾಸವಿದ್ದವರನ್ನು ಎರಡು ಚಂದ್ರಾಯಣದ ಒಳಗೆ ಶುಧ್ಧೀಕರಿಸುವ ಬಗೆಗೆ ತಿಳಿಸುತ್ತದೆ217. ದೇವಲ ಸ್ಮ್ರತಿ ಮತ್ತು ಆರಂಭಿಕ ಮಧ್ಯಕಾಲೀನ ಕಾನೂನು ಪಂಡಿತರ ಪ್ರಕಾರ ಯಾರೇ ಆದರೂ ಅವರ ಧರ್ಮವನ್ನು ತೊರೆದು ಹೋಗಿದ್ದರೆ ಮತ್ತೆ ಅವರನ್ನು ಧರ್ಮದ ತೆಕ್ಕೆಯೊಳಗೆ ತೆಗೆದುಕೊಳ್ಳಬಹುದಿತ್ತು218. ಈ ಪ್ರಾಯಶ್ಚಿತ್ತದ ಆಲೋಚನೆಯನ್ನು ಮುಂದೆ ಆರ್ಯ ಸಮಾಜ ಶುದ್ಧಿ ಚಳುವಳಿಯ219 ರೂಪದಲ್ಲಿ ನಡೆಸಿತು ಮತ್ತು ಇದು ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಈಗ ಉಗ್ರವಾಗಿ ವಿ.ಹೆಚ್.ಪಿ ಹಾಗೂ ಅದರ ಸಂಬಂಧಿತರಿಂದ ಬೆಂಬಲಿತವಾದ ಪರಾವರ್ತನ ಎನ್ನುವ ಮತಾಂತರವೇ ಆಗಿದೆ. 1897ರಲ್ಲಿ ವಿವೇಕಾನಂದರಿಂದ ಸ್ಥಾಪಿತವಾದ ರಾಮಕೃಷ್ಣ ಮಿಶನ್ ಕೂಡಾ, ‘ವಿಗ್ರಹಾರಾಧಕ ಹಿಂದೂ ಅಥವಾ ವೇದಾಂತೀಯ ಮಿಶನರಿಗಳಿಂದ ಅಮೇರಿಕಾವನ್ನು ಪ್ರವಹಿಸುವ’ ಮತ್ತು ‘ಹಲವು ದಶಕಗಳಲ್ಲಿ ಅಮೇರಿಕಾ ಮತ್ತು ಯುರೋಪನ್ನು ಅದ್ವೈತ ವೇದಾಂತದೆಡೆಗೆ ಮತಾಂತರಿಸುವ’ ಉದ್ದೇಶದ ಪ್ರಣಾಳಿಕೆಯನ್ನು ಘೋಷಿಸಿತ್ತು220.
ಮತಾಂತರದ ಈ ಉಲ್ಲೇಖಗಳಲ್ಲಿ ಬಹಳಷ್ಟನ್ನು ವ್ರತ್ಯಸೋಮವನ್ನು ಹೊರತುಪಡಿಸಿ ಉಳಿದದ್ದನ್ನು ಆರಂಭಿಕ ಮಧ್ಯಕಾಲಕ್ಕೆ ಸೇರಿಸಬಹುದಾಗಿದೆ. ಇದೇ ಸಂದರ್ಭದಲ್ಲಿ ಪ್ರಮುಖವಾದ ಪುರಾಣಗಳನ್ನು ರಚಿಸಲಾಯಿತು. ಮೊದಲೇ ಗಮನಿಸಿರುವಂತೆ, ಇವೆಲ್ಲವೂ ವಿವಿಧ ಪಂಥೀಯರ ನಡುವಿನ ವೈರತ್ವಕ್ಕೆ ಹಲವಾರು ದಾಖಲೆಗಳನ್ನು ಒದಗಿಸುತ್ತದೆ. ಆದರೆ ಇವೆಲ್ಲವೂ ಅಷ್ಟೇ ಮಹತ್ವದ್ದು ಏಕೆಂದರೆ ಅವರು ವೈದಿಕರ ದ್ವೇಷಿಸಿದ ಮತ್ತು ಅವರನ್ನು ಮತಾಂತರಿಸಿದ ಚಟುವಟಿಕೆಗಳನ್ನಷ್ಟೇ ತೋರಿಸುತ್ತವೆಯೇ ಹೊರತು ಅವರು ವೈದಿಕೇತರ ಅಥವಾ ಅಸಾಂಪ್ರದಾಯಿಕ ಪಂಥೀಯರನ್ನು ಕೆಟ್ಟದ್ದಾಗಿ ನಡೆಸಿಕೊಂಡ ಬಗ್ಗೆ ಮಾತನಾಡುವುದಿಲ್ಲ. ಉದಾಹರಣೆಗೆ, ವಿಷ್ಣು ಪುರಾಣವು, ‘ದೈತ್ಯರನ್ನು ವೈದಿಕತೆಯಿಂದ ದೂರಸರಿಸಲು ಅಥವಾ ಅನಾಕರ್ಷಿಸಲು ಗೌತಮ ಬುಧ್ಧನು ಭುವಿಗೆ ಅವತರಿಸಿದನು’ ಎನ್ನುತ್ತದೆ221. ಪುರಾಣಗಳನ್ನು ಒಂದೆಡೆ, ಅವೈದಿಕ ಪಂಥಗಳಿಗೆ ಜನರು ಮತಾಂತರವಾಗದಂತೆ ತಡೆಯಲು ಬಳಸಿಕೊಂಡರೆ ಮತ್ತೊಂದೆಡೆ ಬೇರೆ ಬೇರೆ ಬ್ರಾಹ್ಮಣೀಯತೆ ಬಯಸಿದ ಮತ್ತು ಉಲ್ಲೇಖಿಸಿದ ಸಾಂಸ್ಕ್ರತಿಕ ಗುಂಪುಗಳಲ್ಲಿ ವೈದಿಕ ವಿಚಾರಧಾರೆಗಳನ್ನು ಹರಡಿ ಅಳವಡಿಸಲು ಅನುವಾಗುವ ರೀತಿಯಲ್ಲಿ ಬಳಸಲಾಯಿತು222.
ಪುರಾಣಗಳ ಬ್ರಾಹ್ಮಣೀಯ ಸಾಹಿತ್ಯ ಮತ್ತು ವಿಚಾರದ ಪ್ರಚಾರದ ಜತೆಗೆ, ಮತ್ತು ಅವರ ಧಾರ್ಮಿಕ ವ್ಯವಸ್ಥೆಗಳು ಅಥವಾ ಸ್ಥಾಪನೆಗಳು ಉತ್ತಮವಾಗಿ ಬೆಳೆಯುವಂತೆ ಬ್ರಾಹ್ಮಣರಿಗೆ ಭೂ ದಾನ ಕೊಡುವ ಪರಿಪಾಠ ಬೆಳೆಯಿತು. ಅದರ ಪರಿಣಾಮ, ಆರಂಭಿಕ ಮಧ್ಯಕಾಲದಲ್ಲಿ ಬ್ರಾಹ್ಮಣ ವಸತಿಗಳು ಅಥವಾ ಅಗ್ರಹಾರದ ರೀತಿಯ ಆವಾಸಗಳು ದೇಶದ ಹಲವಾರು ಭಾಗಗಳಲ್ಲಿ ಕಂಡುಬಂದವು. ಅವುಗಳು ವಿಶೇಷವಾಗಿ ಸಾಂಸ್ಕ್ರತಿಕತವಾಗಿ ಹಿಂದುಳಿದ ಅಥವಾ ಅಂಚಿಗೆ ಸರಿದ ಬುಡಕಟ್ಟು ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದುವು. ಇಂತಹ ಪ್ರದೇಶಗಳಲ್ಲಿ ಬ್ರಾಹ್ಮಣರು ಅತ್ಯಂತ ಉನ್ನತ ಮಟ್ಟದ ಭೌತಿಕ ಸಂಸ್ಕ್ರತಿಯನ್ನು ಹೊಂದಿ ತಮ್ಮ ಸ್ವಂತ ಧಾರ್ಮಿಕ ನಂಬಿಕೆ ಮತ್ತು ಆಚರಣೆಯನ್ನು ಪ್ರಸರಿಸುವ ಪರಿಸ್ಥಿತಿಯಲ್ಲಿದ್ದರು. ಪುರಾಣಗಳನ್ನು ಜನಪ್ರಿಯಗೊಳಿಸುವಿಕೆ ಮತ್ತು ಪರಿಧಿಯ ಭೂಭಾಗಗಳಲ್ಲಿ ಭೂದಾನಗಳು ಎರಡೂ ಕೂಡಾ ಸಾಂಸ್ಕ್ರತಿಕ ವಿಲೀನೀಕರಣ ಹಾಗೂ ಧಾರ್ಮಿಕ ಪರಿವರ್ತನೆಯ ನಿಯೋಗಿಗಳಂತೆ ಅಥವಾ ಏಜೆಂಟ್ಗಳಂತೆ ಕಾರ್ಯನಿರ್ವಹಿಸಿದವು.
ಹೀಗೆ ಈ ರೀತಿಯ ಮಾಧ್ಯಮಗಳು ಅಥವಾ ನಿಯೋಗಿಗಳು ತಂದ ಬದಲಾವಣೆಯ ಗತಿಯು ಬಹಳ ನಿಧಾನಗತಿಯದಾಗಿತ್ತು. ಇದನ್ನು ಹಲವು ಶತಮಾನಗಳಲ್ಲಿ ಗುರುತಿಸಬಹುದಾಗಿದೆ. ಪರಿಧೀಯ ಪ್ರದೇಶಗಳಲ್ಲಿ ಬ್ರಾಹ್ಮಣೀಯತೆ ಅಥವಾ ಬ್ರಾಹ್ಮಣವಾದದ ಹರಿತವಾದ ಪ್ರವೇಶವು ಮತಾಂತರದ ಮೂಲಕ ಇಂತಹ ಪ್ರದೇಶಗಳಲ್ಲಿ ತಂದಿತೆನ್ನಲಾದ ಕ್ಷಿಪ್ರ ಮತ್ತು ನಾಟಕೀಯ ಬದಲಾವಣೆಯ ಜತೆ ಇದನ್ನು ಹೊಂದಿಸಲಾಗದೂ ಕೂಡಾ. ಏನೇ ಆದರೂ ಯಾವುದೇ ಅನುಮಾನವಿಲ್ಲ, ಬಹಳಷ್ಟು ಭೂದಾನ ಮತ್ತವುಗಳಿಗೆ ಸಂಬಂಧಿಸಿದ ದಾಖಲೆಗಳಲ್ಲ್ಲಿ ದಾನ ಸ್ವೀಕರಿಸುವವನು ಈ ದಾನ ಸ್ವೀಕರಿಸಿದ ಕಾರಣ ಮತ್ತು ಜಮೀನಿನ ಆದಾಯದಲ್ಲಿ ಕೇವಲ ವೈದಿಕ ಸಾಹಿತ್ಯಗಳ ಶಿಕ್ಷಣವನ್ನು ಬೋಧಿಸಬೇಕಾಗಿತ್ತಲ್ಲದೇ ಅತ ವೈದಿಕ ಯಜ್ನ, ಆಚರಣೆಗಳು ಮತ್ತು ಸಂಸ್ಕಾರಗಳನ್ನೂ ಕೂಡಾ ಅನೂಛಾನವಾಗಿ ನಡೆಸುವ ಹೊಣೆಯನ್ನು ಹೊಂದಿರಬೇಕಾಗುತ್ತಿತ್ತು. ಇಂತಹ ಪ್ರಕ್ರಿಯೆಯು ಅವರನ್ನು ಬುಡಕಟ್ಟುಗಳ ಸಮಾಜ ಮತ್ತು ಧರ್ಮಗಳನ್ನು ಅತಿಕ್ರಮಿಸಲು ಸಹಕಾರಿಯಾಯಿತು. ಛತ್ತೀಸ್ಘರ್ನ ರಾಯಪುರ್ ಜಿಲ್ಲೆಯ ಎಂಟನೇ ಶತಮಾನಕ್ಕೆ ಸೇರಿದ ಆಸಕ್ತಿದಾಯಕ ಶಾಸನವೊಂದು ಇಬ್ಬರು ಶೈವ ಸಂತರುಗಳಾದ ‘ಸಾಧ್ಯಶಿವಾಚಾರ್ಯ’ ಮತ್ತು ‘ಸದಾಶಿವಾಚಾರ್ಯ’ರನ್ನು ದಾಖಲಿಸುತ್ತದೆ ಹಾಗೂ ಇವರಿಗೆ ಮತ್ತು ನಂತರದಲ್ಲಿ ಇವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಿಗೆ ಹಲವಾರು ಪ್ರದೇಶದಲ್ಲಿ ಕಪ್ಪು ಮಣ್ಣಿನ (‘ಕೃಷ್ಣತಳಾ’) ಭೂ ದಾನವನ್ನು ದಾಖಲಿಸುತ್ತದೆ. ಇದು ಹೇಳುವಂತೆ, ಸಂತರು ಈ ದತ್ತಿಯ ಸ್ವೀಕಾರದಿಂದ ಉಚಿತ ಊಟದ ವಸತಿಗಳನ್ನು ನೋಡಿಕೊಳ್ಳುವಂತೆ(‘ಅನ್ನಸ್ಯ ಸತ್ರಂ’), ಯಾಗ ಕ್ರಿಯೆ ಅಥವಾ ಯಜ್ನದ ಆಚರಣೆ, ಶೈವ ತತ್ವದ ವ್ಯಾಖ್ಯಾನ ಮತ್ತು ಪ್ರಸಾರ (ವ್ಯಾಖ್ಯಾಯಾಃ ಸಮಾಯಾಸ್ಯ) ಮತ್ತು ಶೈವ ನಂಬಿಕೆಗೆ ಪ್ರವರ್ತನ ಆಚರಣೆ ಅಥವಾ ದೀಕ್ಷೆ ಮತ್ತು ಮುಕ್ತಿಯನ್ನು ಪಡೆಯಲು ಸಹಕಾರಿಯಾಗುವ ‘ನಿರ್ವಾಣ ದಕ್ಷ’ವನ್ನು ಆಚರಿಸಬೇಕಿತ್ತು223. ಈ ಶಾಸನವು ಸ್ಪಷ್ಠವಾಗಿ ಪುರೋಹಿತರಿಗೆ ನೀಡುತ್ತಿದ್ದ ಭೂದಾನವು ಹೊರಗಿನ ಅಥವಾ ಪರಿಧೀಯ ಭೂಭಾಗದಲ್ಲಿ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳನ್ನು ಬುಡಕಟ್ಟು ಗುಂಪುಗಳಲ್ಲಿ ಹರಡಲು ಹಾಗೂ ಅವರನ್ನು ವೈದಿಕ ಪಂಥಗಳಿಗೆ ಮತಾಂತರಿಸಲು ಅತ್ಯಂತ ಪ್ರಮುಖ ಮತ್ತು ಪ್ರಭಾವೀ ಸಲಕರಣೆಯಾಗಿತ್ತು ಎಂಬುದನ್ನು ಸೂಚಿಸುತ್ತದೆ. ಅದೇ ರೀತಿ ಮತ್ತು ಅದೇ ವೇಳೆಯಲ್ಲಿ ವಿಹಾರಗಳು ಹಾಗೂ ಅದರ ಅನುಯಾಯಿಗಳ ಸಾಂಪ್ರದಾಯಿಕವಾಗಿ ಶಂಕರ ಸ್ಥಾಪಿಸಿದ ಸನ್ಯಾಸೀ ಮಠಗಳು ಮತ್ತು ಸನ್ಯಾಸೀ ಸಂಪ್ರದಾಯವು ಶಂಕರರ ವಿಚಾರಧಾರೆಯನ್ನು ಪ್ರಭಾವಿಯಾಗಿ ಹರಡಿತು ಎನ್ನಬಹುದಾದರೂ ಕೂಡಾ, ‘ನಾರದಪರಿವ್ರಾಜಕೋಪನಿಷದ್’ ಉಲ್ಲೇಖಿಸುವ ದೀಕ್ಷೆ ಅಥವಾ ಆರಂಭ ಕ್ರಿಯಾವಿಧಿಯ ಹೊರತಾಗಿಯೂ, ಜನರನ್ನು ಮತಾಂತರಿಸುವಲ್ಲಿ ಇದ್ದಿದ್ದ ಅವರ ಪಾತ್ರವನ್ನು ಪರಿಶೀಲಿಸಬೇಕಾದ ಅಗತ್ಯವಿದೆಯಷ್ಟೇ224. ಹಲವಾರು ಶಾಸನಗಳು ನೇರವಾಗಿ ನೀಡಿರುವ ಮಾಹಿತಿಯಂತೆ ಮತಾಂತರದ ಸಂಖ್ಯೆಯು ದೊಡ್ಡದಾಗಿರಲಿಲ್ಲ. ಶಂಕರ ಮಠಗಳು ಈ ಮತಾಂತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಕುರಿತು ಮಾಹಿತಿಯೂ ನಮಗೆ ತೀರಾ ಸಿಗುವುದಿಲ್ಲ. ಆದರೆ ಹಿಂದೂ ಧರ್ಮವು ಧರ್ಮ ಪ್ರಚಾರವನ್ನು ಖಡಾಖಂಡಿತವಾಗಿ ಮಾಡುತ್ತಿರಲಿಲ್ಲ ಎಂಬ ಬೀಸು ಹೇಳಿಕೆ ಮಾತ್ರ ತಪ್ಪು ಮತ್ತು ತಳವಿಲ್ಲದ ವಾದವಾಗಿದೆ ಹಾಗೂ ಚರಿತ್ರಕಾರರಿಗೆ ಇಂತಹ ಹೇಳಿಕೆಯನ್ನು ಪುನರ್ವಿಮರ್ಶಿಸಬೇಕಾದ ಕರೆಯನ್ನು ನೀಡಿದೆ.
8
ಸನಾತನ, ಅಖಂಡ, ಸಹಿಷ್ಣು ಮತ್ತು ಮತಾಂತರಗೊಳಪಡಿಸದ ಒಂದೇ ಪ್ರಕಾರದ ಹಿಂದೂಯಿಸಂನ ಆವಿಷ್ಕಾರ 19ನೇ ಶತಮಾನದ ನಂತರವೇ ಆಗಿದ್ದು ಹಾಗೂ ಪ್ರಪಂಚದ ಇತರ ಎಲ್ಲಾ ಧರ್ಮಗಳಿಗಿಂತ ಭಿನ್ನವಾದುದು ಎಂದು ಬಿಂಬಿಸಿಕೊಳ್ಳಲು ಅದು ಸಾಕಷ್ಟು ವರ್ಷಗಳೇ ಹಿಡಿಯಿತು. ಹಿಂದೂ ಸಾಂಸ್ಕøತಿಕ ರಾಷ್ಟ್ರೀಯತೆಯು ಇಲ್ಲಿ ಧರ್ಮವನ್ನು ಅನನ್ಯವಾಗಿದೆ ಎಂದು ಅತ್ಯಂತ ಗದ್ದಲದಿಂದ ಕಲ್ಪಿಸಿಕೊಳ್ಳುತ್ತಿದೆಯೇ ಹೊರತು ಅದರ ವಿಷಯಾಧಾರಿತವಾದ ನೆಲೆನಿಲುವುಗಳನ್ನಲ್ಲ. ಇಂತಹ ಅನನ್ಯತೆಯ ಕಲ್ಪನೆಗಳು, ಹಿಂದೂ ಧರ್ಮವು ಪಶ್ಚಿಮದ ವಿಶ್ವವಿದ್ಯಾಲಯಗಳಲ್ಲಿ ಧರ್ಮವನ್ನು ಅಧ್ಯಯನ ಮಾಡುವ ವಿದ್ವಾಂಸರಿಂದ ಉತ್ತೇಜನ ಮತ್ತು ಸಹಕಾರವನ್ನು ಪಡೆಯುತ್ತಿರುವುದು ನಮಗೆ ಚರ್ವಿತಚರ್ವಣದ ರೀತಿಯಲ್ಲಿ ಪರಿಣಮಿಸಿದೆ. ಅಲ್ಲಿ ಧಾರ್ಮಿಕ ಅಧ್ಯಯನಗಳ ವಿಭಾಗಗಳು ಅಥವಾ ಧರ್ಮಗಳ ತುಲನಾತ್ಮಕ ವಿಭಾಗಗಳು 2ನೇ ಮಹಾಯುದ್ಧದ ನಂತರ ಅಣಬೆಯಂತೆ ತಲೆದೋರಿದುವು ಮತ್ತು ಅವುಗಳ ಸಂಖ್ಯೆಯು ಅಮೇರಿಕಾ ಒಂದರಲ್ಲೇ ಸುಮಾರು 1200ಕ್ಕೂ ಹೆಚ್ಚಿದೆ225.
ಈ ವಿಭಾಗಗಳಿಗೆ ಸಂಯೋಜನೆಗೊಂಡ ಬಹಳಷ್ಟು ಜನ ವಿದ್ವಾಂಸರು ಮತ್ತು ಕೆಲವು ಭಾರತೀಯ ವಿದ್ಯಾರ್ಥಿಗಳು226 ವಿದ್ವಾಂಸರಾದ ‘ಜೋಚಿಮ್ ವಾಚ್’ ಮತ್ತು ‘ಮಿರ್ಸಿಯಾ ಇಲಿಯಡ್’ನಿಂದ227 ಪ್ರೇರಣೆ ಹೊಂದಿದ್ದಾರೆ ಹಾಗೂ ‘ರಿಲೀಜನ್ ಶ್ವಿಶನ್ಶಾಫ್ಟ್’ ಅಥವಾ ಧಾರ್ಮಿಕ ವಿಜ್ಞಾನದ ಬಗ್ಗೆ ಮಾತನಾಡುತ್ತಾರೆ. ಆದರೆ ವಾಸ್ತವವಾಗಿ ಅವರು ಹಿಂದೂಯಿಸಂನ್ನು ಸಮಾಜೋ-ಚಾರಿತ್ರಿಕವಾದ ಸ್ವಾಯತ್ತ ಸ್ವತಂತ್ರ ಅಧ್ಯಯನ ವಿಷಯವಾಗಿ ನೋಡುತ್ತಾರೆ, ಹೀಗಾಗಿ ಅವರು ಧರ್ಮವನ್ನು ವಿಶಿಷ್ಠ, ಏಕಮೇವ ಮತ್ತು ಅದ್ವಿತೀಯ ಸಂಗತಿ ಎಂದು ಹಕ್ಕು ಸಾಧಿಸಿಲು ಸಹಕಾರಿಯಾಗುತ್ತದೆ. ಧಾರ್ಮಿಕ ಅಂಕಿ ಸಂಖ್ಯೆಗಳ ವೈಜ್ಞಾನಿಕ ವಿಮರ್ಶೆ ಮತ್ತು ಯಾವುದೇ ರೀತಿಯ ಸಂಕೀರ್ಣ ಪರಿಕಲ್ಪನಾತ್ಮಕ ವಿವರಣೆಯನ್ನು ವಿರೋಧಿಸುತ್ತದೆ. ಈ ಪರಂಪರೆಯ ಅಧ್ಯಯನಗಳು ಧರ್ಮವನ್ನು ಅದರ ಆಂತರಿಕ ಮತ್ತು ಲಭ್ಯವಾಗುವ ವೈಯುಕ್ತಿಕ ಅನುಭವ ಹಾಗೂ ಧಾರ್ಮಿಕ ನಂಬಿಕೆಗಳ ಆಧಾರಗಳ ಮೇಲೆ ಗಮನಿಸಿವೆ. ಅವುಗಳು ಒಂದು ಅವಲೋಕನಕ್ಕೆ ಸಿಗುವ ಮತ್ತು ದಾಖಲಾದ ದತ್ತಾಂಶಗಳ ಮೇಲಿನ ವಿವರಣೆಯನ್ನು ನಿರಾಕರಿಸಿವೆ228. ಇವುಗಳು ಒಂದು ರೀತಿಯಲ್ಲಿ ದತ್ತ ಪವಿತ್ರ ಪ್ರಕಟೀಕರಣದ ಚಾರಿತ್ರಿಕ ಗಡಿಗಳನ್ನು ಮೀರುವ ಧಾರ್ಮಿಕತೆಗೆ ಹೆಚ್ಚು ಗಮನಹರಿಸಿವೆ229. ಈ ವಿದ್ವಾಂಸರ ಪ್ರಭಾವದಿಂದ ಪಾಶ್ಚ್ಯಾತ ವಿದ್ವಾಂಸರು ಮತ್ತು ಭಾರತೀಯ ಅನುಯಾಯಿಗಳಲ್ಲಿ ಹಿಂದೂಯಿಸಂ ಕುರಿತ ವಿಸ್ತಾರವಾದ ಅಧ್ಯಯನದಲ್ಲಿ ಇತಿಹಾಸ ವಿರೋಧಿ ನೀತಿಯು ನಮಗೆ ಪ್ರತಿಫಲಿಸುತ್ತದೆ. ಉದಾಹರಣೆಗೆ, ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರಮುಖ ಧಾರ್ಮಿಕ ವಿದ್ವಾಂಸೆ ಮತ್ತು ಅತ್ಯಂತ ಪ್ರಭಾವಿಯಾದ ‘ವೆಂಡಿ ಡೊನಿಗರ್’ ಬಹಳಷ್ಟು ಸಂದರ್ಭದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುವಂತಹ ಹಿಂದೂಯಿಸಂನ ಆಯಾಮಗಳನ್ನು ಸಂಸ್ಕøತ ಸಾಹಿತ್ಯದ ವಿಸ್ತಾರವಾದ ಅಧ್ಯಯನದ ಆಧಾರದ ಮೇಲೆ ಅಧ್ಯಯನ ಮಾಡಿದ್ದಾರೆ (ಪುರಾಣ, ಸಂಕೇತ, ರೂಪಕಗಳು) ಹಾಗೂ ಆಸಕ್ತಿದಾಯಕ ಮತ್ತು ಹಿಂದೂ ಡಯಸ್ಪೋರಾವನ್ನು ಕೆರಳಿಸುವ ರೀತಿಯಲ್ಲಿ ಆರಂಭಿಕ ಭಾರತೀಯ ಪುರಾಣ, ಧರ್ಮವನ್ನು ವ್ಯಾಖ್ಯಾನಿಸಿದ್ದಾರೆ. ಆದರೆ ಆಕೆ ಯಾವಾಗಲೂ ಬದಲಾಗುತ್ತಿರುವ ಸಾಮಾಜಿಕ ಸಂದರ್ಭವನ್ನು ಪರಿಶೀಲಿಸುವುದರಿಂದ ದೂರವಾಗಿದ್ದಾರೆ. ಇದನ್ನೇ ನಾವು ಇತ್ತೀಚೆಗೆ ಹಿಂದೂಯಿಸಂ ಕುರಿತು ಪ್ರಕಟಗೊಂಡ ಬಹಳಷ್ಟು ಅಧ್ಯಯನಗಳ ಬಗೆಗೆ ಹೇಳಬಹುದು. ಇವು ಇತಿಹಾಸದ ಬಹುಕಾರಣೀಯ ಚಾರಿತ್ರಿಕ ಮತ್ತು ಸಾಂಸ್ಕøತಿಕ ಪ್ರಕ್ರಿಯೆ ಹಾಗೂ ಪರಿಚಲನೆಯನ್ನು ನೋಡುವಲ್ಲಿ ವಿಫಲಗೊಂಡಿವೆ ಆದರೆ ಇಂತಹ ಅಸಂದರ್ಭೋಚಿತ ವಿದ್ಯಮಾನವಾಗಿ ಅವುಗಳು ಒಂದು ತಳಸ್ಪರ್ಶೀ ಭೌತಿಕ ವಾಸ್ತವಗಳ ಆಧಾರದ ಜತೆ ಜತಕು ಹಾಕಿಕೊಂಡಿಲ್ಲ 230.
ಆದರೆ ಭಾರತದಿಂದ ಕೆಲವು ಅಪವಾದಗಳಿವೆ231. ಆದರೆ ಬಹಳಷ್ಟು ಪಾಶ್ಚಿಮಾತ್ಯ ವಿದ್ವಾಂಸರ ಅಧ್ಯಯನಗಳು ಆರಂಭಿಕ ಧಾರ್ಮಿಕತೆಯ ಹಲವಾರು ಆಯಾಮಗಳ ಮೇಲೆ, ಅದರಲ್ಲಿಯೂ ಹಿಂದೂಯಿಸಂ ಕುರಿತು, ಅವುಗಳನ್ನು ಕೇವಲ ನಂಬಿಕೆಗಳು ವ್ಯವಸ್ಥೆ ಮತ್ತು ಮುಕ್ತಿಯ ವ್ಯವಸ್ಥೆ ಎಂದು ವಿವರಿಸುತ್ತವೆ. ಹಾಗೂ ಅವುಗಳ ಸಾರಸಂಗ್ರಹ ಮತ್ತು ಅವುಗಳ ಸಮಾಜೋ-ರಾಜಕೀಯ ಸಂದರ್ಭಗಳ ಏಕರೂಪತೆಯನ್ನು ಆದ್ಯತೆಯನ್ನಾಗಿ ಗ್ರಹಿಸುತ್ತವೆ232. ಅವರ ಕೃತಿಗಳಲ್ಲಿ, ಘಟನೆ ಮತ್ತು ವಿದ್ಯಮಾನಗಳೇ ವೈಚಾರಿಕ ಚಾರಿತ್ರಿಕ ತನಿಖೆಯ ಸಂಶೋಧನೆಗಿಂತ ಅಗ್ರಸ್ಥಾನ ಪಡೆಯುತ್ತದೆ ಮತ್ತು ಹಿಂದೂಯಿಸಂ ಬಗೆಗಿನ ಗಂಭೀರ ಅಕಡೆಮಿಕ್ ಅಧ್ಯಯನದ ಕೆಲಸಗಳಿಗೆ ಸೂಕ್ಷ್ಮವಾಗಿ ರಕ್ಷಣೆ ನೀಡುತ್ತದೆ. ಸಹಜವಾಗಿ ಅವುಗಳ ಬಗೆಗಿನ ಮಾದರಿ ಪಡಿಯಚ್ಚು, ಸಾಂಪ್ರದಾಯಿಕ ಬದಲಾಗದ ಮಾದರಿ ಅಥವಾ ಸ್ಟೀರಿಯೋಟೈಪ್ ಆಳವಾಗಿ ಬೇರೂರಿವೆ ಹಾಗೂ ಸಮೂಹದ ಮೇಲೆ ಅವುಗಳ ಹಿಡಿತ ಗಟ್ಟಿಯಾಗಿದೆ.
ಧರ್ಮದ ಅಕಡೆಮಿಕ್ ಅಧ್ಯಯನಗಳನ್ನು ಸ್ಕಾಲರ್ಸ್ ಆಫ್ ರಿಲೀಜನ್ ಅಥವಾ ‘ಧಾರ್ಮಿಕ ವಿದ್ವಾಂಸರು’ ಗಳಿಂದ ರಕ್ಷಿಸಬೇಕಾಗಿದೆ. ಅವರು ಏಕಪ್ರಕಾರದ ವಿಚಾರಗಳ ಅಥವಾ ಇಂತಹ ಸ್ಟೀರಿಯೋಟೈಪ್ಗಳ ಗಟ್ಟಿಗೊಳ್ಳುವಿಕೆಗೆ ಅವಕಾಶ ನೀಡಿ, ಧಾರ್ಮಿಕ ಮೂಲಭೂತವಾದ ಮತ್ತು ತಮ್ಮನ್ನು ತಾವು ‘ಧರ್ಮನಿಷ್ಠತೆಗಾಗಿ ಧರ್ಮ’ ಎಂದು ಧರ್ಮದ ರಕ್ಷಣೆಯನ್ನು ಕರ್ತವ್ಯವಾಗಿ ನಿರ್ವಹಿಸುವರು. ಇದು ಅವರ ಪ್ರಶ್ನೀಯ ನಡತೆಯ ಚರಿತ್ರೆಯ ಹೊರತಾಗಿಯೂ ದಕ್ಷತೆಯಿಂದ ಅತಿಭೌತಿಕತೆ ಮತ್ತು ಲೋಲುಪತೆಯಿಂದ ನಡೆದುಕೊಂಡು ನಿರ್ವಹಿಸುವ ಸಾಧು ಸನ್ಯಾಸಿಗಳ ಕಾರ್ಯವಾಗಿದೆಯೇ ಹೊರತು ವಿದ್ವಾಂಸರದಲ್ಲ. ಚರಿತ್ರಕಾರರು ಧರ್ಮದ ಪಾಲಕರು ಅಥವಾ ಸಂರಕ್ಷಕರಲ್ಲ. ಬದಲು ನಮ್ಮ ಕೆಲಸವೇನಿದ್ದರೂ ಅವುಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವಂತದ್ದಷ್ಟೇ.
ಇಟಿಜಟಿoಣes
1. ಓ Pಡಿiಟಿರಿಚಿ, ಇxಠಿಟಚಿiಟಿiಟಿg ಊiಟಿಜu ಆhಚಿಡಿmಚಿ: ಂ ಉuiಜe ಜಿoಡಿ ಖಿeಚಿಛಿheಡಿs, ಓoಡಿಜಿoಟಞ, 1996, ಠಿ 10, ಛಿiಣeಜ iಟಿ Suಜeshಟಿಚಿ ಉuhಚಿ, ‘’ಓegoಣiಚಿಣiಟಿg ಇviಜeಟಿಛಿe: ಊisಣoಡಿಥಿ, ಂಡಿಛಿhಚಿeoಟogಥಿ ಚಿಟಿಜ ಣhe Iಟಿಜus ಅiviಟisಚಿಣioಟಿ’’, ಒoಜeಡಿಟಿ ಂsiಚಿಟಿ Sಣuಜies, voಟ.39, ಟಿo.2(2005), ಠಿ.399.
2. S.P. ಉuಠಿಣಚಿ, ಖಿhe Iಟಿಜus-Sಚಿಡಿsತಿಚಿಣhi ಅiviಟisಚಿಣioಟಿ: ಔಡಿigiಟಿs , Pಡಿobಟems, ಚಿಟಿಜ Issues, ಆeಟhi, 1996, ಠಿ 142; ಃ.ಃ.ಐಚಿಟ, “ಖigveಜiಛಿ ಂಡಿಥಿಚಿಟಿs: ಖಿhe ಆebಚಿಣe musಣ ಉo ಔಟಿ”, ಇಚಿsಣ ಚಿಟಿಜ Wesಣ, voಟ.48, ಟಿos.3-4 (ಆeಛಿembeಡಿ 1998), ಠಿಠಿ.439-48. ಈoಡಿ ಚಿ ಡಿebuಣಣಚಿಟ oಜಿ ಐಚಿಟ, see ಖಚಿm Shಚಿಡಿಚಿಟಿ Sಚಿhಡಿmಚಿ, “ Iಜeಟಿಣiಣಥಿ oಜಿ ಣhe Iಟಿಜus ಅuಟಣuಡಿe”, ಇಚಿsಣ ಚಿಟಿಜ Wesಣ, voಟ 49, ಟಿos.1-4 (ಆeಛಿembeಡಿ 1999), ಠಿಠಿ .35-45;Iಡಿಜಿಚಿಟಿ ಊಚಿbib,”Imಚಿgiಟಿiಟಿg ಖiveಡಿ Sಚಿಡಿಚಿsತಿಚಿಣi- ಂ ಆeಜಿeಟಿಛಿe oಜಿ ಅommoಟಿseಟಿse’, Pಡಿoಛಿeeಜiಟಿgs, Iಟಿಜiಚಿಟಿ ಊisಣoಡಿಥಿ ಅoಟಿgಡಿess, 61sಣ sessioಟಿ, ಏoಟಞಚಿಣhಚಿ, 2001, ಠಿಠಿ.65-92
3. ಹರಪ್ಪಾ ಸಂದರ್ಭದ ಕುದುರೆ ಸಾಕ್ಷಕ್ಕಾಗಿ ನೋಡಿ, ಖ.S. Shಚಿಡಿmಚಿ, ಐooಞiಟಿg ಜಿoಡಿ ಣhe ಂಡಿಥಿಚಿಟಿs, ಊಥಿಜeಡಿಚಿbಚಿಜ, 1994, ಠಿಠಿ.14–34; iಜem, ಂಜveಟಿಣ oಜಿ ಣhe ಂಡಿಥಿಚಿಟಿs iಟಿ Iಟಿಜiಚಿ, ಆeಟhi, 1999, ಠಿಠಿ.12–21; ಂsಞo Pಚಿಡಿಠಿoಟಚಿ, ಆeಛಿiಠಿheಡಿiಟಿg ಣhe Iಟಿಜus Sಛಿಡಿiಠಿಣ, ಅಚಿmbಡಿiಜge, 1994, ಠಿಠಿ.155–9.
ಕುದುರೆಯ ಫೋರ್ಜರಿ ಬಗೆಗಿನ ಸಾಕ್ಷದ ಚರ್ಚೆಗಾಗಿ ನೋಡಿ, ಒiಛಿhಚಿeಟ Wiಣzeಟ ಚಿಟಿಜ Sಣeve ಈಚಿಡಿmeಡಿ, “ಊoಡಿseಠಿಟಚಿಥಿ ಚಿಣ ಊಚಿಡಿಚಿಠಿಠಿಚಿ: ಖಿhe Iಟಿಜus ಗಿಚಿಟಟeಥಿ ಆeಛಿiಠಿheಡಿmeಟಿಣ ಊoಚಿx”, ಈಡಿoಟಿಣಟiಟಿe, 13 ಔಛಿಣobeಡಿ ಚಿಟಿಜ 24 ಓovembeಡಿ 2000.
4 ಬಿ.ಬಿ.ಲಾಲ್ ಮತ್ತು ಅವರ ಸಂಗಡಿಗರ ಬಗೆಗಿನ ವಿಮರ್ಶೆ ಮತ್ತು ನಿಲುವುಗಳಿಗಾಗಿ ನೋಡಿ, Suಜeshಟಿಚಿ ಉuhಚಿ, oಠಿ. ಛಿiಣ, ಠಿಠಿ.399-426. ಸ್ವದೇಶಿ ಮೂಲದ ಕುರಿತು ತನ್ನ ತರ್ಕಗಳನ್ನು ಮಂಡಿಸುವ ಸಲುವಾಗಿ ಬಿ.ಬಿ.ಲಾಲ್ ಅವರು ಮೆಗಾಲಿತಿಕ್ ಗ್ರಾಫಿಟಿ ಮತ್ತು ಚಾಲ್ಕೋಲಿತಿಕ್ ಅವಧಿಯ ಮಡಿಕೆಯ ಅಥವಾ ಪಾಟರಿಯ ನಡುವೆ ಒಂದು ಕಡೆಹೋಲಿಕೆ ಇದೆಯೆನ್ನುತ್ತಾರೆ, ಇನ್ನೊಂದೆಡೆ ಹರಪ್ಪಾದ ಲಿಪಿ ಮತ್ತು ಬ್ರಾಹ್ಮೀ ಲಿಪಿಯ ನಡುವೆ ಹೋಲಿಕೆಯಿದೆ ಎನ್ನುತ್ತಾರೆ ತಮ್ಮ ಕೃತಿಯಲ್ಲಿ, ನೋಡಿ, “ಈಡಿom ಣhe ಒegಚಿಟiಣhiಛಿ ಣo ಣheಊಚಿಡಿಚಿಠಿಠಿಚಿ: ಖಿಡಿಚಿಛಿiಟಿg ಃಚಿಛಿಞ ಣhe ಉಡಿಚಿಜಿಜಿiಣi oಟಿ ಣhe Poಣಣeಡಿಥಿ”,ಂಟಿಛಿieಟಿಣ Iಟಿಜiಚಿ, 16(1960), ಠಿಠಿ.4–24.
ಇತ್ತೀಚಿಗಂತೂ ಲಾಲ್ ಅವರು ಅತ್ಯಂತ ಸ್ಪಷ್ಠವಾಗಿ ಇವೆರಡೂ ಲಿಪಿಗಳ ನಡುವೆ ಅಂತಹ ಯಾವುದೇ ಹೋಲಿಕೆ ಇಲ್ಲವೆಂದು ಅನುಮೋದಿಸುತ್ತಿದ್ದಾರೆ ತಮ್ಮ ಕೃತಿ, ಖಿhe Sಚಿಡಿಚಿsತಿಚಿಣi ಈಟoತಿs ಔಟಿ, ಆeಟhi, 2002, ಠಿಠಿ.132–5 ಅಲ್ಲಿ. ಹಲವು ವರ್ಷದ ಹಿಂದೆ ಲಾಲ್ ಅವರು ಹರಪ್ಪಾದ ಲಿಪಿಯನ್ನು ಬಲದಿಂದ ಎಡಕ್ಕೆ ಓದಬಹುದೆಂಬ ಅಭಿಪ್ರಾಯವನ್ನು ನೀಡಿದ್ದರು ಆದರೆ ಇತ್ತೀಚಿನ ವಾದವೆಂದರೆ ಹರಪ್ಪಾದ ಜನರು ಲಿಪಿಯನ್ನೇ ಹೊಂದಿರಲಿಲ್ಲ ಹಾಗೂ ಅಕ್ಷರಸ್ಥರಾಗಿರಲಿಲ್ಲ ಎಂಬುದಾಗಿ, ಇದರ ಬಗೆಗಿನ ವಿವರಣೆಗಾಗಿ ನೋಡಿ, Sಣeve ಈಚಿಡಿmeಡಿ ಚಿಟಿಜ ಒiಛಿhಚಿeಟ Wiಣzeಟ, “ಖಿhe ಅoಟಟಚಿಠಿse oಜಿ ಣhe Iಟಿಜus-Sಛಿಡಿiಠಿಣ ಖಿhesis: ಖಿhe ಒಥಿಣh oಜಿ ಚಿ ಐiಣeಡಿಚಿಣe ಊಚಿಡಿಚಿಠಿಠಿಚಿಟಿ ಅiviಟizಚಿಣioಟಿ”, ಇಟeಛಿಣಡಿoಟಿiಛಿ ಎouಡಿಟಿಚಿಟ oಜಿ ಗಿeಜiಛಿ Sಣuಜies, voಟ.11, ಟಿo.2 (2004), ಠಿಠಿ.19–57.
5. ಃ.ಓ. ಒuಞheಡಿರಿee, ಓಚಿಣioಟಿhooಜ ಚಿಟಿಜ Sಣಚಿಣehooಜ iಟಿ Iಟಿಜiಚಿ: ಂ ಊisಣoಡಿiಛಿಚಿಟ Suಡಿveಥಿ, ಓeತಿ ಆeಟhi, 2001; Iಡಿಜಿಚಿಟಿ ಊಚಿbib, “ಖಿhe ಇಟಿvisioಟಿiಟಿg oಜಿ ಚಿ ಓಚಿಣioಟಿ: ಂ ಆeಜಿeಟಿಛಿe oಜಿ ಣhe Iಜeಚಿ oಜಿ Iಟಿಜiಚಿ”, Soಛಿiಚಿಟ Sಛಿieಟಿಣisಣ, voಟ.27, ಟಿos.9–10 (1999), ಠಿಠಿ.18–29; iಜem, eಜ., Iಟಿಜiಚಿ: Sಣuಜies iಟಿ ಣhe ಊisಣoಡಿಥಿ oಜಿ ಚಿಟಿ Iಜeಚಿ, ಆeಟhi, 2005; ಖಚಿರಿಚಿಣ ಏಚಿಟಿಣಚಿ ಖಚಿಥಿ, ಖಿhe ಈeಟಣ ಅommuಟಿiಣಥಿ: ಅommoಟಿಚಿಟiಣಥಿ ಚಿಟಿಜ ಒeಟಿಣಚಿಟiಣಥಿ beಜಿoಡಿe ಣhe ಇmeಡಿgeಟಿಛಿeoಜಿ Iಟಿಜiಚಿಟಿ ಓಚಿಣioಟಿಚಿಟism, ಓeತಿ ಆeಟhi, 2004; ಒಚಿಟಿu ಉosತಿಚಿmi, Pಡಿoಜuಛಿiಟಿg Iಟಿಜiಚಿ,ಆeಟhi, 2004.
6. ಃ.ಓ. ಒuಞheಡಿರಿee, oಠಿ. ಛಿiಣ., ಠಿ.6; ಖಚಿರಿಚಿಣ ಏಚಿಟಿಣಚಿ ಖಚಿಥಿ, oಠಿ. ಛಿiಣ., ಠಿಠಿ.49, 55; ಚಿಟಿಜ ಠಿ.180, ಟಿoಣes 33, 34.
7 ಖಗಿ, ಗಿIII, 24, 27. ಋಗ್ವೇದದ ಈ ಕಂಡಿಕೆ ಮಾತ್ರ ಭೌಗೋಳಿಕ ಎನ್ನುವ ಅರ್ಥವನ್ನು ಧ್ವನಿಸುವ ಸಪ್ತಸಿಂಧವಹ ಎನ್ನುವ ಉಲ್ಲೇಖವನ್ನು ಹೊಂದಿದೆ. ಉಳಿದವುಗಳು ಬರೀ ಏಳು ನದಿಗಳನ್ನು ಉಲ್ಲೇಖಿಸುವ ಅರ್ಥವನ್ನು ಹೊಂದಿದೆ, (ಗಿeಜiಛಿ Iಟಿಜex, II, ಠಿ.324).
8 ಂsಣಚಿಜhಥಿಚಿಥಿi, Iಗಿ.2.113.
9 ಆ.ಅ. Siಡಿಛಿಚಿಡಿ, Seಟeಛಿಣ Iಟಿsಛಿಡಿiಠಿಣioಟಿs ಃeಚಿಡಿiಟಿg oಟಿ Iಟಿಜiಚಿಟಿ ಊisಣoಡಿಥಿ ಚಿಟಿಜ ಅiviಟizಚಿಣioಟಿ, I, ಟಿo.91, ಟiಟಿe 10.
10 ಂmಚಿಡಿಚಿಞosಚಿ, II.6, 8. ಏಡಿishಟಿಚಿರಿi ಉoviಟಿಜ ಔಞಚಿ, eಜ., ಖಿhe ಓಚಿmಚಿಟiಟಿgಚಿಟಿusಚಿsಚಿಟಿಚಿ: ಂmಚಿಡಿಚಿಞosಚಿ oಜಿ ಂmಚಿಡಿಚಿsmihಚಿ (ತಿiಣh ಣhe ಛಿommeಟಿಣಚಿಡಿಥಿ oಜಿ ಏsiಡಿಚಿsvಚಿmiಟಿ),ಆeಟhi, 1981, ಠಿ.47.
11. ಒಚಿಟಿusmಡಿiಣi, II.22. ಕೌಷೀತಕಿ ಉಪನಿಷತ್ ಪ್ರಕಾರ, ಆರ್ಯಾವರ್ತ ಎನ್ನುವ ಭೂಮಿ ಪಶ್ಚಿಮದಲ್ಲಿ ಕುರುಕ್ಷೇತ್ರದ ಹತ್ತಿರದಲ್ಲಿರುವ ಆದರ್ಶನ ಎನ್ನುವ ಪ್ರದೇಶ ಮತ್ತು ಪೂರ್ವದಲ್ಲಿ ಅಕಹಾಬಾದ್ ಹತ್ತಿರವಿರುವ ಕಾಳಕಾವನದ ನಡುವೆ ಬರುತ್ತದೆ.
12 ಏಚಿಜಚಿmbಚಿಡಿi, eಜ. & ಣಡಿ. ಒ.ಖ. ಏಚಿಟe, ಆeಟhi, 1968, ಠಿ.290; ಗಿ.S. ಂgಡಿಚಿತಿಚಿಟ, ಏಚಿಜಚಿmbಚಿಡಿi: ಇಞ Sಚಿಟಿsಞಡಿiಣiಞ ಂಜhಥಿಚಿಥಿಚಿಟಿ, ಗಿಚಿಡಿಚಿಟಿಚಿsi, 1958, ಠಿ.188.
13 ಏಚಿಜಚಿmbಚಿಡಿi, ಠಿ.311; ಗಿ.S. ಂgಡಿಚಿತಿಚಿಟ, oಠಿ. ಛಿiಣ., 1958, ಠಿ.205.
14 ಓiಣivಚಿಞಥಿಚಿmಡಿiಣಚಿm oಜಿ Somಚಿಜevಚಿ Suಡಿi, Pಡಿಚಿಞiಡಿಟಿಚಿಞಚಿ 78.
15 S.ಒ. ಂಟi, ಖಿhe ಉeogಡಿಚಿಠಿhಥಿ oಜಿ ಣhe Puಡಿಚಿಟಿಚಿs, ಓeತಿ ಆeಟhi, 1966, ಠಿ.109.
16 Ibiಜ.
17 ಈoಡಿ ಡಿeಜಿeಡಿeಟಿಛಿes, ನೋಡಿ, Isಡಿಚಿಣ ಂಟಚಿm, “ಓಚಿmes ಜಿoಡಿ Iಟಿಜiಚಿ iಟಿ ಂಟಿಛಿieಟಿಣ Iಟಿಜiಚಿಟಿ ಖಿexಣs ಚಿಟಿಜ Iಟಿsಛಿಡಿiಠಿಣioಟಿs”, iಟಿ Iಡಿಜಿಚಿಟಿ ಊಚಿbib, eಜ., Iಟಿಜiಚಿ: Sಣuಜies iಟಿ ಣhe ಊisಣoಡಿಥಿ oಜಿಚಿಟಿ Iಜeಚಿ, ಠಿ.43.
18 ಇI, ಘಿIಗಿ, ಟಿo.3, ಟiಟಿes 5–6.
19 Iಗಿ.12.ಂbhiಜhಚಿಟಿಚಿಛಿiಟಿಣಚಿmಚಿಟಿi, eಜiಣeಜ ತಿiಣh ಚಿಟಿ iಟಿಣಡಿoಜuಛಿಣioಟಿ bಥಿ ಓemiಛಿhಚಿಟಿಜಡಿಚಿ Sಚಿsಣಡಿi, ತಿiಣh ಣhe ಊiಟಿಜi ಛಿommeಟಿಣಚಿಡಿಥಿ ಒಚಿಟಿiಠಿಡಿಚಿbhಚಿ bಥಿ ಊಚಿಡಿಚಿgoviಟಿಜ Sಚಿsಣಡಿi, ಗಿಚಿಡಿಚಿಟಿಚಿsi, 1964, ಠಿ.235.
20 Iಗಿ.14.
21 Sugಚಿಣಚಿ ಃose, “ಓಚಿಣioಟಿ ಚಿs ಒoಣheಡಿ: ಖeಠಿಡಿeseಟಿಣಚಿಣioಟಿs ಚಿಟಿಜ ಅoಟಿಣesಣಚಿಣioಟಿs oಜಿ ‘Iಟಿಜiಚಿ’ iಟಿ ಃeಟಿgಚಿಟi ಐiಣeಡಿಚಿಣuಡಿe,” iಟಿ Sugಚಿಣಚಿ ಃose ಚಿಟಿಜ ಂಥಿeshಚಿ ಎಚಿಟಚಿಟ, eಜs., ಓಚಿಣioಟಿಚಿಟism, ಆemoಛಿಡಿಚಿಛಿಥಿ ಚಿಟಿಜ ಆeveಟoಠಿmeಟಿಣ: Sಣಚಿಣe ಚಿಟಿಜ Poಟiಣiಛಿs iಟಿ Iಟಿಜiಚಿ, ಆeಟhi, 1997, ಠಿಠಿ. 53–4. ತಮಿಳು ತಾಯಿ ಮತ್ತು ಭಾರತಮಾತಾ ಚರ್ಚೆಗಾಗಿ ನೋಡಿ, Sumಚಿಣhi ಖಚಿmಚಿsತಿಚಿmಥಿ, “ಖಿhe ಉoಜಜess ಚಿಟಿಜ ಣhe ಓಚಿಣioಟಿ: Subಣeಡಿಜಿuges oಜಿ ಂಟಿಣiquiಣಥಿ, ಣhe ಅuಟಿಟಿiಟಿg oಜಿ ಒoಜeಡಿಟಿiಣಥಿ”, iಟಿ ಉಚಿviಟಿ ಈಟooಜ, eಜ., ಖಿhe ಃಟಚಿಛಿಞತಿeಟಟಅomಠಿಚಿಟಿioಟಿ ಣo ಊiಟಿಜuism, Iಟಿಜiಚಿಟಿ ಡಿeಠಿಡಿiಟಿಣ, ಆeಟhi, 2003, ಠಿಠಿ.551–68.
22 ಒಚಿಟಿu ಉosತಿಚಿmi, oಠಿ. ಛಿiಣ., ಛಿhಚಿಠಿಣeಡಿs 5 ಚಿಟಿಜ 6.
23 ಂsಣಚಿಜhಥಿಚಿಥಿi, Iಗಿ.3.165.
24 ಉ.P. ಒಚಿಟಚಿಟಚಿseಞeಡಿಚಿ, ಆiಛಿಣioಟಿಚಿಡಿಥಿ oಜಿ Pಚಿಟi Pಡಿoಠಿeಡಿ ಓಚಿmes, II, ಠಿಠಿ.941–2, sv.ಎಚಿmbuಜiಠಿಚಿ.
25 ಒಚಿಟಚಿಟಚಿseಞeಡಿಚಿ, oಠಿ.ಛಿiಣ., ಠಿ.941.
26 Ibiಜ., ಠಿ.942.
27 ಒಚಿhಚಿvಚಿmsಚಿ, ಗಿ.13; ಅuಟಚಿvಚಿmsಚಿ, ಘಿಘಿಘಿಗಿII.216, 246; ಒಚಿಟಚಿಟಚಿseಞeಡಿಚಿ, oಠಿ.ಛಿiಣ.,ಠಿ.942.
28 ಆ.ಅ. Siಡಿಛಿಚಿಡಿ, Seಟeಛಿಣ Iಟಿsಛಿಡಿiಠಿಣioಟಿs ಃeಚಿಡಿiಟಿg oಟಿ Iಟಿಜiಚಿಟಿ ಊisಣoಡಿಥಿ ಚಿಟಿಜ ಅiviಟizಚಿಣioಟಿ, ಅಚಿಟಛಿuಣಣಚಿ, 1965, I, ಟಿo.2, ಟiಟಿe 2.
29 Ibiಜ., ಟಿo.56, ಟiಟಿe 9.
30 ಆ.ಅ. Siಡಿಛಿಚಿಡಿ, Sಣuಜies iಟಿ ಣhe ಉeogಡಿಚಿಠಿhಥಿ oಜಿ ಂಟಿಛಿieಟಿಣ ಚಿಟಿಜ ಒeಜievಚಿಟ Iಟಿಜiಚಿ,ಆeಟhi, 1960, ಠಿಠಿ.8–9.
31 Pಡಿಚಿviಟಿ ಅhಚಿಟಿಜಡಿಚಿ ಎಚಿiಟಿ ಚಿಟಿಜ ಆಚಿಡಿbಚಿಡಿiಟಚಿಟ ಏoಣhiಚಿ, eಜs., ಎಚಿiಟಿಚಿ Puಡಿಚಿಟಿಚಿ ಏosಚಿ(iಟಿ ಊiಟಿಜi), ಎಚಿiಟಿ ಗಿiಜಥಿಚಿ Sಚಿmsಣhಚಿಟಿ, Sಡಿimಚಿhಚಿviಡಿರಿi, ಖಚಿರಿಚಿsಣhಚಿಟಿ, 1993, ಠಿಠಿ.256,259.ಊಚಿಡಿivಚಿmsಚಿ Puಡಿಚಿಟಿಚಿ, 5.2–13. ಕೆಲವು ವಿದ್ವಾಂಸರ ಪ್ರಕಾರ ಇದು ಆರು ಭಾಗ ಖಂಡಗಳಾಗಿ ವಿಂಗಡಿತವಾಗಿವೆ, ಅವುಗಳೆಂದರೆ 1.ಆರ್ಯಕಾಂಡ ಅಥವಾ ಭಾರತ ಮತ್ತೆ ಉಳಿದವು ಮ್ಲೇಛ್ಚಕಾಂಡಗಳು. ಜೈನ ಸಾಹಿತ್ಯ ಕೃತಿಗಳಲ್ಲಿ ಒಂದಾದ ಜಂಬೂದ್ವೀಪಪ್ರಜ್ನಪ್ತಿಯು ಈ ಜಂಬೂ ದ್ವೀಪ ಮತ್ತು ಭಾರತದ ಬಗೆಗಿನ ವಿವರಣೆಯನ್ನು ನೀಡುತ್ತದೆ. ನೋಡಿ, ಎಚಿmbuಜಜivಠಿಚಿññಚಿಣಣisuಣಣಚಿm, eಜ. ಏಚಿಟಿhಚಿiಟಚಿಟರಿi ಏಚಿmಚಿಟ eಣ ಚಿಟ., Shಡಿiಂgಚಿm Pಡಿಚಿಞಚಿshಚಿಟಿ Sಚಿmiಣi, ಗಿಥಿಚಿvಚಿಡಿಚಿ, ಖಚಿರಿಚಿsಣhಚಿಟಿ, 1986. ಜೈನ ಕೃತಿಗಳು ಪುರಾಣಗಳಂತೆಯೇ ಹಲವು ರೀತಿಯ ಸಮಾನವಾದ ಭೌಗೋಳಿಕ ವರ್ಗೀಕರಣವನ್ನು ಹೊಂದಿವೆ ಆದರೆ ಅವುಗಳು ಅನೇಕ ಅನನ್ಯವಾದ ಕಾಲ-ದೇಶೀಯ ಪರಿಕಲ್ಪನೆಗಳನ್ನೂ ಹೊಂದಿವೆ.
32 Ibiಜ., ಠಿ.9, ಟಿoಣe 1.
33 ಆ.ಅ. Siಡಿಛಿಚಿಡಿ, Sಣuಜies iಟಿ ಣhe ಉeogಡಿಚಿಠಿhಥಿ oಜಿ ಂಟಿಛಿieಟಿಣ ಚಿಟಿಜ ಒeಜievಚಿಟ Iಟಿಜiಚಿ, ಠಿಠಿ.6, 8.
34 ಭಾರತದಲ್ಲಿ ರಾಷ್ಠ್ರೀಯತೆಯನ್ನು ಪ್ರಾಚೀನ ಚರಿತ್ರೆಯಲ್ಲಿ ಕಾಣಬಯಸುವ ಚರಿತ್ರಕಾರರು ಅಂತಹ ಪ್ರಯತ್ನಕ್ಕೆ ಬೃಹತ್ ಭಾರತ ಅಥವಾ ಗ್ರೇಟರ್ ಇಂಡಿಯಾದ ಪರಿಕಲ್ಪನೆಯಿಂದ ಸ್ಫೂರ್ತಿಯನ್ನು ಪಡೆದಿದ್ದಾರೆ. ಸುಮಾರು 1926ರಲ್ಲಿ ಕೋಲ್ಕತ್ತಾದಲ್ಲಿ ಸ್ಥಾಪಿತಗೊಂಡ ಗ್ರೇಟರ್ ಇಂಡಿಯಾ ಸೊಸೈಟಿಯು ಪ್ರಾಚೀನ ಭಾರತ ಹೊಂದಿತ್ತೆಂದು ನಂಬಲಾದ ಏಶ್ಯಾದಲ್ಲಿನ ಅದರ ಕಾಲನಿಗಳ ಚರಿತ್ರೆ ಮತ್ತು ಸಂಸ್ಕ್ರತಿಯನ್ನು ಅರಿಯುವ ಉದ್ದೇಶದಿಂದ ಸ್ಥಾಪಿತವಾಗಿತ್ತು. ರವೀಂದ್ರನಾಥ ಠಾಗೋರ್ ಇದರ ಪ್ರಮುಖ ಪುರೋಹಿತ ಅಥವಾ ಪುರೋಧ ಅಥವಾ ಧಾರ್ಮಿಕ ಮುಖ್ಯಸ್ಥರಾಗಿದ್ದರು. ಆದರೆ ಈ ಸಂಸ್ಥೆಗೆ ತಮ್ಮ ಸಕ್ರಿಯ ಪ್ರೋತ್ಸಾಹ ನೀಡಿದವರೆಂದರೆ ಪಿ.ಸಿ.ಬಗ್ಚಿ, ಸುನೀತಿ ಕುಮಾರ್ ಚಟರ್ಜಿ, ಫಣೀಂದ್ರ ನಾಥ ಬೋಸ್, ಕಾಲಿದಾಸ್ ನಾಗ್, ಯು. ಯನ್. ಘೋಶಾಲ್, ನಳಿನಾಕ್ಷ ದತ್ತ ಮತ್ತ್ತು ಆರ್.ಸಿ. ಮಜುಂದಾರ್ ನೋಡಿ, Susಚಿಟಿ ಃಚಿಥಿಟಥಿ, “Imಚಿgiಟಿiಟಿg ‘ಉಡಿeಚಿಣeಡಿ Iಟಿಜiಚಿ’: ಈಡಿeಟಿಛಿh ಚಿಟಿಜ Iಟಿಜiಚಿಟಿ ಗಿisioಟಿs oಜಿ ಅoಟoಟಿiಚಿಟismiಟಿ ಣhe Iಟಿಜiಛಿ ಒoಜe”, ಒoಜeಡಿಟಿ ಂsiಚಿಟಿ Sಣuಜies, voಟ.38, ಟಿo.3 (2004), ಠಿಠಿ.703–44).
ಆದರೆ ಕೋಲ್ಕತ್ತಾದಲ್ಲಿ ಸಕ್ರಿಯವಾಗಿದ್ದ ಕೆಲವರಷ್ಠೇ ಈ ಸಂಸ್ಥೆಯ ಬಗೆಗಿನ ಸಾಹಿತ್ಯವನ್ನು ಸೃಷ್ಠಿಸಿದರು ಎಂಬ ಮಾತನ್ನು ಒಪ್ಪಲಾಗದು. ಆದರೆ ಈ ಮೇಲೆ ಉಲ್ಲೇಖಿಸಿದ ವಿದ್ವಾಂಸರಲ್ಲಿ ಆರ್. ಸಿ. ಮಜುಂದಾರ್ ಅವರು ಗ್ರೇಟರ್ ಇಂಡಿಯಾದ ಬಗೆಗೆ ಸೃಷ್ಠಿಸಿದ ಸಾಹಿತ್ಯವನ್ನೇ ಇಂದಿನ ಉಗ್ರ ಬಲಪಂಥೀಯರು ಹಾಗೂ ಸಾಂಸ್ಕ್ರತಿಕ ರಾಷ್ಟ್ರವಾದಿಗಳು ಬಳಸಿ ತಮ್ಮ ವಾದಗಳಿಗೆ ಮಾನ್ಯತೆಯನ್ನು ಪಡೆಯುತ್ತಿರುವುದಂತೂ ಸತ್ಯ. ಇವರುಗಳ ಯೋಚನೆಯ ಪ್ರಕಾರ ಗ್ರೇಟರ್ ಇಂಡಿಯಾದಲ್ಲಿದ್ದ ಅನೇಕ ಏಶ್ಯಾದ ರಾಷ್ಟ್ರಗಳಾದ ಬರ್ಮಾ, ಜಾವಾ, ಕಾಂಬೋಡಿಯಾ, ಬಾಲಿ ಮತ್ತು ವಿಯೆಟ್ನಾಂಗಳಲ್ಲಿ ಪ್ರಾಚೀನ ಭಾರತದ ಸಾಹಸಿಗಳು ಕಾಲನಿಗಳನ್ನು ಸ್ಥಾಪಿಸಿ ಅಜ್ನಾನಿಗಳಾದ ಅಲ್ಲಿನ ಆದಿವಾಸಿಗಳನ್ನು ಹಾಗೂ ಬುಡಕಟ್ಟು ಜನರ ಸಡುವೆ ತಮ್ಮ ಶ್ರೇಷ್ಠವಾದ ಸಂಸ್ಕ್ರತಿಯನ್ನು ಪ್ರಸರಿಸಿದರು. ಗ್ರೇಟರ್ ಇಂಡಿಯಾವನ್ನು ಬೆಂಬಲಿಸುವವರ ಪ್ರಕಾರ ಇದು ಪ್ರಾಚೀನ ಭಾರತದ ಶ್ರೇಷ್ಠತೆಯಾಗಿದ್ದು, ಅವರ ಜಗತ್ತನ್ನೇ ನಾಗರೀಕವನ್ನಾಗಿಸುವ ಯೋಜನೆಯ ಭಾಗವಾಗಿದ್ದ ಅಥವಾ ಅದನ್ನು ಒಂದು ರೀತಿಯಲ್ಲಿ ಸಾಂಸ್ಕ್ರತಿಕ ಸಾಮ್ರಾಜ್ಯಷಾಹಿಯ ಸ್ವರೂಪದಲ್ಲಿತ್ತು ಮತ್ತು ಇಂತಹ ನಿರೂಪಣೆಯು ಅವರ ಅನಂತ ಸಾಧ್ಯತೆಯ, ಶಾಶ್ವತ ಸ್ವರೂಪದ ಮತ್ತು ಚಲನಶೀಲವೆಂದು ಅವರು ನಂಬುವ ಹಿಂದೂ ರಾಷ್ಟ್ರದ ಪ್ರಮುಖ ಲಕ್ಷಣವೂ ಆಗಿದೆ. ಇಂದೂ ಕೂಡಾ ಭಾರತದಲ್ಲಿ ಅನೇಕರು ಈ ಗ್ರೇಟರ್ ಇಂಡಿಯಾ ಪರಿಕಲ್ಪನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಾರೆ, ಮುಖ್ಯವಾಗಿ ರಘುವೀರ್ ಎನ್ನುವ ಅತ್ಯಂತ ಪ್ರಸಿಧ್ಧ ತಥಾಕಥಿತ ವಿದ್ವಾಂಸ ಈ ರೀತಿ ಹೇಳುತ್ತಾರೆ, ನಮ್ಮ ಅಜ್ನಾನಿ ಪತ್ರಕರ್ತರು ಮತ್ತು ಸರ್ಕಾರೀಯ ಸಂಸ್ಥೆಗಳು ಇಂಡೋನೇಶ್ಯಾವನ್ನು ಹಿಂದೇಶ್ಯಾ ಅಂದರೆ ಹಿಂದ್+ಏಶ್ಯಾ ಎಂದು ಕರೆಯುತ್ತಾರೆ, ಆದರೆ ಓ ಮೂರ್ಖರೇ ಅದರ ನಿಜವಾದ ಹೆಸರು ಭರತದ್ವೀಪ ನೋಡಿ, ಂ. ಃhಚಿಡಿಚಿಣi, “ಖಿhe ಊiಟಿಜu ಖeಟಿಚಿissಚಿಟಿಛಿe ಚಿಟಿಜ Iಣs ಂಠಿoಟegeಣiಛಿ Pಚಿಣಣeಡಿಟಿs”, ಎouಡಿಟಿಚಿಟ oಜಿ ಂsiಚಿಟಿ Sಣuಜies, 29 (1970), ಠಿ.276 .
35 ಃ.ಃ. ಐಚಿಟ, ಖಿhe ಇಚಿಡಿಟiesಣ ಅiviಟizಚಿಣioಟಿ oಜಿ Souಣh ಂsiಚಿ: ಖise, ಒಚಿಣuಡಿiಣಥಿ ಚಿಟಿಜ ಆeಛಿಟiಟಿe, ಆeಟhi,1997, ಠಿ.175.
36 ಃ.ಃ. ಐಚಿಟ, ಖಿhe Sಚಿಡಿಚಿsತಿಚಿಣi ಈಟoತಿs ಔಟಿ, ಠಿ.95.
37 ನೇರವಾಗಿ ಅಥವಾ ಅನೇರವಾಗಿ ಹರಪ್ಪಾದ ಧರ್ಮವನ್ನು ಆಧುನಿಕ ಹಿಂದೂ ಧರ್ಮದ ಪೂರ್ವಜ ಎಂದು ಒಪ್ಪುವ ವಿದ್ವಾಂಸರುಗಳಲ್ಲಿ
ಂsಞo Pಚಿಡಿಠಿoಟಚಿ, ಆ.ಏ. ಅhಚಿಞಡಿಚಿvಚಿಡಿಣi (Iಟಿಜiಚಿ: ಂಟಿ ಂಡಿಛಿhಚಿeoಟogiಛಿಚಿಟ ಊisಣoಡಿಥಿ, ಓeತಿ ಆeಟhi, 1999) ಮತ್ತು ಃ.ಃ. ಐಚಿಟ (ಖಿhe ಇಚಿಡಿಟiesಣ ಅiviಟisಚಿಣioಟಿ oಜಿ Souಣh ಂsiಚಿ ಚಿಟಿಜ ಖಿhe Sಚಿಡಿಚಿsತಿಚಿಣi ಈಟoತಿs ಔಟಿ) ಪ್ರಮುಖರು . S.P. ಉuಠಿಣಚಿ ಎನ್ನುವ ವಿದ್ವಾಂಸರಂತೂ ಸದ್ಯ ಮಾಡಿರುವ ಪುಸ್ತಕ ವಿಮರ್ಶೆ ಒಂದರಲ್ಲಿ ಅತ್ಯಂತ ಆಘಾತಕಾರಿಯಾದಂತಹ ಹೇಳಿಕೆಯನ್ನು ನೀಡುತ್ತಾರೆ, ಅದೇನೆಂದರೆ, ‘ ಸಿಂಧೂ ಸರಸ್ವತಿ ಸಂಸ್ಕ್ರತಿಯು ಇಂದಿಗೂ ಕೂಡಾ ಚಾಲ್ತಿಯಲ್ಲಿದೆ’ ಎಂಬುದಾಗಿ ನೋಡಿ, (Puಡಿಚಿಣಚಿಣಣvಚಿ, voಟ.31, 2000–01, ಠಿ.190). ಗುಪ್ತಾ ಅವರ ಹೇಳಿಕೆಯ ವಿಮರ್ಶಾತ್ಮಕ ಅಧ್ಯಯನಕ್ಕಾಗಿ ನೋಡಿ ಏ.ಒ. Shಡಿimಚಿಟi, “ಅoಟಿsಣಡಿuಛಿಣiಟಿg ಚಿಟಿ Iಜeಟಿಣiಣಥಿ: ಈoಡಿgiಟಿg ಊiಟಿಜuism iಟಿಣoಊಚಿಡಿಚಿಠಿಠಿಚಿಟಿ ಖeಟigioಟಿs”, Soಛಿiಚಿಟ Sಛಿieಟಿಛಿe Pಡಿobiಟಿgs, voಟ.15, ಟಿos.1–2 (2003), ಠಿಠಿ.1–59; Suಜeshಟಿಚಿ ಉuhಚಿ, oಠಿ. ಛಿiಣ., ಠಿಠಿ.399–426.
38 S.P. ಉuಠಿಣಚಿ, ಖಿhe Iಟಿಜus-Sಚಿಡಿಚಿsತಿಚಿಣi ಅiviಟizಚಿಣioಟಿ: ಔಡಿigiಟಿs, Pಡಿobಟems ಚಿಟಿಜIssues, ಠಿ.147.
39 ಒಚಿಞhಚಿಟಿ ಐಚಿಟ eಣ ಚಿಟ., Iಟಿಜiಚಿ ಚಿಟಿಜ ಣhe Woಡಿಟಜ ಜಿoಡಿ ಅಟಚಿss ಗಿI, ಓಚಿಣioಟಿಚಿಟ ಅouಟಿಛಿiಟ oಜಿ ಇಜuಛಿಚಿಣioಟಿಚಿಟ ಖeseಚಿಡಿಛಿh ಚಿಟಿಜ ಖಿಡಿಚಿiಟಿiಟಿg, ಓeತಿ ಆeಟhi, Seಠಿಣembeಡಿ 2002, ಠಿ.133.
40 ಓಚಿತಿಚಿಟ ಏ. Pಡಿiಟಿರಿಚಿ, ಇxಠಿಟಚಿiಟಿiಟಿg ಊiಟಿಜu ಆhಚಿಡಿmಚಿ: ಂ ಉuiಜe ಜಿoಡಿ ಖಿeಚಿಛಿheಡಿs, ಓoಡಿತಿiಛಿh, 1996, ಠಿ.7. ಈ ಪುಸ್ತಕದ ಪ್ರಕಾಶಕರು ವಿಶ್ವ ಹಿಂದು ಪರಿಷತ್. ಆರ್.ಎಸ್. ಎಸ್ ಸಂಚಾಲಿತ ಶಿಶು ಮಂದಿರ ಮತ್ತು ಸಂಘ ಪರಿವಾರದ ಶಾಲೆಗಳಿಗೆ ಹಿಂದೂ ಧರ್ಮದ ಭೋಧೆಯನ್ನು ಭೋಧಿಸುವ ಸಲುವಾಗಿ ಈ ಪುಸ್ತಕಗಳನ್ನು ಬಳಸಲಾಗಿತ್ತಿದೆ.
41 Ibiಜ., ಠಿ.13.
42 Ibiಜ., ಠಿ.54.
43 Ibiಜ., ಠಿ.153.
44 ಂಡಿviಟಿಜ Shಚಿಡಿmಚಿ, “ಔಜಿ ಊiಟಿಜu, ಊiಟಿಜusಣಚಿಟಿ, ಊiಟಿಜuism ಚಿಟಿಜ ಊiಟಿಜuಣvಚಿ”, ಓumeಟಿ, voಟ.49 (2002), ಠಿಠಿ.3–4.
45 Sಚಿmueಟ ಃeಚಿಟ, Si-ಙu-ಏi: ಃuಜಜhisಣ ಖeಛಿoಡಿಜs oಜಿ ಣhe Wesಣeಡಿಟಿ Woಡಿಟಜ, ಆeಟhi, 1969, ಠಿ.69.
46 ಎ. ಖಿಚಿಞಚಿಞusu, ಣಡಿ., ಂ ಖeಛಿoಡಿಜ oಜಿ ಃuಜಜhisಣ ಖeಟigioಟಿ ಚಿs Pಡಿಚಿಛಿಣiseಜ iಟಿ Iಟಿಜiಚಿ ಚಿಟಿಜ ಣhe ಒಚಿಟಚಿಥಿ ಂಡಿಛಿhiಠಿeಟಚಿgo (ಂ.ಆ. 671–695) bಥಿ I-ಣsiಟಿg, ಆeಟhi, 1966, ಠಿ.118.
47 ಂಡಿviಟಿಜ Shಚಿಡಿmಚಿ, oಠಿ. ಛಿiಣ., ಠಿ.6, ಗಮನಿಸುವ ಹಾಗೆ ದಾಹಿರ್ನ ಮಂತ್ರಿಯಾದ ಸಿಸ್ಕರ್ನನ್ನು ಆತ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡ ನಂತರ ಮಹಮದ್ ಬಿನ್ ಖಾಸಿಮ್ ತನ್ನ ಸಲಹೆಗಾರನನ್ನಾಗಿ ನೇಮಿಸಿಕೊಳ್ಳುತ್ತಾನೆ. ಅಲ್ಲಿಂದ ಹಿಂದೂ ಅನ್ನುವ ಧರ್ಮ ಏನಿದೆ, ಅದರಿಂದ ಮತಾಂತರ ಆರಂಭವಾಯಿತು ಹಾಗೂ ಆಗಲೇ ಆ ರೀತಿಯ ಅಸ್ಮಿತೆ ಒಂದು ಇತ್ತು ಹಾಗೂ ಅದನ್ನೇ ಒಂದು ಹಿಂದೂ ಅಸ್ಮಿತೆ ಎಂದು ಕರೆಯುತ್ತಾರೆ ಶರ್ಮಾ. ಅದೇ ರೀತಿಯಲ್ಲಿ ಸಿಂಧ್ನ ಬ್ರಾಹ್ಮಣ ರಾಜರುಗಳಾದ ಜಯಸಿಯಾ ಮತ್ತು ಆತನ ಸಹೋದರ ಸಸ್ಸಾ ಆಗಿನ ಖಲೀಫನಾದ ಉಮರ್-ಅಬ್ದ್–ಅಲ್-ಫಝಲ್ನ ಅಹ್ವಾನದ ಮೇರೆಗೆ ಇಸ್ಲಾಮಿಗೆ ಮತಾಂತರ ಆಗುತ್ತಾರೆ ನೋಡಿ, ಆeಡಿಡಿಥಿಟ ಓ. ಒಚಿಛಿಟeಚಿಟಿ, ಖeಟigioಟಿ ಚಿಟಿಜ Soಛಿieಣಥಿ iಟಿ ಂಡಿಚಿb Siಟಿಜ, ಐeiಜeಟಿ, 1989, ಠಿಠಿ.33, 48) ಆದರೆ ಕೇವಲ ಸಿಂಧಿಗಳಿಂದ ಇಸ್ಲಾಮ್ ಸ್ವೀಕಾರದ ಕಾರಣದಿಂದ ಆ ಕಾಲದಲ್ಲಿ ಹಿಂದೂ ಧರ್ಮವೊಂದಿತ್ತು ಎನ್ನಲಾಗದು.
48 ಒಚಿಛಿಟeಚಿಟಿ, oಠಿ. ಛಿiಣ., ಠಿಠಿ.12–13; Iಡಿಜಿಚಿಟಿ ಊಚಿbib, ಐiಟಿguisಣiಛಿ ಒಚಿಣeಡಿiಚಿಟs ಜಿಡಿomಇighಣh-ಅeಟಿಣuಡಿಥಿ Siಟಿಜ: ಂಟಿ ಇxಠಿಟoಡಿಚಿಣioಟಿ oಜಿ ಣhe ಅhಚಿಛಿhಟಿಚಿmಚಿ, Sಥಿmಠಿosiಚಿ Pಚಿಠಿeಡಿs 11,Iಟಿಜiಚಿಟಿ ಊisಣoಡಿಥಿ ಅoಟಿgಡಿess, ಂಟigಚಿಡಿh, 1994, ಠಿಠಿ.8–9.
49 ಅಲ್ಬೆರೂನಿಯ ಹಿಂದೂ ಧರ್ಮದ ಉಲ್ಲೇಖವು ಹಿಂದೂ ಎನ್ನುವ ಶಬ್ದದ ಧಾರ್ಮಿಕ ಹುರುಳರಿಮೆ ಅಥವಾ ಶಬ್ದಾರ್ಥ ವಿಜ್ನಾನ ವಿವರಣೆಯ ಚರಿತ್ರೆಯ ದೃಷ್ಠಿಯಿಂದ, ಸೋಮನಾಥವನ್ನು ಮಹಮದ್ ಘಜ್ನಿ ಒಡೆದಷ್ಟೇ ಪ್ರಮುಖವಾದುದೆಂದು ಕೆಲವು ವಿದ್ವಾಂಸರ ಅಭಿಪ್ರಾಯವಾಗಿದೆ. ಅತ್ಯಂತ ಗಣನೀಯವಾದುದುದಾಗಿದೆ, ನೋಡಿ, ಂಡಿviಟಿಜ Shಚಿಡಿmಚಿ, oಠಿ. ಛಿiಣ., ಠಿಠಿ.6–7;ಛಿಜಿ.
ನಾರಾಯಣ ಗುಪ್ತಾ ಎನ್ನುವ ವಿದ್ವಾಂಸನಂತೂ, ‘ ಜೇಮ್ಸ್ ಮಿಲ್ ನನ್ನು ಟೀಕಿಸುವುದು ಇಂದು ಒಂದು ರೀತಿಯ ಫ್ಯಾಶನ್ ಆಗಿದೆ, ಆದರೆ ಸಾಮ್ರಾಜ್ಯಶಾಹೀ ಭಾರತ ಎರಡು ಗತಗಳನ್ನು ಹೊಂದಿದೆ( ಮಿಲ್ ನ ಹಿಂದೂ ಮತ್ತು ಇಸ್ಲಾಮಿಕ್ ನಾಗರೀಕತೆಗಳು) ಮತ್ತದು ಮಹಮದ್ ಘಜ್ನಿಯು 1025ರಲ್ಲಿ ಸೋಮನಾಥದ ಮೇಲೆ ನಡೆಸಿದ ದಾಳಿಯು ಯುರೋಪಿನ ಚರಿತ್ರೆಯಲ್ಲಿ 1453 ರಲ್ಲಿ ಕಾನ್ಸ್ಟಾಂಟಿನೋಪಲ್ ಮೇಲೆ ತುರ್ಕರು ನಡೆಸಿದ ದಾಳಿಯಷ್ಟೇ ಭಾವನಾತ್ಮಕವಾಗಿ ಮಹತ್ವವನ್ನು ಪಡೆದಿದೆ, ನೋಡಿ, Sಣeಡಿeoಣಥಿಠಿes veಡಿsus ಊisಣoಡಿಥಿ”, Iಟಿಜiಚಿ Iಟಿಣeಡಿಟಿಚಿಣioಟಿಚಿಟಅeಟಿಣಡಿe ಕಿuಚಿಡಿಣeಡಿಟಥಿ, Summeಡಿ 1999, ಠಿ.169.
50 ಇಜತಿಚಿಡಿಜ ಅ. Sಚಿಛಿhಚಿu, ಣಡಿ., ಂಟbeಡಿuಟಿi’s Iಟಿಜiಚಿ, ಐoಟಿಜoಟಿ, 1910, I, ಠಿಠಿ.7, 21, ಛಿiಣeಜ iಟಿ Iಡಿಜಿಚಿಟಿ ಊಚಿbib, “Iಟಿಜiಚಿ: ಅouಟಿಣಡಿಥಿ ಚಿಟಿಜ ಓಚಿಣioಟಿ—ಂಟಿ Iಟಿಣಡಿoಜuಛಿಣoಡಿಥಿ ಇssಚಿಥಿ,” iಟಿ iಜem, eಜ., Iಟಿಜiಚಿ: Sಣuಜies iಟಿ ಣhe ಊisಣoಡಿಥಿ oಜಿ ಚಿಟಿ Iಜeಚಿ, ಆeಟhi, 2005, ಠಿ.5, ಟಿoಣe 14.
51 ಂಟbeಡಿuಟಿi’s Iಟಿಜiಚಿ, ಠಿ.19.
52 ಬ್ರಾಹ್ಮಣೀಯ ಧರ್ಮದ ಬಗೆಗಿನ ಆಲ್ಬೆರೂನಿಯ ದೃಷ್ಟಿಗಾಗಿ ನೋಡಿ, ಂಡಿviಟಿಜ Shಚಿಡಿmಚಿ, Sಣuಜies iಟಿ “ಂಟbeಡಿuಟಿi’s Iಟಿಜiಚಿ”, Wiesbಚಿಜeಟಿ, 1983.
53 ಹಿಂದೂಗಳ ಧರ್ಮದ ಬಗೆಗಿನ ಶಾಸನೀಯ ಗೃಹಿಕೆಗಳ ಬಗೆಗೆ ಅನ್ವರ್ ಹುಸೈನ್ ಅವರ ವೇರಾವಾಲ್ ಶಾಸನದ ಬಗೆಗಿನ ವಿವರಣೆಯನ್ನು ಒಳಗೊಂಡಂತೆ ನೋಡಿ, ಖಿhe ‘ಈoಡಿeigಟಿeಡಿs’ ಚಿಟಿಜ ಣhe Iಟಿಜiಚಿಟಿ Soಛಿieಣಥಿ: ಛಿ. ಇighಣh ಅeಟಿಣuಡಿಥಿ ಣo ಖಿhiಡಿಣeeಟಿಣh ಅeಟಿಣuಡಿಥಿ”, uಟಿಠಿubಟisheಜ ಒ. Phiಟ. ಜisseಡಿಣಚಿಣioಟಿ, ಅeಟಿಣಡಿe ಜಿoಡಿ ಊisಣoಡಿiಛಿಚಿಟ Sಣuಜies, ಎಚಿತಿಚಿhಚಿಡಿಟಚಿಟ ಓehಡಿu Uಟಿiveಡಿsiಣಥಿ,1993, ಅhಚಿಠಿಣeಡಿ Iಗಿ, ಃ.ಆ. ಅhಚಿಣಣoಠಿಚಿಜhಥಿಚಿಥಿಚಿ (ಖeಠಿಡಿeseಟಿಣiಟಿg ಣhe ಔಣheಡಿ: SಚಿಟಿsಞಡಿiಣSouಡಿಛಿes ಚಿಟಿಜ ಣhe ಒusಟims, ಆeಟhi, 1998, ಠಿ.78.
ಈ ಮೇಲಿನ ಕೃತಿ ಮತ್ತು ವೇರಾವಾಲ್ ಶಾಸನಗಳ ವಿವರಣೆಯು ಅತ್ಯಂತ ಸ್ಪಷ್ಠವಾಗಿ ಅಲ್ಬೆರೂನಿಯ ಹಿಂದೂಧರ್ಮದ ಗೃಹಿಕೆಯನ್ನು ಗಂಭೀರವಾಗಿ, ವೈರುಧ್ಧ್ಯತೆಯಿಂದ ಕೂಡಿದುದೆಂಬುದಾಗಿ ತಿಳಿಸುತ್ತವೆ. ವೇರಾವಾಲ್ ಶಾಸನವು, ನೆಲಸಮಗೊಳಿಸಿದ ಮಸೀದಿಯನ್ನು ಜಯಸಿಂಹ ಸಿಧ್ಧರಾಜನು ಪುನರ್ನಿರ್ಮಿಸಿದುದನ್ನೂ ಕೂಡಾ ನಮಗೆ ತಿಳಿಸುತ್ತದೆ.
54 ಬರನಿಯು ತನ್ನ ಕೃತಿಖಿಚಿಡಿiಞh-i-ಈiಡಿuzshಚಿhiಯಲ್ಲಿ ಸುಮಾರು ನಲವತ್ತು ಬಾರಿ ಹಿಂದು ಎನ್ನುವ ಶಬ್ದ ಮತ್ತು ಹಿಂದೂಗಳ ಬಗ್ಗೆ ಬಳಸುತ್ತಾನೆ ನೋಡಿ, ಕಿeಥಿಚಿmuಜಜiಟಿ ಂhmಚಿಜ, “ಃಚಿಡಿಚಿಟಿi’s ಖeಜಿeಡಿeಟಿಛಿes ಣo ಣhe ಊiಟಿಜus iಟಿ ಣhe ಖಿಚಿಡಿiಞh-i-ಈiಡಿuzshಚಿhi—ಖಿeಡಿಡಿiಣoಡಿiಚಿಟ ಚಿಟಿಜ ಔಣheಡಿ ಆimeಟಿsioಟಿs”, Isಟಚಿmiಛಿ ಅuಟಣuಡಿe, ಐಗಿI (1982),ಠಿಠಿ.295–302.
ಬರನಿಯ ಸಮಕಾಲೀನ ಆಗಿದ್ದ ಮೊರೊಕ್ಕೋದ ಪ್ರವಾಸಿ ಇಬನ್ ಬತೂತನು ಹಿಂದೂ ಖುಷ್ ಪರ್ವತವನ್ನು ‘ಹಿಂದೂ ನಾಶಕ ಪರ್ವತವೆಂದು’ ಕರೆಯುತ್ತಾನೆ. ಯಾಕೆಂದರೆ ಭಾರತೀಯ ಗುಲಾಮರು ಇದನ್ನು ದಾಟುವಾಗ ಹಿಮ ಅವರನ್ನು ಸಾಕಷ್ಟು ಭಾಧಿಸಿದ ಕಾರಣದಿಂದ ಸಾಯುತ್ತಿದ್ದರು. ಬತೂತನ ಈ ರೀತಿಯ ವಿವರಣೆ ಒಂದು ರೀತಿಯ ಕೋಮುವಾದೀ ಗೃಹಿಕೆಯಿಂದ ಮೂಡಿದೆ ನೋಡಿ, Shಚಿಡಿmಚಿ, oಠಿ. ಛಿiಣ.,ಠಿ.9.
ಇಬನ್ ಬತೂತನ ಹಿಂದೂ ಶಬ್ದದ ಗೃಹಿಕೆಯು ಮುಖ್ಯವಾಗಿ ಜನಪದೀಯ ವ್ಯುತ್ಪತ್ತೀಯ ನೆಲೆಯಿಂದ ಮೂಡಿದುದ್ದಾಗಿದೆ. ಹಿಂದೂ ಖುಷ್ ಎನ್ನುವ ಶಬ್ದವು ಬಹುಶಃ ಹಿಂದೂ ಕೋಹ್ ಎನ್ನುವ ಅರಬಿಕ್ ಶಬ್ದದಿಂದ ಉಗಮಗೊಂಡಿದ್ದು, ‘ಭಾರತದ ಪರ್ವತಗಳು’ ಎಂಬ ಅರ್ಥವನ್ನು ಹೊಂದಿದೆ. ಡಾ. ನಝಾಫ್ ಹೈದರ್ ಅವರಿಗೆ ಈ ರೀತಿ ಸಲಹೆಗಾಗಿ ನಾನು ಆಭಾರಿ.
55 ಖomiಟಚಿ ಖಿhಚಿಠಿಚಿಡಿ, “Sಥಿಟಿಜiಛಿಚಿಣeಜ ಊiಟಿಜuism”, iಟಿ ಉüಟಿಣheಡಿ-ಆieಣz Soಟಿಣheimeಡಿ ಚಿಟಿಜ ಊeಡಿmಚಿಟಿಟಿ ಏuಟಞe, eಜs., ಊiಟಿಜuism ಖeಛಿoಟಿsiಜeಡಿeಜ, ಆeಟhi, 1997, ಠಿ.73.
56 ಖಿhe ಚಿuಣhoಡಿ oಜಿ ಣhe ಆಚಿbisಣಚಿಟಿ hಚಿs beeಟಿ vಚಿಡಿiousಟಥಿ iಜeಟಿಣiಜಿieಜ, e.g., ಚಿs “ಒobಚಿಜ”, ಒuhsiಟಿ ಈಚಿಟಿi, ಒiಡಿzಚಿ Zuಟಜಿiqಚಿಡಿ ಃeg ಚಿಟಿಜ ಏಚಿiಞhusಡಿಚಿu Isಜಿಚಿಟಿಜಥಿಚಿಡಿ.
57 ಒಚಿಟಿishಚಿ ಒishಡಿಚಿ, “Peಡಿಛಿeಠಿಣioಟಿ oಜಿ ಣhe ಊiಟಿಜus ಚಿಟಿಜ ಣheiಡಿ ಖeಟigious Sಥಿsಣems ಚಿs ಆesಛಿಡಿibeಜ iಟಿ ಣhe ಆಚಿbisಣಚಿಟಿ-i-ಒಚಿzಚಿhib”, uಟಿಠಿubಟisheಜ ಒ.Phiಟ. ಜisseಡಿಣಚಿಣioಟಿ, ಆeಠಿಚಿಡಿಣmeಟಿಣ oಜಿ ಊisಣoಡಿಥಿ, Uಟಿiveಡಿsiಣಥಿ oಜಿ ಆeಟhi, 2003.
58 ಓಚಿರಿಚಿಜಿ ಊಚಿiಜeಡಿ, “ಂ ‘ಊoಟi ಖioಣ’ oಜಿ 1714: ಗಿeಡಿsioಟಿs ಜಿಡಿom ಂhmಚಿಜಚಿbಚಿಜ ಚಿಟಿಜ ಆeಟhi”, iಟಿ ಒushiಡಿuಟ ಊಚಿsಚಿಟಿ ಚಿಟಿಜ ಂsim ಖoಥಿ, eಜs., ಐiviಟಿg ಖಿogeಣheಡಿ Seಠಿಚಿಡಿಚಿಣeಟಥಿ:ಅuಟಣuಡಿಚಿಟ Iಟಿಜiಚಿ iಟಿ ಊisಣoಡಿಥಿ ಚಿಟಿಜ Poಟiಣiಛಿs, ಆeಟhi, 2005.
59 Phiಟiಠಿ ಃ. Wಚಿgoಟಿeಡಿ, “Suಟಣಚಿಟಿ ಚಿmoಟಿg ಊiಟಿಜu ಏiಟಿgs: ಆಡಿess, ಖಿiಣಟes, ಚಿಟಿಜ ಣhe Isಟಚಿmiಛಿizಚಿಣioಟಿ oಜಿ ಊiಟಿಜu ಅuಟಣuಡಿe ಚಿಣ ಗಿiರಿಚಿಥಿಚಿಟಿಚಿgಚಿಡಿಚಿ”, ಎouಡಿಟಿಚಿಟ oಜಿ ಂsiಚಿಟಿ Sಣuಜies, voಟ.55, ಟಿo.4 (ಓovembeಡಿ 1996), ಠಿ.862. ಅಜಿ. ಊeಡಿmಚಿಟಿಟಿ ಏuಟಞe, ಏiಟಿgs ಚಿಟಿಜ ಅuಟಣs:Sಣಚಿಣe ಈoಡಿmಚಿಣioಟಿ ಚಿಟಿಜ ಐegiಣimಚಿಣioಟಿ iಟಿ Iಟಿಜiಚಿ ಚಿಟಿಜ Souಣheಚಿsಣ ಂsiಚಿ, ಆeಟhi, 1993, ಠಿಠಿ.208–39. ಹಿಂದೂ ಎನ್ನುವ ಬಗೆಗೆ ನಾವು ಅತ್ಯಂತ ಆರಂಭದ ಉಲ್ಲೇಖಗಳನ್ನು ವಿಜಯನಗರ ಕಾಲದಿಂದ ನಾವು ಗಮನಿಸಬಹುದು. ಈ ಕಾರಣದಿಂದ ನಾವು ದಕ್ಷಿಣ ಭಾರತದ ಚರಿತ್ರೆಯ ಆಧಾರಗಳನ್ನು ನೋಡುವುದು ಒಳ್ಳೆಯದು.
60 ಃ.ಆ. ಅhಚಿಣಣoಠಿಚಿಜhಥಿಚಿಥಿಚಿ, oಠಿ. ಛಿiಣ., ಠಿ.54.
61ಹಿಂದುಘೋಷಾ ಎನ್ನುವ ಪದವನ್ನು ನಾವು ಹಿಂದೂಖುಷ್ ಪರ್ವತ ಎಂಬರ್ಥದೊಂದಿಗೆ ಗೃಹಿಸಬಹುದು. ನೋಡಿ, ಖಚಿರಿಚಿಣಚಿಡಿಚಿಟಿgiಟಿi oಜಿ ಎoಟಿಚಿಡಿಚಿರಿಚಿ, eಜ. ಚಿಟಿಜ ಣಡಿ.ಖಚಿghuಟಿಚಿಣh Siಟಿgh, ಅhoತಿಞhಚಿmbಚಿ, ಗಿಚಿಡಿಚಿಟಿಚಿsi,1972, veಡಿse 381). ಂಟso see ಜಿooಣಟಿoಣe 54 ಚಿbove.
62 ಎಚಿiಟಿಚಿ ಖಚಿರಿಚಿಣಚಿಡಿಚಿಟಿgiಟಿi oಜಿ Sಡಿivಚಿಡಿಚಿ, ತಿiಣh ಣಡಿಚಿಟಿsಟಚಿಣioಟಿ, ಛಿಡಿiಣiಛಿಚಿಟ iಟಿಣಡಿoಜuಛಿಣioಟಿ ಚಿಟಿಜ geogಡಿಚಿಠಿhiಛಿಚಿಟ ಟಿoಣes bಥಿ ಖಚಿghuಟಿಚಿಣh Siಟಿgh, ಗಿಚಿಡಿಚಿಟಿಚಿsi, 1977, 3.218.
63 Ibiಜ., 2.215.
64 Ibiಜ., 2.51.
65 ಎoseಠಿh ಖಿ. ಔ’ಅoಟಿಟಿeಟಟ, “ಖಿhe ತಿoಡಿಜ ‘ಊiಟಿಜu’ iಟಿ ಉಚಿuಜiಥಿಚಿ ಗಿಚಿisಟಿಚಿvಚಿ ಖಿexಣs”,ಎouಡಿಟಿಚಿಟ oಜಿ ಣhe ಂmeಡಿiಛಿಚಿಟಿ ಔಡಿieಟಿಣಚಿಟ Soಛಿieಣಥಿ, voಟ.93, ಟಿo.3 (1973), ಠಿಠಿ.340–343. 66 Wiಟheಟm ಊಚಿಟbಜಿಚಿss, Iಟಿಜiಚಿ ಚಿಟಿಜ ಇuಡಿoಠಿe: ಂಟಿ ಇssಚಿಥಿ iಟಿ PhiಟosoಠಿhiಛಿಚಿಟUಟಿಜeಡಿsಣಚಿಟಿಜiಟಿg, ಆeಟhi,1990, ಠಿ.193.
66 Wiಟheಟm ಊಚಿಟbಜಿಚಿss, Iಟಿಜiಚಿ ಚಿಟಿಜ ಇuಡಿoಠಿe: ಂಟಿ ಇssಚಿಥಿ iಟಿ Phiಟosoಠಿhiಛಿಚಿಟ Uಟಿಜeಡಿsಣಚಿಟಿಜiಟಿg, ಆeಟhi,1990, ಠಿ.193.
67 ಆ ಪಂಡಿತರುಗಳೆಂದರೆ ಸೋಮನಾಥ(ಶುಭಜೀ ಬಾಪು), ಹರಚಂದ್ರ ತರ್ಕಪಂಚಾನನ ಮತ್ತು ನೀಲಕಂಠ ಗೋರೆಹ. ನೀಲಕಂಠ ಗೋರೆಹ ಕೊನೆಗೆ ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗಿ ಬ್ಯಾಪ್ಟೈಸ್ ಆಗುತ್ತಾನೆ. ಇದರ ಮೇಲಿನ ಚರ್ಚೆಯ ಸಂದರ್ಭದ ಮಾಹಿತಿ ಮತ್ತು ವಿವರಣೆಗಾಗಿ ನೋಡಿ, ಖiಛಿhಚಿಡಿಜ ಈox ಙouಟಿg, ಖesisಣಚಿಟಿಣ ಊiಟಿಜuism: Sಚಿಟಿsಞಡಿiಣ Souಡಿಛಿes oಟಿ ಂಟಿಣi-ಅhಡಿisಣiಚಿಟಿ ಂಠಿoಟogeಣiಛಿs iಟಿ ಇಚಿಡಿಟಥಿ ಓiಟಿeಣeeಟಿಣh ಅeಟಿಣuಡಿಥಿ Iಟಿಜiಚಿ, ಗಿieಟಿಟಿಚಿ, 1981.
68 ಊಚಿಡಿಚಿಛಿಚಿಟಿಜಡಿಚಿ ಖಿಚಿಡಿಞಚಿಠಿಚಿಟಿಛಿಚಿಟಿಚಿಟಿ, ಒಚಿಣಚಿಠಿಚಿಡಿiಞsoಣಣಚಿಡಿಚಿm, ಅಚಿಟಛಿuಣಣಚಿ, 1940, ಠಿ.1, ಛಿiಣeಜ iಟಿ ಖiಛಿhಚಿಡಿಜ ಈox ಙouಟಿg, oಠಿ. ಛಿiಣ., ಠಿ.93.
69 ಖiಛಿhಚಿಡಿಜ ಈox ಙouಟಿg, oಠಿ. ಛಿiಣ., ಠಿ.150.
70 ಖಿhe muಟಣi-voಟume ಟexiಛಿoಟಿ Sಚಿbಜಚಿಞಚಿಟಠಿಚಿಜಡಿumಚಿ ಚಿಠಿಠಿeಚಿಡಿeಜ beಣತಿeeಟಿ 1819
ಚಿಟಿಜ 1858.
71 ಗಿಚಿಛಿಚಿsಠಿಚಿಣಥಿಚಿm.
72 ಈ ರೀತಿಯ ಅತ್ಯಂತ ಮಹತ್ವದ ಕಂಡಿಕೆ ಅಥವಾ ಪ್ಯಾಸೇಜ್ ಅನ್ನು ನೀಡಿದವರು ವಿದ್ವಾಂಸ ವಿ.ಎಸ್. ಆಪ್ಟೆ ತಮ್ಮ Pಡಿಚಿಛಿಣiಛಿಚಿಟ Sಚಿಟಿsಞಡಿiಣ ಇಟಿgಟishಆiಛಿಣioಟಿಚಿಡಿಥಿಯಲ್ಲಿ, sv.hiಟಿಜu):hiಟಿಜuಜhಚಿಡಿmಚಿಠಿಡಿಚಿಟoಠಿಣಚಿಡಿo ರಿಚಿಥಿಚಿಟಿಣe ಛಿಚಿಞಡಿಚಿvಚಿಡಿಣಣiಟಿಚಿh/hiಟಿಚಿm ಛಿಚಿ ಜusಚಿಥಿಚಿಣಥಿeಞಚಿ hiಟಿಜuಡಿiಣiuಛಿಥಿಚಿಣe ಠಿಡಿiಥಿe//
ಇವರು ಈ ಕೃತಿಯನ್ನು ಸುಮಾರು ಕ್ರಿಸ್ತ ಶಕ ಎಂಟನೆಯ ಶತಮಾನದ್ದೆನ್ನುತ್ತಾರೆ ಆದರೆ ಈ ಕೃತಿಯಲ್ಲಿ ಲಂಡನ್ ಅಲ್ಲಿ ಹುಟ್ಟುವ ತಾಂತ್ರಿಕರು ಜಗತ್ತಿನ ಓಡೆಯರಾಗುತ್ತಾರೆ ಎನ್ನುವ ಉಲ್ಲೇಖವು ಅತ್ಯಂತ ಅಸಹಜ ಮತ್ತು ಆಸಕ್ತಿದಾಯಕವೂ ಆಗಿದೆ.
73 hiಟಿಚಿm ಜusಚಿಥಿಚಿಣi iಣi hiಟಿಜu: ಣhe ಊiಟಿಜu “sಠಿoiಟs” (ಜusಚಿಥಿಚಿಣi) ತಿhಚಿಣ is“iಟಿಜಿeಡಿioಡಿ” (hiಟಿಚಿm). ಊಚಿಟbಜಿಚಿss, Iಟಿಜiಚಿ ಚಿಟಿಜ ಇuಡಿoಠಿe, ಠಿ.515, ಟಿoಣe 96.
ಸುಮಾರು 1930ರಲ್ಲಿ ಮೂರು ಪಂಡಿತರಿಂದ ಬರೆಯಲ್ಪಟ್ಟ ಇಪ್ಪತ್ತನೆಯ ಶತಕದ ಕೃತಿ ಧರ್ಮಪ್ರದೀಪ(ಅಚಿಟಛಿuಣಣಚಿ, 1937)ವು, ಬಲವಂತವಾಗಿ ಅಥವಾ ಸ್ವ-ಆಸಕ್ತಿಯಿಂದ ಬೇರೆ ಧರ್ಮವನ್ನು ಸೇರಿದ ಹಿಂದುಗಳ ಶುಧ್ಧೀಕರಣಕ್ಕಾಗಿ ಕೆಲವೊಂದು ನೀತಿ ನಿಯಮಗಳನ್ನು ವಿವರವಾಗಿ ಚರ್ಚಿಸುತ್ತದೆ: ಚಿಣಡಿಚಿ ಞevಚಿಟಚಿm bಚಿಟಚಿಜ evಚಿ mಟeಛಿಛಿhಚಿಜhಚಿಡಿmಚಿm sviಞಚಿಡಿiಣಚಿಟಿಚಿm hiಟಿಜuಟಿಚಿm… viviಜhಚಿh ಠಿಡಿಚಿಥಿಚಿsಛಿiಣಣಚಿviಜhಚಿಥಿo ಟಿiಡಿಜisಣಚಿ ಜಡಿsಥಿಚಿಟಿಣe, ಠಿ.219, ಛಿiಣeಜ iಟಿ ಊಚಿಟbಜಿಚಿss,Iಟಿಜiಚಿ ಚಿಟಿಜ ಇuಡಿoಠಿe, ಠಿ.534, ಟಿoಣe 66. ಈ ಶಬ್ದವು ವಾಸುದೇವ ಶಾಸ್ತ್ರಿ ಅಭ್ಯಂಕರನ ಧರ್ಮತತ್ವನಿರ್ಣಯದಲ್ಲೂ ಕಂಡುಬರುತ್ತದೆ.
74 ಎoseಠಿh ಖಿ. ಔ’ಅoಟಿಟಿeಟ, oಠಿ. ಛಿiಣ., ಠಿಠಿ.340–44.
75 ಆಚಿviಜ ಓ. ಐoಡಿeಟಿzeಟಿ, “Who Iಟಿveಟಿಣeಜ ಊiಟಿಜuism”, ಅomಠಿಚಿಡಿಚಿಣive Sಣuಜies iಟಿSoಛಿieಣಥಿ ಚಿಟಿಜ ಊisಣoಡಿಥಿ, voಟ.41, ಟಿo.4 (ಔಛಿಣobeಡಿ 1999), ಠಿಠಿ.630–659. ಂಟso see ಐoಡಿeಟಿzeಟಿ,eಜ., ಃhಚಿಞಣi ಖeಟigioಟಿ iಟಿ ಓoಡಿಣh Iಟಿಜiಚಿ: ಅommuಟಿiಣಥಿ Iಜeಟಿಣiಣಥಿ ಚಿಟಿಜ Poಟiಣiಛಿಚಿಟಂಛಿಣioಟಿ, ಆeಟhi, 1996, Iಟಿಣಡಿoಜuಛಿಣioಟಿ.
76 ಖ.P. ಃಚಿhuguಟಿಚಿ, “ಖeಛಿeಟಿಣ Wesಣeಡಿಟಿ Wಡಿiಣiಟಿgs oಟಿ ಒeಜievಚಿಟ Iಟಿಜiಚಿಟಿ Sಚಿಟಿಣಒovemeಟಿಣ”, Iಅಊಖ Semiಟಿಚಿಡಿ oಟಿ ಆiಚಿಟogue ತಿiಣh ಣhe Pಚಿsಣ: ಖಿಡಿeಟಿಜs iಟಿ ಊisಣoಡಿiಛಿಚಿಟWಡಿiಣiಟಿgs iಟಿ Iಟಿಜiಚಿ, ಃಚಿಟಿgಚಿಟoಡಿe, 14–16 ಈebಡಿuಚಿಡಿಥಿ 2003; iಜem, “Sಥಿmboಟs oಜಿಖesisಣಚಿಟಿಛಿe: ಓoಟಿ-ಃಡಿಚಿhmಚಿಟಿiಛಿಚಿಟ Sಚಿಟಿಣs ಚಿs ಖeಟigious ಊeಡಿoes iಟಿ ಐಚಿಣe ಒeಜievಚಿಟIಟಿಜiಚಿ”, iಟಿ ಃisತಿಚಿmoಥಿ Pಚಿಣi eಣ ಚಿಟ., eಜs.,ಓegoಣiಚಿಣiಟಿg Iಟಿಜiಚಿ’s Pಚಿsಣ: ಇssಚಿಥಿs iಟಿಒemoಡಿಥಿ oಜಿ Pಚಿಡಿಣhಚಿsಚಿಡಿಚಿಣhi ಉuಠಿಣಚಿ, ಆeಟhi, 2003. ಂಟso see iಜem, “Some ಂsಠಿeಛಿಣsoಜಿ Poಠಿuಟಚಿಡಿ ಒovemeಟಿಣs: ಃeಟieಜಿs ಚಿಟಿಜ Seಛಿಣs iಟಿ ಓoಡಿಣheಡಿಟಿ Iಟಿಜiಚಿ ಜuಡಿiಟಿg ಣhe Seveಟಿಣeeಟಿಣh ಚಿಟಿಜ ಇighಣeeಟಿಣh ಅeಟಿಣuಡಿies”, uಟಿಠಿubಟisheಜ Ph.ಆ. ಜisseಡಿಣಚಿಣioಟಿ, ಆeಠಿಚಿಡಿಣmeಟಿಣ oಜಿ ಊisಣoಡಿಥಿ, Uಟಿiveಡಿsiಣಥಿ oಜಿ ಆeಟhi, 1999.
77 ಚಾಲ್ರ್ಸ್ ಗ್ರಾಂಟ್ ಮೊತ್ತಮೊದಲು 1787ರಲ್ಲಿ ಹಿಂದೂಯಿಸಮ್ ಎನ್ನುವ ಶಬ್ದವನ್ನು ತನ್ನ ಮಿತ್ರ ಜಾನ್ ಥಾಮಸ್ನಿಗೆ ಬರೆದ ಪತ್ರದಲ್ಲಿ ಬಳಸಿದನು. ನಂತರ ಇಂಗ್ಲೀಷ್ ಸಮಾಜ ಮತ್ತು ರಾಜ್ಯ ವ್ಯವಸ್ಥೆಯನ್ನು ಅವಲೋಕನದ ಸಂದರ್ಭ 1792ರಲ್ಲಿ ವ್ಯಾಪಕವಾಗಿ ಬಳಸಲು ಆರಂಭಿಸಿದನು, ನೋಡಿ, Wiಟಟ Sತಿeeಣmಚಿಟಿ,ಒಚಿಠಿಠಿiಟಿg ಊiಟಿಜuism: ಊiಟಿಜuism ಚಿಟಿಜ ಣhe Sಣuಜಥಿ oಜಿ Iಟಿಜiಚಿಟಿ ಖeಟigioಟಿs 1600–1776, ಊಚಿಟಟe, 2003, ಠಿ.56, ಟಿoಣe 12.
ವಿಲಿಯಮ್ ಜೋನ್ಸ್ ಕೂಡಾ ಧಾರ್ಮಿಕ ನೆಲೆಯಲ್ಲಿ ಹಿಂದೂ ಎನ್ನುವ ಶಬ್ದವನ್ನು 1787ರಲ್ಲಿ ಬಳಸಿದ, ನೋಡಿ, S.ಓ. ಒuಞheಡಿರಿee, Siಡಿ Wiಟಟiಚಿm ಎoಟಿes ಚಿಟಿಜ ಃಡಿiಣish ಂಣಣiಣuಜes ಣo Iಟಿಜiಚಿ, ಅಚಿmbಡಿiಜge, 1968, ಠಿ.119; ಆeಡಿmoಣ ಏiಟಟiಟಿgಟeಥಿ, “ಒoಜeಡಿಟಿiಣಥಿ,ಖeಜಿoಡಿm, ಚಿಟಿಜ ಖevivಚಿಟ,” iಟಿ ಉಚಿviಟಿ ಈಟooಜ, eಜ., ಖಿhe ಃಟಚಿಛಿಞತಿeಟಟ ಅomಠಿಚಿಟಿioಟಿ ಣo ಊiಟಿಜuism, ಠಿ.513.
ರಾಜಾ ರಾಮ್ ಮೋಹನ್ ರಾಯ್ ಅವರು 1816 ರಲ್ಲಿ ಹಿಂದೂ ಎಂಬ ಶಬ್ದವನ್ನು ಬಳಸಿದ ಮೊದಲ ಹಿಂದೂ, ನೋಡಿ, ಆeಡಿmoಣ ಏiಟಟiಟಿgಟeಥಿ, ಖಚಿmmohuಟಿ ಖoಥಿ iಟಿ ಊiಟಿಜu ಚಿಟಿಜ ಅhಡಿisಣiಚಿಟಿ ಖಿಡಿಚಿಜiಣioಟಿ: ಖಿhe ಖಿeಚಿಠಿe ಐeಛಿಣuಡಿes 1990, ಓeತಿಛಿಚಿsಣಟe uಠಿoಟಿ ಖಿಥಿಟಿe, 1993, ಠಿ.60, ಛಿiಣeಜ iಟಿ ಖiಛಿhಚಿಡಿಜ ಏiಟಿg, ಔಡಿieಟಿಣಚಿಟism ಚಿಟಿಜ ಖeಟigioಟಿ, ಆeಟhi, 1999, ಠಿ.100.
78 ಸಾಮ್ರಾಜ್ಯಷಾಹೀ ಆಡಳಿತವು ಹಿಂದೂಯಿಸಮ್ ಅನ್ನು ಜನಗಣತಿಯ ಆಧಾರದ ಮೇಲೆ ಭಾರತೀಯ ಸಮಾಜವನ್ನು ವಿಭಜಿಸಿ ವರ್ಗೀಕರಿಸಿದ ಕಾರಣಕ್ಕಾಗಿ ಹುಟ್ಟು ಹಾಕಿತು ಮತ್ತು ಇದೊಂದು ಕಲೋನಿಯಲ್ ಕನ್ಸ್ಟ್ರಕ್ಟ್ ಎಂದು ಅನೇಕ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಅವುಗಳಲ್ಲಿ ಪ್ರಮುಖವಾದ ವಿದ್ವಾಂಸರೆಂದರೆ, ಗಿಚಿsuಜhಚಿ ಆಚಿಟmiಚಿ (“ಖಿhe ಔಟಿಟಥಿ ಖeಚಿಟಖeಟigioಟಿ oಜಿ ಣhe ಊiಟಿಜus: ಗಿಚಿisಟಿಚಿvಚಿ Seಟಜಿ ಖeಠಿಡಿeseಟಿಣಚಿಣioಟಿ iಟಿ ಣhe ಐಚಿಣe ಓiಟಿeಣeeಟಿಣhಅeಟಿಣuಡಿಥಿ”, iಟಿ ಗಿಚಿsuಜhಚಿ ಆಚಿಟmiಚಿ ಚಿಟಿಜ ಊeiಟಿಡಿiಛಿh voಟಿ Sಣieಣeಟಿಛಿಡಿoಟಿ, eಜs.,ಖeಠಿಡಿeseಟಿಣiಟಿg ಊiಟಿಜuism: ಖಿhe ಅoಟಿsಣಡಿuಛಿಣioಟಿ oಜಿ ಖeಟigious ಖಿಡಿಚಿಜiಣioಟಿs ಚಿಟಿಜಓಚಿಣioಟಿಚಿಟ Iಜeಟಿಣiಣಥಿ, ಓeತಿ ಆeಟhi, 1995, ಠಿಠಿ.176–210); ಖobeಡಿಣ ಈಡಿಥಿಞeಟಿbeಡಿg (“ಖಿheಇmeಡಿgeಟಿಛಿe oಜಿ ಒoಜeಡಿಟಿ ‘ಊiಟಿಜuism’ ಚಿs ಚಿ ಅoಟಿಛಿeಠಿಣ ಚಿಟಿಜ ಚಿs ಚಿಟಿ Iಟಿsಣiಣuಣioಟಿ”, iಟಿ ಉüಟಿಣheಡಿ-ಆieಣz Soಟಿಣheimeಡಿ ಚಿಟಿಜ ಊeಡಿmಚಿಟಿಟಿ ಏuಟಞe, eಜs., ಊiಟಿಜuism ಖeಛಿoಟಿsiಜeಡಿeಜ,ಆeಟhi, 1997, ಠಿಠಿ.82–107); ಎohಟಿSಣಡಿಚಿಣಣoಟಿ ಊಚಿತಿಟeಥಿ (“ಓಚಿmiಟಿgಊiಟಿಜuism”, Wiಟsoಟಿ ಕಿuಚಿಡಿಣeಡಿಟಥಿ, Summeಡಿ 1991, ಠಿಠಿ.20–32); ಊಚಿಡಿರಿoಣ ಔbeಡಿoi (ಖಿheಅoಟಿsಣಡಿuಛಿಣioಟಿ oಜಿ ಖeಟigious ಃouಟಿಜಚಿಡಿies: ಅuಟಣuಡಿe, Iಜeಟಿಣiಣಥಿ ಚಿಟಿಜ ಆiveಡಿsiಣಥಿ iಟಿ ಣheSiಞh ಖಿಡಿಚಿಜiಣioಟಿ, ಆeಟhi, 1994, ಠಿಠಿ.16–17); ಚಿಟಿಜ ಊeiಟಿಡಿiಛಿh voಟಿ Sಣieಣeಟಿಛಿಡಿoಟಿ(“ಊiಟಿಜuism: ಔಟಿ ಣhe Pಡಿoಠಿeಡಿ Use oಜಿ ಚಿ ಆeಛಿeಠಿಣive ಖಿeಡಿm”, iಟಿ Soಟಿಣheimeಡಿ ಚಿಟಿಜ ಏuಟಞe, oಠಿ. ಛಿiಣ., ಠಿಠಿ. 32–53).
ಈ ಮೇಲಿನವರ ವಾದ ಮತ್ತು ತರ್ಕಗಳನ್ನು ವಿರೋಧಿಸುತ್ತಿರುವ ವಿದ್ವಾಂಸರುಗಳಲ್ಲಿ ಪ್ರಮುಖರು ಹೀಗಿದ್ದಾರೆ, ನೋಡಿ., Wiಟಟ Sತಿeeಣmಚಿಟಿ, oಠಿ. ಛಿiಣ., ಚಿಟಿಜ ಃಡಿiಚಿಟಿ ಏ.Peಟಿಟಿiಟಿgಣoಟಿ, Wಚಿs ಊiಟಿಜuism Iಟಿveಟಿಣeಜ? ಃಡಿiಣoಟಿs, Iಟಿಜiಚಿಟಿs ಚಿಟಿಜ ಣhe ಅoಟoಟಿiಚಿಟಅoಟಿsಣಡಿuಛಿಣioಟಿ oಜಿ ಖeಟigioಟಿ, ಓeತಿ ಙoಡಿಞ, 2005. ಖಿheiಡಿ mಚಿiಟಿ souಡಿಛಿe oಜಿ iಟಿsಠಿiಡಿಚಿಣioಟಿis ಆಚಿviಜ ಐoಡಿeಟಿzeಟಿ (“Who Iಟಿveಟಿಣeಜ ಊiಟಿಜuism?”,ಅomಠಿಚಿಡಿಚಿಣive Sಣuಜies iಟಿSoಛಿieಣಥಿ ಚಿಟಿಜ ಊisಣoಡಿಥಿ, voಟ.41, ಟಿo.4, (ಔಛಿಣobeಡಿ 1999), ಠಿಠಿ.630–659), ಲೊರೆಂಝನ್ ಪ್ರಕಾರ ಹಿಂದೂ ಎನ್ನುವ ಧರ್ಮವು 1200-1500 ವರೆಗಿನ ಹಿಂದೂ ಮುಸ್ಲಿಮ್ ಸಂಘರ್ಷದ ಅವಧಿಯಲ್ಲೇ ರೂಪುಗೊಂಡಿತ್ತು ಮತ್ತು 1800 ಗಿಂತ ಮುಂಚೆಯೇ ಸ್ಪಷ್ಠವಾಗಿ ರಚಿತಗೊಂಡಿತ್ತು. ಹಿಂದೂ ಧರ್ಮವನ್ನು ಯಾರೂ ಅಂದರೆ ಯುರೋಪಿಯನ್ ಅಥವಾ ಭಾರತೀಯ ಕೂಡಾ ಶೋಧಿಸಿದ್ದಲ್ಲ, ಬದಲುಅದು ತೋಪ್ಸಿಯಂತೆ ತನ್ನಂತಾನೆ ಬೆಳೆದಿದ್ದುನೋಡಿ, ibiಜ., ಠಿ.655. ಆದರೆ 19ನೆಯ ಶತಕದ ಗುಲಾಮಗಿರಿಯನ್ನು ವಿರೋಧಿಸುವ ಅಂಕಲ್ಸ್ ಟಾಮ್ಸ್ ಕ್ಯಾಬಿನ್ ಕಾದಂಬರಿಯ ತೋಪ್ಸಿ ಪಾತ್ರದ ಜೊತೆ ಹೋಲಿಸಿದ್ದು ಮಾತ್ರ ಚರಿತ್ರೆ ಚರ್ಚೆಯ ಜತೆ ಅಷ್ಟೇನೂ ಹೊಂದುವುದಿಲ್ಲವಾಗಿದೆ.
79 ಂgehಚಿಟಿಚಿಟಿಜಚಿ ಃhಚಿಡಿಚಿಣi, “ಖಿhe ಊiಟಿಜu ಖeಟಿಚಿissಚಿಟಿಛಿe ಚಿಟಿಜ Iಣs ಂಠಿoಟogeಣiಛಿ Pಚಿಣಣeಡಿಟಿs”, ಎouಡಿಟಿಚಿಟ oಜಿ ಂsiಚಿಟಿ Sಣuಜies, 29 (1970), ಠಿಠಿ.267–87.
80 ಇತ್ತೀಚಿಗೆ ಬ್ರ್ಯಾನ್ ಕೆ ಪೆನ್ನಿಂಗ್ಟನ್ ಅವರು ತಮ್ಮ Wಚಿs ಊiಟಿಜuism Iಟಿveಟಿಣeಜ? ಃಡಿiಣoಟಿs, Iಟಿಜiಚಿಟಿs, ಚಿಟಿಜ ಣhe ಅoಟoಟಿiಚಿಟ ಅoಟಿsಣಡಿuಛಿಣioಟಿ oಜಿ ಖeಟigioಟಿ, ಓeತಿ ಙoಡಿಞ, 2005 ಎನ್ನುವ ಕೃತಿಯಲ್ಲಿ ಬ್ರಿಟೀಷರು ಭಾರತದಲ್ಲಿ ಹಿಂದೂಧರ್ಮವನ್ನು ಕಂಡುಹಿಡಿದರು ಎಂಬುದನ್ನು ವಿರೋಧಿಸುತ್ತಾ ಅಂತಹ ಹೇಳಿಕೆಯು ಒಂದು: ಸಾಮ್ರಾಜ್ಯಷಾಹಿಗೆ ಹೆಚ್ಚು ಬಲವನ್ನು ಕೊಡುತ್ತದೆ, ಎರಡು: ಬ್ರಿಟೀಷರಿಗಿಂತ ಮುಂಚೆ ಇದ್ದ ಹಿಂದೂ ಧರ್ಮದ ಅಸ್ತಿತ್ವವನ್ನು ಮತ್ತು ಅಂತಹ ಸಂಪ್ರದಾಯವನ್ನು ಕೂಡಾ ಅದು ನಿರಾಕರಿಸುತ್ತಾ ಅಂತಹ ಸಂಪ್ರದಾಯವನ್ನು ಅದು ಘಾಸಿಗೊಳಿಸುತ್ತಾ ಸಮಕಾಲೀನ ಭಾರತೀಯರು ಹೊಂದಿರುವ ಸಂಪ್ರದಾಯದಿಂದ ಅವರನ್ನು ವಿಮುಖರಾಗಿಸುತ್ತದೆ ಎನ್ನುತ್ತಾನೆ.(ಠಿ.5). ಆದರೆ ಆತ ಈ ಸಾಮ್ರಾಜ್ಯಷಾಹಿಯು ಎಲ್ಲಾ ಕಡೆ ಜ್ನಾನ ಮತ್ತು ಮಾಹಿತಿಯನ್ನು ಅವರ ಆಸಕ್ತಿಗನುಗುಣವಾಗಿ ಬಳಸಿಕೊಂಡ ಮತ್ತು ಹತೋಟಿಯಲ್ಲಿಟ್ಟುಕೊಂಡದ್ದನ್ನು ಮರೆಯುತ್ತಾರೆ. ಅದೇ ರೀತಿಯಲ್ಲಿ ಅವರು ವ್ಯಕ್ತಪಡಿಸುವ ಸಂಪ್ರದಾಯ ಎನ್ನುವ ಸಂಗತಿಯ ಬಗೆಗಿನ ತೀರ್ಮಾನ ಕೂಡಾ ಆಕ್ಷೇಪಾರ್ಹವಾದುದು.
81 ಉಚಿviಟಿ ಈಟooಜ, ಂಟಿ Iಟಿಣಡಿoಜuಛಿಣioಟಿ ಣo ಊiಟಿಜuism, ಜಿiಡಿsಣ Souಣh ಂsiಚಿಟಿ eಜiಣioಟಿ,ಆeಟhi, 2004, ಠಿ.50.
82 ಖiಛಿhಚಿಡಿಜ ಊ. ಆಚಿvis, “ಂ ಃಡಿieಜಿ ಊisಣoಡಿಥಿ oಜಿ ಖeಟigioಟಿs iಟಿ Iಟಿಜiಚಿ”, Iಟಿಣಡಿoಜuಛಿಣioಟಿ,iಟಿ ಆoಟಿಚಿಟಜ S. ಐoಠಿez, ಎಡಿ, eಜ., ಖeಟigioಟಿs oಜಿ Iಟಿಜiಚಿ iಟಿ Pಡಿಚಿಛಿಣiಛಿe, Iಟಿಜiಚಿಟಿ ಡಿeಠಿಡಿiಟಿಣ,ಆeಟhi, 1998, ಠಿ.5. ಂಟso see ಎohಟಿ Sಣಡಿಚಿಣಣoಟಿ ಊಚಿತಿಟeಥಿ, “ಓಚಿmiಟಿg ಊiಟಿಜuism”,Wiಟsoಟಿ ಕಿuಚಿಡಿಣeಡಿಟಥಿ, Summeಡಿ 1991, ಠಿಠಿ.20–23; ಚಿಟಿಜ Weಟಿಜಥಿ ಆoಟಿigeಡಿ, “ಊiಟಿಜuismbಥಿ ಂಟಿಥಿ ಔಣheಡಿ ಓಚಿme”, ibiಜ., 35–41.
83 ಹಿಂದೂಯಿಸಮ್ ಬಗೆಗಿನ ಒಂದೇ ಸ್ಪಷ್ಠತೆಯೆಂದರೆ ಅದನ್ನು ಇಸ್ಲಾಮ್, ಯಹೂದೀ, ಮತ್ತು ಕ್ರಿಶ್ಚಿಯಾನಿಟಿ ಅಲ್ಲದ ವರ್ಗವೆನ್ನುವ ನೆಲೆಯಲ್ಲಿ ಬಳಸಿರುವುದು ಆದರೆ ಅದೊಂದು ಋಣಾತ್ಮಕವಾದ ಬಳಕೆ. 1955ರ ಹಿಂದೂ ವಿವಾಹ ಕಾಯ್ದೆಯ ಪ್ರಕಾರ ಕೂಡಾ, ‘ಹಿಂದೂ’ ಎನ್ನುವ ಶಬ್ದ ಮತ್ತು ಬಳಕೆಯು ಭೌಧ್ಧ, ಜೈನ ಮತ್ತು ಸಿಖ್ಖರನ್ನಷ್ಟೇ ಒಳಗೊಳ್ಳದೆ ಭಾರತದಲ್ಲಿ ಮುಸ್ಲಿಮ್, ಕ್ರಿಶ್ಚಿಯನ್, ಪಾರ್ಸಿ ಮತ್ತು ಯಹೂದಿಗಳಲ್ಲದ ಜನರನ್ನೂ ಕೂಡಾ ಒಳಗೊಳ್ಳುತ್ತದೆ.
ಈ ನೆಲೆಯಿಂದ ಫ್ರಿಟ್ಝ್ ಸ್ಟಾಲ್ ಅವರ ವಾದವನ್ನು ಗಮನಿಸುವುದಾದರೆ ಈ ರೀತಿ ಹೊರತುಪಡಿಸಿದ ಕ್ರಮವಲ್ಲದೇ ಅರ್ಥಪೂರ್ಣವಾದ ಹಿಂದೂಧರ್ಮವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹೀಗೆ ಅದು ಅರ್ಥಪೂರ್ಣವಾದ ಸಂವಾದದ ಘಟಕವಾಗಿ ಮತ್ತು ಧರ್ಮವಾಗಲು ವಿಫಲವಾಗುತ್ತದೆ ನೋಡಿ ಇವರ, ಖuಟes Wiಣhouಣ ಒeಚಿಟಿiಟಿg:ಖiಣuಚಿಟ, ಒಚಿಟಿಣಡಿಚಿs ಚಿಟಿಜ ಣhe ಊumಚಿಟಿ Sಛಿieಟಿಛಿes, ಓeತಿ ಙoಡಿಞ, 1989, ಠಿ.397).
84 ಃeಡಿಟಿಚಿಡಿಜ S. ಅohಟಿ, ಂಟಿ ಂಟಿಣhಡಿoಠಿoಟogisಣ ಚಿmoಟಿg ಣhe ಊisಣoಡಿiಚಿಟಿs ಚಿಟಿಜ ಔಣheಡಿಇssಚಿಥಿs, ಆeಟhi,1987, ಠಿಠಿ.224–54.
85 ಏಟಚಿus ಏಟosಣeಡಿmಚಿieಡಿ, ಂ Suಡಿveಥಿ oಜಿ ಊiಟಿಜuism, ಂಟbಚಿಟಿಥಿ, 1989, ಠಿಠಿ.31, 531.
86 ಊಚಿಟbಜಿಚಿss, Iಟಿಜiಚಿ ಚಿಟಿಜ ಇuಡಿoಠಿe, ಠಿ. 344.
87 ಎuಟius ಐiಠಿಟಿeಡಿ, ಊiಟಿಜus: ಖಿheiಡಿ ಖeಟigious ಃeಟieಜಿs ಚಿಟಿಜ Pಡಿಚಿಛಿಣiಛಿes, ಐoಟಿಜoಟಿ, 1994, ಠಿ.221.
88 ಎuಟius ಐiಠಿಟಿeಡಿ, “ಔಟಿ ಊiಟಿಜuism ಚಿಟಿಜ ಊiಟಿಜuisms: ಖಿhe Wಚಿಥಿ oಜಿ ಣhe ಃಚಿಟಿಥಿಚಿಟಿ”, iಟಿ Sushiಟ ಒiಣಣಚಿಟ ಚಿಟಿಜ ಉeಟಿe ಖಿhuಡಿsbಥಿ, eಜs., ಖಿhe ಊiಟಿಜu Woಡಿಟಜ, ಖouಣಟeಜge, ಓeತಿ ಙoಡಿಞ, 2004, Iಟಿಜiಚಿಟಿ ಡಿeಠಿಡಿiಟಿಣ, ಅheಟಿಟಿಚಿi, 2005, ಠಿ.19.
89 ಎohಟಿ Zಚಿvos, “ಆeಜಿeಟಿಜiಟಿg ಊiಟಿಜu ಖಿಡಿಚಿಜiಣioಟಿ: Sಚಿಟಿಚಿಣಚಿಟಿಚಿ ಆhಚಿಡಿmಚಿ ಚಿs ಚಿ Sಥಿmboಟ oಜಿ ಔಡಿಣhoಜoxಥಿ iಟಿ ಅoಟoಟಿiಚಿಟ Iಟಿಜiಚಿ”, ಖeಟigioಟಿ, 31 (2001), ಠಿಠಿ.109–123. ಂಟso see ಗಿಚಿsuಜhಚಿ ಆಚಿಟmiಚಿ, ಓಚಿಣioಟಿಚಿಟisಚಿಣioಟಿ oಜಿ ಊiಟಿಜu ಖಿಡಿಚಿಜiಣioಟಿs: ಃhಚಿಡಿಚಿಣeಟಿಜuಊಚಿಡಿisಛಿhಚಿಟಿಜಡಿಚಿ ಚಿಟಿಜ ಓiಟಿeಣeeಟಿಣh ಅeಟಿಣuಡಿಥಿ ಃeಟಿಚಿಡಿಚಿs, ಆeಟhi, 1997, ಠಿಠಿ.2–4, ಟಿoಣe 5.
90 ಇಪ್ಪತ್ತನೆಯ ಶತಕದ ಆರಂಭದ ಪಂಡಿತರುಗಳಾದ ವಿ.ಎಸ್.ಅಭ್ಯಂಕರ, ಅನಂತಕೃಷ್ಣ ಶಾಸ್ತ್ರೀ, ಶ್ರೀವಿಜಯ ಭಟ್ಟಾಚಾರ್ಯ ಮತ್ತು ಸೀತಾರಾಮ ಶಾಸ್ತ್ರೀ ಮುಂತಾದವರುಗಳು ನೂತನಸಂಪ್ರದಾಯವೆಂಬ ಹೊಸ ವರ್ಗೀಯ ಸಂಪ್ರದಾಯಗಳನ್ನು ಪರಿಚಯಿಸುವುದನ್ನು ವಿರೋಧಿಸಿದ್ದು ತೀರಾ ಆಶ್ಚರ್ಯವೇನಲ್ಲ ನೋಡಿ, ಟಿuಣಚಿಟಿಚಿsಚಿmಠಿಡಿಚಿಜಚಿಥಿಚಿ,ಆhಚಿಡಿmಚಿಠಿಡಿಚಿಜiಠಿಚಿ, ಠಿ.64. ಅವರುಗಳು ತಮ್ಮನ್ನು ಶಾಶ್ವತವಾದ ಧರ್ಮವೊಂದರ ಅನುಯಾಯಿಗಳೆಂದು ಘೋಷಿಸಿಕೊಂಡರು, ನೋಡಿ, sಚಿಟಿಚಿಣಚಿಟಿಚಿಜhಚಿಡಿmiಥಿಚಿ, sಚಿಟಿಚಿಣಚಿಟಿಚಿಜhಚಿಡಿmಚಿvಚಿಟಚಿmbiಟಿ, ಆhಚಿಡಿmಚಿಠಿಡಿಚಿಜiಠಿಚಿ,ಠಿಠಿ.207,219: ಆhಚಿಡಿmಚಿಣಚಿಣಣvಚಿviಟಿiಡಿಟಿಚಿಥಿಚಿ, ಠಿಠಿ.39ಜಿಜಿ.
91 ಧಮ್ಮಪಾದ ಭಾಗ 1.5ರಲ್ಲಿ ಸನಾತನವೆಂಬ ಶಬ್ದವು ಸನಾತವೆಂಬ ಶಬ್ದದ ಜತೆ ಸಂಬಂಧ ಹೊಂದಿರುವುದನ್ನು ಗಮನಿಸಬಹುದಾದರೂ ಕೂಡಾ, ವೈದಿಕ ಸಾಹಿತ್ಯದಲ್ಲಿ ಒಂದು ಕಡೆಯಷ್ಟೇ ಅದು ಧರ್ಮ ಎಂಬ ಅರ್ಥವನ್ನು ಕೊಡುತ್ತದೆ ಮತ್ತು ಇನ್ನೊಂದು ಕಡೆ ಆ ರೀತಿಯ ಅರ್ಥವನ್ನು ಕೊಡುವುದಿಲ್ಲ ನೋಡಿ, ಖಗಿ 3.3.1ಜ ಮತ್ತು ಖಗಿ 2.3.6ಚಿb. ಈ ಎರಡೂ ಬಳಕೆಗಳಲ್ಲೂ ಕೂಡಾ ಸನತ ಎಂಬ ಶಬ್ದವು ಪ್ರಾಚೀನ ಕಾಲದಿಂದ ಮತ್ತು ಯಾವಾಗಲೂ ಎಂಬ ಅರ್ಥವನ್ನು ಕೊಡುತ್ತದೆ. ಪ್ರೊಫೆಸರ್ ಶಿಂಗೂ ಐನೂ ಅವರು ಈ ಕುರಿತು ಗಮನ ಹರಿಸಿದ ಕಾರಣ ಅವರಿಗೆ ನಾನು ಅಭಾರಿ.
92 ಒಚಿhಚಿbhಚಿಡಿಚಿಣಚಿ, xii.96.13; 128.30; 131.2; xiii.44.32; 96.46; xiv.50.37.ಅiಣeಜ iಟಿ ಊಚಿಟbಜಿಚಿss, Iಟಿಜiಚಿ ಚಿಟಿಜ ಇuಡಿoಠಿe, ಠಿ.558, ಟಿoಣe 56.
93 ಈ ಕಥೆಯ ಪ್ರಕಾರ ಒಬ್ಬಾತನ ತಾಯಿಯನ್ನು ಒಬ್ಬ ಬ್ರಾಹ್ಮಣ ಕದ್ದುಕೊಂಡು ಹೋದಾಗ ಆತನ ತಂದೆಯು ಮಗನನ್ನು ತಡೆದು ಕೋಪಗೊಳ್ಳಬಾರದೆಂದು ತಿಳಿಸಿ ಅಂತಹ ಕಾರ್ಯವು ಶಾಶ್ವತವಾದ ಧರ್ಮದ ಭಾಗವೆಂದೂ ತಿಳಿಸಿದನು, ನೋಡಿ, esಚಿ ಜhಚಿಡಿmಚಿ sಚಿಟಿಚಿಣಚಿಟಿಚಿ,ಒಚಿhಚಿbhಚಿಡಿಚಿಣಚಿ, I.113, veಡಿses 11–14.
94 ಉiಣಚಿ, I.40.
95 Ibiಜ., ಘಿI.18.
96 ಒಚಿಟಿu, I.118; ಗಿII.98; Iಘಿ.64, 325.
97 ಒಚಿಣsಥಿಚಿಠಿuಡಿಚಿಟಿಚಿ, 143.32, ಂಟಿಚಿಟಿಜಚಿsಡಿಚಿmಚಿgಡಿಚಿಟಿಣhಚಿvಚಿಟi,1981, ಠಿ.269. ಅಜಿ.ಃಡಿಚಿhಚಿmಚಿಟಿಚಿಜಠಿuಡಿಚಿಟಿಚಿ, II.31.36–38; 91.30.32.
98 ಗಿಚಿಡಿಚಿhಚಿಠಿuಡಿಚಿಟಿಚಿ, 126.7.
99 Ibiಜ., 126.43.
100 Sivಚಿಠಿuಡಿಚಿಟಿಚಿ, 7.2.10.30–72.
101 ಊಚಿಟbಜಿಚಿss, Iಟಿಜiಚಿ ಚಿಟಿಜ ಇuಡಿoಠಿe, ಠಿ.343.
102 Sಚಿಟಿಚಿಣಚಿಟಿಚಿಜhಚಿಡಿmಚಿ: ಂಟಿ ಇಟemeಟಿಣಚಿಡಿಥಿ ಖಿexಣ-booಞ oಜಿ ಊiಟಿಜu ಖeಟigioಟಿ ಚಿಟಿಜ ಇಣhiಛಿs, ಅeಟಿಣಡಿಚಿಟ ಊiಟಿಜu ಅoಟಟege, ಃeಟಿಚಿಡಿes, 1910. ಖಿhis ತಿಚಿs ಜಿoಟಟoತಿeಜ bಥಿ seveಡಿಚಿಟತಿoಡಿಞs oಟಿ ಣhe sಚಿಟಿಚಿಣಚಿಟಿಚಿಜhಚಿಡಿmಚಿ, e.g., Sಚಿಟಿಚಿಣಚಿಟಿಚಿಜhಚಿಡಿmಚಿಜiಠಿiಞಚಿ bಥಿ ಊಚಿmsಚಿಥಿogiಟಿ,ಒಚಿಜಡಿಚಿs,1917; ಉಚಿಟಿgಚಿ Pಡಿಚಿsಚಿಜ, ಖಿhe ಈouಟಿಣಚಿiಟಿheಚಿಜ oಜಿ ಖeಟigioಟಿ, 1909; Shಡಿi ಃhಚಿಡಿಚಿಣ ಆhಚಿಡಿmಚಿ ಒಚಿhಚಿmಚಿಟಿಜಚಿಟಚಿ, eಜ., ಖಿhe Woಡಿಟಜ’s ಇಣeಡಿಟಿಚಿಟ ಖeಟigioಟಿ, ಃeಟಿಚಿಡಿes,1920; eಣಛಿ.
103 ಎuಟius ಐiಠಿಟಿeಡಿ, ಊiಟಿಜus: ಖಿheiಡಿ ಖeಟigious ಃeಟieಜಿs ಚಿಟಿಜ Pಡಿಚಿಛಿಣiಛಿes, ಠಿ.221.
104 ಃಡಿiಚಿಟಿ ಏ. Smiಣh, ಖeಜಿಟeಛಿಣioಟಿs oಟಿ ಖesembಟಚಿಟಿಛಿe, ಖiಣuಚಿಟ ಚಿಟಿಜ ಖeಟigioಟಿ, ಔxಜಿoಡಿಜ Uಟಿiveಡಿsiಣಥಿ Pಡಿess, 1989, ಠಿಠಿ.13–14.
105 ಓiಡಿuಞಣಚಿ, I.20.
106 ಒಚಿಟಿu, II.6. ಅಜಿ. ಒಚಿಟಿu, ಘಿII.95–96.
107 Ibiಜ., II.10.
108 Wiಟheಟm ಊಚಿಟbಜಿಚಿss, ಖಿಡಿಚಿಜiಣioಟಿ ಚಿಟಿಜ ಖeಜಿಟeಛಿಣioಟಿ: ಇxಠಿಟoಡಿಚಿಣioಟಿ iಟಿ Iಟಿಜiಚಿಟಿ ಖಿhoughಣ, ಂಟbಚಿಟಿಥಿ,1991, ಠಿಠಿ.24–27.
109 Ibiಜ. ಠಿ.33.
110 ಃಡಿiಚಿಟಿ ಏ. Smiಣh, oಠಿ. ಛಿiಣ., ಠಿ.18; ಊಚಿಟbಜಿಚಿss, Iಟಿಜiಚಿ ಚಿಟಿಜ ಇuಡಿoಠಿe, ಠಿಠಿ.326–9, 359. ಅಜಿ. ಐouis ಖeಟಿou, ಖಿhe ಆesಣiಟಿಥಿ oಜಿ ಣhe ಗಿeಜಚಿ iಟಿ Iಟಿಜiಚಿ (ಇಟಿgಟish ಣಡಿ. ಆev ಖಚಿರಿ ಅhಚಿಟಿಚಿಟಿಚಿ), ಆeಟhi,1965, ಠಿಠಿ.40–46.
111 ಖeಟಿous, oಠಿ. ಛಿiಣ., ಠಿ.37.
112 ಃಡಿiಚಿಟಿ ಏ. Smiಣh, oಠಿ. ಛಿiಣ., ಠಿ.18.
113 iಣihಚಿsಚಿಠಿuಡಿಚಿಟಿಚಿm ಠಿಚಿñಛಿಚಿmಚಿm veಜಚಿಟಿಚಿm veಜಚಿm, ಅhಚಿಟಿಜogಥಿಚಿ Uಠಿಚಿಟಿishಚಿಜ,7.2, ಖಿhe Pಡಿiಟಿಛಿiಠಿಚಿಟ Uಠಿಚಿಟಿisಚಿಜs, eಜ. ಂಟಿಜ ಣಡಿ. S. ಖಚಿಜhಚಿಞಡಿishಟಿಚಿಟಿ, ಆeಟhi, 1991,ಠಿ.470. ಮಹಾಭಾರತವನ್ನು ಪಂಚಮವೇದ ಎಂದು ಕರೆಯುವ ಚರ್ಚೆಗೆ ನೋಡಿ, ಎohಟಿ ಃಡಿoಛಿಞiಟಿgಣoಟಿ, ಖಿhe Sಚಿಟಿsಞಡಿiಣ ಇಠಿiಛಿs, ಐeiಜeಟಿ, 1998, ಠಿ.7.
ಕೆಲವು ವಿದ್ವಾಂಸರ ಪ್ರಕಾರ ಅಥರ್ವವೇದ ಕೂಡಾ ವೈದಿಕ ಸಾಹಿತ್ಯದಲ್ಲಿ ಸೇರಿರಲಿಲ್ಲವಾಗಿತ್ತು. ವೈದಿಕ ಸಾಹಿತ್ಯದ ಅನುಯಾಯಿಗಳು ಐತಿಹ್ಯ ಮತ್ತು ಮಿಥ್ಯಗಳನ್ನು ಸೃಷ್ಠಿಸಿ ಅದಕ್ಕೆ ಪವಿತ್ರ ಧಾರ್ಮಿಕ ಸ್ಥಾನ ಮಾನವನ್ನು ಕೊಟ್ಟರು, ನೋಡಿ ಐಚಿಞshmಚಿಟಿ Sಚಿಡಿuಠಿ, ಖಿhe ಓighಚಿಟಿಣu ಚಿಟಿಜ ಣhe ಓiಡಿuಞಣಚಿ, Iಟಿಜiಚಿಟಿ eಜiಣioಟಿ,ಆeಟhi, 1984, ಠಿಣ.1, ಠಿಠಿ.72–73.
114 ಈಡಿiಣs Sಣಚಿಚಿಟ, “ಖಿhe ಅoಟಿಛಿeಠಿಣ oಜಿ Sಛಿಡಿiಠಿಣuಡಿe iಟಿ ಣhe Iಟಿಜiಚಿಟಿ ಖಿಡಿಚಿಜiಣioಟಿ”, iಟಿಒಚಿಡಿಞ ಎueಡಿgeಟಿsmeಥಿeಡಿ ಚಿಟಿಜ ಉeಡಿಚಿಟಜ ಃಚಿಡಿಡಿieಡಿ, eಜs., Siಞh Sಣuಜies: ಅomಠಿಚಿಡಿಚಿಣivePeಡಿsಠಿeಛಿಣives oಟಿ ಚಿ ಅhಚಿಟಿgiಟಿg ಖಿಡಿಚಿಜiಣioಟಿ, ಃeಡಿಞeಟeಥಿ, 1979, ಠಿಠಿ.121–4. ಈoಡಿ ಚಿಜiಜಿಜಿeಡಿeಟಿಣ ಠಿoiಟಿಣ oಜಿ vieತಿ, see ಅ. ಒಚಿಛಿಞeಟಿzie ಃಡಿoತಿಟಿ, “Puಡಿಚಿಟಿಚಿs ಚಿs Sಛಿಡಿiಠಿಣuಡಿe:ಈಡಿom Souಟಿಜ ಣo Imಚಿge oಜಿ ಣhe ಊoಟಥಿ Woಡಿಜ iಟಿ ಣhe ಊiಟಿಜu ಖಿಡಿಚಿಜiಣioಟಿ”, ಊisಣoಡಿಥಿ oಜಿಖeಟigioಟಿs, 26 (1986), ಠಿಠಿ.68–86.
115 ಖಿhe ಒಚಿhಚಿbhಚಿಡಿಚಿಣಚಿ (I.56.33) ಛಿಟಚಿims: ಥಿಚಿಜ ihಚಿsಣi ಣಚಿಜ ಚಿಟಿಥಿಚಿಣಡಿಚಿ, ಥಿಚಿಟಿಟಿehಚಿsಣi ಟಿಚಿ ಣಚಿಣ ಞvಚಿಛಿiಜ (“ಖಿhಚಿಣ ತಿhiಛಿh is ಜಿouಟಿಜ heಡಿeiಟಿ exisಣs eಟseತಿheಡಿe; ಣhಚಿಣತಿhiಛಿh is ಟಿoಣ heಡಿe, is ಟಿoತಿheಡಿe”).
116 ಖಿhe PuಡಿಚಿIಚಿs oಜಿಣeಟಿ ಛಿಟಚಿim ಣo be ಣhe esseಟಿಛಿe oಜಿ ಚಿಟಟ ಣhe ಗಿeಜಚಿs(sಚಿಡಿvಚಿveಜಚಿsಚಿಡಿಚಿ, ಚಿಞhiಟಚಿsಡಿuಣisಚಿಡಿಚಿ,sಚಿಡಿvಚಿveಜಚಿಡಿಣhಚಿsಚಿಡಿಚಿ), oಡಿ ಣhe souಟ oಜಿ ಣheಗಿeಜಚಿs: ಃhಚಿgಚಿvಚಿಣಚಿ Puಡಿಚಿಟಿಚಿ 1.2.3, 1.3.42, 12.13.15; ಓಚಿಡಿಚಿಜiಥಿಚಿ Puಡಿಚಿಟಿಚಿ1.1.36,1.9.97; Sಞಚಿಟಿಜಚಿ Puಡಿಚಿಟಿಚಿ 5.3.1.22. ಅiಣeಜ iಟಿ ಃಡಿiಚಿಟಿ ಏ. Smiಣh, oಠಿ. ಛಿiಣ., ಠಿ.26.
117 ಊಚಿಟbಜಿಚಿss, Iಟಿಜiಚಿ ಚಿಟಿಜ ಇuಡಿoಠಿe, ಠಿ.366.
118 ಃಡಿiಚಿಟಿ ಏ. Smiಣh, oಠಿ. ಛಿiಣ., ಠಿಠಿ.20–29.
ಈ ವೇದವನ್ನು ಸಂಪ್ರದಾಯವೆಂದು ನೋಡುವ ಕ್ರಮ ಮತ್ತು ಪರಿಪಾಥ*ವನ್ನು ನಾವು ನಮ್ಮಾಲ್ವರ್ನ ಕೃತಿಯಾದ ತಿರುವಾಯ್ಮೋಲಿಯನ್ನು ದ್ರಾವಿಡವೇದವೆಂದು ಕರೆದಂದಿನಿಂದಲೇ ಗಮನಿಸಬಹುದು. ಟ್ರಾಂಕಬಾರ್ನ ಬೈಬಲ್ ಅನ್ನು ವೇದಪುಸ್ತಕವೆಂದು ಕರೆಯಲಾಗುತ್ತಿತ್ತು. ಬಿ. ಝೈಗನ್ಬಾಲ್ಗ್ನು ಕ್ರಿಶ್ಚಿಯಾನಿಟಿ ಮತ್ತು ಬೈಬಲ್ ಅನ್ನು ಸತ್ಯವೇದವೆಂತಲೇ ಕರೆದಿರುವುದನ್ನು ನಾವು ಗಮನಿಸಬಹುದು, ನೋಡಿ ಊಚಿಟbಜಿಚಿss, Iಟಿಜiಚಿಚಿಟಿಜ ಇuಡಿoಠಿe, ಠಿ.340).
119 ಎ.ಇ. ಐಟeತಿeಟಟಥಿಟಿ, ಖಿhe ಂಡಿಥಿಚಿ Sಚಿmಚಿರಿ ಚಿs ಚಿ ಈuಟಿಜಚಿmeಟಿಣಚಿಟisಣ ಒovemeಟಿಣ, ಆeಟhi,1993, ಛಿhಚಿಠಿಣeಡಿ 2. ಂಟso see ಎ.ಖಿ.ಈ. ಎoಡಿಜeಟಿs, ಆಚಿಥಿಚಿಟಿಚಿಟಿಜ Sಚಿಡಿಚಿsತಿಚಿಣi: ಊis ಐiಜಿe ಚಿಟಿಜಅಚಿuses, ಆeಟhi, 1981.
120 ಐouis ಖeಟಿou, ಖಿhe ಆesಣiಟಿಥಿ oಜಿ ಣhe ಗಿeಜಚಿ iಟಿ Iಟಿಜiಚಿ, ಠಿ.2.
121 ಆದ್ದಾಗ್ಯೂ ನಾವಿಲ್ಲಿ ಭಾರತದಲ್ಲಿದ್ದ ನಾಸ್ತಿಕವಾದದ ಪರಂಪರೆಯನ್ನು ಮತ್ತದರ ಅನೇಕ ಸ್ತರಗಳನ್ನು ಚರ್ಚಿಸಲು ನೆರೆದಿಲ.್ಲ ಆದರೆ ವೇದೇತರ ಅನುಭವಗಳು ಹೇಗೆ ವೈದಿಕ ಸಾಹಿತ್ಯವನ್ನು ತಾತ್ವಿಕ ಮಖಾಮುಖಿಯಾಗಿವೆ ? ಎನ್ನುವುದು ಇಲ್ಲಿ ಮುಖ್ಯ.ಈ ಮೂಲಕ ಜೈನರು, ಬೌಧ್ಧರು, ಚಾರ್ವಾಕ ಮತ್ತು ಆಜೀವಕರು ಪಾಖಂಡಿಗಳು ಮತ್ತು ನಾಸ್ತಿಕರೆಂದು ಹಣೆಪಟ್ಟಿಯನ್ನು ಪಡೆದರು ಎನ್ನುವ ಚರ್ಚೆ ಕೂಡಾ ಇಲ್ಲಿ ಮುಖ್ಯ. ಜೈನರ ಪ್ರಕಾರ ವೇದಗಳು ಅನಾರ್ಯವೇದಗಳು ಯಾಕೆಂದರೆ ಅವರ ಆರ್ಯವೇದಗಳೆಂಬ ಸಾಹಿತ್ಯವನ್ನು ಅವುಗಳು ಸ್ಥಾನಪಲ್ಲಟಗೊಳಿಸಿದುವಾದ ಕಾರಣದಿಂದ. ಅವುಗಳು ವೇದಗಳನ್ನು ಮಿಥ್ಯಸೂತ್ರಗಳೆಂದು ಕೂಡಾ ಕರೆಯುತ್ತವೆ ನೋಡಿ, ಖeಟಿou, oಠಿ. ಛಿiಣ.,ಠಿ.87). ಗೌತಮ ಬುಧ್ಧ ಕೂಡಾ ವೇದಗಳನ್ನು ಬರಿಯ ಶಬ್ದ ಸಂಗ್ರಹಗಳು, ಬೊಗಳೆ ಮತ್ತು ಖಾಲಿ ಸಂಗತಿಗಳೆಂದು ಕರಯತ್ತಾನೆ, ನೋಡಿ, ಆighಚಿಟಿiಞಚಿಥಿಚಿ, ಐoಟಿಜoಟಿ,1967, voಟ.I, ಠಿ.240, ಖಿeviರಿರಿಚಿsuಣಣಚಿ 15.
ಗೌತಮ ಬುಧ್ಧ ಇನ್ನೂ ಕೂಡಾ ಮುಂದುವರಿದು ಮೂರು ವೇದಗಳನ್ನು, ‘ಮೂರ್ಖತನದ ಮಾತುಗಳು’, ‘ನೀರಿಲ್ಲದ ಮರುಭೂಮಿ’, ‘ದಾರಿಯಿಲ್ಲದ ಕಾಡು’, ಮತ್ತು ಒಂದು ಭ್ರಮೆ ಎಂದು ಕರೆಯುತ್ತಾನೆ, ನೋಡಿ, ibiಜ., ಠಿ.248, ಖಿeviರಿರಿಚಿsuಣಣಚಿ.
ಅತ್ತಯಂತ ಗಂಭೀರವಾದ ವೇದದ ವಿಮರ್ಶೆ ಬಂದಿರುವುದು ಚಾರ್ವಾಕರಿಂದ.ಅವರು ವೇದವನ್ನು, ‘ಅಸತ್ಯದಿಂದ ಆವೃತ್ತವಾದ ವಿದ್ಯಮಾನ’, ಸ್ವ-ವೈರುಧ್ಯದಿಂದ ಕೂಡಿದ್ದು, ವಿರೋಧಾಭಾಸದಿಂದ ಕೂಡಿರುವ ಚರ್ವಿತ ಚರ್ವಣ, ಧೂರ್ತ ಪ್ರಲಾಪ ಮತ್ತು ಆಡಂಭರದ ಭಾಷಣ ಎನ್ನುತ್ತದೆ, ನೋಡಿ, Sಚಿಡಿvಚಿಜಚಿಡಿsಚಿಟಿಚಿsಚಿಟಿgಡಿಚಿhಚಿ, ಣಡಿ. ಇ.ಃ. ಅoತಿeಟಟ ಚಿಟಿಜ ಂ.ಇ. ಉough, ಐoಟಿಜoಟಿ, 1914, ಠಿ.4.
122 ಖgveಜಚಿ, ಗಿII.103.
123 ಖgveಜಚಿ, 10.129.7.
124 ಎ.ಅ. ಊeesಣeಡಿmಚಿಟಿ, ಖಿhe Iಟಿಟಿeಡಿ ಅoಟಿಜಿಟiಛಿಣ oಜಿ ಖಿಡಿಚಿಜiಣioಟಿ, ಆeಟhi, 1985, ಠಿ.77.
125 ಎ.ಅ. ಊeesಣeಡಿmಚಿಟಿ, oಠಿ. ಛಿiಣ., ಠಿ.75; ಖಗಿ, ಗಿ.30.1, ಗಿI.18.3, ಗಿI.27.3,ಗಿIII.64.7, ಗಿIII.100.3, ಘಿ.22.1 (ಛಿiಣeಜ iಟಿ ibiಜ.,ಠಿ.225). ಂಟso see Weಟಿಜಥಿ ಆoಟಿigeಡಿ ಔ’ಈಟಚಿheಡಿಣಥಿ, “ಖಿhe ಔಡಿigiಟಿ oಜಿ ಊeಡಿesಥಿ iಟಿ ಊiಟಿಜu ಒಥಿಣhoಟogಥಿ”, ಊisಣoಡಿಥಿ oಜಿ ಖeಟigioಟಿs,
10 (ಒಚಿಥಿ 1971), ಠಿ.284, ಟಿoಣe 83.
126 ಒuಟಿಜಚಿಞಚಿ Uಠಿಚಿಟಿishಚಿಜ, I.1.4–5. ಐಚಿಞshmಚಿಟಿ Sಚಿಡಿuಠಿ (ಖಿhe ಓighಚಿಟಿಣu ಚಿಟಿಜ ಣheಓiಡಿuಞಣಚಿ, Iಟಿಜiಚಿಟಿ eಜiಣioಟಿ, ಆeಟhi, 1984, ಠಿಠಿ.74–75) ಟisಣs seveಡಿಚಿಟ ಚಿಟಿಣi-ಗಿeಜiಛಿUಠಿಚಿಟಿiಏಚಿಜiಛಿ ಠಿಚಿssಚಿges: ಒuಟಿಜಚಿಞಚಿ Uಠಿ., III.2.3; ಏಚಿ3hಚಿ Uಠಿ., I.2.23; ಃಡಿh. Uಠಿ.,I.5.23; ಏಚಿu2iಣಚಿಞi Uಠಿ., II.5; ಅhಚಿಟಿಜogಥಿಚಿ Uಠಿ., ಗಿ.11–24; ಖಿಚಿiಣಣiಡಿiಥಿಚಿ Uಠಿ., II.5.
127 ಐಚಿಞshmಚಿಟಿ Sಚಿಡಿuಠಿ, oಠಿ. ಛಿiಣ., I.15.
128 Weಟಿಜಥಿ ಆoಟಿigeಡಿ ಔ’ಈಟಚಿheಡಿಣಥಿ, “ಖಿhe ಔಡಿigiಟಿ oಜಿ ಊeಡಿesಥಿ iಟಿ ಊiಟಿಜu ಒಥಿಣhoಟogಥಿ”, ಠಿ.286.
129 ಃhಚಿgಚಿvಚಿಜgiಣಚಿ, II.41–46.
130 Ibiಜ., Iಘಿ.21. ಅಜಿ. ಘಿI.48, 53.
131 ಒಚಿಣsಥಿಚಿಠಿuಡಿಚಿಟಿಚಿ, 53.3.20, 5.3.1.20; ಓಚಿಡಿಚಿಜiಥಿಚಿಠಿuಡಿಚಿಟಿಚಿ, 2.24.16.ಅiಣeಜ iಟಿ ಃಡಿiಚಿಟಿ ಏ. Smiಣh, oಠಿ. ಛಿiಣ., ಠಿ.26.
132 ಂgಟಿiಠಿuಡಿಚಿಟಿಚಿ, 383,47–50, ಛಿiಣeಜ iಟಿ ಅ. ಒಚಿಛಿಞeಟಿzie ಃಡಿoತಿಟಿ, oಠಿ. ಛಿiಣ., ಠಿಠಿ.70–71.
133 ಊಚಿಟbಜಿಚಿss, Iಟಿಜiಚಿ ಚಿಟಿಜ ಇuಡಿoಠಿe, ಠಿ.366.
134 ಓ.ಓ. ಃhಚಿಣಣಚಿಛಿhಚಿಡಿಥಿಥಿಚಿ, ಊisಣoಡಿಥಿ oಜಿ ಖಿಚಿಟಿಣಡಿiಛಿ ಖeಟigioಟಿ, ಆeಟhi, 1982, ಠಿ.75.
135 ಊಚಿಟbಜಿಚಿss, Iಟಿಜiಚಿ ಚಿಟಿಜ ಇuಡಿoಠಿe, ಠಿ.366. ಮಹಾನಿರ್ವಾಣ ತಂತ್ರವು ಸದ್ಯ ಅತ್ಯಂತ ಹೆಚ್ಚು ಪ್ರಚಲಿತದಲ್ಲಿರುವ ತಂತ್ರ. ಸುಮಾರು ಹದಿನೆಂಟನೆಯ ಶತಕದಲ್ಲಿ ಇದು ರಚಿತವಾಯಿತು ಮತ್ತು ಇದು ಮದುವೆ, ದಾಂಪತ್ಯ ನೀತಿ, ಆಸ್ತಿ ಹಕ್ಕು, ಜಾತಿ ನಿಯಮಗಳು ಮತ್ತು ಗುಲಾಮಗಿರಿಗೆ ಸಂಬಂಧಿಸಿದ ನಿಯಮಗಳನ್ನು ಒಳಗೊಂಡಿದೆ. ಈ ಕಾರಣದಿಂದ ವಿದ್ವಾಂಸ ಜೆ.ಡಿ.ಎಮ್. ಡೆರೆಟ್ಟ್ ಈ ಕೃತಿಯನ್ನು, ‘ಸದುದ್ದೇಶಸಹಿತ ಮೋಸ’ ಎನ್ನುತ್ತಾರೆ, ಇದರ ಮೇಲಿನ ಚರ್ಚೆಗಾಗಿ ನೋಡಿ,ಖಿeuಟಿ ಉouಜಡಿiಚಿಚಿಟಿಚಿಟಿಜ Sಚಿಟಿರಿuಞಣಚಿ ಉuಠಿಣಚಿ, ಊiಟಿಜu ಖಿಚಿಟಿಣಡಿiಛಿ ಚಿಟಿಜ Sಚಿಞಣಚಿ ಐiಣeಡಿಚಿಣuಡಿe, Wiesbಚಿಜeಟಿ, 1981,ಠಿಠಿ.98–101; ಎ.ಆ.ಒ. ಆeಡಿಡಿeಣಣ, ಇssಚಿಥಿs iಟಿ ಅಟಚಿssiಛಿಚಿಟ ಚಿಟಿಜ ಒoಜeಡಿಟಿ ಊiಟಿಜu ಐಚಿತಿ, ಐeiಜeಟಿ, 1977, voಟ.2, ಠಿಠಿ.197–242; ಓ.ಓ. ಃhಚಿಣಣಚಿಛಿhಚಿಡಿಥಿಥಿಚಿ, ಊisಣoಡಿಥಿ oಜಿ ಣhe ಖಿಚಿಟಿಣಡಿiಛಿಖeಟigioಟಿ, ಠಿಠಿ.74–75.
136. ಖ.ಓ. ಓಚಿಟಿಜi, “ಔಡಿigiಟಿ oಜಿ ಣhe ಗಿiಡಿಚಿsಚಿivಚಿ ಒovemeಟಿಣ”, iಟಿ ಆ.ಓ. ಎhಚಿ, eಜ., ಖಿhe ಈeuಜಚಿಟ ಔಡಿಜeಡಿ, ಆeಟhi, 2000, ಠಿ.485, ಟಿoಣe 47, ಸ್ಮಾರ್ತರು ವೀರಶೈವ ಚಳುವವಳಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿದವರು, ಆದರೆ ತಮ್ಮ ಶ್ರೇಷ್ಠತೆಯನ್ನು ಕಾಯ್ದುಕೊಂಡರು.ಇದು ಅದರಲ್ಲಿನ ಭ್ರಾತೃತ್ವ ಮತ್ತು ಸಂಬಂಧವನ್ನು ನಿಶ್ಯಕ್ತಗೊಳಿಸಿತು ಮತ್ತು ಅದರ ಅನುಯಾಯಿಗಳಲ್ಲಿ ವೈದಿಕ ತತ್ವದ ಆಧಾರದ ಜಾತಿ ವ್ಯವಸ್ಥೆ ಬೆಳೆಯಲು ಹಾದಿ ಮಾಡಿತು. ಇದು ವೀರಶೈವರ ಚಳುವಳಿಯ ನಂತರದ ಹಂತದಲ್ಲಿ ಚಳುವಳಿಯನ್ನು ವರ್ಣಾಶ್ರಮ ಧರ್ಮಕ್ಕೆ ನಿಷ್ಠೆಯಿಂದ ಇರಲು ತಿಳಿಸಿದ್ದು ನಮ್ಮನ್ನು ಚಕಿತಗೊಳಿಸುವುದಿಲ್ಲ. ಇದಕ್ಕೆ 14ನೇ ಶತಮಾನದ ಭೀಮಕವಿ ಮತ್ತು ಶ್ರೀಪತಿ ಪಂಡಿತರಿಬ್ಬರ ಕೃತಿಗಳು ಸಾಕ್ಷಿಯಾಗಿವೆ. ಇನ್ನೂ ಮುಂದುವರಿದು ಜಾತಿಯ ಕರ್ತವ್ಯಗಳನ್ನು ನಿರ್ವಹಿಸುವುದು ಮತ್ತು ವೈದಿಕ ವಿಧಿಗಳು ಮಾತ್ರವೇ ಜನರನ್ನು ಶುದ್ದಿಗೊಳಿಸಲು ಹಾಗೂ ಆತನನ್ನು ಮುಕ್ತಿಯೆಡೆಗೆ ಕರೆದೊಯ್ಯುಲು ಸಾಧ್ಯ ಎಂದು ತಿಳಿಸುತ್ತದೆ. ( ನೋಡಿ, Suviಡಿಚಿ ಎಚಿisತಿಚಿಟ, “Semiಣisiಟಿg ಊiಟಿಜuism: ಅhಚಿಟಿgiಟಿg Pಚಿಡಿಚಿಜigms oಜಿ ಃಡಿಚಿhmಚಿಟಿiಛಿಚಿಟ Iಟಿಣegಡಿಚಿಣioಟಿ”, Soಛಿiಚಿಟ Sಛಿieಟಿಣisಣ, voಟ.19, ಟಿo.12, 1991, ಠಿ.22.). ವೀರಶೈವರು ತಮ್ಮ ವಿಚಾರಗಳಲ್ಲಿ ಜಾತಿಯ ರಚನೆ ಮತ್ತು ಅದು ವಿಧಿಸಿದ ಕರ್ತವ್ಯಗಳನ್ನು ಒಪ್ಪಿಕೊಳ್ಳುವರು, ಅವುಗಳನ್ನು ವೇದಗಳಿಂದ ಕಾನೂನು ಬದ್ಧಗೊಳಿಸುವುದನ್ನು ಅನಿವಾರ್ಯವೆಂದು ಬಗೆದು ಅದಕ್ಕೆ ಒತ್ತುಕೊಟ್ಟಿರುವುದನ್ನು ಲಿಂಗಧಾರಣ ಚಂದ್ರಿಕ ಎಂಬ ಅವರ ಮೂಲಭೂತ ಕೃತಿಯಲ್ಲಿ ಕಾಣಬಹುದು, ನೋಡಿ, ಲೂಯಿಸ್ ರಿನೊವ್, ಪು – 61, ಟಿಪ್ಪಣಿ 1.
137 ಲೂಯಿಸ್ ರಿನೊವ್, ಪು – 2.
138 ಅದೇ - ಪುಟ -2.
139 ಅದೇ - ಪುಟ -3.
140. ನೋಡಿ, ಅiಣeಜ iಟಿ ಊಚಿಟbಜಿಚಿss, Iಟಿಜiಚಿ ಚಿಟಿಜ ಇuಡಿoಠಿe, ಠಿ.407.
141 ಅದೇ - ಪುಟ – 407. ಪೌಲ್ ಹ್ಯಾಕರ್ “ಇನ್ಕ್ಲೂಸಿವಿಸ್ಮಸ್’ ಮತ್ತು ಸಂಬಂಧಿತ ಪದಗಳಗಳನ್ನು ಸಹಿಷ್ಣುತೆಗೆ ಸಂಬಂಧಿತ ಚರ್ಚೆಗಳಲ್ಲಿ ಹಾಗೂ ಭಾರತೀಯ ಧರ್ಮಗಳಲ್ಲಿರುವ ಅಸಹಿಷ್ಣುತೆಯನ್ನು ಮೊದಲ ಬಾರಿಗೆ ಬಳಸಿದ, (“ಖeಟigise ಖಿoಟeಡಿಚಿಟಿz uಟಿಜ Iಟಿಣoಟeಡಿಚಿಟಿz im ಊiಟಿಜuism”, Sಚಿeಛಿuಟum, 8 (1957), ಠಿಠಿ.167–79).). ಈತನ ಪ್ರಕಾರ “ಇನ್ಕ್ಲೂಸಿವಿಸಂ ಅಥವಾ ಒಳಗೊಳ್ಳುವಿಕೆ ಎನ್ನುವುದು ಮೂಲಭೂತವಾಗಿ, ಹಾಗೆ ವಿಶಿಷ್ಟವಾಗಿ ಇರುವ ಭಾರತೀಯ ವಿದ್ಯಮಾನ” ((Iಟಿಛಿಟusivismus. ಇiಟಿe iಟಿಜisಛಿhe ಆeಟಿಞಜಿoಡಿm, eಜ. ಉ. ಔbeಡಿhಚಿmmeಡಿ, ಗಿieಟಿಟಿಚಿ, 1983, ಠಿಠಿ.11–28). ಆದರೆ ಜೆ.ಡಬ್ಲ್ಯೂ. ಹಾವರ್ ಗುರುತಿಸಿರುವಂತೆ ((ಖಿoಟeಡಿಚಿಟಿz uಟಿಜ Iಟಿಣoಟeಡಿಚಿಟಿz iಟಿ ಜeಟಿ ಟಿiಛಿhಣಛಿhಡಿisಣಟiಛಿheಟಿ ಖeಟigioಟಿeಟಿ, Sಣuಣಣgಚಿಡಿಣ, 1961, ಠಿಠಿ. 90ಜಿಜಿ). ಸಹಿಷ್ಣುತೆ ಮತ್ತು ಇನ್ಕ್ಲೂಸಿವಿಸಂ ಎರಡು ಸಮನಾರ್ಥಕ ಪದಗಳಲ್ಲವಾದರೂ ಕೂಡಾ ನಂತರದಲ್ಲಿ ಅವು ಶ್ರೇಣಿಕೃತ ಹಾಗೂ ವಿಶ್ವವ್ಯಾಪಿ ಸಹಿಷ್ಣುತೆಯಾಗಿದೆ”. ಇದೇ ಸಂದರ್ಭದಲ್ಲಿ ಹ್ಯಾಕರ್ನ ಕೆಲವು ಆಲೋಚನೆಗಳನ್ನು ಹಾಲ್ಬ್ಫಾಸ್ ಟೀಕಿಸಿದ್ದಾನೆ (ಇಂಡಿಯ ಅಂಡ್ ಯೂರೋಪ್, ಪುಟ 22). ಹಾಲ್ಬ್ಫಾಸ್ನ ಮಹಾಪ್ರಬಂಧವನ್ನು ಕಾರ್ಲ್ ಹೆನಿಜ್ ಗೊಲ್ಜಿಯೊ ಟೀಕಿಸಿದ್ದಾನೆ ನೋಡಿ, (“ಆಚಿs Pಡಿobಟem voಟಿ ಖಿoಟeಡಿಚಿಟಿz uಟಿಜ Iಟಿಣoಟeಡಿಚಿಟಿz iಟಿ iಟಿಜisಛಿheಟಿ ಖeಟigioಟಿeಟಿ ಚಿಟಿhಚಿಟಿಜ eಠಿigಡಿಚಿಠಿhisಛಿheಡಿ ಕಿueಟಟeಟಿ”, iಟಿ ಊeಟmuಣ ಇimeಡಿ, eಜ., ಈಡಿಚಿಟಿಞ ಖiಛಿhಚಿಡಿಜ ಊಚಿmm ಒemoಡಿiಚಿಟ ಗಿoಟume, ಃoಟಿಟಿ, 1990, ಠಿಠಿ.89–102
142 ಭಾರತದಲ್ಲಿ ಹಿಂದೂ ಧರ್ಮ ಮತ್ತು ಇತರ ಧರ್ಮಿಕ ಸಮುದಾಯಗಳ ನಡುವಿನ ಸಂಬಂಧ ಕುರಿತ ವಿವೇಕಾನಂದರ ದೃಷ್ಟಿಯ ಸಂಕ್ಷಿಪ್ತ ಸಾರಾಂಶವು ಹೀಗಿದೆ, ನೋಡಿ, ಖಿoಡಿಞeಟ ಃಡಿeಞಞe, ಒಚಿಞeಡಿs oಜಿ ಒoಜeಡಿಟಿ Iಟಿಜiಚಿಟಿ ಖeಟigioಟಿ iಟಿ ಣhe ಓiಟಿeಣeeಟಿಣh ಅeಟಿಣuಡಿಥಿ, ಓeತಿ ಙoಡಿಞ, 2002, ಠಿಠಿ.41–42.
143. ಎ. ಭಾರತಿ, ಪುಟ – 282.
144. ಹಿಂದೂ ಧರ್ಮದ ಸಹಿಷ್ಣುತೆಯ ಆಲೋಚನೆಯನ್ನು ಕುರಿತು ಬರೆದಿರುವ ವಿದ್ವಾಂಸರಲ್ಲಿ ಇತ್ತೀಚಿನ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಪ್ರಭಾವಿ ವ್ಯಕ್ತಿ ಅಮಥ್ರ್ಯ ಸೇನ್ ಸಮರ್ಥಿಸಿರುವರು, ನೋಡಿ, (ಖಿhe ಂಡಿgumeಟಿಣಚಿಣive Iಟಿಜiಚಿಟಿ, ಐoಟಿಜoಟಿ, 2005, ಠಿಠಿ.3–33).
145. ಖ.ಅ. ಊಚಿzಡಿಚಿ, Sಣuಜies iಟಿ ಣhe Puಡಿಚಿಟಿiಛಿ ಖeಛಿoಡಿಜs oಟಿ ಊiಟಿಜu ಖiಣes ಚಿಟಿಜ ಅusಣoms, seಛಿoಟಿಜ eಜiಣioಟಿ, ಆeಟhi, 1975, ಠಿಠಿ.41–42, 103; Weಟಿಜಥಿ ಆoಟಿigeಡಿ ಔ’ಈಟಚಿheಡಿಣಥಿ, ಖಿhe ಔಡಿigiಟಿs oಜಿ ಇviಟ iಟಿ ಊiಟಿಜu ಒಥಿಣhoಟogಥಿ, ಆeಟhi, 1988, ಠಿಠಿ.187–88, 204–11. ವಿಷ್ಣುವಿನ ರಿಷಭಾವತಾರಕ್ಕೆ ಸಂಬಂಧಿಸಿದಂತೆ, ಪಿ.ಎಸ್. ಜೈನಿ ಗಮನಿಸಿರುವಂತೆ ‘‘ಜಿನನ ವೈಷ್ಣವೀಕರಣವನ್ನು ಅವತಾರ ಎಂಬ ಸಲಕರಣೆಯು ಮಾಡಿರುವುದು ಎರಡು ವಿರೋಧಿ ಧರ್ಮಗಳು ಸಮನ್ವಯತೆಯೆಡೆಗೆ ಸಾಗುವ ಪೊಳ್ಳು ಬೆಳವಣಿಗೆಗೆ ಅತ್ಯುತ್ತಮ ಉದಾಹರಣೆಯಾಗಿದೆ’, ನೋಡಿ, ಅoಟಟeಛಿಣeಜ Pಚಿಠಿeಡಿs oಟಿ ಎಚಿiಟಿಚಿ Sಣuಜies, ಆeಟhi, 2000, ಠಿಠಿ.343–44.
146. ವರಾಹ ಪುರಾಣ, 48.22.
147. Sಚಿಟಿಞಚಿಡಿಚಿಜigviರಿಚಿಥಿಚಿ oಜಿ ಒಚಿಜhಚಿvಚಿ, I.28–43, ಛಿiಣeಜ iಟಿ Weಟಿಜಥಿ ಆoಟಿigeಡಿ ಔ’ಈಟಚಿheಡಿಣಥಿ, ಖಿhe ಔಡಿigiಟಿs oಜಿ ಇviಟ iಟಿ ಊiಟಿಜu ಒಥಿಣhoಟogಥಿ, ಠಿಠಿ.208–9. ಬುದ್ಧನನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಿದನ್ನು ಕುರಿತು, ಪದ್ಮನಾಭ್ ಎಸ್. ಜೈನಿ ಒಂದು ಒಳನೋಟವನ್ನು ನೀಡುವರು “... ಬ್ರಾಹ್ಮಣ ಪುರೋಹಿತರಿಗೆ ಬೌದ್ಧ ದೇವಾಲಯಗಳನ್ನು ಅಧಿಕೃತವಾಗಿ ನಿರ್ವಹಿಸಲು ಮಾರ್ಗವೊಂದು ತೆರೆಯಿತು. ಸಮಯ ಕಳೆಯುತ್ತಿದ್ದಂತೆ, ಈ ದೇವಾಲಯಗಳು, ಸಾಮಾನ್ಯವಾಗಿ ಶ್ರೀಮಂತವಾಗಿದ್ದು ಮತ್ತು ಅಪಾರವಾದ ದತ್ತಿ ಪಡೆಯುತ್ತಿದ್ದುವು, ಉದಾಹರಣೆಗೆ ಒರಿಸ್ಸಾದ ಜಗನ್ನಾಥ-ಪುರಿ ದೇವಾಲಯ, ದಕ್ಶಿಣ ಭಾರತದ ಕದ್ರಿ ವಿಹಾರ ಮತ್ತು (ಬ್ರಿಟಿಷ್ ಸರ್ಕಾರದಿಂದ ಸಿಲೋನಿನ ಬೌದ್ದರಿಗೆ ಅದನ್ನು ಹಿಂದಿರುಗಿಸುವವರೆಗೆ) ಬುದ್ಧಗಯಾ ಮತ್ತು ಸಾರನಾಥ ದೇವಾಲಯಗಳು ಸಹ ಬ್ರಾಹಣ ಪುರೋಹಿತರ ಕೈ ಸೇರಿತ್ತು ಹಾಗೂ ಅವುಗಳನ್ನು ವೈಷ್ಣವ ಅಥವಾ ಶೈವ ದೇವಾಲಯಗಳಾಗಿ ಪರಿವರ್ತಿಸಲಾಗಿತ್ತು” (ಕಲೆಕ್ಟೆಡ್ ಪೇಪರ್ಸ್ ಆನ್ ಬುಧ್ಧಿಸ್ಟ್ ಸ್ಟಡೀಸ್, ದೆಹಲಿ, 2001, ಪುಟ-290).
148. Weಟಿಜಥಿ ಆoಟಿigeಡಿ ಔ’ಈಟಚಿheಡಿಣಥಿ, ಖಿhe ಔಡಿigiಟಿs oಜಿ ಇviಟ iಟಿ ಊiಟಿಜu ಒಥಿಣhoಟogಥಿ, ಠಿ.209.
149. ಎohಟಿ ಂ. ಉಡಿimes, “ಆಚಿಡಿsಚಿಟಿಚಿ”, iಟಿ Sushiಟ ಒiಣಣಚಿಟ ಚಿಟಿಜ ಉeಟಿe ಖಿhuಡಿsbಥಿ, eಜs., ಖಿhe ಊiಟಿಜu Woಡಿಟಜ, Iಟಿಜiಚಿಟಿ ಡಿeಠಿಡಿiಟಿಣ, ಆeಟhi, 2005, ಠಿ.539.
150. Suಞumಚಿಡಿi ಃhಚಿಣಣಚಿಛಿhಚಿಡಿರಿi, ಖಿhe Iಟಿಜiಚಿಟಿ ಖಿheogoಟಿಥಿ, Peಟಿguiಟಿ ಃooಞs, ಓeತಿ ಆeಟhi, 2000, ಠಿ.124; Weಟಿಜಥಿ ಆoಟಿigeಡಿ ಔ’ಈಟಚಿheಡಿಣಥಿ, ಊiಟಿಜu ಒಥಿಣhs, Peಟಿguiಟಿ, ಃಚಿಟಣimoಡಿe, 1975, ಠಿ.118.
151. ಮಹಾಭಾರತ ಮತ್ತು ಇತರ ಪಠ್ಯಗಳಲ್ಲಿ ಕನಕಹಾಳದ ಬಳಿ ಗಂಗಾ ನದಿಯ ಪ್ರವೇಶದ ಬಗ್ಗೆ ಹೆಚ್ಚಾಗಿ ಹೇಳಲಾಗಿದೆ. ಇದಕ್ಕೆ ಶೈವರು ಮತ್ತು ವೈಷ್ಣವರು ಇಬ್ಬರೂ ಸಾಕಷ್ಟು ಮಹತ್ವ ನೀಡಿದ್ದರು. ಶೈವ ಸಂತರು ಕುಂಭಮೇಳದ ಮಂಗಳಕರ ಸಮಯದಲ್ಲಿ ಗಂಗಾ ನದಿಯನ್ನು ಪ್ರವೇಶಿಸುವ ಹಕ್ಕಿಗಾಗಿ ಹೋರಾಡುತ್ತಿದ್ದರು. ಒಂದು ದಾಖಲೆಯ ಪ್ರಕಾರ ನಾಗಾ ಸನ್ಯಾಸಿಯಾದ ಭಾವಾನಂದ, ಸುರಸುರಾನಂದ ಮತ್ತು ಕಮಲಾನಂದ “ಬೈರಾಗಿಗಳ (ವೈಷ್ಣವ ಸಂತರು) ವಿರುದ್ಧ ಹರಿದ್ವಾರದ ಬಳಿ 1266ರಲ್ಲಿ ನಿರ್ಣಾಯಕ ವಿಜಯ ಸಾಧಸಿದರು’, ನೋಡಿ, ಉ.S. ಉhuಡಿಥಿe, Iಟಿಜiಚಿಟಿ Sಚಿಜhus, ಃombಚಿಥಿ, 1964, ಠಿ.103. ಶೈವ ಮತ್ತು ವೈಷ್ಣವ ಗುಂಪುಗಳು 1760ರಲ್ಲಿ ಹರಿದ್ವಾರದ ಬಳಿ ಮತ್ತೊಮ್ಮೆ ಸಂಘರ್ಷಕ್ಕಿಳಿದರು, ಒಂದು ಅಭಿಪ್ರಾಯದ ಪ್ರಕಾರ ಸುಮಾರು 18,000 ಜನ ಕೊಲ್ಲಲ್ಪಟ್ಟರು. ಈ ಯುದ್ಧವು ಈ ವಿಚಾರವನ್ನು ಶೈವ ಸಂತರ ಪರ ನಿರ್ಣಯಿಸಿತು, ನೋಡಿ, ಏಟಚಿus ಏಟosಣeಡಿmಚಿieಡಿ, “ಖಿhe ಔಡಿigiಟಿಚಿಟ ಆಚಿಞsಚಿ Sಚಿgಚಿ”, iಟಿ ಂಡಿviಟಿಜ Shಚಿಡಿmಚಿ, eಜ., ಇssಚಿಥಿs oಟಿ ಣhe ಒಚಿhಚಿbhಚಿಡಿಚಿಣಚಿ, ಐeiಜeಟಿ, 1991, ಠಿ.112. ಮತ್ತೊಂದು ಉದಾಹರಣೆಯೆಂದರೆ, ಶೈವ ಸಂತರು ಮತ್ತು ವೈಷ್ಣವ ಬೈರಾಗಿ ಪಂಥಾನುಯಾಯಿಗಳ ನಡುವೆ 1707ರಲ್ಲಿ ಔರಂಗಜೇಬ್ನ ನಿಧನದ ನಂತರ ಅಸಹಿಷ್ಣುತೆಯು ಅಯೋಧ್ಯಾ ವಿಚಾರದಲ್ಲಿ ಮೊಳೆಯಿತು. ಆ ಸಂದರ್ಭದಲ್ಲಿ ಮುಖಾಮುಖಿ ತಿಕ್ಕಾಟವು ಧಾರ್ಮಿಕ ಸ್ಥಳಗಳು ಮತ್ತು ಯಾತ್ರಾ ಶುಲ್ಕ ಹಾಗೂ ಉಡುಗೊರೆಗಳ ಮೇಲೆ ಅಧಿಪತ್ಯ ಸಾಧಿಸಲು ನಡೆಯಿತು (ಖ.S. Shಚಿಡಿmಚಿ, ಅommuಟಿಚಿಟ ಊisಣoಡಿಥಿ ಚಿಟಿಜ ಖಚಿmಚಿ’s ಂಥಿoಜhಥಿಚಿ, ಡಿeviseಜ eಜiಣioಟಿ, ಆeಟhi, 2000, ಠಿಠಿ.14–15; ಊಚಿಟಿs ಃಚಿಞಞeಡಿ, ಂಥಿoಜhಥಿಚಿ, ಉಡಿoಟಿiಟಿgeಟಿ, 1986, ಠಿ.149.
152. ವಿಷ್ಣುಪುರಾಣ, ಐ.9.56.
153. ಸೌರಪುರಾಣ,3,6.
154. ಏ.ಂ. ಓiಟಚಿಞಚಿಟಿಣಚಿ Sಚಿsಣಡಿi, ಖಿhe ಅoಟಚಿs, Uಟಿiveಡಿsiಣಥಿ oಜಿ ಒಚಿಜಡಿಚಿs, 1975, ಠಿ.644; iಜem, ಂ ಊisಣoಡಿಥಿ oಜಿ Souಣh Iಟಿಜiಚಿ, seveಟಿಣh imಠಿಡಿessioಟಿ, ಆeಟhi, ಠಿ.432. ರಾಮಾನುಜರ ಕಿರುಕುಳಕ್ಕೆ ಸಂಬಂಧಿಸಿದ ವಿಮರ್ಶಾತ್ಮಕ ನಿರೂಪಣೆಗಾಗಿ ನೋಡಿ, ಖiಛಿhಚಿಡಿಜ ಊ. ಆಚಿvis, “ಖಿhe Sಣoಡಿಥಿ oಜಿ ಣhe ಆisಚಿಠಿಠಿeಚಿಡಿiಟಿg ಎಚಿiಟಿs: ಖeಣeಟಟiಟಿg ಣhe Sಚಿivಚಿ–ಎಚಿiಟಿಚಿ ಇಟಿಛಿouಟಿಣeಡಿ iಟಿ ಒeಜievಚಿಟ Souಣh Iಟಿಜiಚಿ”, iಟಿ ಎohಟಿ ಇ. ಅoಡಿಣ, eಜ., ಔಠಿeಟಿ ಃouಟಿಜಚಿಡಿies: ಎಚಿiಟಿ ಅommuಟಿiಣies ಚಿಟಿಜ ಅuಟಣuಡಿes iಟಿ Iಟಿಜiಚಿಟಿ ಊisಣoಡಿಥಿ, ಂಟbಚಿಟಿಥಿ, 1998, ಠಿಠಿ.213–24.
155. ಏ.ಂ. ಓiಟಚಿಞಚಿಟಿಣಚಿ Sಚಿsಣಡಿi, ಖಿhe ಅoಟಚಿs, Uಟಿiveಡಿsiಣಥಿ oಜಿ ಒಚಿಜಡಿಚಿs, 1975, ಠಿಠಿ. 644 -45.
156. ಂಥಿಚಿಡಿಚಿಟಿಚಿgಚಿsuಣಣಚಿm, ಣಡಿ. ಊ. ಎಚಿಛಿobi, Sಃಇ, ಘಿಘಿII, II.3.1.10, ಛಿiಣeಜ bಥಿ ಂ.ಏ. ಓಚಿಡಿಚಿiಟಿ, “ಖeಟigious Poಟiಛಿಥಿ ಚಿಟಿಜ ಖಿoಟeಡಿಚಿಣioಟಿ iಟಿ ಂಟಿಛಿieಟಿಣ Iಟಿಜiಚಿ ತಿiಣh Pಚಿಡಿಣiಛಿuಟಚಿಡಿ ಖeಜಿeಡಿeಟಿಛಿe ಣo ಣhe ಉuಠಿಣಚಿ Peಡಿioಜ”, iಟಿ ಃಚಿಡಿಜತಿeಟಟ ಐ. Smiಣh, eಜ., ಇssಚಿಥಿs oಟಿ ಉuಠಿಣಚಿ ಅuಟಣuಡಿe, ಆeಟhi, 1983, ಠಿ.22.
157. ಂಡಿಣhಚಿsಚಿsಣಡಿಚಿ, II.4.23; III.20.16.
158. ವದಂತಿಯು ವರ್ತನೆಯ ಕಣ್ಣಿನಲ್ಲಿರುತ್ತದೆ. ಎಲ್ಲ ಹಿಂದುಗಳಿಗೆ, ಬೌದ್ಧರು, ಜೈನರು ಮತ್ತು ಚಾರ್ವಕರೆಲ್ಲರೂ ಪಾಷಂಡಿಗಳು. ಇನ್ನೂ ಹಲವರ ಪ್ರಕಾರ, ವೈಷ್ಣವರಿಗೆ ಶೈವರು ಪಾಷಂಡಿಗಳು, ಮತ್ತು ಹಲವಾರು ಶೈವರಿಗೆ ವೈಷ್ಣವರು ಪಾಷಂಡಿಗಳು ಹಾಗೂ ಜೈನರಿಗೆ ಹಿಂದೂಗಳು ಪಾಷಂಡಿಗಳಾಗಿರುವರು, ನೋಡಿ, Weಟಿಜಥಿ ಆoಟಿigeಡಿ ಔ’ಈಟಚಿheಡಿಣಥಿ, “ಖಿhe Imಚಿge oಜಿ ಣhe ಊeಡಿeಣiಛಿ iಟಿ ಣhe ಉuಠಿಣಚಿ PuಡಿಚಿIಚಿs,” iಟಿ ಃಚಿಡಿಜತಿeಟಟ ಐ. Smiಣh, oಠಿ. ಛಿiಣ., ಠಿ.116.
159. ಖಿhe ಗಿಥಿಚಿಞಚಿಡಿಚಿಟಿಚಿ ಒಚಿhಚಿbhಚಿsಥಿಚಿ oಜಿ Pಚಿಣಚಿñರಿಚಿಟi, 2.4.9, ಣhiಡಿಜ eಜiಣioಟಿ, Pooಟಿಚಿ, 1962, voಟ.I, ಠಿ.476. ಂಟso see Pಡಿಚಿbhuಜಚಿಥಿಚಿಟ ಂgಟಿihoಣಡಿi, Pಚಿಣಚಿñರಿಚಿಟiಞಚಿಟiಟಿಚಿ ಃhಚಿಡಿಚಿಣಚಿ, Pಚಿಣಟಿಚಿ, 1963, ಠಿ.573; Pಚಿಜmಚಿಟಿಚಿbh S. ಎಚಿiಟಿi, ಅoಟಟeಛಿಣeಜ Pಚಿಠಿeಡಿs oಟಿ ಎಚಿiಟಿಚಿ Sಣuಜies, ಠಿ.337.
160. 160 ಆivಥಿಚಿvಚಿಜಚಿಟಿಚಿ, eಜ. ಇ.ಃ. ಅoತಿeಟಟ ಚಿಟಿಜ ಖ.ಂ. ಓeiಟ, ಅಚಿmbಡಿiಜge, 1886, ಠಿಠಿ.433–34.
161 ಅiಣeಜ iಟಿ ಊಚಿಟbಜಿಚಿss, ಖಿಡಿಚಿಜiಣioಟಿ ಚಿಟಿಜ ಖeಜಿಟeಛಿಣioಟಿ, ಠಿ.61.
162 Ibiಜ., ಠಿಠಿ.61, 95–6.
163 Ibiಜ., ಠಿ.59.
164 Ibiಜ., ಠಿ.57
165 ಊಚಿಟbಜಿಚಿss, Iಟಿಜiಚಿ ಚಿಟಿಜ ಇuಡಿoಠಿe, ಠಿ.361.
166 Sಚಿuಡಿಚಿಠಿuಡಿಚಿಟಿಚಿ, 64.44; 38.54.
167 ಒಚಿಣಣಚಿviಟಚಿsಚಿ Pಡಿಚಿhಚಿsಚಿಟಿಚಿ oಜಿ ಒಚಿheಟಿಜಡಿಚಿviಞಡಿಚಿmಚಿvಚಿಡಿmಚಿಟಿ, eಜ. ಚಿಟಿಜ ಣಡಿ. ಓ.P. Uಟಿi, ಖಿಡಿivಚಿಟಿಜಡಿum, 1973, ಠಿ.49. ಅಜಿ. Weಟಿಜಥಿ ಆoಟಿigeಡಿ ಔ’ಈಟಚಿheಡಿಣಥಿ, “ಖಿhe ಔಡಿigiಟಿ oಜಿ ಊeಡಿesಥಿ iಟಿ ಊiಟಿಜu ಒಥಿಣhoಟogಥಿ”, ಠಿ.276.
168 Pಡಿಚಿboಜhಚಿಛಿಚಿಟಿಜಡಿoಜಚಿಥಿಚಿ oಜಿ ಏಡಿiಟಿsಚಿ ಒisಡಿಚಿ, eಜ. ಚಿಟಿಜ ಣಡಿ. Siಣಚಿ ಓಚಿmbiಚಿಡಿ, ಆeಟhi, 1998, ಂಛಿಣ III, veಡಿse 9.
169 Ibiಜ., ಠಿಠಿ.44–45.
170 ಙogಚಿsಚಿsಣಡಿಚಿ oಜಿ ಊemಚಿಛಿಚಿಟಿಜಡಿಚಿ, eಜ. ಒuಟಿi ಎಚಿmbuviರಿಚಿಥಿಚಿ, 3 voಟs., ಃombಚಿಥಿ, 1977–86, II.33–40, ಛಿiಣeಜ iಟಿ Pಚಿuಟ ಆuಟಿಜಚಿs, ಖಿhe ಎಚಿiಟಿs, ಐoಟಿಜoಟಿ, 1992, ಠಿ.201.
171. ಹೆಚ್ಚಿನ ವೈದಿಕ ಧರ್ಮ ವಿರೋಧಿ ಜೈನ ಸಾಹಿತ್ಯದಲ್ಲಿನ ಹೇಳಿಕೆಗಳಿಗಾಗಿ ಪೌಲ್ ದುಂಡಾಸ್ರನ್ನು ನೋಡಿ, ಉಲ್ಲೇಖ, ಪುಟ – 200-206.
172. ಪೌಲ್ ದುಂಡಾಸ್ (ಉಲ್ಲೇಖ - ಪುಟ-206-8), ಬೌದ್ಧರು ಮತ್ತು ಜೈನರ ನಡುವಿನ ಸಂಘರ್ಷವನ್ನು ಚರ್ಚಿಸುತ್ತಾರೆ. ಉದಾಹರಣೆಗೆ ಪ್ರಬಂಧಚಿಂತಾಮಣಿ, ರಂಜನ ಭಟ್ಟಾಚಾರ್ಯ ಅವರ, “ಖeಟigioಟಿ iಟಿ ಇಚಿಡಿಟಥಿ ಒeಜievಚಿಟ ಉuರಿಚಿಡಿಚಿಣ (ಂ.ಆ. 600–1300)”, uಟಿಠಿubಟisheಜ Ph.ಆ. ಜisseಡಿಣಚಿಣioಟಿ, ಆeಠಿಚಿಡಿಣmeಟಿಣ oಜಿ ಊisಣoಡಿಥಿ, Uಟಿiveಡಿsiಣಥಿ oಜಿ ಆeಟhi, 1998, ಠಿ.56.
173. ಖಚಿಟಿರಿಚಿಟಿಚಿ ಃhಚಿಣಣಚಿಛಿhಚಿಡಿಥಿಚಿ, oಠಿ. ಛಿiಣ., ಠಿ.204.
174. ಹಲವಾರು ಮಧ್ಯಕಾಲೀನ ಪಠ್ಯಗಳು ಅನೇಕ ಧಾರ್ಮಿಕ ಗುಂಪುಗಳ ನಡುವೆ ಇದ್ದ ಕಹಿಯಾದ ತಾತ್ವಿಕ ಚರ್ಚೆ ಮತದತು ಸಂಘರ್ಷದ ಮೇಲೆ ಬೆಳಕು ಚೆಲ್ಲುವುದು. ಹರಿಭದ್ರನ ಯೋಗದೃಷ್ಟಿಸಮುಚ್ಚಯ (8ನೇ ಶತಮಾನ), ಉದಾಹರಣೆಗೆ ಬೌದ್ಧ ಧರ್ಮ ಮತ್ತು ವೇದಾಂತದ ಟೀಕೆ ಜೈನ ಮತದ ದೃಷ್ಟಿಯಿಂದ, ನೋಡಿ, ಅhಡಿisಣoಠಿheಡಿ ಏeಥಿ ಅhಚಿಠಿಠಿಟe ಚಿಟಿಜ ಎohಟಿ ಅಚಿseಥಿ, ಖeಛಿoಟಿಛಿiಟiಟಿg ಙogಚಿ: ಊಚಿಡಿibhಚಿಜಡಿಚಿ’s ಅoಟಟeಛಿಣioಟಿ oಜಿ ಗಿieತಿs oಟಿ ಙogಚಿ, ಂಟbಚಿಟಿಥಿ, 2004. ಅದೇ ರೀತಿಯಲ್ಲಿ, ಶಾಂತರಕ್ಷಿತನ (8ನೇ ಶತಮಾನ) ತತ್ವಸಮಗ್ರವು ನ್ಯಾಯ, ಮೀಮಾಂಸ, ಸಾಂಖ್ಯ ಮತ್ತು ಜೈನ ತತ್ವಶಾಸ್ತ್ರವನ್ನು ವಿಮರ್ಶಾತ್ಮಕವಾಗಿ ಬೌದ್ಧ ಧರ್ಮದ ದೃಷ್ಟಿಕೋನದಲ್ಲಿ ಚರ್ಚಿಸುತ್ತದೆ (ತತ್ವಸಮಗ್ರ ಆಫ್ ಶಾಂತರಕ್ಷಿತ, ಸಂ, ದ್ವಾರಿಕಾದಾಸ್ ಶಾಸ್ತ್ರಿ, ವಾರಣಾಸಿ, 1968; ಗಂಗನಾಥ ಜ್ಹಾ, ಬರೋಡ).
175. ಉ. ಖoeಡಿiಛಿh, ಃiogಡಿಚಿಠಿhಥಿ oಜಿ ಆhಚಿಡಿmಚಿsvಚಿmiಟಿ, Pಚಿಣಟಿಚಿ, 1959, ಠಿ.64.
176. Sಚಿಜhಚಿಟಿಚಿmಚಿಟಚಿ, ಘಿಐI.II, ಟಿos.260, 263–4, eಣಛಿ., ಛಿiಣeಜ iಟಿ ಃ.ಓ. Shಚಿಡಿmಚಿ, “ಖeಟigious ಖಿoಟeಡಿಚಿಟಿಛಿe ಚಿಟಿಜ Iಟಿಣoಟeಡಿಚಿಟಿಛಿe ಚಿs ಖeಜಿಟeಛಿಣeಜ iಟಿ Iಟಿಜiಚಿಟಿ Sಛಿuಟಠಿಣuಡಿes”, ಎouಡಿಟಿಚಿಟ oಜಿ ಣhe ಉಚಿಟಿgಚಿಟಿಚಿಣh ಎhಚಿ ಖeseಚಿಡಿಛಿh Iಟಿsಣiಣuಣe, Umesh ಒishಡಿಚಿ ಅommemoಡಿಚಿಣioಟಿ ಗಿoಟume , 1970, ಠಿ.665.
177. ಃ.ಓ. Shಚಿಡಿmಚಿ, oಠಿ. ಛಿiಣ., ಠಿಠಿ.665–66.
178. ಏಚಿmiಟ Zveಟebiಟ, ಅomಠಿಚಿಟಿioಟಿ Sಣuಜies ಣo ಖಿಚಿmiಟ ಐiಣeಡಿಚಿಣuಡಿe, ಐeiಜeಟಿ, 1992; ಛಿiಣeಜ bಥಿ Iಟಿಜiಡಿಚಿ ಗಿisತಿಚಿಟಿಚಿಣhಚಿಟಿ Peಣeಡಿsoಟಿ, “SಡಿಚಿmಚಿIಚಿs ಂgಚಿiಟಿsಣ ಣhe ಖಿಚಿmiಟ Wಚಿಥಿ”, iಟಿ ಎohಟಿ ಇ. ಅoಡಿಣ, eಜ., ಔಠಿeಟಿ ಃouಟಿಜಚಿಡಿies, ಂಟbಚಿಟಿಥಿ, 1998, ಠಿ.167.
179. Sಚಿmueಟ ಃeಚಿಟ, Si-ಙu-ಏi: ಃuಜಜhisಣ ಖeಛಿoಡಿಜs oಜಿ ಣhe Wesಣeಡಿಟಿ Woಡಿಟಜ, ಆeಟhi, 1969, ಠಿಠಿ.171–172.
180 ಖಚಿರಿಚಿಣಚಿಡಿಚಿಟಿgiಟಿi oಜಿ ಏಚಿಟhಚಿಟಿಚಿ, I.140–144.
181 Ibiಜ., ಗಿI.171–173.
182 ಂ. ಈühಡಿeಡಿ, ಂಡಿಛಿhಚಿeoಟogiಛಿಚಿಟ Suಡಿveಥಿ, ಐisಣs, ಓ.W. Pಡಿoviಟಿಛಿes ಚಿಟಿಜ ಔuಜh, ಠಿ.325; ಛಿiಣeಜ iಟಿ ಃ.ಓ.S. ಙಚಿಜಚಿvಚಿ, Soಛಿieಣಥಿ ಚಿಟಿಜ ಅuಟಣuಡಿe iಟಿ ಓoಡಿಣheಡಿಟಿ Iಟಿಜiಚಿ iಟಿ ಣhe ಖಿತಿeಟಜಿಣh ಅeಟಿಣuಡಿಥಿ, ಂಟಟಚಿhಚಿbಚಿಜ, 1973, ಠಿ.346.
183. ಬಿ.ಎನ್.ಎಸ್. ಯಾದವ, ಉಲ್ಲೇಖ, ಪುಟ 346. ಸಾಮಾನ್ಯವಾಗಿ ಭಕ್ತಿಯಾರ್ ಖಲ್ಜಿ ನಳಂದ ವಿಶ್ವವಿದ್ಯಾಲಯವನ್ನು ಸುಟ್ಟುಹಾಕಿದ್ದು ಎಂದು ಹೇಳಲಾಗುತ್ತದೆ. ಡಿ.ಆರ್. ಪಾಟೀಲ್, ಇದನ್ನು ನಾಶಪಡಿಸಿದವರು ಶೈವರು ಎನ್ನುವರು, ನೋಡಿ,ಂಟಿಣiquಚಿಡಿiಚಿಟಿ ಖemಚಿiಟಿs oಜಿ ಃihಚಿಡಿ, Pಚಿಣಟಿಚಿ, 1963, ಠಿ.304. ಈ ದೃಷ್ಟಿಕೋನದ ಬಗ್ಗೆ ಆರ್.ಎಸ್. ಶರ್ಮ ಮತ್ತು ಕೆ.ಎಸ್. ಶ್ರೀಮಾಲಿ ಸಾಕಷ್ಟು ಧೀರ್ಘವಾಗಿ ಚರ್ಚಿಸಿದ್ದಾರೆ, ನೋಡಿ, ಂ ಅomಠಿಡಿeheಟಿsive ಊisಣoಡಿಥಿ oಜಿ Iಟಿಜiಚಿ, voಟ. Iಗಿ, ಠಿಣ.2 [ಂ.ಆ. 985–1206], ಜಿoಡಿಣhಛಿomiಟಿg, ಛಿhಚಿಠಿಣeಡಿ ಘಿಘಿಗಿ(b): ಃuಜಜhism, ಜಿooಣಟಿoಣes 79–82.
184. ಖiಛಿhಚಿಡಿಜ ಊ. ಆಚಿvis, ಐives oಜಿ Iಟಿಜiಚಿಟಿ Imಚಿges, ಜಿiಡಿsಣ Iಟಿಜiಚಿಟಿ eಜiಣioಟಿ, ಆeಟhi, 1999, ಠಿ.83.
185. Iಟಿಜiಡಿಚಿ ಗಿisತಿಚಿಟಿಚಿಣhಚಿಟಿ Peಣeಡಿsoಟಿ, “SಡಿಚಿmಚಿIಚಿs ಂgಚಿiಟಿsಣ ಣhe ಖಿಚಿmiಟ Wಚಿಥಿ”, iಟಿ ಎohಟಿ ಅoಡಿಣ, eಜ., ಔಠಿeಟಿ ಃouಟಿಜಚಿಡಿies, ಠಿ.171.
186. ಈ ಕುರಿತ ಒಳನೋಟವುಳ್ಳ ಚರ್ಚೆಗಾಗಿ ಪೌಲ್ ದುಂಡಾಸ್ ರನ್ನು ನೋಡಿ, ಉಲ್ಲೇಖ ಠಿಠಿ.109–10; ಖiಛಿhಚಿಡಿಜ ಊ. ಆಚಿvis, “ಖಿhe Sಣoಡಿಥಿ oಜಿ ಣhe ಆisಚಿಠಿಠಿeಚಿಡಿiಟಿg ಎಚಿiಟಿs”, iಟಿ ಎohಟಿ ಅoಡಿಣ, oಠಿ. ಛಿiಣ., ಠಿಠಿ.213–24.
187. ಹೆಚ್ಚಿನ ಮಾಹಿತಿಗಾಗಿ ನೋಡಿ, P.ಃ. ಆesಚಿi, ಎಚಿiಟಿism iಟಿ Souಣh Iಟಿಜiಚಿ ಚಿಟಿಜ Some ಎಚಿiಟಿಚಿ ಇಠಿigಡಿಚಿಠಿhs, Shoಟಚಿಠಿuಡಿ, 1957, ಠಿ.82
188. ಖomiಟಚಿ ಖಿhಚಿಠಿಚಿಡಿ, ಅuಟಣuಡಿಚಿಟ ಖಿಡಿಚಿಟಿsಚಿಛಿಣioಟಿ ಚಿಟಿಜ ಇಚಿಡಿಟಥಿ Iಟಿಜiಚಿ, ಆeಟhi, 1987,ಠಿ.17; ಏ.ಖ. Sಡಿiಟಿivಚಿsಚಿಟಿ, “Souಣh Iಟಿಜiಚಿ”, iಟಿ ಂ. ಉhosh, eಜ., ಎಚಿiಟಿಚಿ ಂಡಿಣ ಚಿಟಿಜ ಂಡಿಛಿhiಣeಛಿಣuಡಿe, voಟ. 2, ಆeಟhi, 1975; ಖ. ಅhಚಿmಠಿಚಿಞಚಿಟಚಿಞshmi, “ಖeಟigious ಅoಟಿಜಿಟiಛಿಣ iಟಿ ಣhe ಖಿಚಿmiಟ ಅouಟಿಣಡಿಥಿ,” ಎouಡಿಟಿಚಿಟ oಜಿ ಣhe ಇಠಿigಡಿಚಿಠಿhiಛಿಚಿಟ Soಛಿieಣಥಿ oಜಿ Iಟಿಜiಚಿ, voಟ. Iಗಿ (1978), ಠಿಠಿ.69–81; ಎohಟಿ ಅoಡಿಣ, oಠಿ. ಛಿiಣ., ಠಿಠಿ.107-8.
189. ಖ.ಓ. ಓಚಿಟಿಜi, Soಛಿiಚಿಟ ಖooಣs oಜಿ ಖeಟigioಟಿ iಟಿ ಂಟಿಛಿieಟಿಣ Iಟಿಜiಚಿ, ಅಚಿಟಛಿuಣಣಚಿ, 1986, ಠಿ.97.
190. ಗಿeಟಛಿheಡಿu ಓಚಿಡಿಚಿಥಿಚಿಟಿಚಿ ಖಚಿo, Sivಚಿ’s Wಚಿಡಿಡಿioಡಿs: ಣhe ಃಚಿsಚಿvಚಿ Puಡಿಚಿಟಿಚಿ oಜಿ Pಚಿಟಞuಡಿiಞi Somಚಿಟಿಚಿಣhಚಿ, Pಡಿiಟಿಛಿeಣoಟಿ, 1990, ಠಿಠಿ.200–213, ಛಿiಣeಜ iಟಿ Pಚಿuಟ ಆuಟಿಜಚಿs, oಠಿ. ಛಿiಣ., ಠಿ.118.
191. ಖomiಟಚಿ ಖಿhಚಿಠಿಚಿಡಿ, oಠಿ. ಛಿiಣ., ಠಿ.18.
192. ಇI, ಗಿ, ಟಿo.25, ಟಟ.69–80. ಅಜಿ. P.ಃ. ಆesಚಿi, oಠಿ. ಛಿiಣ., ಠಿ.182; ಆಚಿviಜ ಓ. ಐoಡಿeಟಿzeಟಿ, “Wಚಿಡಿಡಿioಡಿ ಂsಛಿeಣiಛಿs iಟಿ Iಟಿಜiಚಿಟಿ ಊisಣoಡಿಥಿ”, ಎouಡಿಟಿಚಿಟ oಜಿ ಣhe ಂmeಡಿiಛಿಚಿಟಿ ಔಡಿieಟಿಣಚಿಟ Soಛಿieಣಥಿ, 98 (1978), ಠಿಠಿ.64–5.
193 P.ಃ. ಆesಚಿi, oಠಿ. ಛಿiಣ., ಠಿ.23.
194 ಆev ಖಚಿರಿ ಅhಚಿಟಿಚಿಟಿಚಿ, “ಖಿhe Sಚಿಟಿsಞಡಿiಣisಣ ಚಿಟಿಜ Iಟಿಜiಚಿಟಿ Soಛಿieಣಥಿ”, ಇಟಿquiಡಿಥಿ, ಒoಟಿsooಟಿ, 1965, ಠಿ. 65.
195 ಏesಚಿvಚಿಟಿ ಗಿeಟuಣhಚಿಣ, ಃಡಿಚಿhmಚಿಟಿಚಿ Seಣಣಟemeಟಿಣs iಟಿ ಏeಡಿಚಿಟಚಿ, ಅಚಿಟiಛಿuಣ, 1978, ಂಠಿಠಿeಟಿಜix II, ಠಿಠಿ.102–115.
196 Ibiಜ.; ಒ.ಉ.S. ಓಚಿಡಿಚಿಥಿಚಿಟಿಚಿಟಿ, “ಏಚಿಟಿಣಚಿಟಟuಡಿ Sಚಿಟಚಿi: ಓeತಿ ಐighಣ oಟಿ ಣhe ಓಚಿಣuಡಿe oಜಿ ಂಡಿಥಿಚಿಟಿ ಇxಠಿಚಿಟಿsioಟಿ ಣo Souಣh Iಟಿಜiಚಿ,” Pಡಿoಛಿeeಜiಟಿgs oಜಿ ಣhe Iಟಿಜiಚಿಟಿ ಊisಣoಡಿಥಿ ಅoಟಿgಡಿess, ಎಚಿbಚಿಟಠಿuಡಿ, 1970, ಠಿಠಿ.125–136.
197. ಉದ್ಯೋತನ ಸೂರಿಯ ಕುವಲಯಮಾಲ (8ನೇ ಶತಮಾನ) ಎಂಬ ಜೈನ ಕೃತಿಯು ಉಲ್ಲೇಖಿಸುವ ವಿಜಯ ಎನ್ನುವ ಸ್ಥಳದಲ್ಲಿದ್ದ ಮಠಕ್ಕೆ ವಿದ್ಯಾರ್ಥಿಗಳು ಲಾಟ, ಕರ್ನಾಟಕ, ಮಾಳವ, ಕನೌಜ್, ಮಹಾರಾಷ್ಟ್ರ, ಸೌರಾಷ್ಟ್ರ, ಶ್ರೀಕಂಠ ಮತ್ತು ಸಿಂಧ್ ನಂತಹ ವಿವಿಧ ಭಾಗಗಳಿಂದ ಬರುತ್ತಿದ್ದನ್ನು ವರ್ಣಿಸುತ್ತದೆ. ಅವರು ಅನೇಕ ವೈವಿಧ್ಯದ ವಿದ್ಯೆಗಳಾದ ಬಿಲ್ಲುಗಾರಿಕೆ (ಧನುರ್ವೇದ), ಗುರಾಣಿ ಜತೆ ಯುಧ್ಧ ಮಾಡುವ ತಂತ್ರ (ಫಲಕ ಕ್ರೀಡಾ), ಕತ್ತಿ ಮತ್ತು ಬಿಲ್ಲಿನ ಬಳಕೆ (ಅಸಿ ಧನು ಪ್ರವೇಶ), ಈಟಿಯ ಬಳಕೆ (ಕುಂತಾ ಯುದ್ಧ), ದೊಣ್ಣೆವರಸೆ (ಲಕೂಟಿ ಯುದ್ಧ) ಮತ್ತು ಜಟ್ಟಿ ಯುದ್ಧ (ಬಾಹುಯುದ್ಧ) ಮುಂತಾದ ಕಲೆಗಳನ್ನು ಕಲಿಯುತ್ತಿದ್ದ ಬಗ್ಗೆ ವಿವರ ದೊರಕುತ್ತದೆ, ನೋಡಿ, Shಚಿಟಿಣಚಿ ಖಚಿಟಿi Shಚಿಡಿmಚಿ, Soಛಿieಣಥಿ ಚಿಟಿಜ ಅuಟಣuಡಿe iಟಿ ಖಚಿರಿಚಿsಣhಚಿಟಿ ಛಿ. ಂ.ಆ. 700–900, ಆeಟhi, 1996, ಠಿ.231. ಹಲವಾರು ಮಣಿಪ್ರವಳ ಕೃತಿಗಳು, ವಿಶೇಷವಾಗಿ ಚಂದ್ರೋತ್ಸವಂ (15ನೇ ಶತಮಾನ) ಮತ್ತು ಕೇರಳೋತ್ಪತ್ತಿ (17ನೇ ಶತಮಾನ) ಯುದ್ಧಕಲೆಗಳ ಸಂಬಂಧಿತ ಬ್ರಾಹ್ಮಣರ ಸಂಘಟಣೆಗಳನ್ನು ತೋರಿಸುತ್ತವೆ.
198 ಉ.S. ಉhuಡಿಥಿe, oಠಿ. ಛಿiಣ., ಛಿhಚಿಠಿಣeಡಿ ಗಿI.
199. ಂಡಿviಟಿಜ Shಚಿಡಿmಚಿ, “Some ಒisuಟಿಜeಡಿsಣಚಿಟಿಜiಟಿgs oಜಿ ಣhe ಊiಟಿಜu ಂಠಿಠಿಡಿoಚಿಛಿh ಣo ಖeಟigious Pಟuಡಿಚಿಟiಣಥಿ”, ಖeಟigioಟಿ, voಟ. 8 (ಂuಣumಟಿ 1978), ಠಿ.145. ಆದಾಗ್ಯೂ, ನಿರಾದ್ ಸಿ. ಚೌಧರಿ ಪ್ರಕಾರ, (ಖಿhe ಅoಟಿಣiಟಿeಟಿಣ oಜಿ ಅiಡಿಛಿe, ಐoಟಿಜoಟಿ, 1965, ಠಿ.39), ‘’ ಸಹಿಷ್ಣುತೆಗೆ ಹತ್ತಿರದ ಪದಗಳಿದ್ದಿದ್ದರೆ ಮತ್ತು ಅವುಗಳ ಸಾಮಥ್ರ್ಯವು ಸೌಹಾರ್ದತೆಯಾಗಿದ್ದಿದ್ದರೆ, ಯಾರಾದರೊಬ್ಬರಿಗೆ ಭಾರತದ ಮಾನವ ಗುಂಪುಗಳ ನಡುವೆ ಇಂತಹ ಆಳವಾದ ಅನುಮಾನ ಮತ್ತು ದ್ವೇಷವು ಯಾಕಿದೆ ಎನ್ನುವುದನ್ನು ವಿವರಿಸಲು ಸಾಧ್ಯವಾಗುತ್ತಿತ್ತು’’.
200. ಡೇವಿಡ್ ಎನ್. ಲೊರೆಂಜನ್ (Wಚಿಡಿಡಿioಡಿ ಂsಛಿeಣiಛಿs iಟಿ Iಟಿಜiಚಿಟಿ ಊisಣoಡಿಥಿ”, ಎouಡಿಟಿಚಿಟ oಜಿ ಣhe ಂmeಡಿiಛಿಚಿಟಿ ಔಡಿieಟಿಣಚಿಟ Soಛಿieಣಥಿ, ಠಿಠಿ.61–75) ಚರ್ಚಿಸುವಂತೆ, ಮುಸ್ಲಿಂರ ಆಳ್ವಿಕೆಯಲ್ಲಿ ಮಿಲಿಟರಿ ಕ್ರಮದ ಸಂತರ ವ್ಯವಸ್ಥೆಯು ಪ್ರಮುಖವಾಗಿತ್ತು. ಹಾಗೆ ನೋಡಿ, Wiಟಟiಚಿm ಖ. Piಟಿಛಿh, Peಚಿsಚಿಟಿಣs ಚಿಟಿಜ ಒoಟಿಞs iಟಿ ಃಡಿiಣish Iಟಿಜiಚಿ, ಆeಟhi, 1996.
201 P.ಗಿ. ಏಚಿಟಿe, ಊisಣoಡಿಥಿ oಜಿ ಆhಚಿಡಿmಚಿsಚಿsಣಡಿಚಿ, Pooಟಿಚಿ, 1974, voಟ. II, ಠಿಣ.1, ಠಿಠಿ.385–89; ಎಚಿಟಿ ಉoಟಿಜಚಿ, ಖಿhe ಖiಣuಚಿಟ Suಣಡಿಚಿs, Wiesbಚಿಜeಟಿ, 1977, ಠಿಠಿ.539, 641.
202 ಎ. ಉoಟಿಜಚಿ, ಅhಚಿಟಿge ಚಿಟಿಜ ಅoಟಿಣiಟಿuiಣಥಿ iಟಿ Iಟಿಜiಚಿಟಿ ಖeಟigioಟಿ, ಖಿhe ಊಚಿgue, 1965, ಠಿ.316.
203 Ibiಜ., ಠಿ.398.
204 Ibiಜ., ಠಿ.433; ಊ.ಒ. Sಚಿಜಚಿsivಚಿiಚಿh, ಂ ಅomಠಿಚಿಡಿಚಿಣive Sಣuಜಥಿ oಜಿ ಖಿತಿo ಗಿiಡಿಚಿsಚಿivಚಿ ಒoಟಿಚಿsಣeಡಿies, ಒಥಿsoಡಿe, 1967, ಠಿಠಿ.104 106.
205. ಸಾಮಾನ್ಯವಾಗಿ ಬಹುತೇಕ ವಿದ್ವಾಂಸರ ದೃಷ್ಟಿಕೋನದಲ್ಲಿ ಮತಾಂತರವನ್ನು ಪವಿತ್ರಗೊಳಿಸುವ ಒಂದು ಪ್ರಕ್ರಿಯೆಯೆಂದು ನೋಡಲಾಗಿತ್ತು, ನೋಡಿ, S.ಓ. ಃisತಿಚಿs (“್ಥbeಡಿ ಜಚಿs ಗಿಡಿಚಿಣಥಿಚಿಠಿಡಿobಟem iಟಿ ಜeಡಿ ಗಿeಜisಛಿheಟಿ ಖiಣuಚಿಟಟiಣeಡಿಚಿಣuಡಿ”, Zಆಒಉ, voಟ.105, 1955, ಠಿಠಿ.53; ಛಿiಣeಜ iಟಿ ಎ.ಅ. ಊeesಣeಡಿmಚಿಟಿ, “ಗಿಡಿಚಿಣಥಿಚಿ ಚಿಟಿಜ Sಚಿಛಿಡಿiಜಿiಛಿe”, Iಟಿಜo-Iಡಿಚಿಟಿiಚಿಟಿ ಎouಡಿಟಿಚಿಟ, voಟ. 6 (1962–63), ಠಿ.2.
206 ಊ.ಒ. Sಚಿಜಚಿsivಚಿiಚಿh, oಠಿ. ಛಿiಣ., ಠಿಠಿ.88–89, 168ಜಿಜಿ.
207 P.ಃ. ಆesಚಿi, oಠಿ. ಛಿiಣ., ಠಿಠಿ.182–183.
208 ಏಟಚಿus ಏಟosಣeಡಿmಚಿieಡಿ, “ಖಿhe ಔಡಿigiಟಿಚಿಟ ಆಚಿಞsಚಿ Sಚಿgಚಿ”, iಟಿ ಂಡಿviಟಿಜ Shಚಿಡಿmಚಿ, eಜ., ಇssಚಿಥಿs oಟಿ ಣhe ಒಚಿhಚಿbhಚಿಡಿಚಿಣಚಿ, ಐeiಜeಟಿ, 1991, ಠಿ.110. 209 Ibiಜ., ಠಿಠಿ.125, 128; Suಞumಚಿಡಿi ಃhಚಿಣಣಚಿಛಿhಚಿಡಿರಿi, ಖಿhe Iಟಿಜiಚಿಟಿ ಖಿheogoಟಿಥಿ, Peಟಿguiಟಿ ಃooಞs, ಓeತಿ ಆeಟhi, 2000, ಠಿ.124.
210 ಉ.S. ಉhuಡಿಥಿe, oಠಿ. ಛಿiಣ., ಠಿ.93.
211. ಈ ಪಠ್ಯದ ಅತ್ಯಂತ ಹಳೆಯ ಹಸ್ತಪ್ರತಿ ದೊರೆತಿರುವುದು ವಿಕ್ರಮ ಶಕೆ 1130 (ಕ್ರಿ.ಶ.1973)ರಲ್ಲಿ. ಇದನ್ನು ಹಲವಾರು ವಿದ್ವಾಂಸರು ಸಂಪಾದಿಸಿದ್ದಾರೆ, ಇದರ ಕೊನೆಯ ಮತ್ತು ಅತ್ಯಂತ ಹೆಚ್ಚು ಖಚಿತವಾದ ಆವೃತ್ತಿಯನ್ನು ಸಂಪಾದಿಸಿರುವವರು, 3 ಭಾಗಗಳಲ್ಲಿ ಒಚಿಜಚಿme ಃಡಿuಟಿಟಿeಡಿ-ಐಚಿಛಿhಚಿux ಠಿubಟisheಜ bಥಿ Iಟಿsಣ. ಈಡಿಚಿಟಿಛಿಚಿis Iಟಿಜoಟogie, Poಟಿಜiಛಿheಡಿಡಿಥಿ. ಈ ಪಠ್ಯದ ಬಗೆಗಿನ ವಿವರಣೆ ಮತ್ತು ಪರಿವರ್ತನ ಕ್ರಿಯಾವಿಧಿಯ ಬಗ್ಗೆ ನೋಡಿ, see ಊeiಟಿಡಿiಛಿh voಟಿ Sಣieಣeಟಿಛಿಡಿoಟಿ, “ಖeಟigious ಅoಟಿಜಿiguಡಿಚಿಣioಟಿs iಟಿ Pಡಿe-ಒusಟim Iಟಿಜiಚಿ ಚಿಟಿಜ ಣhe ಒoಜeಡಿಟಿ ಅoಟಿಛಿeಠಿಣ oಜಿ ಊiಟಿಜuism”, iಟಿ ಗಿಚಿsuಜhಚಿ ಆಚಿಟmiಚಿ ಚಿಟಿಜ ಊeiಟಿಡಿiಛಿh voಟಿ Sಣieಣeಟಿಛಿಡಿoಟಿ, eಜs., ಖeಠಿಡಿeseಟಿಣiಟಿg ಊiಟಿಜuism: ಖಿhe ಅoಟಿsಣಡಿuಛಿಣioಟಿ oಜಿ ಖeಟigious ಖಿಡಿಚಿಜiಣioಟಿs ಚಿಟಿಜ ಓಚಿಣioಟಿಚಿಟ Iಜeಟಿಣiಣಥಿ, ಆeಟhi, 1995, ಠಿಠಿ.51–81.
212 Ibiಜ, ಠಿಠಿ.56–57; ಂxeಟ ಒiಛಿhಚಿeಟs, ಊiಟಿಜuism: Pಚಿsಣ ಚಿಟಿಜ Pಡಿeseಟಿಣ, ಓeತಿ ಆeಟhi, 2005, ಠಿಠಿ.20–21.
213 ಖಿhe Wಚಿ3sಚಿhsಡಿಚಿ Sಚಿ;hiಣಚಿ, eಜ. ಚಿಟಿಜ ಣಡಿ. ಎ.ಂ. Sಛಿhoಣeಡಿmಚಿಟಿ, ಐeiಜeಟಿ, 1982, ಠಿ.38; ಖಿeuಟಿ ಉouಜಡಿiಚಿಚಿಟಿ ಚಿಟಿಜ Sಚಿಟಿರಿuಞಣಚಿ ಉuಠಿಣಚಿ, ಊiಟಿಜu ಖಿಚಿಟಿಣಡಿiಛಿ ಚಿಟಿಜ Sಚಿಞಣಚಿ ಐiಣeಡಿಚಿಣuಡಿe, Wiesbಚಿಜeಟಿ, 1981, ಠಿ.149.
214 Pಡಿಚಿboಜhಚಿಛಿಚಿಟಿಜಡಿoಜಚಿಥಿಚಿ, ಂಛಿಣ III.
215 ಖiಛಿhಚಿಡಿಜ ಊ. ಆಚಿvis, “ಖಿhe Sಣoಡಿಥಿ oಜಿ ಣhe ಆisಚಿಠಿಠಿeಚಿಡಿiಟಿg ಎಚಿiಟಿs: ಖeಣeಟಟiಟಿg ಣhe Sಚಿivಚಿ–ಎಚಿiಟಿ ಇಟಿಛಿouಟಿಣeಡಿ iಟಿ ಒeಜievಚಿಟ Souಣh Iಟಿಜiಚಿ”, iಟಿ ಎohಟಿ ಇ. ಅoಡಿಣ, eಜ., ಔಠಿeಟಿ ಃouಟಿಜಚಿಡಿies, 1998, ಠಿಠಿ.213–224.
215 ಖiಛಿhಚಿಡಿಜ ಊ. ಆಚಿvis, “ಖಿhe Sಣoಡಿಥಿ oಜಿ ಣhe ಆisಚಿಠಿಠಿeಚಿಡಿiಟಿg ಎಚಿiಟಿs: ಖeಣeಟಟiಟಿg ಣhe Sಚಿivಚಿ–ಎಚಿiಟಿ ಇಟಿಛಿouಟಿಣeಡಿ iಟಿ ಒeಜievಚಿಟ Souಣh Iಟಿಜiಚಿ”, iಟಿ ಎohಟಿ ಇ. ಅoಡಿಣ, eಜ., ಔಠಿeಟಿ ಃouಟಿಜಚಿಡಿies, 1998, ಠಿಠಿ.213–224.
216 ಒ.ಐ. Wಚಿಜeಞಚಿಡಿ, ಆevಚಿಟಚಿsmಡಿiಣi ಖeಛಿoಟಿsಣಡಿuಛಿಣioಟಿ, 2 voಟs., ಆeಟhi, 1996. ‘ಮ್ಲೇಛ್ಛಿತಶುಧ್ಧಿಹ’ ಅಧ್ಯಾಯದ 71 ಶ್ಲೋಕಗಳು ಮ್ಲೇಚ್ಛರು ಎತ್ತಿಕೊಂಡು ಹೋಗಿದ್ದ ಮ್ಲೇಛ್ಛೇತರ ವ್ಯಕ್ತಿಗಳ ಮತ್ತು ಐದರಿಂದ ಇಪ್ಪತ್ತು ವರ್ಷಗಳ ತನಕ ಅವರೊಂದಿಗಿದ್ದವರ ಶುದ್ಧಿಯ ಬಗ್ಗೆ ತಿಳಿಸುತ್ತದೆ.
217 P.ಗಿ. ಏಚಿಟಿe, ಊisಣoಡಿಥಿ oಜಿ ಆhಚಿಡಿmಚಿsಚಿsಣಡಿಚಿ, voಟ. II, ಠಿಣ.1, Pooಟಿಚಿ, 1974, ಠಿಠಿ.389–91.
218 Ibiಜ., ಠಿ.391.
219. ಪಿ.ವಿ ಕಾಣೆ ಪರಾವರ್ತನ ಎಂಬ ಪದವನ್ನು ಪುನರ್ಮತಾಂತರವನ್ನು ಸೂಚಿಸಲು ಬಳಸುವರು ಮತ್ತು ಅದನ್ನು ಪ್ರಾಚೀನ ವ್ರತ್ಯಸ್ತೋಮಕ್ಕೆ ಸಮ ಎನ್ನುವರು (ಉಲ್ಲೇಖ ಸಂಪುಟ 4, ಪುಟ 118). ಧರ್ಮನಿರ್ಣಯಮಂಡಲದ ಆಧಾರದ ಮೇಲೆ ಸಿದ್ಧಪಡಿಸಲ್ಪಟ್ಟ ಮಹಾರಾಷ್ಟ್ರದ ಲೋನಾವಾಲಾದ ಪಠ್ಯ ಹಿಂದೂಕರಣವಿಧಿ, ಹೇಳುವಂತೆ, ‘ಒಂದು ಮಾದರಿಯಂತೆ ಆದರೆ ಸಂಕ್ಷಿಪ್ತವಾಗಿ ಪರಾವರ್ತನ ವಿಧಿಯು ಯಾರನ್ನು ಬಲತ್ಕಾರವಾಗಿ ಮತಾಂತರಿಸಲಾಗಿತ್ತೊ ಅಥವಾ ಯಾರೂ ಸ್ವತಃ ಹಿಂದೂ ಧರ್ಮದ ತೆಕ್ಕೆಯಿಂದ ಹೊರಹೊಗಿದ್ದರೂ ಅವರಿಗಾಗಿ’. ನಿರ್ಮಿತಗೊಂಡಿತ್ತು.
220. ಖಿoಡಿಞeಟ ಃಡಿeಞಞe, oಠಿ. ಛಿiಣ., ಠಿ.48. ಅಜಿ. Pಚಿuಟ ಊಚಿಛಿಞeಡಿ, “ಆeಡಿ ಡಿeಟigise ಓಚಿಣioಟಿಚಿಟismus ಗಿiveಞಚಿಟಿಚಿಟಿಜಚಿs”, iಟಿ ಐ. Sಛಿhmiಣhಚಿuseಟಿ, eಜ., ಏಟeiಟಿe Sಛಿhಡಿiಜಿಣeಟಿ, Wiesbಚಿಜeಟಿ, 1978, ಠಿಠಿ.565–79. ಖಿheಡಿe ಚಿಡಿe mಚಿಟಿಥಿ ಊiಟಿಜu seಛಿಣs ತಿhiಛಿh ಚಿಡಿe ಚಿಛಿಣiveಟಥಿ eಟಿgಚಿgeಜ iಟಿ ಛಿoಟಿveಡಿಣiಟಿg ಠಿeoಠಿಟe, buಣ ಣhe ಜisಛಿussioಟಿ oಜಿ ಣheiಡಿ ಚಿಛಿಣiviಣies is beಥಿoಟಿಜ ಣhe sಛಿoಠಿe oಜಿ ಣhis ಠಿಚಿಠಿeಡಿ.
221 ಗಿishಟಿuಠಿuಡಿಚಿಟಿಚಿ, III.18. ಅಜಿ. ಗಿiರಿಚಿಥಿ ಓಚಿಣh, Puಡಿಚಿಟಿಚಿs ಚಿಟಿಜ ಂಛಿಛಿuಟಣuಡಿಚಿಣioಟಿ: ಂ ಊisಣoಡಿiಛಿo-ಂಟಿಣhಡಿoಠಿoಟogiಛಿಚಿಟ Peಡಿsಠಿeಛಿಣive, ಆeಟhi, 2001, ಠಿ.195.
222. ಪರಿಧೀಯ ಕ್ಷೇತ್ರಗಳಲ್ಲಿ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಬದಲಾವಣೆಯನ್ನು ತರುವಲ್ಲಿ ಪುರಾಣಗಳ ಪಾತ್ರವನ್ನು ಕುರಿತ ಚರ್ಚೆಗೆ ನೋಡಿ, ಗಿiರಿಚಿಥಿ ಓಚಿಣh, oಠಿ. ಛಿiಣ., ಛಿhಚಿಠಿಣeಡಿ 8. ಂಟso see ಏuಟಿಚಿಟ ಅhಚಿಞಡಿಚಿbಚಿಡಿಣi, ಖeಟigious Pಡಿoಛಿess: ಖಿhe Puಡಿಚಿಟಿಚಿs ಚಿಟಿಜ ಣhe ಒಚಿಞiಟಿg oಜಿ ಚಿ ಖegioಟಿಚಿಟ ಖಿಡಿಚಿಜiಣioಟಿ, ಆeಟhi, 2001.
223 Seಟಿಞಚಿಠಿಚಿಣ Sಣoಟಿe Sಟಚಿb Iಟಿsಛಿಡಿiಠಿಣioಟಿ oಜಿ ಣhe ಣime oಜಿ Sivಚಿguಠಿಣಚಿ ಃಚಿಟಚಿಡಿರಿuಟಿಚಿ, ಂರಿಚಿಥಿ ಒiಣಡಿಚಿ Shಚಿsಣಡಿi, eಜ., Iಟಿsಛಿಡಿiಠಿಣioಟಿs oಜಿ ಣhe Sಚಿಡಿಚಿbhಚಿಠಿuಡಿiಚಿs, Pಚಿಟಿಜuvಚಿmsiಟಿs ಚಿಟಿಜ Somಚಿvಚಿmsiಟಿs, ಆeಟhi, 1995, ಠಿಣ. II, ಠಿಠಿ. 154–59, veಡಿses 15–22. ನಾನು ಪ್ರೊ. ಬಿ.ಪಿ. ಸಾಹು ಅವರಿಗೆ ಕೃತಜ್ಞನಾಗಿದ್ದೇನೆ, ಅವರು ಸಮಯಕ್ಕೆ ಸರಿಯಾಗಿ ಈ ಶಾಸನವನ್ನು ಸೇರಿಸಲು ನೆನಪಿಸದಿದ್ದರೆ, ಮರೆತಿರುತ್ತಿದ್ದೆ.
224. ಜಿ.ಸಿ.ಪಾಂಡೆ (ಐiಜಿe ಚಿಟಿಜ ಖಿhoughಣ oಜಿ Sಚಿಟಿಞಚಿಡಿಚಿಛಿಚಿಡಿಥಿಚಿ, ಆeಟhi, 1994) ಇದು ಶಂಕರರ ಮಠಗಳ ವಿಸ್ತರಣೆಯನ್ನು ಚರ್ಚಿಸುತ್ತದೆ. ಆದರೆ ನಂತರದಲ್ಲಿ ವೀರಶೈವ ಮಠಗಳ ಮತಾಂತರ ಚಟುವಟಿಕೆಗಳನ್ನು ಪರಿಶೀಲಿಸುವಲ್ಲಿ ದೂರ ಸರಿಯುತ್ತದೆ.
225 ಏತಿಚಿgsu ಐee, “ಖesisಣiಟಿg ಂಟಿಚಿಟಥಿsis, Peಡಿsisಣiಟಿg Iಟಿಣeಡಿಠಿಡಿeಣಚಿಣioಟಿ: ಂ ಊisಣoಡಿiogಡಿಚಿಠಿhಥಿ oಜಿ Some ಖeಛಿeಟಿಣ Sಣuಜies oಜಿ ಊiಟಿಜuism iಟಿ ಣhe Uಟಿiಣeಜ Sಣಚಿಣes”, Soಛಿiಚಿಟ Sಛಿieಟಿಛಿe Pಡಿobiಟಿgs, voಟ.15, ಟಿos.3–4, Wiಟಿಣeಡಿ 2003, ಠಿ.28.
226. ಯುವ ಭಾರತೀಯ ವಿದ್ವಾಂಸರಲ್ಲಿ ಅದ್ವಿತೀಯ ಧಾರ್ಮಿಕ ವಿಚಾರದೆಡೆಗೆ ಒಲವು ಹೆಚ್ಚಿದೆ, ಕುನಾಲ್ ಚಕ್ರಬರ್ತಿ ಇದನ್ನು ಉಲ್ಲೇಖಿಸಿದ್ದಾರೆ. ಅವರ ಪ್ರಕಾರ, ಆತ್ಯಂತಿಕ ಸತ್ಯ ಮತ್ತು ವಾಸ್ತವವೆಂಬ ಸಂಗತಿಯ ಬಗೆಗೆ ಮಾನವನ ಪ್ರತಿಕ್ರಿಯೆಯಾದಂತಹ ಧರ್ಮವು ತನ್ನದೇ ಆದ ಸ್ವಾಯತ್ತತೆ ಮತ್ತು ಚಲನಶೀಲತೆಯನ್ನು ಹೊಂದಿದೆ, ನೋಡಿ, ಖeಛಿeಟಿಣ ಂಠಿಠಿಡಿoಚಿಛಿhes ಣo ಣhe Sಣuಜಥಿ oಜಿ ಖeಟigioಟಿ iಟಿ ಂಟಿಛಿieಟಿಣ Iಟಿಜiಚಿ”, iಟಿ ಖomiಟಚಿ ಖಿhಚಿಠಿಚಿಡಿ, eಜ., ಖeಛಿeಟಿಣ Peಡಿsಠಿeಛಿಣives oಟಿ ಇಚಿಡಿಟಥಿ Iಟಿಜiಚಿಟಿ ಊisಣoಡಿಥಿ, ಃombಚಿಥಿ, 1995, ಠಿ.189.
227 ಏತಿಚಿಟಿgsu ಐee, oಠಿ. ಛಿiಣ., ಠಿ.28.
228 ಖusseಟಟ ಖಿ. ಒಛಿಅuಣಛಿheoಟಿ, ಒಚಿಟಿuಜಿಚಿಛಿಣuಡಿiಟಿg ಖeಟigioಟಿ: ಖಿhe ಆisಛಿouಡಿse oಟಿ Sui ಉeಟಿeಡಿis ಖeಟigioಟಿ ಚಿಟಿಜ ಣhe Poಟiಣiಛಿs oಜಿ ಓosಣಚಿಟgiಚಿ, ಓeತಿ ಙoಡಿಞ, 2003, ಠಿ.128.
229. ಏತಿಚಿಟಿgsu ಐee, oಠಿ. ಛಿiಣ., ಠಿಠಿ.12–13.
230. ಸ್ಥಳದ ಅಭಾವದಿಂದಾಗಿ ಇತ್ತೀಚಿನ ಎಲ್ಲಾ ಹಿಂದೂಯಿಸಂ ಕುರಿತ ಲೇಖನಗಳನ್ನು ಇಲ್ಲಿ ಚರ್ಚಿಸಲು ಆಗುತ್ತಿಲ್ಲ, ಆದರೆ ಅವುಗಳಲ್ಲಿ ಕೆಲವನ್ನು ಅಂದರೆ ಅತ್ಯಂತ ಹೆಚ್ಚು ಇತ್ತೀಚಿನದನ್ನು ಉಲ್ಲೇಖಿಸುವೆನು: ಉಚಿviಟಿ ಈಟooಜ, eಜ., ಖಿhe ಃಟಚಿಛಿಞತಿeಟಟ ಅomಠಿಚಿಟಿioಟಿ ಣo ಊiಟಿಜuism, ಜಿiಡಿsಣ Iಟಿಜiಚಿಟಿ ಡಿeಠಿಡಿiಟಿಣ, ಆeಟhi, 2003; iಜem, Iಟಿಣಡಿoಜuಛಿಣioಟಿ ಣo ಊiಟಿಜuism, ಅಚಿmbಡಿiಜge, 2004; ಂಡಿviಟಿಜ Shಚಿಡಿmಚಿ, eಜ., ಖಿhe Sಣuಜಥಿ oಜಿ ಊiಟಿಜuism, Uಟಿiveಡಿsiಣಥಿ oಜಿ Souಣh ಅಚಿಡಿoಟiಟಿಚಿ Pಡಿess, ಅoಟumbiಚಿ, 2003; Sushiಟ ಒiಣಣಚಿಟ ಚಿಟಿಜ ಉeಟಿe ಖಿhuಡಿsbಥಿ, eಜs., ಖಿhe ಊiಟಿಜu Woಡಿಟಜ, ಖouಣಟeಜge, ಐoಟಿಜoಟಿ–ಓeತಿ ಙoಡಿಞ, 2004, ಜಿiಡಿsಣ Iಟಿಜiಚಿಟಿ ಡಿeಠಿಡಿiಟಿಣ, 2005; ಂxeಟ ಒiಛಿhಚಿeಟs, ಊiಟಿಜuism Pಚಿsಣ ಚಿಟಿಜ Pಡಿeseಟಿಣ, Pಡಿiಟಿಛಿeಣoಟಿ, 2004, Iಟಿಜiಚಿಟಿ eಜiಣioಟಿ, ಆeಟhi, 2005.
231. ಧರ್ಮದ ಬೆಗೆಗೆÀ ಬಹುತೇಕ ವಿದ್ವಾಂಸರಂತಲ್ಲದೆ, ಕೆಲವರು ಆರಂಭಿಕ ಧಾರ್ಮಿಕ ಬದಲಾವಣೆಗಳನ್ನು ಸಾಮಾಜಿಕ ಸಂದರ್ಭದೊಂದಿಗೆ ಇಟ್ಟು ನೋಡಿದ್ದಾರೆ. ಉದಾಹರಣೆಗೆ, ಆebiಠಿಡಿಚಿsಚಿಜ ಅhಚಿಣಣoಠಿಚಿಜhಥಿಚಿಥಿಚಿ (ಐoಞಚಿಥಿಚಿಣಚಿ), ಆ.ಆ. ಏosಚಿmbi (ಒಥಿಣh ಚಿಟಿಜ ಖeಚಿಟiಣಥಿ), Suviಡಿಚಿ ಎಚಿisತಿಚಿಟ (ಔಡಿigiಟಿ ಚಿಟಿಜ ಆeveಟoಠಿmeಟಿಣ oಜಿ ಗಿಚಿishಟಿಚಿvism) ಖ.S. Shಚಿಡಿmಚಿ (ಖಿಚಿಟಿಣಡಿiಛಿism), ಖ.ಓ. ಓಚಿಟಿಜi (Soಛಿiಚಿಟ ಖooಣs oಜಿ ಖeಟigioಟಿ iಟಿ ಂಟಿಛಿieಟಿಣ Iಟಿಜiಚಿ). ಈoಡಿ ಛಿommeಟಿಣs oಟಿ ಣheiಡಿ ಡಿeಟevಚಿಟಿಣ ತಿಡಿiಣiಟಿgs, see ಏuಟಿಚಿಟ ಅhಚಿಞಡಿಚಿbಚಿಡಿಣi, oಠಿ. ಛಿiಣ., ಠಿಠಿ. 182–89.
232 ಖusseಟಟ ಖಿ. ಒಛಿಅuಣಛಿheoಟಿ, oಠಿ. ಛಿiಣ., ಠಿ.3.
***
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ